MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru ಟೋಲ್ ಮುಕ್ತ ಹೆದ್ದಾರಿ: 631ಕೋಟಿ ವೆಚ್ಚ, 100ಮೀ ಅಗಲ, 10ಲೇನ್‌ಗಳ SM Krishna Road ಜೂ.27ಕ್ಕೆ ಲೋಕಾರ್ಪಣೆ

Bengaluru ಟೋಲ್ ಮುಕ್ತ ಹೆದ್ದಾರಿ: 631ಕೋಟಿ ವೆಚ್ಚ, 100ಮೀ ಅಗಲ, 10ಲೇನ್‌ಗಳ SM Krishna Road ಜೂ.27ಕ್ಕೆ ಲೋಕಾರ್ಪಣೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  ನಿರ್ಮಿಸಿರುವ 'ಮೇಜರ್‌ ಆರ್ಟೀರಿಯಲ್‌ ರಸ್ತೆ' ಜೂನ್ 27ರಂದು ಲೋಕಾರ್ಪಣೆಗೊಳ್ಳಲಿದೆ. 'ಎಸ್‌.ಎಂ.ಕೃಷ್ಣ ರಸ್ತೆ' ಎಂದು ನಾಮಕರಣಗೊಂಡಿರುವ ಈ ಟೋಲ್-ಮುಕ್ತ ಹೆದ್ದಾರಿಯು, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸಿ, ಸಂಚಾರ ದಟ್ಟಣೆ ಕಡಿಮೆಗೊಳಿಸುತ್ತದೆ

3 Min read
Author : Gowthami K
Published : Jun 25 2026, 04:27 PM IST
Share this Photo Gallery
  • FB
  • TW
  • Linkdin
  • Whatsapp
16
 ಮೇಜರ್‌ ಆರ್ಟೀರಿಯಲ್‌ ರಸ್ತೆ
Image Credit : Asianet News

ಮೇಜರ್‌ ಆರ್ಟೀರಿಯಲ್‌ ರಸ್ತೆ

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಉಪನಗರಗಳ ಆರ್ಥಿಕತೆಗೆ ಹೊಸ ಚೈತನ್ಯ ತುಂಬಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಂಡಿರುವ ಅತ್ಯಂತ ಮಹತ್ವಾಕಾಂಕ್ಷಿ ‘ಮೇಜರ್‌ ಆರ್ಟೀರಿಯಲ್‌ ರಸ್ತೆ (ಎಂಎಆರ್)’ ಲೋಕಾರ್ಪಣೆಗೆ ಸಿದ್ಧವಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಈ ವಿಶಾಲ ರಸ್ತೆಗೆ ಮಾಜಿ ಎಸ್‌.ಎಂ.ಕೃಷ್ಣ ರಸ್ತೆ’ ಎಂದು ನಾಮಕರಣ ಮಾಡಲಾಗಿದ್ದು, ನಾಡಪ್ರಭು ಕೆಂಪೇಗೌಡ ಜಯಂತಿಯ ದಿನವಾದ ಜೂನ್ 27ರಂದು ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಯಾವುದೇ ಸಿಗ್ನಲ್ ಮತ್ತು ಟೋಲ್ ಇಲ್ಲದೆ ಅತಿ ಕಡಿಮೆ ಸಮಯದಲ್ಲಿ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯು, ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ ನಡುವೆ ಪ್ರಗತಿಯ ಹೊಸ ಕಾರಿಡಾರ್ ಆಗಿ ಹೊರಹೊಮ್ಮುವ ಭರವಸೆ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಭವಿಷ್ಯ ಗಮನದಲ್ಲಿ ಹೈಟೆಕ್‌ ರೋಡ್
Image Credit : Asianet News

ಭವಿಷ್ಯ ಗಮನದಲ್ಲಿ ಹೈಟೆಕ್‌ ರೋಡ್

ಸ್ಟಾರ್ ಇನ್ಫೋಟೆಕ್ ಕಂಪನಿಯು ಅತ್ಯಂತ ದಕ್ಷತೆಯಿಂದ ನಿರ್ಮಿಸಿರುವ ಈ ರಸ್ತೆಯು ತಾಂತ್ರಿಕ ನಾವೀನ್ಯತೆಗೆ ಸಾಕ್ಷಿಯಾಗಿದೆ. ಒಟ್ಟು ವೆಚ್ಚ ₹631 ಕೋಟಿಯಾಗಿದೆ. 10.7 ಕಿ.ಮೀ ಉದ್ದ, 100 ಮೀಟರ್ (330 ಅಡಿ) ಅಗಲ ಇದೆ. 10 ಲೇನ್‌ಗಳ ವಿಶಾಲ ರಸ್ತೆ (ಆಧುನಿಕ ಸರ್ವಿಸ್ ರಸ್ತೆಗಳು ಸೇರಿ) ಪ್ರಯಾಣದ ಅವಧಿ 60 ನಿಮಿಷದಿಂದ 20 ನಿಮಿಷಕ್ಕೆ ಇಳಿಕೆ (40 ನಿಮಿಷ ಉಳಿತಾಯ). 13 ಪ್ರಮುಖ ಅಂಡರ್‌ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ ಈ ರಸ್ತೆಯಲ್ಲಿ ಸಿಗಲಿದೆ. 13 ಮೀಟರ್ ಅಗಲದ ರಸ್ತೆ ವಿಭಜಕ, ಸೈಕಲ್ ಟ್ರ್ಯಾಕ್, ಮತ್ತು ಎರಡೂ ಬದಿಗಳಲ್ಲಿ 27 ಮೀಟರ್ ಅಗಲದ ಹಸಿರು ವಲಯ (ಮರದ ತೋಪು)ಇರಲಿದೆ. ಇದು ಭವಿಷ್ಯದಲ್ಲಿ ಬೆಂಗಳೂರು ಮೆಟ್ರೊ ಜಾಲವನ್ನು ವಿಸ್ತರಿಸಲು ವಿಶೇಷ ಅವಕಾಶ.

Related Articles

Related image1
GBA Elections ಆಯೋಗ ಸಿದ್ದತೆ: ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆ ಆರಂಭ, ಯಾವಾಗ? ಎಲ್ಲಿ?
Related image2
ಬೆಂಗಳೂರು ಕೇಂದ್ರ ಭಾಗದಲ್ಲಿರುವ ಬಿಡಿಎ ಸೈಟುಗಳ ಮಾರಾಟ: 75 ಪ್ರೈಮ್ ನಿವೇಶನಗಳ ಇ-ಹರಾಜು ಪ್ರಕಟ, ಇಲ್ಲಿದೆ ಡೀಟೇಲ್ಸ್!
36
ನೈಸ್ ರಸ್ತೆಗೆ ಪರ್ಯಾಯ: ಉದ್ಯಮ ಹಾಗೂ ವಾಣಿಜ್ಯ ವಲಯಕ್ಕೆ ವರದಾನ
Image Credit : Asianet News

ನೈಸ್ ರಸ್ತೆಗೆ ಪರ್ಯಾಯ: ಉದ್ಯಮ ಹಾಗೂ ವಾಣಿಜ್ಯ ವಲಯಕ್ಕೆ ವರದಾನ

ಈ ರಸ್ತೆಯು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೊ ನಿಲ್ದಾಣದವರೆಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಇದು ಕೇವಲ ವಾಹನ ಸಂಚಾರಕ್ಕೆ ಸೀಮಿತವಾಗದೆ, ಬೆಂಗಳೂರಿನ ಆರ್ಥಿಕತೆಗೆ ದೊಡ್ಡ ಶಕ್ತಿ ತುಂಬಲಿದೆ.

ಟೋಲ್ ಮುಕ್ತ ಪ್ರಯಾಣ: ಸರಕು ಸಾಗಣೆ ವಾಹನಗಳು ಯಾವುದೇ ಟೋಲ್ ಶುಲ್ಕವಿಲ್ಲದೆ, 'ನೈಸ್ ರಸ್ತೆ'ಗೆ ಪರ್ಯಾಯವಾಗಿ ನಗರದ ಹೃದಯಭಾಗವನ್ನು ಪ್ರವೇಶಿಸದೆಯೇ ಸಾಗಬಹುದು. ಇದರಿಂದ ಇಂಧನ, ಸಮಯ ಮತ್ತು ಕೋಟ್ಯಂತರ ರೂಪಾಯಿ ಹಣ ಉಳಿತಾಯವಾಗಲಿದೆ.

ಕೈಗಾರಿಕೆಗಳಿಗೆ ವೇಗದ ಕೊಂಡಿ: ಪೀಣ್ಯ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕೆಂಗೇರಿ, ಬಿಡದಿ, ರಾಮನಗರ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಕಾರ್ಮಿಕ ವರ್ಗ, ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.

ಹೊಸ ಉದ್ಯೋಗ ಸೃಷ್ಟಿ: ಮಾಗಡಿ ಮತ್ತು ಮೈಸೂರು ರಸ್ತೆ ಭಾಗದಲ್ಲಿ ಉತ್ತಮ ಸಂಪರ್ಕ ಏರ್ಪಡುವುದರಿಂದ ಹೊಸ ಹೂಡಿಕೆಗಳು ಆಕರ್ಷಿತವಾಗಲಿವೆ. ಗುಡಿ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ಸಿಗಲಿದ್ದು, ಸ್ಥಳೀಯವಾಗಿ ಅಪಾರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಗ್ರಾಮೀಣ ಭಾಗದ ಪ್ರಗತಿ: ಈ ರಸ್ತೆಯು ಮಾಚೋಹಳ್ಳಿ, ಕೊಡಿಗೆಹಳ್ಳಿ, ಕನ್ನಳ್ಳಿ, ಕೆಂಚನಪುರ, ಸೂಲಿಕೆರೆ, ಕೊಮ್ಮಘಟ್ಟ ಹಾಗೂ ಚಲ್ಲಘಟ್ಟ ಗ್ರಾಮಗಳಿಗೆ ಹೊಂದಿಕೊಂಡಿರುವುದರಿಂದ ಈ ಭಾಗದ ಗ್ರಾಮೀಣ ಪ್ರದೇಶಗಳೂ ವೇಗವಾಗಿ ಅಭಿವೃದ್ಧಿ ಹೊಂದಲಿವೆ.

46
ತಾಂತ್ರಿಕ ಸವಾಲುಗಳು ಮತ್ತು ಇಂಜಿನಿಯರಿಂಗ್ ಚಮತ್ಕಾರ
Image Credit : Asianet News

ತಾಂತ್ರಿಕ ಸವಾಲುಗಳು ಮತ್ತು ಇಂಜಿನಿಯರಿಂಗ್ ಚಮತ್ಕಾರ

ಯೋಜನೆಯ ಅನುಷ್ಠಾನದ ಹಂತದಲ್ಲಿ ಹಲವು ತಾಂತ್ರಿಕ ಮತ್ತು ಪರಿಸರ ಸಂಬಂಧಿ ಸವಾಲುಗಳು ಎದುರಾಗಿದ್ದವು. ಆದರೆ ಬಿಡಿಎ ಮತ್ತು ನಿರ್ಮಾಣ ಸಂಸ್ಥೆ ಅವುಗಳನ್ನು ಸಮರ್ಥವಾಗಿ ಎದುರಿಸಿವೆ:

'ಬಾಕ್ಸ್ ಪುಷಿಂಗ್' ತಂತ್ರಜ್ಞಾನ: ಬೆಂಗಳೂರು-ಮೈಸೂರು ಜೋಡಿ ಮಾರ್ಗದ ರೈಲ್ವೆ ಹಳಿಗಳಿಗೆ ಅಡ್ಡಲಾಗಿ ಈ ರಸ್ತೆ ಹಾದುಹೋಗುತ್ತದೆ. ರೈಲು ಸಂಚಾರಕ್ಕೆ ಯಾವುದೇ ತಡೆಯಾಗದಂತೆ 'ಬಾಕ್ಸ್ ಪುಷಿಂಗ್' ತಂತ್ರಜ್ಞಾನ ಬಳಸಿ, ರೈಲ್ವೆ ಒಡೆತನದ 40 ಮೀಟರ್ ಉದ್ದ ಹಾಗೂ 14 ಮೀಟರ್ ಅಗಲದ ಎರಡು ಕೆಳಸೇತುವೆಗಳನ್ನು ಸ್ಟಾರ್ ಇನ್ಫೋಟೆಕ್ ಕಂಪನಿ ಕೇವಲ ಮೂರು ತಿಂಗಳಲ್ಲಿ ನಿರ್ಮಿಸಿ ಸೈ ಎನಿಸಿಕೊಂಡಿದೆ.

ಪರಿಸರ ಮತ್ತು ಪ್ರಾಣಿ ಸಂಕುಲದ ರಕ್ಷಣೆ: ಈ ರಸ್ತೆಯು ಸೂಲಿಕೆರೆ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದುಹೋಗುವುದರಿಂದ ಸುಮಾರು 2.5 ಎಕರೆ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಆದರೆ, ಪ್ರಾಣಿಗಳ ಮುಕ್ತ ಚಲನೆಗೆ ಧಕ್ಕೆ ಬರದಂತೆ ಅರಣ್ಯ ಇಲಾಖೆಯ ಅನುಮೋದನೆ ಪಡೆದು, ವನ್ಯಜೀವಿಗಳಿಗಾಗಿಯೇ ಎರಡು ವಿಶೇಷ ಕೆಳಸೇತುವೆಗಳನ್ನು (Underpasses) ನಿರ್ಮಿಸಲಾಗಿದೆ.

56
ಬಿಡಿಎ ಅಧಿಕಾರಿಗಳ ಶ್ರಮ ಮತ್ತು ಕಾನೂನು ಹೋರಾಟದ ಯಶಸ್ಸು
Image Credit : Asianet News

ಬಿಡಿಎ ಅಧಿಕಾರಿಗಳ ಶ್ರಮ ಮತ್ತು ಕಾನೂನು ಹೋರಾಟದ ಯಶಸ್ಸು

ಒಟ್ಟು 321 ಎಕರೆ ವಿಶಾಲ ಪ್ರದೇಶದಲ್ಲಿ ಈ ರಸ್ತೆಯನ್ನು ರೂಪಿಸುವಾಗ ಬಿಡಿಎಗೆ ಸಾಲು ಸಾಲು ಸವಾಲುಗಳು ಎದುರಾಗಿದ್ದವು. ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಭೂಸ್ವಾಧೀನ ಪ್ರಶ್ನಿಸಿ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 100ಕ್ಕೂ ಹೆಚ್ಚು ದಾವೆಗಳು ದಾಖಲಾಗಿದ್ದವು.

ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಹಾಗೂ ಆಯುಕ್ತರಾದ ಮಣಿವಣ್ಣನ್‌ ನೇತೃತ್ವದ ಅಧಿಕಾರಿಗಳ ತಂಡವು ಸಮರ್ಥ ವಕೀಲರ ಮೂಲಕ ಈ ಎಲ್ಲಾ ಕಾನೂನು ಆತಂಕಗಳನ್ನು ನಿವಾರಿಸಿತು. ಕೇವಲ ಕಾನೂನು ಹೋರಾಟ ಮಾತ್ರವಲ್ಲದೆ, ಅಧಿಕಾರಿಗಳು ಸ್ಥಳೀಯ ನಿವಾಸಿಗಳೊಂದಿಗೆ ನಿರಂತರ ಸಂವಾದ ನಡೆಸಿ, ಯೋಜನೆಯ ಮಹತ್ವ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಮನವರಿಕೆ ಮಾಡಿಕೊಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

66
ಬಿಡಿಎ ಸಾಮಾಜಿಕ ಜವಾಬ್ದಾರಿ
Image Credit : Asianet News

ಬಿಡಿಎ ಸಾಮಾಜಿಕ ಜವಾಬ್ದಾರಿ

ಜೊತೆಗೆ, ಕೆಂಪೇಗೌಡ ಬಡಾವಣೆಯ ಸುತ್ತಮುತ್ತಲಿನ 11 ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವ ಸಲುವಾಗಿ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಬಿಡಿಎ ಸಾಮಾಜಿಕ ಜವಾಬ್ದಾರಿಯನ್ನೂ ಮೆರೆದಿದೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಕನಸು ಕಂಡಿದ್ದ ಆಧುನಿಕ, ಜಾಗತಿಕ ಮಟ್ಟದ ಹಾಗೂ ಹೂಡಿಕೆ ಸ್ನೇಹಿ ಬೆಂಗಳೂರಿನ ಪರಿಕಲ್ಪನೆಗೆ ಈ ರಸ್ತೆ ಅತ್ಯುತ್ತಮ ಉದಾಹರಣೆಯಾಗಿದೆ. ನಗರಾಭಿವೃದ್ಧಿಯ ಜೊತೆಗೆ ಕೈಗಾರಿಕಾ ಪ್ರಗತಿಗೂ ಹೊಸ ದಿಕ್ಸೂಚಿಯಾಗಲಿರುವ ಈ ಹೆದ್ದಾರಿ, ಜೂನ್ 27ರಿಂದ ರಾಜಧಾನಿಯ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ರಸ್ತೆ ಸಾರಿಗೆ
ಮೈಸೂರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

Latest Videos
Recommended Stories
Recommended image1
Now Playing
ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Recommended image2
TB Dam inauguration: 'ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತಾಡ್ತಿದ್ದೆ..' ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಸಿಎಂ
Recommended image3
ತವರಿನಿಂದ ಪತ್ನಿಯನ್ನು ಕರೆದೊಯ್ದ ಅಳಿಯನ ವಿರುದ್ಧವೇ ಕಿಡ್ನಾಪ್ ಕೇಸ್‌! ವಿಚಿತ್ರ ಪ್ರಕರಣಕ್ಕೆ ಹೈಕೋರ್ಟ್ ತಡೆ
Related Stories
Recommended image1
GBA Elections ಆಯೋಗ ಸಿದ್ದತೆ: ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆ ಆರಂಭ, ಯಾವಾಗ? ಎಲ್ಲಿ?
Recommended image2
ಬೆಂಗಳೂರು ಕೇಂದ್ರ ಭಾಗದಲ್ಲಿರುವ ಬಿಡಿಎ ಸೈಟುಗಳ ಮಾರಾಟ: 75 ಪ್ರೈಮ್ ನಿವೇಶನಗಳ ಇ-ಹರಾಜು ಪ್ರಕಟ, ಇಲ್ಲಿದೆ ಡೀಟೇಲ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved