MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ನೆರೆ ರಾಜ್ಯದಲ್ಲಿ ಕಾಗೆಗಳ ಸರಣಿ ಸಾವಿನ ಆಘಾತಕಾರಿ ಸತ್ಯ ಪರೀಕ್ಷೆಯಲ್ಲಿ ಬಯಲು, ಜನರಲ್ಲಿ ಆತಂಕ

ನೆರೆ ರಾಜ್ಯದಲ್ಲಿ ಕಾಗೆಗಳ ಸರಣಿ ಸಾವಿನ ಆಘಾತಕಾರಿ ಸತ್ಯ ಪರೀಕ್ಷೆಯಲ್ಲಿ ಬಯಲು, ಜನರಲ್ಲಿ ಆತಂಕ

ನೆರೆ ರಾಜ್ಯದಲ್ಲಿ ಕಾಗೆಗಳ ಸರಣಿ ಸಾವಿನ ಆಘಾತಕಾರಿ ಸತ್ಯ ಪರೀಕ್ಷೆಯಲ್ಲಿ ಬಯಲು, ನಗರದ ಹಲೆವೆಡೆ ಕಾಗೆಗಳು ಸತ್ತು ಬಿದ್ದಿದೆ. ಇದು ಆಪತ್ತಿನ ಸೂಚನೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರೆ, ಪರೀಕ್ಷೆಯಲ್ಲಿ ಆಘಾತಕಾರಿ ಆಂಶ ಬಯಲಾಗಿದೆ. 

2 Min read
Author : Chethan Kumar
Published : Feb 06 2026, 03:29 PM IST
Share this Photo Gallery
  • FB
  • TW
  • Linkdin
  • Whatsapp
14
ಕಾಗೆಗಳ ಸರಣಿ ಸಾವು
Image Credit : social media

ಕಾಗೆಗಳ ಸರಣಿ ಸಾವು

ಕಳೆದ 11ರಂದು ಬಿಹಾರ ರಾಜ್ಯದ ಭಾಗಲ್ಪುರ್ ಜಿಲ್ಲೆಯ ನೌಗಾಚಿಯಾದಲ್ಲಿ ನೂರಕ್ಕೂ ಹೆಚ್ಚು ಕಾಗೆಗಳು ಒಟ್ಟೊಟ್ಟಿಗೆ ಸಾವನ್ನಪ್ಪಿದ ಘಟನೆ ತೀವ್ರ ಆಘಾತವನ್ನುಂಟು ಮಾಡಿತ್ತು. ಬಳಿಕ, ಸತ್ತ ಕಾಗೆಗಳ ದೇಹಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಈ ಆಘಾತ ಮಾಸುವ ಮುನ್ನವೇ ತಮಿಳುನಾಡಿನಲ್ಲೂ ಕಾಗೆಗಳು ಸಾವನ್ನಪ್ಪಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
24
ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ
Image Credit : unsplash

ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ

ಚೆನ್ನೈನ ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಚೇರಿ, ತಿರುವನ್ಮಿಯೂರ್, ಈಸ್ಟ್ ಕೋಸ್ಟ್ ರೋಡ್ (ECR) ಮತ್ತು ಓಎಂಆರ್ ರಸ್ತೆಯಂತಹ ಸ್ಥಳಗಳಲ್ಲಿ ಕಾಗೆಗಳು ಒಂದರ ಹಿಂದೆ ಒಂದರಂತೆ ಸತ್ತು ಬಿದ್ದಿದೆ. ಕಳೆದ ತಿಂಗಳು, ಕಾಂಚೀಪುರಂನ ಪಶು ರೋಗ ತಡೆಗಟ್ಟುವಿಕೆ ಮತ್ತು ತನಿಖಾ ತಂಡದ ಅಧಿಕಾರಿಗಳ ಸತ್ತ ಕಾಗೆಗಳ ಮಾದರಿಗಳನ್ನು ಸಂಗ್ರಹಿಸಿದ್ದರು. ನಂತರ, ಈ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಸಂಸ್ಥೆಗೆ ಕಳುಹಿಸಲಾಯಿತು. ಈಗ ಬಂದಿರುವ ಪರೀಕ್ಷಾ ವರದಿಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿವೆ.

Related Articles

Related image1
The Crow Omen: ಕಾಗೆ ಎಲ್ಲಿ ಕುಳಿತು ಕೂಗಿದರೆ ಸಾವಿನ ಸೂಚನೆ ಗೊತ್ತಾ?
Related image2
Bird flu scare: ಚಿಕನ್‌ ವಹಿವಾಟು ಕುಸಿದರೂ ಬೆಲೆ ಏರಿಕೆ! ಬೆಂಗಳೂರಿನಲ್ಲಿ ಚಿಕನ್, ಮಟನ್ ಬೆಲೆ ಎಷ್ಟು?
34
ಹಕ್ಕಿ ಜ್ವರದ ಸೋಂಕು ದೃಢ
Image Credit : Getty

ಹಕ್ಕಿ ಜ್ವರದ ಸೋಂಕು ದೃಢ

ತಮಿಳುನಾಡು ಸರ್ಕಾರವು ಜನವರಿ 21 ರಂದು ಚೆನ್ನೈನ ಅಡ್ಯಾರ್ ಪ್ರದೇಶದಲ್ಲಿ ಸತ್ತ ಕಾಗೆಗಳ ಮಾದರಿಗಳನ್ನು   ಕೇಂದ್ರಕ್ಕೆ ಕಳುಹಿಸಿ, ಪರೀಕ್ಷೆಗೆ ಸೂಚಿಸಿತ್ತು. ಈ ಸತ್ತು ಬಿದ್ದಿದ್ದ ಕಾಗೆಗಳಲ್ಲಿ H5N1 ಏವಿಯನ್ ಇನ್‌ಫ್ಲುಯೆಂಜಾ ಎಂಬ ಹಕ್ಕಿ ಜ್ವರದ ಸೋಂಕು ಇರುವುದು ದೃಢಪಟ್ಟಿದೆ. ಈ ಸೋಂಕು ಕೋಳಿಗಳು, ಇತರ ಪಕ್ಷಿಗಳು ಮತ್ತು ಮನುಷ್ಯರಿಗೂ ಹರಡುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಪಂಚಾಯಿತಿಗಳು ಮತ್ತು ನಗರ ಪ್ರದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸುವುದು ಅತ್ಯಗತ್ಯ. ಹಕ್ಕಿ ಜ್ವರ ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ, ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸುವಂತೆ ಕೇಂದ್ರ ಪಶುಸಂಗೋಪನಾ ಸಂಶೋಧನಾ ಸಂಸ್ಥೆಯು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

44
ಪಕ್ಷಿಗಳು ಸತ್ತರೆ ಏನು ಮಾಡಬೇಕು?
Image Credit : our own

ಪಕ್ಷಿಗಳು ಸತ್ತರೆ ಏನು ಮಾಡಬೇಕು?

  •  ನಿಮ್ಮ ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಪಕ್ಷಿಗಳು ಸತ್ತರೆ, ಜನರು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು. * ಇದ್ದಕ್ಕಿದ್ದಂತೆ ಸತ್ತು ಬಿದ್ದಿರುವ ಪಕ್ಷಿಗಳು ಅಥವಾ ಪ್ರಾಣಿಗಳನ್ನು ಬರಿಗೈಯಲ್ಲಿ ಮುಟ್ಟಬೇಡಿ. 
  •  ಪಕ್ಷಿಗಳು ಸತ್ತರೆ, ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಲು ಆಳವಾದ ಗುಂಡಿ ತೋಡಿ ಹೂಳಬೇಕು. * ಕೋಳಿ ಫಾರಂಗಳಿಗೆ ಹೊರಗಿನವರನ್ನು ಪ್ರವೇಶಿಸಲು ಬಿಡಬಾರದು. 
  •  ಒಬ್ಬ ವ್ಯಕ್ತಿ ಒಂದು ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ಬೇರೆ ಬೇರೆ ಫಾರಂಗಳಿಗೆ ಹೋಗುವುದನ್ನು ತಪ್ಪಿಸಬೇಕು. 
  •  ಬೇರೆ ರಾಜ್ಯಗಳಿಂದ ಕೋಳಿ ಅಥವಾ ಕೋಳಿ ಮಾಂಸವನ್ನು ತರಬಾರದು. 
  • ತಮಿಳುನಾಡು ಗಡಿ ಪ್ರದೇಶಗಳಲ್ಲಿ ಕಣ್ಗಾವಲು ತೀವ್ರಗೊಳಿಸುವಂತೆ ತಮಿಳುನಾಡು ಸರ್ಕಾರ ಸೂಚಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಪಕ್ಷಿ
ಆರೋಗ್ಯ
ಚೆನ್ನೈ
ಭಾರತ ಸುದ್ದಿ

Latest Videos
Recommended Stories
Recommended image1
ಕೊರಿಯನ್ ಗೇಮ್‌ನಿಂದ ಮೂವರು ಬಾಲಕಿಯರು ಸಾವನ್ನಪ್ಪಿದ ಕೇಸಿಗೆ ಸಿಕ್ತು ಟ್ವಿಸ್ಟ್; ಅಪ್ಪನೇ ಸತ್ಯ ಬಾಯ್ಬಿಟ್ಟ!
Recommended image2
ಉಪೇಂದ್ರ-ಪ್ರಿಯಾಂಕಾ ದಂಪತಿ ಹಣ ಲಪಟಾಯಿಸಿದ್ದ ಬಿಹಾರ್ ಮೂಲದ ಸೈಬರ್ ಕಿಲಾಡಿ ವಂಚಕ ಅರೆಸ್ಟ್!
Recommended image3
ಕಾರಿನಲ್ಲಿ ಕುಳಿತಿದ್ದ ಒಬೆರಾಯ್ ಮೇಲೆ ಗುಂಡಿನ ದಾಳಿ, ಆಪ್ ನಾಯಕನ ದುರಂತ ಸಾವಿನ CCTV ದೃಶ್ಯ ಸೆರೆ
Related Stories
Recommended image1
The Crow Omen: ಕಾಗೆ ಎಲ್ಲಿ ಕುಳಿತು ಕೂಗಿದರೆ ಸಾವಿನ ಸೂಚನೆ ಗೊತ್ತಾ?
Recommended image2
Bird flu scare: ಚಿಕನ್‌ ವಹಿವಾಟು ಕುಸಿದರೂ ಬೆಲೆ ಏರಿಕೆ! ಬೆಂಗಳೂರಿನಲ್ಲಿ ಚಿಕನ್, ಮಟನ್ ಬೆಲೆ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved