MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಸರ್, ಪ್ಲೀಸ್ ನಮ್ಮಪ್ಪನ 7ನೇ ಮದುವೆ ನಿಲ್ಲಿಸಿ; ಪೊಲೀಸ್ ಠಾಣೆ ಮೆಟ್ಟಿಲೇರಿದ 3ನೇ ಹೆಂಡ್ತಿ ಮಗ

ಸರ್, ಪ್ಲೀಸ್ ನಮ್ಮಪ್ಪನ 7ನೇ ಮದುವೆ ನಿಲ್ಲಿಸಿ; ಪೊಲೀಸ್ ಠಾಣೆ ಮೆಟ್ಟಿಲೇರಿದ 3ನೇ ಹೆಂಡ್ತಿ ಮಗ

55 ವರ್ಷದ ವ್ಯಕ್ತಿಯೊಬ್ಬ ಏಳನೇ ಬಾರಿಗೆ ಮದುವೆಯಾಗಲು ಸಿದ್ಧನಾಗಿದ್ದು, ಇದನ್ನು ತಡೆಯಲು ಆತನ ಅಪ್ರಾಪ್ತ ಮಗನೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಸರ್, ಪ್ಲೀಸ್ ನಮ್ಮಪ್ಪನ ಮದವೆ ನಿಲ್ಲಿಸಿ. ಇಲ್ಲಾಂದ್ರೆ ಇದು ಇಲ್ಲಿಗೆ ನಿಲ್ಲಲ ಎಂದು ಮಗ ಆತಂಕ ವ್ಯಕ್ತಪಡಿಸಿದ್ದಾನೆ.

2 Min read
Author : Mahmad Rafik
Published : Mar 10 2026, 12:29 PM IST
Share this Photo Gallery
  • FB
  • TW
  • Linkdin
  • Whatsapp
15
Marriage
Image Credit : Social Media

Marriage

ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರ ಮದುವೆ ವಾರ್ಷಿಕೋತ್ಸವದಲ್ಲಿ ಭಾಗಿಯಾಗುತ್ತಾರೆ. ಪೋಷಕರು ಮಕ್ಕಳು ಮದುವೆಯಲ್ಲಿ ಭಾಗಿಯಾಗುತ್ತಾರೆ. ಆದರೆ ಉತ್ತರ ಪ್ರದೇಶದ ಆಜಂಗಢದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ 12ನೇ ಕ್ಲಾಸ್ ವಿದ್ಯಾರ್ಥಿ, ಸರ್ ನಮ್ಮಪ್ಪನ ಮದುವೆ ನಿಲ್ಲಿಸಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಇಲ್ಲಾಂದ್ರೆ ನಮ್ಮಪ್ಪ ಮದುವೆ ಮಾಡಿಕೊಳ್ಳುವುದನ್ನು ಮುಂದೆಯೂ ನಿಲ್ಲಿಸಲ್ಲ ಎಂದು ಮಗ ಮನವಿ ಮಾಡಿಕೊಂಡಿದ್ದಾನೆ.

25
ಳನೇ ಬಾರಿ ಹಸೆಮಣೆ ಏರಲು ಸಿದ್ಧನಾದ ಅರ್ಮಜಿತ್ ಮೌರ್ಯ
Image Credit : X

ಳನೇ ಬಾರಿ ಹಸೆಮಣೆ ಏರಲು ಸಿದ್ಧನಾದ ಅರ್ಮಜಿತ್ ಮೌರ್ಯ

ಅಮರ್ಜಿತ್ ಮೌರ್ಯ ಎಂಬಾತ ತನ್ನ 55ನೇ ವಯಸ್ಸಿನಲ್ಲಿ ಏಳನೇ ಬಾರಿ ಹಸೆಮಣೆ ಏರಲು ಸಿದ್ಧನಾಗಿದ್ದನು. ಆದ್ರೆ ಈ ಮದುವೆಗೆ ಅಮರ್ಜಿತ್ ಮೌರ್ಯನ ಮೂರನೇ ಹೆಂಡತಿಯ ಆಪ್ರಾಪ್ತ ಮಗ ಶನಿ ಮೌರ್ಯ ಅಡ್ಡಿಯಾಗಿದ್ದಾನೆ. ನನ್ನ ತಂದೆ ಒಟ್ಟು ಆರು ಮದುವೆಯಾಗಿದ್ದಾನೆ. ಕೌಟುಂಬಿಕ ಕಲಹದಿಂದ ಪತ್ನಿಯರಿಂದ ತಂದೆ ದೂರವಾಗಿದ್ದಾನೆ. ಇದೀಗ ಏಳನೇ ಮದುವೆಗೆ ಸಿದ್ದತೆ ನಡೆಸ್ತಿದ್ದಾನೆ. ಈ ಮದುವೆ ನಿಲ್ಲಿಸಲು ನನಗೆ ಸಹಾಯ ಮಾಡಿ ಎಂದು ಶನಿ ಮೌರ್ಯ ಹೇಳಿದ್ದಾನೆ.

Related Articles

Related image1
Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ
Related image2
ಕನಸು ನನಸು ಆಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ವರನಿಗೆ ಬಿಗ್ ಶಾಕ್ ನೀಡಿದ ವಧು
35
2024ರಲ್ಲಿ ಆರನೇ ಮದುವೆ
Image Credit : Getty

2024ರಲ್ಲಿ ಆರನೇ ಮದುವೆ

2024ರಲ್ಲಿ ಅಮರ್ಜಿತ್ ಮೌರ್ಯ ಆರನೇ ಮದುವೆಯಾಗಿದ್ದನು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆರನೇ ಪತ್ನಿ ಒಡವೆ ಮತ್ತು ಜಮೀನಿನಲ್ಲಿ ಭಾಗ ಕೇಳಲು ಶುರು ಮಾಡಿದ್ದಾಳೆ. ನಂತರ ಆರನೇ ಪತ್ನಿಯೂ ಅಮರ್ಜಿತ್ ಮೌರ್ಯನಿಂದ ದೂರವಾಗಿದ್ದಾಳೆ. ಈ ಘಟನೆ ಬಳಿಕ ಅರ್ಮಜಿತ್ ಮತ್ತೆ ಮದುವೆಯಾಗಲ್ಲ ಎಂದು ಕುಟುಂಬಸ್ಥರೆಲ್ಲರೂ ಭಾವಿಸಿದ್ದರು. ಆದ್ರೆ ಅಮರ್ಜಿತ್ ಮತ್ತೆ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.

45
ಆಸ್ತಿ ಕಲಹ
Image Credit : Getty

ಆಸ್ತಿ ಕಲಹ

ತಂದೆಯ ಮದುವೆಗಳು ಕುಟುಂಬದ ಆರ್ಥಿಕಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ. ಏಳನೇ ಮದುವೆಯ ಖರ್ಚಿಗಾಗಿ ತಂದೆ ಪೂರ್ವಜರ ಜಮೀನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಶನಿ ಮೌರ್ಯ ಹೇಳಿದ್ದಾನೆ. ಪೂರ್ವಜರಿಂದ ಬಂದಿರುವ ಜಮೀನು ಮಾರಾಟ ಸಂಬಂಧ ತಂದೆ ಮುಂಗಡವಾಗಿ 50 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಕುಟುಂಬದ ಅರ್ಧದಷ್ಟು ಜಮೀನು ಈಗಾಗಲೇ ಅಡಮಾನದಲ್ಲಿದ್ದು, ಅದರ ಸಾಲವನ್ನು ಮಕ್ಕಳೇ ಪಾವತಿಸುತ್ತಿದ್ದಾರೆ. ಈ ಜಮೀನು ಮಾರಾಟವಾದರೆ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಶನಿ ಮೌರ್ಯ ಪೊಲೀಸರಿಗೆ ವಿವರಿಸಿದ್ದಾನೆ.

ಇದನ್ನೂ ಓದಿ: ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಿಸ್ತಾಳೆ!

55
ಪೊಲೀಸರು ಹೇಳಿದ್ದೇನು?
Image Credit : Getty

ಪೊಲೀಸರು ಹೇಳಿದ್ದೇನು?

ಶನಿ ಮೌರ್ಯ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗ್ರಾಮಾಂತರ ಎಸ್‌ಪಿ ಚಿರಾಗ್ ಜೈನ್, ಪ್ರಾಥಮಿಕ ತನಿಖೆಯಲ್ಲಿ ಇದು ಕೇವಲ ಮದುವೆಗಳ ಪ್ರಕರಣದಂತೆ ಕಾಣುತ್ತಿಲ್ಲ. ಇದರಲ್ಲಿ ಜಮೀನು ಮತ್ತು ಆಸ್ತಿ ವಿವಾದದ ಆಯಾಮವೂ ಇದೆ ಎಂದು ಹೇಳಿದ್ದಾರೆ. ಪೊಲೀಸರು ಕುಟುಂಬಸ್ಥರ ಸದಸ್ಯರು ಮತ್ತು ಅರ್ಮಿಜಿತ್ ಮೌರ್ಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಮದುವೆ ಈ ಪ್ರಕರಣ ಉತ್ತರ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕೊಟ್ಟೂರಿನ 'ಕಂಪ್ಯೂಟರ್' ಮ್ಯಾನ್‌ ಲೆಕ್ಕದ ಮಾಯಾಜಾಲ; ಗುಟ್ಟು ರಟ್ಟು ಮಾಡಿದ ಮಗ್ಗಿ ಅಜ್ಜಯ್ಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮದುವೆ
ಸಂಬಂಧಗಳು
ವೈರಲ್ ಸುದ್ದಿ
ಉತ್ತರ ಪ್ರದೇಶ

Latest Videos
Recommended Stories
Recommended image1
ಬೆಂಗಳೂರು ಟೆಕ್ಕಿಗಳಿಗೆ ಮತ್ತೆ 'ವರ್ಕ್ ಫ್ರಂ ಹೋಮ್' ಭಾಗ್ಯ? ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಇಲ್ಲಿದೆ ಅಸಲಿ ಕಾರಣ!
Recommended image2
ಯುದ್ಧದಿಂದ ಎಲ್‌ಪಿಜಿ ಅಭಾವ: ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್‌ ಅಂತ್ಯಕ್ರಿಯೆ!
Recommended image3
ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ಬಕೆಟ್ ಪಾತ್ರೆಗಳಲ್ಲಿ ತುಂಬಿಕೊಂಡು ಹೋದ ಜನ
Related Stories
Recommended image1
Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ
Recommended image2
ಕನಸು ನನಸು ಆಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ವರನಿಗೆ ಬಿಗ್ ಶಾಕ್ ನೀಡಿದ ವಧು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved