MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಪಾಕಿಸ್ತಾನ ಐಎಸ್‌ಐಗೆ ಸಿಮ್ ಕಾರ್ಡ್ ಪೂರೈಕೆ, ನೇಪಾಳಿ ಪ್ರಜೆ ದೆಹಲಿಯಲ್ಲಿ ಅರೆಸ್ಟ್, ನೇಪಾಳ ದಂಗೆಗೆ ಈತನೂ ಕಾರಣ!

ಪಾಕಿಸ್ತಾನ ಐಎಸ್‌ಐಗೆ ಸಿಮ್ ಕಾರ್ಡ್ ಪೂರೈಕೆ, ನೇಪಾಳಿ ಪ್ರಜೆ ದೆಹಲಿಯಲ್ಲಿ ಅರೆಸ್ಟ್, ನೇಪಾಳ ದಂಗೆಗೆ ಈತನೂ ಕಾರಣ!

ಭಾರತೀಯ ಸಿಮ್‌ಗಳ ದುರ್ಬಳಕೆ ಪ್ರಕರಣದಲ್ಲಿ ನೇಪಾಳ ಮೂಲದ ವ್ಯಕ್ತಿಯ ಬಂಧನ. ಐಎಸ್‌ಐ ಸೂಚನೆಯಂತೆ ಸೇನಾ ಮಾಹಿತಿ ಸಂಗ್ರಹ, ಸಿಮ್ ಕಾರ್ಡ್ ಪೂರೈಕೆ.

2 Min read
Gowthami K
Published : Sep 10 2025, 12:51 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ನವದೆಹಲಿ: ಪಾಕಿಸ್ತಾನದ ಬಹವಾಲ್‌ಪುರದಲ್ಲಿ ಭಾರತೀಯ ಸಿಮ್ ಕಾರ್ಡ್‌ಗಳ ದುರುಪಯೋಗ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ವಿಶೇಷ ತಂಡ ದೊಡ್ಡ ಮಟ್ಟದ ಬೇಹುಗಾರಿಕೆ ಜಾಲವನ್ನು ಬಯಲಿಗೆಳೆದಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐ ಸೂಚನೆಯ ಮೇರೆಗೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ 43 ವರ್ಷದ ನೇಪಾಳ ಮೂಲದ ಪ್ರಭಾತ್ ಕುಮಾರ್ ಚೌರಾಸಿಯಾ ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಚೌರಾಸಿಯಾ ಐಎಸ್‌ಐ ಕಾರ್ಯಕರ್ತರಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಪೂರೈಸುತ್ತಿದ್ದನೆಂಬ ಮಾಹಿತಿ ದೊರಕಿದ ನಂತರ ಅವನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಯಿತು.

26
Image Credit : social media

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನೋಂದಾಯಿಸಿದ ತನ್ನ ಆಧಾರ್ ಕಾರ್ಡ್ ಬಳಸಿ, ಅವನು ಬಿಹಾರ ಮತ್ತು ಮಹಾರಾಷ್ಟ್ರದಿಂದ 16 ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದನು. ಅವುಗಳನ್ನು ಸಕ್ರಿಯಗೊಳಿಸಿದ ಬಳಿಕ ನೇಪಾಳದ ಕಠ್ಮಂಡುವಿಗೆ ಕಳ್ಳಸಾಗಣೆ ಮಾಡಿ ನಂತರ ಐಎಸ್‌ಐ ನಿರ್ವಾಹಕರಿಗೆ ಒದಗಿಸಲಾಗುತ್ತಿತ್ತು. ಈ ಸಿಮ್‌ಗಳನ್ನು ಪಾಕಿಸ್ತಾನದ ಲಾಹೋರ್, ಬಹವಾಲ್‌ಪುರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಬಳಸಲಾಗುತ್ತಿದ್ದು, ವಾಟ್ಸಾಪ್ ಮೂಲಕ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಉಪಯೋಗಿಸುತ್ತಿದ್ದರು ಎಂದು ಹೆಚ್ಚುವರಿ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.

Related Articles

Related image1
YouTuber Arrested: ಪಾಕ್ ಪರ ಬೇಹುಗಾರಿಕೆ; ಮತ್ತೊಬ್ಬ ಯೂಟ್ಯೂಬರ್‌ ಸೆರೆ!
Related image2
ಪಾಕ್‌ ISI ಬೇಹುಗಾರಿಕೆ, ಸರ್ಕಾರಿ ನೌಕರ, ಕಾಂಗ್ರೆಸ್‌ ನಾಯಕನ ಸಹಾಯಕ ಬಂಧನ!
36
Image Credit : Asianet News

ನೇಪಾಳ ದಂಗೆಯಲ್ಲಿ ಪ್ರಮುಖ ಪಾತ್ರ

ತನಿಖೆಯಿಂದ ತಿಳಿದುಬಂದಂತೆ, ನೇಪಾಳದ ಒಬ್ಬ ಪ್ರಮುಖ ಉದ್ಯಮಿ ಚೌರಾಸಿಯಾಗೆ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ. ಆತನೇ ಐಎಸ್‌ಐ ಮಾರ್ಗದರ್ಶಕನಾಗಿದ್ದು, ನೇಪಾಳದಲ್ಲಿ ಹಲವಾರು ಗೂಢಚಾರರನ್ನು ನಿರ್ವಹಿಸುತ್ತಿದ್ದನೆಂದು ಮೂಲಗಳು ತಿಳಿಸಿವೆ. ಅಲ್ಲದೆ, ನೇಪಾಳದಲ್ಲಿ ನಡೆಯುತ್ತಿರುವ Gen-Z  ಪ್ರತಿಭಟನೆಗೆ   ಈ ಉದ್ಯಮಿ ಪ್ರಮುಖ ಪಾತ್ರವಹಿಸಿದ್ದಾನೆಂದು ಶಂಕಿಸಲಾಗಿದೆ.

2024ರಲ್ಲಿ ಮಧ್ಯವರ್ತಿಯ ಮೂಲಕ ಐಎಸ್‌ಐ ನಿರ್ವಾಹಕರು ಚೌರಾಸಿಯಾಗೆ ಅಮೆರಿಕ ವೀಸಾ ಹಾಗೂ ವಿದೇಶದಲ್ಲಿ ಪತ್ರಿಕೋದ್ಯಮದಲ್ಲಿ ಅವಕಾಶದ ಆಸೆ ಹುಟ್ಟಿಸಿ ಬಲೆಗೆ ಬೀಳಿಸಿದ್ದರು. ಪ್ರತಿಯಾಗಿ ಅವನಿಗೆ ಡಿಆರ್‌ಡಿಒ ಮತ್ತು ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಸಿಮ್ ಕಾರ್ಡ್ ಪೂರೈಕೆ ಮಾಡುವ ಕೆಲಸ ವಹಿಸಿದ್ದರು.

46
Image Credit : Getty

ಐಎಸ್‌ಐಯೊಂದಿಗೆ ನಂಟು ಬಗ್ಗೆ ವಿವರ ನೀಡಿದ ಚೌರಾಸಿಯಾ

ಚೌರಾಸಿಯಾ ಬಂಧನದ ವೇಳೆ ಪೊಲೀಸರು ಹಲವು ಡಿಜಿಟಲ್ ಸಾಧನಗಳು, ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸಿಮ್ ಕಾರ್ಡ್‌ಗಳ ಲಕೋಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡಿದ್ದ ಅವನು, ನಂತರ ಕಠ್ಮಂಡುವಿನಲ್ಲಿ ಸ್ವಂತ ಸಂಸ್ಥೆ ಪ್ರಾರಂಭಿಸಿದ್ದರೂ ಆರ್ಥಿಕ ನಷ್ಟದಿಂದಾಗಿ ಹತಾಶನಾಗಿ ಐಎಸ್‌ಐ ಕಾರ್ಯಕರ್ತರೊಂದಿಗೆ ಕೈಜೋಡಿಸಿದ್ದನೆಂದು ಹೇಳಿಕೊಂಡಿದ್ದಾನೆ.

56
Image Credit : Getty

ಕಾರ್ಯಾಚರಣೆ ಹೇಗೆ ನಡೆದಿತು?

ಎಸಿಪಿ ಕೈಲಾಶ್ ಬಿಶ್ತ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ರಾಹುಲ್ ಕುಮಾರ್ ಮತ್ತು ವಿನೀತ್ ತೇವಾಟಿಯಾ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಯಿತು. ಪಾಕಿಸ್ತಾನದಲ್ಲಿ ಭಾರತೀಯ ಮೊಬೈಲ್ ಸಂಖ್ಯೆಗಳ ದುರುಪಯೋಗದ ಬಗ್ಗೆ ಮೂಲಗಳಿಂದ ಮಾಹಿತಿ ದೊರೆತ ಹಿನ್ನೆಲೆ ತನಿಖೆ ಆರಂಭವಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದ ಬಿರ್ಗುಂಜ್ ಮೂಲದ ಚೌರಾಸಿಯಾ, ದೆಹಲಿಯ ಲಕ್ಷ್ಮಿ ನಗರದ ವಿಜಯ್ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು. ಅವನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 61(2)/152 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅವನ ಸಹಚರರನ್ನು ಪತ್ತೆಹಚ್ಚಲು, ಸಿಮ್ ಕಾರ್ಡ್ ಕೂರಿಯರ್ ಜಾಲವನ್ನು ಬಯಲಿಗೆಳೆಯಲು ಹಾಗೂ ವಿದೇಶಿ ನಿರ್ವಾಹಕರನ್ನು ಬಂಧಿಸಲು ತನಿಖೆ ಮುಂದುವರಿಯುತ್ತಿದೆ. ವಶಪಡಿಸಿಕೊಂಡ ಡಿಜಿಟಲ್ ಸಾಧನಗಳ ವಿಶ್ಲೇಷಣೆಯೂ ಪ್ರಗತಿಯಲ್ಲಿದೆ.

66
Image Credit : ANI

ನೇಪಾಳದಿಂದ ಬಂದು ಮುಂಬೈನಲ್ಲಿ ಉದ್ಯೋಗ

1982ರಲ್ಲಿ ಜನಿಸಿದ ಚೌರಾಸಿಯಾ ನೇಪಾಳದಲ್ಲಿ ಮ್ಯಾಟ್ರಿಕ್ಯುಲೇಷನ್ ಮುಗಿಸಿ, ಬಿಹಾರದ ಮೋತಿಹಾರಿಯಲ್ಲಿ ಮಧ್ಯಂತರ ಅಧ್ಯಯನ ನಡೆಸಿದ. ನಂತರ ವಿಜ್ಞಾನದಲ್ಲಿ ಪದವಿ ಪಡೆದಿದ್ದ ಅವನು ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾನೆ. ಉದ್ಯೋಗಕ್ಕಾಗಿ ಮುಂಬೈಯಲ್ಲಿಯೂ ಕೆಲವು ವರ್ಷ ಕೆಲಸ ಮಾಡಿದ್ದಾನೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಂತರ ಸೇವಾ ಗುಪ್ತಚರ
ಗೂಢಚಾರ
ನೇಪಾಳ
ದೆಹಲಿ
ಭಾರತ ಸುದ್ದಿ
ಅಂತರರಾಷ್ಟ್ರೀಯ ಸುದ್ದಿ
ಪಾಕಿಸ್ತಾನ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved