MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಕಿರಾನಾ ಬೆಟ್ಟದ ಮೇಲೆ ಭಾರತದ ದಾಳಿ ತಳ್ಳಿ ಹಾಕಿದ ಸೇನೆ, ಆ ಬೆಟ್ಟ ಪಾಕಿಸ್ತಾನಕ್ಕೆ ಅಷ್ಟು ಮುಖ್ಯ ಏಕೆ?

ಕಿರಾನಾ ಬೆಟ್ಟದ ಮೇಲೆ ಭಾರತದ ದಾಳಿ ತಳ್ಳಿ ಹಾಕಿದ ಸೇನೆ, ಆ ಬೆಟ್ಟ ಪಾಕಿಸ್ತಾನಕ್ಕೆ ಅಷ್ಟು ಮುಖ್ಯ ಏಕೆ?

ಪಾಕಿಸ್ತಾನದ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿದೆ ಎಂಬ ವದಂತಿಗಳನ್ನು ಭಾರತ ತಳ್ಳಿಹಾಕಿದೆ. ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಯಾವುದೇ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಿರಾನಾ ಬೆಟ್ಟ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಒಂದು ಭಾಗವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

3 Min read
Gowthami K
Published : May 12 2025, 06:55 PM IST
Share this Photo Gallery
  • FB
  • TW
  • Linkdin
  • Whatsapp
16

ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಪರಮಾಣು ತಾಣದ ಮೇಲೆ ಭಾರತ ದಾಳಿ ನಡೆಸಿದೆ ಎಂಬ ವದಂತಿಗಳನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ. ಭಾರತೀಯ ವಾಯುಪಡೆಯ ಎರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ "ನಾವು ಕಿರಾನಾ ಬೆಟ್ಟಗಳ ಮೇಲೆ ಯಾವುದೇ ದಾಳಿ ಮಾಡಿಲ್ಲ. ಅಲ್ಲಿ ಏನೇ ನಡೆಯುತ್ತಿರಲಿ, ಏನೇ ಇರಲಿ ನಮ್ಮ ಭಾಗದಿಂದ ಯಾವುದೇ ದಾಳಿ ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. "ಅಲ್ಲಿ ಪರಮಾಣು ತಾಣವಿದೆ ಅಂತ ನೀವೇ ಈಗ ಹೇಳಿದಿರಿ. ನಮಗೆ  ಇದರ ಬಗ್ಗೆ ಗೊತ್ತಿರಲಿಲ್ಲ!" ಎಂದು ನಕ್ಕರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ  ಸರ್ಜೋದಾದಲ್ಲಿ ಇರುವ ಮುಷಫ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿದೆಯೇ ಎಂಬ ಊಹಾಪೋಹಗಳು ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆಗಳ ಮಧ್ಯೆ ಈ ಹೇಳಿಕೆಗಳು ಬಂದಿವೆ. ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಕಿರಾನಾ ಬೆಟ್ಟದಲ್ಲಿ ಪಾಕ್‌ ಪರಮಾಣು ಶಸ್ತ್ರಾಗಾರದ ಒಂದು ಭಾಗವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
 

26

ಪಾಕಿಸ್ತಾನಕ್ಕೆ ಕಿರಾನಾ ಬೆಟ್ಟಗಳು ಯಾಕೆ ಮುಖ್ಯ?
ಕಿರಾನಾ ಬೆಟ್ಟಗಳು ಪಾಕಿಸ್ತಾನದ ಸರ್ಗೋಧಾ ಜಿಲ್ಲೆಯಲ್ಲಿ ಇರುವ ದೊಡ್ಡ ಪರ್ವತ ಶ್ರೇಣಿಗಳು. ಈ ಬೆಟ್ಟಗಳು ಪಾಕಿಸ್ತಾನದ ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತವೆ. ಈ ಪ್ರದೇಶ ಕಂದು ಬಣ್ಣದ ಕಲ್ಲುಗಳಿಂದ ತುಂಬಿರುವುದರಿಂದ, ಸ್ಥಳೀಯರು ಇದನ್ನು "ಕಪ್ಪು ಪರ್ವತಗಳು" ಎಂದು ಕರೆಯುತ್ತಾರೆ. ಈ ಬೆಟ್ಟಗಳು ರಬ್ವಾ ಪಟ್ಟಣ ಮತ್ತು ಸರ್ಗೋಧಾ ನಗರದ ನಡುವೆ ಹರಡಿಕೊಂಡಿವೆ. ಕಿರಾನಾ ಬೆಟ್ಟಗಳು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಖಾಸಗಿ ಮತ್ತು ಭದ್ರ ಸ್ಥಳವಾಗಿ ಪರಿಗಣಿಸಲಾಗುತ್ತದೆ.

Related Articles

Related image1
ಭಾರತದ ಕ್ಷಿಪಣಿ ಹೊಡೆತಕ್ಕೆ ಪಾಕ್ ಏರ್‌ಬೇಸ್‌ನಲ್ಲಿ ಕೆರೆಯಂಥ ಹೊಂಡ : ಸೇನೆಯಿಂದ ವೀಡಿಯೋ ರಿಲೀಸ್
Related image2
ಸ್ಥಗಿತಗೊಂಡಿದ್ದ 32 ಏರ್ಪೋರ್ಟ್ ರೀ ಓಪನ್, ಆದ್ರೆ ಪ್ರಯಾಣಿಕರು ಈ ನಿಯಮ ಪಾಲಿಸಲೇಬೇಕು
36

ಹತ್ತಿರದಲ್ಲೇ ಇದೆ ಪರಮಾಣು ತಯಾರಿಕಾ ಕೇಂದ್ರ:
ಈ ಬೆಟ್ಟಗಳು ಸರ್ಗೋಧಾ ವಾಯುನೆಲೆಗೆ ಕೇವಲ 20 ಕಿ.ಮೀ ಮತ್ತು ಪ್ಲುಟೋನಿಯಂ ತಯಾರಿಸುವ ಖುಶಾಬ್ ಪರಮಾಣು ಕೇಂದ್ರಕ್ಕೆ 75 ಕಿ.ಮೀ ದೂರದಲ್ಲಿವೆ. ಈ ಪ್ರದೇಶವು ಭೂಗತ ಸುರಂಗಗಳು, ಭದ್ರ ಭವನಗಳು, ಮಿಲಿಟರಿ ಕಮಾಂಡ್ ಕೇಂದ್ರಗಳೊಂದಿಗೆ ತುಂಬಾ ಬಲಿಷ್ಠವಾಗಿ ನಿರ್ಮಿಸಲಾಗಿದೆ. ಪಾಕಿಸ್ತಾನದ 'ವಿಶೇಷ ಕಾರ್ಯ ಅಭಿವೃದ್ಧಿ ಘಟಕ' ಎಂಬ ಶಾಖೆ ಇಲ್ಲಿ 10ಕ್ಕೂ ಹೆಚ್ಚು ಸುರಂಗಗಳನ್ನು ಕಟ್ಟಿದೆ. ಈ ಸುರಂಗಗಳನ್ನು ಬಲವರ್ಧಿತ ಕಾಂಕ್ರೀಟ್ ಮತ್ತು ಇಕ್ಕಟ್ಟಾದ ಕಬ್ಬಿಣದ ಸರಳಿನಿಂದ ತಯಾರಿಸಿದ್ದು, ಬಾಂಬ್ ಸ್ಫೋಟಗಳ ಹೊಡೆತಕ್ಕೂ  ಏನೂ ಆಗದಷ್ಟು ಬಲಿಷ್ಠವಾಗಿದೆ.
 

46

ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಭಾರತ ವಿರುದ್ಧ ಬಳಸಲು ಸಾಧ್ಯ ಎಂದು ವಾದಿಸಿದೆ, ಆದರೆ ಭಾರತ ಎಂದಿಗೂ ಮೊದಲಾಗಿ ಪರಮಾಣು ಆಯುಧ ಬಳಸುವುದಿಲ್ಲ ಎಂಬ ನಿಲುವಿನಲ್ಲಿ ನಿಂತಿದೆ. ಮೇಲ್ನೋಟಕ್ಕೆ ಕಂಡರೂ ಈ ಪ್ರದೇಶ ಮಿಲಿಟರಿ ಕಾರ್ಯಾಚರಣೆಗಳಿಗೆ ತೀವ್ರವಾಗಿ ಸಂರಕ್ಷಿತವಾಗಿದೆ. ಆದರೆ, ಈಗಿನ ಆಧುನಿಕ ಯುದ್ಧ ತಂತ್ರಜ್ಞಾನದಿಂದ ಈ ರೀತಿ ಭೂಗತ ಮೂಲಸೌಕರ್ಯಗಳನ್ನೂ ಗುರಿಯಾಗಿಸಬಹುದಾಗಿದೆ ಎಂಬುದನ್ನು ಪರಿಣಿತರು ಸೂಚಿಸಿದ್ದಾರೆ. ಇದನ್ನೆಲ್ಲಾ ನೆನೆಯುವಂತೆ ನೂರ್ ಖಾನ್ ಮತ್ತು ಸರ್ಗೋಧಾ ವಾಯುನೆಲೆಗಳ ಮೇಲೆ ನಡೆದ ಭಾರತೀಯ ದಾಳಿಗಳು ಪಾಕಿಸ್ತಾನಕ್ಕೆ ಕೋಪ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಜನರು ಊಹಿಸುತ್ತಿರುವಂತೆ ಭಾರತ ಕಿರಾನಾ ಬೆಟ್ಟಗಳ ಮೇಲೂ ದಾಳಿ ಮಾಡಿತೇ ಎಂಬ ಪ್ರಶ್ನೆ ಉದಯವಾಯಿತು. ಆದರೆ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಎ.ಕೆ. ಭಾರ್ತಿ ಈ ಮಾತುಗಳನ್ನು ನಿರಾಕರಿಸಿದರು. "ಅಲ್ಲಿ ಯಾವುದೋ ಇದೆ ಅಂತೆ? ನಮಗೆ ಗೊತ್ತಿರಲಿಲ್ಲ. ಧನ್ಯವಾದ!" ಎಂದು ಅವರು ನಕ್ಕರು. 
 

56

ಆಪರೇಷನ್ ಸಿಂದೂರ್ ಯಶಸ್ವಿ: ಸೇನೆ ವಿವರ 
ಸೇನೆಯ ಹಿರಿಯ ಅಧಿಕಾರಿಗಳು – ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ನೌಕಾಪಡೆಯ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಮತ್ತು ಏರ್ ಮಾರ್ಷಲ್ ಭಾರ್ತಿ  ಪತ್ರಿಕಾಗೋಷ್ಠಿಯಲ್ಲಿ ಆಪರೇಷನ್ ಸಿಂದೂರ್ ಬಗ್ಗೆ ವಿವರ ನೀಡಿದರು. ಪಹಲ್ಗಾಮ್ ಉಗ್ರರ ದಾಳಿಯ ಉತ್ತರವಾಗಿ ಪಾಕಿಸ್ತಾನ ಬೆಂಬಲಿತ ಉಗ್ರರ ತಾಣದ ಮೇಲೆ ಕಾರ್ಯಾಚರಣೆಯು ಮೇ 7ರಂದು ಆರಂಭವಾಯಿತು. ಇದರಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಲಾಯಿತು. ಈ ದಾಳಿಗಳು, ಏಪ್ರಿಲ್ 22ರಂದು ಪಹಲ್ಗಾಂದಲ್ಲಿ ನಡೆದ ಭಯೋತ್ಪಾದಕ ದಾಳೆಯಲ್ಲಿ 26 ಜನರು ಸಾವನ್ನಪ್ಪಿದ ಬಳಿಕ ನಡೆದವು. 
 

66

ವದಂತಿಗಳು ಹಬ್ಬಿದ್ಯಾಕೆ?
ಪಾಕಿಸ್ತಾನದ ಕಿರಾನಾ ಬೆಟ್ಟ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ ನಂತರ, ಈ ಪ್ರದೇಶದ ಮೇಲೆ ಭಾರತ ದಾಳಿ ನಡೆಸಿದೆಯೇ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮ ಚರ್ಚೆಯಾದವು. ಅಲ್ಲದೇ, ಫ್ಲೈಟ್ ರಾಡಾರ್‌ನಲ್ಲಿ ಅಮೆರಿಕ ಮತ್ತು ಈಜಿಪ್ಟ್ ಸೇನೆಗೆ ಸೇರಿದ ವಿಮಾನಗಳು ತಿರುಗಾಡಿದ ದೃಶ್ಯಗಳು ಈ ಪಿತೂರಿಗಳನ್ನು ಮತ್ತಷ್ಟು ಗಂಭೀರವಾಗಿ ಮಾಡಿದೆ. ಈ ಬಗ್ಗೆ ಏರ್ ಮಾರ್ಷಲ್ ಭಾರ್ತಿ ಹೇಳಿದಂತೆ,  ಭಾರತದ ಸೈನ್ಯವು ಪಾಕಿಸ್ತಾನದ ಸೇನೆ ಮೇಲೆ ದಾಳಿ ಮಾಡಿಲ್ಲ. ನಾವು ಕೇವಲ ಭಯೋತ್ಪಾದಕರನ್ನು ಮತ್ತು ಅವರನ್ನು ಬೆಂಬಲಿಸುವ ಜಾಗವನ್ನು ಮಾತ್ರವೇ ಗುರಿಯಾಗಿಸಿದ್ದೇವೆ ಎಂದಿದ್ದಾರೆ. ಒಟ್ಟು 9 ಭಯೋತ್ಪಾದಕ ತಾಣಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದ್ದವು. ಭಾರತದ ದಾಳಿಗೆ ಪಾಕ್‌ ನ ವಾಯುನೆಲೆಗಳಾದ ಸರ್ಗೋಧಾ, ರಹೀಮ್ ಯಾರ್ ಖಾನ್, ಚಕ್ಲಾಲಾ, ಸುಕ್ಕೂರ್, ಭೋಲಾರಿ, ಜಾಕೋಬಾಬಾದ್ (ವಾಯುನೆಲೆಗಳು) ಜೊತೆಗೆ ಪಸ್ರೂರ್, ಚುನಿಯನ್, ಆರಿಫ್ವಾಲಾ (ರಾಡಾರ್ ಕೇಂದ್ರಗಳು) ಮತ್ತು ಹಲವು ಪ್ರದೇಶಗಳು ತೀವ್ರ ಹಾನಿಗೆ ಗುರಿಯಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭಾರತ ಸುದ್ದಿ
ಭಾರತೀಯ ಸೇನೆ
ಆಪರೇಷನ್ ಸಿಂಧೂರ
ಪಾಕಿಸ್ತಾನ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved