MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಆಸ್ತಮಾದಿಂದ ಚಿಕುನ್​ ಗುನ್ಯಾದವರೆಗೆ... ಪಾರಿಜಾತ ವೃಕ್ಷದಿಂದ ಅಬ್ಬಾ ಇಷ್ಟೆಲ್ಲಾ ಪ್ರಯೋಜನಗಳಾ?

ಆಸ್ತಮಾದಿಂದ ಚಿಕುನ್​ ಗುನ್ಯಾದವರೆಗೆ... ಪಾರಿಜಾತ ವೃಕ್ಷದಿಂದ ಅಬ್ಬಾ ಇಷ್ಟೆಲ್ಲಾ ಪ್ರಯೋಜನಗಳಾ?

ಸ್ವರ್ಗಲೋಕದ ವೃಕ್ಷವೆಂದೇ ಹೇಳಲಾಗುವ ಪಾರಿಜಾತದ ಪ್ರತಿಯೊಂದು ಭಾಗದಲ್ಲಿಯೂ ಇಷ್ಟೊಂದು ಆರೋಗ್ಯಕರ ಪ್ರಯೋಜನಗಳಿವೆಯೆ? ಖ್ಯಾತ ವೈದ್ಯೆ ಇಲ್ಲಿ ವಿವರಿಸಿದ್ದಾರೆ ನೋಡಿ. 

2 Min read
Suchethana D
Published : Jul 25 2025, 04:53 PM IST
Share this Photo Gallery
  • FB
  • TW
  • Linkdin
  • Whatsapp
17
ಸ್ವರ್ಗ ಲೋಕದ ವೃಕ್ಷ ಪಾರಿಜಾತ
Image Credit : Instagram

ಸ್ವರ್ಗ ಲೋಕದ ವೃಕ್ಷ ಪಾರಿಜಾತ

ಸ್ವರ್ಗಲೋಕದ ವೃಕ್ಷ ಎಂದೇ ಹೇಳಲಾಗುವ ಪಾರಿಜಾತ ವೃಕ್ಷವು ಸನಾತನ ಧರ್ಮದ ಜೊತೆ ಬೆಸುಗೆ ಹೊಂದಿದೆ. ಈ ಗಿಡದ ಹೂವು, ಎಲೆಗಳು ಆರೋಗ್ಯದ ಆಗರವಾಗಿದೆ. ಚಿಕುನ್​ ಗುನ್ಯಾ, ಯಾವುದೇ ರೀತಿಯ ಜ್ವರ, ಕೀಲು ನೋವು, ಫಂಗಲ್ ಇನ್​ಫೆಕ್ಷನ್​ , ಸಣ್ಣ ಕರುಳಿನಲ್ಲಿ ಆಗುವ ಸೋಂಕುಗಳು, ಮಲಬದ್ಧತೆ, ಅಜೀರ್ಣ, ಉಸಿರಾಟ, ಆಸ್ತಮಾ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇದರಲ್ಲಿ ಇದೆ.

27
ಸ್ವರ್ಗ ಲೋಕದ ವೃಕ್ಷ ಪಾರಿಜಾತ
Image Credit : Instagram

ಸ್ವರ್ಗ ಲೋಕದ ವೃಕ್ಷ ಪಾರಿಜಾತ

ಅಷ್ಟಕ್ಕೂ ಪಾರಿಜಾತ ವೃಕ್ಷವನ್ನು ಸ್ವರ್ಗದ ವೃಕ್ಷ ಎಂದೇ ಕರೆಯಲಾಗುತ್ತದೆ. ಇದು ಸಮುದ್ರ ಮಂಥನದಲ್ಲಿ ದೊರೆತ ದೈವಿಕ ಶಕ್ತಿಯುಳ್ಳ ಮರವಾಗಿದೆ. ಮೂತಃ ಇದು ಸ್ವರ್ಗದಲ್ಲಿರುವ ಮರವಾಗಿದ್ದು, ಇದನ್ನು ಭೂಮಿಗೆ ತಂದಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದರ ವಿಶೇಷತೆ ಎಂದರೆ, ಇದು ರಾತ್ರಿ ಅರಳಿ ನೆಲದ ಮೇಲೆ ಬೀಳುತ್ತವೆ. ಆದರೆ, ನೆಲದ ಮೇಲೆಯೇ ಬಿದ್ದ ಹೂವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಇದು ಪಾರಿಜಾತ ಹೂವಿಗೆ ಮಾತ್ರ ಇರುವ ಶಕ್ತಿ. ಸಾಮಾನ್ಯವಾಗಿ ನೆಲದ ಮೇಲೆ ಬಿದ್ದ ಹೂವುಗಳನ್ನು ದೇವರಿಗೆ ಮುಡಿಸುವುದಿಲ್ಲ. ಆದರೆ ಪಾರಿಜಾತ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಇದಕ್ಕೆ ಕೆಲವು ಪೌರಾಣಿಕ ಕಥೆಗಳೂ ಇವೆ.

Related Articles

Related image1
Pigmentation Remedy: ಬಂಗು ಮುಕ್ತಿಗೆ ಎರಡೇ ಪದಾರ್ಥ- ತಿಂಗಳಲ್ಲೇ ರಿಸಲ್ಟ್​: ಡಾ. ಗೌರಿ ಸಲಹೆ ಕೇಳಿ...
Related image2
Pigmentation Remedy: ಬಂಗು ಮುಕ್ತಿಗೆ ಎರಡೇ ಪದಾರ್ಥ- ತಿಂಗಳಲ್ಲೇ ರಿಸಲ್ಟ್​: ಡಾ. ಗೌರಿ ಸಲಹೆ ಕೇಳಿ...
37
ಪಾರಿಜಾತ ವೃಕ್ಷದಲ್ಲಿದೆ ಆರೋಗ್ಯದ ಗುಟ್ಟು ಪಾರಿಜಾತ
Image Credit : Instagram

ಪಾರಿಜಾತ ವೃಕ್ಷದಲ್ಲಿದೆ ಆರೋಗ್ಯದ ಗುಟ್ಟು ಪಾರಿಜಾತ

ಆದರೆ ಇಲ್ಲಿ ಹೇಳಹೊರಟಿರುವುದು ಇದರ ಪ್ರಯೋಜನಗಳ ಬಗ್ಗೆ. ಅದರ ವಿವರಗಳನ್ನು ಖ್ಯಾತ ವೈದ್ಯೆ ಸೌಶ್ರೀ ರಾವ್​ ಅವರು ಈ ಕೆಳಗಿನ ವಿಡಿಯೋದಲ್ಲಿ ವಿವರಿಸಿದ್ದಾರೆ.

47
ಹಲವು ಸಮಸ್ಯೆಗಳಿಗೆ ರಾಮಬಾಣ
Image Credit : Instagram

ಹಲವು ಸಮಸ್ಯೆಗಳಿಗೆ ರಾಮಬಾಣ

ಪಾರಿಜಾತ ಎಲೆಗಳು ಜ್ವರವನ್ನು ಕಡಿಮೆ ಮಾಡಲು ಮತ್ತು ಶೀತದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಹೂವಿನ ಕಷಾಯ ಮಾಡಿ ಕುಡಿಯುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಪಾರಿಜಾತದ ಎಲೆಗಳನ್ನು ಅರೆದು ಚರ್ಮದ ಮೇಲೆ ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ವೈದ್ಯೆ ಹೇಳಿದ್ದಾರೆ.

57
ಪಾರಿಜಾತ ವೃಕ್ಷದಲ್ಲಿದೆ ಆರೋಗ್ಯದ ಗುಟ್ಟು
Image Credit : Instagram

ಪಾರಿಜಾತ ವೃಕ್ಷದಲ್ಲಿದೆ ಆರೋಗ್ಯದ ಗುಟ್ಟು

ಪಾರಿಜಾತವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಆಂಟಿಹೆಲ್ಮಿಂಟಿಕ್ ಗುಣಗಳನ್ನು ಹೊಂದಿದೆ. ಪಾರಿಜಾತದ ಎಣ್ಣೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾರಿಜಾತವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಇದು ಸಹಕಾರಿ.

67
ಅಯೋಧ್ಯೆ ರಾಮ ಮಂದಿರದಲ್ಲಿ ಪಾರಿಜಾತ ವೃಕ್ಷ ನೆಟ್ಟಿದ್ದ ಪ್ರಧಾನಿ
Image Credit : Instagram

ಅಯೋಧ್ಯೆ ರಾಮ ಮಂದಿರದಲ್ಲಿ ಪಾರಿಜಾತ ವೃಕ್ಷ ನೆಟ್ಟಿದ್ದ ಪ್ರಧಾನಿ

ಇಷ್ಟೇ ಅಲ್ಲದೇ ವೈದ್ಯರ ಪ್ರಕಾರ, ಇದರ ತೊಗಟೆಯಿಂದಲೂ ಪ್ರಯೋಜನಗಳಿವೆ. ಪಾರಿಜಾತ ಹೂವುಗಳನ್ನು ಅಥವಾ ಅಅದರ ರಸವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ತಕ್ಕಮಟ್ಟಗೆ ಪರಿಹಾರ ದೊರೆಯುತ್ತದೆ. ಈ ಹೂವುಗಳ ಸುವಾಸನೆಯನ್ನು ತೆಗೆದುಕೊಂಡರೆ ಒತ್ತಡವು ದೂರಾಗುತ್ತದೆ. ಇಂಥ ಅಪಾರ ಗುಣ ಇರುವುದರಿಂದಲೇ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರದ ಭೂಮಿ ಭೂಜೆಯನ್ನು 2020 ರ ಆಗಸ್ಟ್‌ 5 ರಂದು ಮಾಡಲು ಬಂದಾಗ ಅಲ್ಲಿ ಪಾರಿಜಾತ ಹೂವಿನ ಗಿಡ ನೆಟ್ಟಿದ್ದರು. 

77
ಪಾರಿಜಾತ ವೃಕ್ಷದಲ್ಲಿದೆ ಆರೋಗ್ಯದ ಗುಟ್ಟು
Image Credit : Instagram

ಪಾರಿಜಾತ ವೃಕ್ಷದಲ್ಲಿದೆ ಆರೋಗ್ಯದ ಗುಟ್ಟು

ಪಾರಿಜಾತದ ಎಲೆಗಳನ್ನು, ತೊಗಟೆಯನ್ನು ಕುದಿಸಿ ಸೇವಿಸುವುದರಿಂದ ಶೀತ, ಜ್ವರ, ಶೀತದಿಂದುಂಟಾಗುವ ಇತರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಉದರ ಸಂಬಂಧಿ ಸಮಸ್ಯೆಗಳಿಗೆ ಸೇರಿದಂತೆ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಪಾರಿಜಾತಕ್ಕಿದೆಯೆಂದು ಆಯುರ್ವೇದ ತಜ್ಞರು ಹೇಳುತ್ತಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆರೋಗ್ಯ
ಜ್ಯೋತಿಷ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved