MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪೆಟ್ರೋಲ್ ತುಂಬಿಸುವಾಗ ಸಿಗರೇಟ್ ಎಳಿಬೇಡ ಎಂದಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಹುಚ್ಚ..!

ಪೆಟ್ರೋಲ್ ತುಂಬಿಸುವಾಗ ಸಿಗರೇಟ್ ಎಳಿಬೇಡ ಎಂದಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಹುಚ್ಚ..!

ಛತ್ತೀಸ್‌ಗಢದ ರಾಯ್ಪುರದಲ್ಲಿ, ಪೆಟ್ರೋಲ್ ಪಂಪ್‌ನಲ್ಲಿ ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಲೈಟರ್‌ನಿಂದ ಇಂಧನ ನಳಿಕೆಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪಂಪ್ ಸಿಬ್ಬಂದಿ ಅಗ್ನಿಶಾಮಕ ಬಳಸಿ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

2 Min read
Author : Anusha Kb
Published : Feb 20 2026, 01:44 PM IST
Share this Photo Gallery
  • FB
  • TW
  • Linkdin
  • Whatsapp
16
ಪೆಟ್ರೋಲ್ ಪಂಪ್‌ಗೆ ಲೈಟರ್ ಹಚ್ಚಿದ ಕಿಡಿಗೇಡಿ
Image Credit : twitter

ಪೆಟ್ರೋಲ್ ಪಂಪ್‌ಗೆ ಲೈಟರ್ ಹಚ್ಚಿದ ಕಿಡಿಗೇಡಿ

ರಾಯ್ಪುರ: ಪೆಟ್ರೋಲ್ ಪಂಪ್‌ನಲ್ಲಿ ಸ್ಮೋಕ್ ಮಾಡ್ಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊರ್ವ ಕೈನಲ್ಲಿದ್ದ ಲೈಟರ್ ಪೆಟ್ರೋಲ್‌ಗೆ ತಾಗಿಸಿ ಇಡೀ ಪೆಟ್ರೋಲ್‌ಪಂಪ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ. ಛತ್ತೀಸ್‌ಗಢದ ರಾಜಧಾನಿ ರಾಯ್ಪುರದ ಉರ್ಲಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

26
ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಸಿಟ್ಟು
Image Credit : twitter

ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಸಿಟ್ಟು

ಬೈಕ್‌ಗೆ ಪೆಟ್ರೋಲ್ ತುಂಬಿಸುತ್ತಿದ್ದ ವೇಳೆ ಯುವಕನೋರ್ವ ಅಲ್ಲೇ ನಿಂತುಕೊಂಡು ಸಿಗರೇಟ್ ಎಳೆಯುತ್ತಿದ್ದ ಈ ವೇಳೆ ಬೈಕ್ ಸವಾರ ಪೆಟ್ರೋಲ್ ತುಂಬಿಸುತ್ತಿರುವಾಗ ಧೂಮಪಾನ ಮಾಡಬೇಡಿ ಎಂದು ಆ ಯುವಕನಿಗೆ ಹೇಳಿದ್ದಾನೆ ಅಷ್ಟಕ್ಕೆ ಸಿಟ್ಟಾದ ಆ ಯುವಕ ಲೈಟರ್ ಉರಿಸಿ ಇಂಧನ ತುಂಬಿಸುವ ನಳಿಕೆಗೆ ಹಿಡಿದಿದ್ದಾನೆ. ಇದರಿಂದ ಬೆಂಕಿ ಧಗ್ಗನೇ ಉರಿದುಕೊಂಡಿದ್ದು, ಬೈಕ್ ಹಾಗೂ ಪೆಟ್ರೋಲ್ ಪಂಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಆತಂಕಕಾರಿ ಘಟನೆಯ ನಡುವೆಯೇ ಪಂಪ್ ಸಿಬ್ಬಂದಿ ಅಗ್ನಿ ಆರಿಸುವ ಯಂತ್ರದ (fire extinguisher)ಮೂಲಕ ಬೆಂಕಿ ಆರಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

Related Articles

Related image1
"ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ" ಬಬಲಾದಿ ಮಠದ ಬೆಂಕಿ ಭವಿಷ್ಯ, ಮುತ್ಯಾನಿಂದ ಕಷ್ಟಕಾಲದ ಎಚ್ಚರಿಕೆ!
Related image2
ಹಳೇ ಲವ್ ದ್ವೇಷ, ಮಾಜಿ ಬಾಯ್‌ಫ್ರೆಂಡ್ ಪತ್ನಿ-ನವಜಾತ ಮಗುವಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ
36
ರ್ಲಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಘಟನೆ
Image Credit : X

ರ್ಲಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಘಟನೆ

ಗುರುವಾರ ಸಂಜೆ ಉರ್ಲಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಪ್ರಕಾರ, ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಇಂಧನ ತುಂಬಿಸಲು ಬೈಕ್‌ನಲ್ಲಿ ಪೆಟ್ರೋಲ್‌ ಪಂಪ್‌ ಗೆ ಬಂದಿದ್ದರು. ಇಮ್ರಾನ್ ಬೈಕ್‌ನಲ್ಲೇ ಕುಳಿತಿದ್ದರೆ ಧರ್ಮೇಂದ್ರ ಬೈಕ್‌ನ ಪಕ್ಕದಲ್ಲಿ ನಿಂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್ ತೆರೆಯುತ್ತಿದ್ದಂತೆ ಧರ್ಮೇಂದ್ರ ಸಿಗರೇಟನ್ನು ತೆಗೆದು ಅದನ್ನು ಹೊತ್ತಿಸಲು ಪ್ರಯತ್ನಿಸಿದರು. ಪೆಟ್ರೋಲ್ ಪಂಪ್‌ನಲ್ಲಿ ಧೂಮಪಾನ ಮಾಡದಂತೆ ಕೇಳಿದಾಗ ಅವನು ಕೋಪಗೊಂಡು ಲೈಟರ್ ಬಳಸಿ ಇಂಧನ ನಳಿಕೆಯ ಪೈಪ್‌ಗೆ ಬೆಂಕಿ ಹಚ್ಚಿದನು, ಇದರಿಂದ ಬೆಂಕಿ ಒಮ್ಮೆಗೆ ಹೊತ್ತಿಕೊಂಡಿತು.

46
ಪ್ರಾಣ ಉಳಿಸಿಕೊಳ್ಳಲು ಓಡಿದ ಜನ
Image Credit : twitter

ಪ್ರಾಣ ಉಳಿಸಿಕೊಳ್ಳಲು ಓಡಿದ ಜನ

ಬೆಂಕಿ ಬೇಗನೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮತ್ತು ಪಂಪ್ ಯಂತ್ರಕ್ಕೆ ವ್ಯಾಪಿಸಿ ಸ್ಥಳದಲ್ಲಿದ್ದವರು ಭಯಭೀತರಾಗಿ ಓಡಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಇಬ್ಬರು ಆರೋಪಿಗಳು, ಬೈಕರ್ ಮತ್ತು ಪಂಪ್ ಸಿಬ್ಬಂದಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡಿಹೋಗಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ, ಪೆಟ್ರೋಲ್ ಪಂಪ್‌ನ ಅಟೆಂಡೆಂಟ್ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ, ಇಂಧನ ಪೈಪ್ ಅನ್ನು ತೆಗೆದುಹಾಕಿ ಮುಖ್ಯ ಇಂಧನ ಪೂರೈಕೆಯನ್ನು ಆಫ್ ಮಾಡಿದರು.

56
ಪರಾರಿಯಾಗಲು ಯತ್ನಿಸಿದವರ ಬಂಧನ
Image Credit : twitter

ಪರಾರಿಯಾಗಲು ಯತ್ನಿಸಿದವರ ಬಂಧನ

ನಂತರ ಪಂಪ್‌ನಲ್ಲಿ ಲಭ್ಯವಿರುವ ಅಗ್ನಿಶಾಮಕ ಸುರಕ್ಷತಾ ಕಿಟ್ ಅನ್ನು ಬಳಸಿಕೊಂಡು, ಸಿಬ್ಬಂದಿ ಸಕಾಲದಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಇದರಿಂದಾಗಿ ದೊಡ್ಡ ಸ್ಫೋಟ ಅಥವಾ ಬೆಂಕಿ ಅಪಘಾತ ಸಂಭವಿಸುವುದು ತಪ್ಪಿತು. ಈ ಗೊಂದಲದ ಸಮಯದಲ್ಲಿ, ಉರಿಯುತ್ತಿರುವ ಇಂಧನವು ಆರೋಪಿಯ ಮೇಲೂ ಚಿಮ್ಮಿದೆ ಎಂದು ವರದಿಯಾಗಿದೆ. ಘಟನೆಯ ನಂತರ, ಇಬ್ಬರೂ ಪರಾರಿಯಾಗಲು ಪ್ರಯತ್ನಿಸಿದರು ಆದರೆ ಪಂಪ್ ಸಿಬ್ಬಂದಿ ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್‌ನಿಂದ ಶ್ವಾನ ಕಸ್ಟಡಿಗೆ ಪಡೆಯಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

66
ಪೆಟ್ರೋಲ್ ಪಂಪ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Image Credit : twitter

ಪೆಟ್ರೋಲ್ ಪಂಪ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಪಂಪ್ ಮ್ಯಾನೇಜರ್ ನೀಡಿದ ದೂರು ಮತ್ತು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಉರ್ಲಾ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಕಿ ಹಚ್ಚುವಿಕೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಉರ್ಲಾ ಇನ್ಸ್‌ಪೆಕ್ಟರ್ ರೋಹಿತ್ ಮಹೇಲ್ಕರ್ ತಿಳಿಸಿದ್ದಾರೆ. ಪೆಟ್ರೋಲ್ ಪಂಪ್ ನೌಕರರ ತ್ವರಿತ ಪ್ರತಿಕ್ರಿಯೆಯಿಂದ ಸಂಭಾವ್ಯ ದುರಂತವನ್ನು ತಪ್ಪಿಸಲಾಗಿದೆ. ಏಕೆಂದರೆ ಬೆಂಕಿ ಹತ್ತಿರದ ವಾಹನಗಳು ಮತ್ತು ಇಂಧನ ಸಂಗ್ರಹಣಾ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Man lights fire at petrol pump in Raipur. Staff rush to stop disaster...
🚨 CCTV footage shows a man setting fire near a petrol pump nozzle at Sangeeta Fuels, Raipur, Chhattisgarh. Staff acted fast to prevent disaster. Both accused arrested. pic.twitter.com/3r6ey6uFtU

— contentkikamii (@contentkikamii) February 20, 2026

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಭಾರತ ಸುದ್ದಿ
ಪೆಟ್ರೋಲ್ ಬಂಕ್

Latest Videos
Recommended Stories
Recommended image1
Trump India Visit: ಮತ್ತೆ ಭಾರತಕ್ಕೆ ಬರ್ತಾರಾ ಡೊನಾಲ್ಡ್ ಟ್ರಂಪ್? ಪ್ರಧಾನಿ ಮೋದಿಯಿಂದ ಆಹ್ವಾನ!
Recommended image2
MP Viral Video: ಪತಿಯ ಅಕ್ರಮ ಸಂಬಂಧ ಬಯಲು? ರಸ್ತೆಯಲ್ಲೇ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಂಟಿಸ್ಟ್ ಪತ್ನಿ!
Recommended image3
ಮುಂದುವರೆದ ಚಿನ್ನದ ಬೆಲೆಯಲ್ಲಿ ಏರಿಳಿತ; ಶುಕ್ರವಾರ ಕೊಂಚ ಕುಸಿದ ಬಂಗಾರದ ಬೆಲೆ! ಇವತ್ತಿನ ರೇಟ್ ಎಷ್ಟು?
Related Stories
Recommended image1
"ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ" ಬಬಲಾದಿ ಮಠದ ಬೆಂಕಿ ಭವಿಷ್ಯ, ಮುತ್ಯಾನಿಂದ ಕಷ್ಟಕಾಲದ ಎಚ್ಚರಿಕೆ!
Recommended image2
ಹಳೇ ಲವ್ ದ್ವೇಷ, ಮಾಜಿ ಬಾಯ್‌ಫ್ರೆಂಡ್ ಪತ್ನಿ-ನವಜಾತ ಮಗುವಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved