MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ತಾಯಿ ಸತ್ತಳೆಂದು ಮನೇಲಿ ಅಳುತ್ತಾ ಕೂರದೇ, ಕಣ್ಣೀರಿಡುತ್ತಲೇ ಬಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರದ ವಿದ್ಯಾರ್ಥಿ!

ತಾಯಿ ಸತ್ತಳೆಂದು ಮನೇಲಿ ಅಳುತ್ತಾ ಕೂರದೇ, ಕಣ್ಣೀರಿಡುತ್ತಲೇ ಬಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರದ ವಿದ್ಯಾರ್ಥಿ!

ಚಾಮರಾಜನಗರದ ವಿದ್ಯಾರ್ಥಿ ಅಬ್ದುಲ್ ಅಫಾನ್, ತಾಯಿ ನಿಧನದ ಅತೀವ ದುಃಖದ ನಡುವೆಯೂ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ. ಶಿಕ್ಷಣದ ಮೇಲಿನ ಈತನ ಬದ್ಧತೆ ಮತ್ತು ಧೈರ್ಯವು ಎಲ್ಲರಿಗೂ ಮಾದರಿಯಾಗಿದ್ದು, ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

2 Min read
Author : Sathish Kumar KH
Published : Mar 18 2026, 02:51 PM IST
Share this Photo Gallery
  • FB
  • TW
  • Linkdin
  • Whatsapp
16
ತಾಯಿ ಸತ್ತರೂ ಕಣ್ಣೀರಿಡುತ್ತಲೇ ಪರೀಕ್ಷೆಗೆ ಬಂದ ವಿದ್ಯಾರ್ಥಿ
Image Credit : Asianet News

ತಾಯಿ ಸತ್ತರೂ ಕಣ್ಣೀರಿಡುತ್ತಲೇ ಪರೀಕ್ಷೆಗೆ ಬಂದ ವಿದ್ಯಾರ್ಥಿ

ಚಾಮರಾಜನಗರ: ಹೆತ್ತ ತಾಯಿಯ ಅಗಲಿಕೆಯ ಅತೀವ ದುಃಖ ಒಂದು ಕಡೆ, ಭವಿಷ್ಯ ರೂಪಿಸುವ ಪರೀಕ್ಷೆಯ ಜವಾಬ್ದಾರಿ ಇನ್ನೊಂದು ಕಡೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಚಾಮರಾಜನಗರದ ವಿದ್ಯಾರ್ಥಿಯೊಬ್ಬ ತೋರಿದ ಧೈರ್ಯ ಮತ್ತು ಶಿಕ್ಷಣದ ಮೇಲಿರುವ ಬದ್ಧತೆ ಈಗ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುವಂತೆ ಮಾಡಿದೆ. ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳಲ್ಲಿ ಈ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ.

26
ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ ತಾಯಿ
Image Credit : Asianet News

ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ ತಾಯಿ

ಚಾಮರಾಜನಗರದ ಕ್ರೆಸೆಂಟಾ ಅಕಾಡೆಮಿ ಶಾಲೆಯ ವಿದ್ಯಾರ್ಥಿಯಾಗಿರುವ ಅಬ್ದುಲ್ ಅಫಾನ್ ಈ ಸಾಹಸ ತೋರಿದ ಬಾಲಕ. ಅಫಾನ್ ತಾಯಿ ನೂರ್ ಜಹರಾ ಅವರು ಕಳೆದ ಕೆಲವು ಸಮಯದಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ (ಮಂಗಳವಾರ) ರಾತ್ರಿ ನಿಧನರಾದರು. ಪರೀಕ್ಷೆಯ ತಯಾರಿಯಲ್ಲಿದ್ದ ಮಗನಿಗೆ ತಾಯಿಯ ಸಾವು ಅತಿದೊಡ್ಡ ಆಘಾತ ನೀಡಿತು.

Related Articles

Related image1
10ನೇ ತರಗತಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗೆ ಮಹೀಂದ್ರಾ ಥಾರ್ ಉಡುಗೊರೆ? ಅಪ್ಪ-ಅಮ್ಮನನ್ನು ಟೀಕಿಸಿದ ನೆಟ್ಟಿಗರು!
Related image2
ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಸಹಾಯ ಮಾಡಲು ವಿದ್ಯಾರ್ಥಿಯಿಂದ 80 ಗ್ರಾಂ ಚಿನ್ನ ಪಡೆದ ಶಿಕ್ಷಕ?
36
ಅಂತ್ಯಕ್ರಿಯೆ ಮುಗಿಸಿ ನೇರ ಪರೀಕ್ಷೆಗೆ
Image Credit : Asianet News

ಅಂತ್ಯಕ್ರಿಯೆ ಮುಗಿಸಿ ನೇರ ಪರೀಕ್ಷೆಗೆ

ತಾಯಿಯ ಅಗಲಿಕೆಯಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು. ಇಂದು ಬೆಳ್ಳಂಬೆಳಗ್ಗೆ ತಾಯಿ ನೂರ್ ಜಹರಾ ಅವರ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ತಾಯಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರು ಸುರಿಸುತ್ತಿದ್ದ ಅಫಾನ್, ಆ ದುಃಖದ ನಡುವೆಯೂ ತನ್ನ ಶಿಕ್ಷಣ ಕುಂಠಿತವಾಗಬಾರದು ಎಂದು ನಿರ್ಧರಿಸಿದನು. ಅಂತ್ಯಕ್ರಿಯೆ ಮುಗಿದ ತಕ್ಷಣವೇ ಮನಸ್ಸನ್ನು ಗಟ್ಟಿ ಮಾಡಿಕೊಂಡು ಚಾಮರಾಜನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಹಾಜರಾದನು.

46
ಕಣ್ಣೀರಿನ ನಡುವೆಯೇ ಪರೀಕ್ಷೆ
Image Credit : Asianet News

ಕಣ್ಣೀರಿನ ನಡುವೆಯೇ ಪರೀಕ್ಷೆ

ಪರೀಕ್ಷಾ ಕೊಠಡಿಯೊಳಗೆ ಕುಳಿತಿದ್ದ ಅಫಾನ್ ಕಣ್ಣುಗಳಲ್ಲಿ ಕಣ್ಣೀರು ಜಿನುಗುತ್ತಿದ್ದರೂ, ಕೈಗಳು ಮಾತ್ರ ಪರೀಕ್ಷೆ ಬರೆಯುವುದರಲ್ಲಿ ಮಗ್ನವಾಗಿದ್ದವು. ತಾಯಿಯ ಆಸೆಯಂತೆ ತಾನು ಓದಿ ದೊಡ್ಡವನಾಗಬೇಕು ಎಂಬ ಹಂಬಲ ಆತನಲ್ಲಿ ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಯ ಈ ಸ್ಥಿತಿಯನ್ನು ಕಂಡು ಸಹಪಾಠಿಗಳು ಹಾಗೂ ಪರೀಕ್ಷಾ ಮೇಲ್ವಿಚಾರಕರು ಕೂಡ ಭಾವುಕರಾದರು.

56
ಶಿಕ್ಷಣ ಇಲಾಖೆ ಮೆಚ್ಚುಗೆ:
Image Credit : Asianet News

ಶಿಕ್ಷಣ ಇಲಾಖೆ ಮೆಚ್ಚುಗೆ:

ಅಬ್ದುಲ್ ಅಫಾನ್ ತೋರಿದ ಈ ಅಸಾಧಾರಣ ಬದ್ಧತೆಗೆ ಶಾಲಾ ಶಿಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ಹಾಗೂ ಶಿಕ್ಷಣಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತಾಯಿಯನ್ನು ಕಳೆದುಕೊಂಡ ಆಘಾತದಲ್ಲೂ ಪರೀಕ್ಷೆಗೆ ಹಾಜರಾಗಿರುವುದು ಆತನ ಧೈರ್ಯವನ್ನು ತೋರಿಸುತ್ತದೆ. ಇತರ ವಿದ್ಯಾರ್ಥಿಗಳಿಗೆ ಈತ ಮಾದರಿಯಾಗಿದ್ದಾನೆ' ಎಂದು ಡಿಡಿಪಿಐ ಹರ್ಷ ವ್ಯಕ್ತಪಡಿಸಿದ್ದಾರೆ.

66
ಅಫಾನ್‌ಗೆ ಹಾರೈಕೆಗಳ ಮಹಾಪೂರ
Image Credit : Asianet News

ಅಫಾನ್‌ಗೆ ಹಾರೈಕೆಗಳ ಮಹಾಪೂರ

ಪರೀಕ್ಷೆಯ ಒತ್ತಡದ ನಡುವೆ ಇಂತಹ ವೈಯಕ್ತಿಕ ದುರಂತ ಸಂಭವಿಸಿದರೂ ಎದೆಗುಂದದೆ ಪರೀಕ್ಷೆ ಎದುರಿಸಿದ ಅಬ್ದುಲ್ ಅಫಾನ್ ಈಗ ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದಾನೆ. ಆತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಚಾಮರಾಜನಗರ
ಎಸ್‌ಎಸ್‌ಎಲ್‌ಸಿ (SSLC)
ಶಿಕ್ಷಣ
Latest Videos
Recommended Stories
Recommended image1
Tumakuru: ಮಗಳ ಆತ್ಮ*ಹತ್ಯೆ; ಗಂಡನ ಮನೆಯೊಳಗೆ ಪುತ್ರಿಯ ಅಂತ್ಯಕ್ರಿಯೆ ಮಾಡಿದ ತಂದೆ
Recommended image2
ಡಿಸ್ಕೋ ಬಾರ್‌ ಆದ ಬೆಂಗಳೂರು ಮೆಟ್ರೋ, ಯಾರ ಮನೆ ಮಕ್ಕಳಪ್ಪಾ ನೀವೆಲ್ಲಾ..
Recommended image3
ಕಳ್ಳನ ಕೈಗೆ ಬೆಂಗಳೂರು ಜ್ಯೂವೆಲ್ಲರಿ ಶಾಪ್ ಕೀ ಕೊಟ್ಟ ಮಾಲೀಕ; 10 ಕೆಜಿ ಆಭರಣ ಕದ್ದು ರಾಜಸ್ಥಾನಕ್ಕೆ ಪರಾರಿ!
Related Stories
Recommended image1
10ನೇ ತರಗತಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗೆ ಮಹೀಂದ್ರಾ ಥಾರ್ ಉಡುಗೊರೆ? ಅಪ್ಪ-ಅಮ್ಮನನ್ನು ಟೀಕಿಸಿದ ನೆಟ್ಟಿಗರು!
Recommended image2
ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಸಹಾಯ ಮಾಡಲು ವಿದ್ಯಾರ್ಥಿಯಿಂದ 80 ಗ್ರಾಂ ಚಿನ್ನ ಪಡೆದ ಶಿಕ್ಷಕ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved