ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್: ಮೈಲಾರದ ಗೊರವಯ್ಯ ಕಾರ್ಣಿಕ
ಭರತ ಹುಣ್ಣಿಮೆಯಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಮೈಲಾರ ಜಾತ್ರೆಯಲ್ಲಿ ಗೊರವಯ್ಯನವರು ಕಾರ್ಣಿಕ ನುಡಿದಿದ್ದಾರೆ. 'ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್' ಇದುವೇ ಈ ವರ್ಷದ ಕಾರ್ಣಿಕವಾಗಿದೆ.

ನುಡಿಯುವ ಹೇಳಿಕೆ ಅಥವಾ ಕಾರ್ಣಿಕ
ವಿಜಯನಗರ: ಭರತ ಹುಣ್ಣಿಮೆಯಂದು ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳಲ್ಲಿ ನುಡಿಯುವ ಹೇಳಿಕೆ ಅಥವಾ ಕಾರ್ಣಿಕ ನುಡಿಗಳು ಮುಂದಿನ ವರ್ಷ ಹೇಗಿರಲಿವೆ ಎಂಬುದರ ಬಗ್ಗೆ ಭವಿಷ್ಯ ನುಡಿಯುತ್ತವೆ.
ಭವಿಷ್ಯವಾಣಿ
ಜಾತ್ರೆಗಳಂದು ನುಡಿಯುವ ಭವಿಷ್ಯವಾಣಿ ಕೇಳಲು ದೂರ ದೂರದ ಊರುಗಳಿಂದ ಜನರು ಆಗಮಿಸುತ್ತಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಮೈಲಾರದ ಗೊರವಯ್ಯ ನುಡಿಯುವ ಕಾರ್ಣಿಕ ಸಹ ಮಹತ್ವವನ್ನು ಪಡೆದುಕೊಂಡಿದೆ.
ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್
ಫೆಬ್ರವರಿ 1ರಂದು ಹರಪನಹಳ್ಳಿಯ ದೊಡ್ಡ ಮೈಲಾರದ ಜಾತ್ರೆ ನಡೆದಿತ್ತು. ಈ ಜಾತ್ರೆಯಂದು ಗೊರವಯ್ಯನ ಕಾರ್ಣಿಕ ನುಡಿದಿದ್ದಾರೆ. ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.
ಕಾರ್ಣಿಕದ ಅರ್ಥ ಏನು?
ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ಎಂದರೆ ರಾಜ್ಯದಲ್ಲಿ ಸಮೃದ್ಧಿ ಮತ್ತು ಸಂತೋಷ ಇರಲಿದೆ ಎಂಬುದರ ಸೂಚನೆ ಎಂದು ದೇವಸ್ಥಾನದ ಅರ್ಚಕರು ವಿಶ್ಲೇಷಣೆ ಮಾಡುತ್ತಾರೆ. ಒಳ್ಳೆಯ ಸುದ್ದಿಯ ಕಾರ್ಣಿಕ ಕೇಳಿ ಭಕ್ತಾದಿಗಳು ಸಂತೋಷಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪಾರ್ಕಿಂಗ್ ಗೆ ಹೊಸ ನಿಯಮ, ತಪ್ಪಿದರೆ ಬೀಳಲಿದೆ ದಂಡ, ಜೊತೆಗೆ ಟೋಯಿಂಗ್! ಯಾವ ಗಾಡಿಗೆ ಎಷ್ಟು ಪೇ ಮಾಡ್ಬೇಕು?
ಇತರೆ ಕಾರ್ಣಿಕ
2025ರ ಬಿರೂರು ಕಾರ್ಣಿಕ
ಧರ್ಮ ಅಧರ್ಮ ಸಂಕಟವಾಯಿತು, ವಿಶ್ವಕ್ಕೆ ಶಾಂತಿಯ ಭಂಗವಾಯಿತು. ವರುಣನ ಆಗಮನವಾಯ್ತು, ಸರ್ವರು ಎಚ್ಚರದಿಂದ ಇರಬೇಕಲೇ ಪರಾಕ್!
2025ರ ಬಳ್ಳಾರಿಯ ಮಾಳ ಮಲ್ಲೇಶ್ವರ ಕಾರ್ಣಿಕ
ಹಾಲು ಹರಿದಾಡಿತು ಎಚ್ಚರ, ಗಂಗೆ ಹೊಳೆ ದಂಡೆಗೆ ನಿಂತಾಳ ಉತ್ತರ ಭಾಗಕ್ಕ ಹೊಂಟಾಳ
ಇದನ್ನೂ ಓದಿ: ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸ್ತಿದೆ ಬ್ರಾಹ್ಮಣರ ಹಪ್ಪಳ: ಏನಪ್ಪಾ ಈ ಪರಿ ಬಿಸಿಬಿಸಿ ಚರ್ಚೆ?

