MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ದಿನಕ್ಕೆರಡು ಎಲೆ, ಮಾತ್ರೆಗಳಿಗೆ ಗುಡ್​ಬೈ: ಆರೋಗ್ಯದ ಕಣಜ ದೊಡ್ಡಪತ್ರೆಯ ಮಾಹಿತಿ ನೀಡಿದ ನಟಿ ಅದಿತಿ ಪ್ರಭುದೇವ

ದಿನಕ್ಕೆರಡು ಎಲೆ, ಮಾತ್ರೆಗಳಿಗೆ ಗುಡ್​ಬೈ: ಆರೋಗ್ಯದ ಕಣಜ ದೊಡ್ಡಪತ್ರೆಯ ಮಾಹಿತಿ ನೀಡಿದ ನಟಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ಅವರು ದೊಡ್ಡಪತ್ರೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಶೀತ, ಕೆಮ್ಮು, ಅಜೀರ್ಣದಂತಹ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವ ಈ ಸಾಂಬ್ರಾಣಿ ಎಲೆಯು ರಾಮಬಾಣವಾಗಿದೆ. ಇದನ್ನು ದಿನನಿತ್ಯ ಸೇವಿಸುವುದರಿಂದ ಹಲವಾರು ಮಾತ್ರೆಗಳನ್ನು ದೂರವಿಡಬಹುದು ಎಂದು ಅವರು ವಿವರಿಸಿದ್ದಾರೆ.

2 Min read
Suchethana D
Published : Dec 21 2025, 10:02 PM IST
Share this Photo Gallery
  • FB
  • TW
  • Linkdin
  • Whatsapp
16
ಹದಗೆಡುವ ಆರೋಗ್ಯ
Image Credit : stockphoto

ಹದಗೆಡುವ ಆರೋಗ್ಯ

ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಆರೋಗ್ಯ ಹದಗೆಡುವುದು ಮಾಮೂಲು. ಇಂದು ಕಾಲಕಾಲಕ್ಕೆ ಏನು ಬೇಕೋ ಅದು ಆಗುತ್ತಿಲ್ಲ. ಎಲ್ಲವೂ ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ಹವಾಮಾನ ಹದಗೆಡುತ್ತಿದೆ. ಅದರ ಜೊತೆಗೆ ಮೈಗೆ ಅಂಟಿಕೊಳ್ಳುವ ರೋಗಗಳು. ಆ ರೋಗಗಳ ವಾಸಿಗೆ ಒಂದಿಷ್ಟು ಮಾತ್ರೆಗಳು. ಆ ಮಾತ್ರೆಗಳಿಂದ ಸೈಡ್​ ಎಫೆಕ್ಟ್ಸ್​.

26
ದೊಡ್ಡಪತ್ರೆ ಪ್ರಯೋಜನ
Image Credit : stockphoto

ದೊಡ್ಡಪತ್ರೆ ಪ್ರಯೋಜನ

ಭಾರತ ಮೂಲದ ಆಯುರ್ವೇದದಲ್ಲಿಯೇ ಎಲ್ಲಾ ರೋಗಗಳಿಗೂ ಸೈಡ್​ ಎಫೆಕ್ಟ್​ ಇಲ್ಲದೇ ಪರಿಹಾರವೂ ಇರುವಾಗ, ಹೆಚ್ಚಿನ ಜನರಿಗೆ ಅದು ಬೇಡದ ವೈದ್ಯಕೀಯ ಪದ್ಧತಿಯಾಗಿದೆ. ಅದರಲ್ಲಿಯೂ ಅಡುಗೆ ಮನೆಯ ಪದಾರ್ಥ, ಹಿತ್ತಲಲ್ಲಿಯೇ ಇರುವ ಗಿಡಗಳಿಂದಲೂ ಸಾಕಷ್ಟು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದಾಗಿದೆ. ಅವುಗಳಲ್ಲಿ ಒಂದು ದೊಡ್ಡಪತ್ರೆ.

Related Articles

Related image1
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
Related image2
ಜಿರಳೆ, ಇಲಿ, ಹಲ್ಲಿ ಓಡಿಸಲು ಪಾಪ್​ಕಾರ್ನ್​ ಟ್ರಿಕ್ಸ್​! ಇಷ್ಟು ಸುಲಭನಾ ಇದು? ಹಂತ ಹಂತದ ಮಾಹಿತಿ ಇಲ್ಲಿದೆ
36
ನಟಿ ಅದಿತಿ ಪ್ರಭುದೇವ ಮಾತು
Image Credit : Facebook

ನಟಿ ಅದಿತಿ ಪ್ರಭುದೇವ ಮಾತು

ದೊಡ್ಡಪತ್ರೆಯನ್ನು ಸಾಸಂಬರ್​ ಸೊಪ್ಪು, ಸಾವಿರಸಾಂಬಾರ್​ ಸೊಪ್ಪು, ಸಾಂಬಾರ್​ ಸೊಪ್ಪು, ಸಾಂಬ್ರಾಣಿ ಎಲೆ ಎಂದೆಲ್ಲಾ ಕರೆಯುವುದು ಉಂಟು. ಕುಂಡದಲ್ಲಿಯೂ ಆರಾಮವಾಗಿ ಬೆಳೆಯುವ ಈ ಸೊಪ್ಪಿನಿಂದ ಎಷ್ಟೊಂದು ಆರೋಗ್ಯಕಾರಿ ಪ್ರಯೋಜನಗಳು ಇವೆ. ದಿನಕ್ಕೆ ಎರಡೇ ಎರಡು ಸೊಪ್ಪನ್ನು ತಿನ್ನುತ್ತಾ ಬಂದರೆ ಹಲವಾರು ಮಾತ್ರೆಗಳನ್ನು ಮನೆಯಿಂದಲೇ ದೂರ ಇಡಬಹುದು ಎನ್ನುತ್ತಾರೆ ಸ್ಯಾಂಡಲ್​ವುಡ್​ ತಾರೆ ಅದಿತಿ ಪ್ರಭುದೇವ.

46
ಹಲವು ಸಮಸ್ಯೆಗಳಿಗೆ ರಾಮಬಾಣ
Image Credit : stockphoto

ಹಲವು ಸಮಸ್ಯೆಗಳಿಗೆ ರಾಮಬಾಣ

ತಮ್ಮ ತಾಯಿ ನೀಡಿರುವ ಟಿಪ್ಸ್​ ಅವರು ನಟಿ ಕೆಲ ಹಿಂದೆ ವಿಡಿಯೋ ಶೇರ್​ ಮಾಡಿದ್ದು, ಅದೀಗ ಮತ್ತೆ ವೈರಲ್​ ಆಗುತ್ತಿದೆ. ಈಗಂತೂ ಚಳಿ ಚಳಿ ಚಳಿ. ಇದರಿಂದ ಆಗುವ ಸಮಸ್ಯೆಗಳು ಹಲವಾರು. ಸೀನು, ಶೀತ, ನೆಗಡಿ ಎಲ್ಲವನ್ನೂ ದೂರ ಮಾಡುವ ಶಕ್ತಿ ಈ ದೊಡ್ಡ ಪತ್ರೆಗೆ ಇದೆ.

56
ಸೇವನೆ ಹೇಗೆ?
Image Credit : Google

ಸೇವನೆ ಹೇಗೆ?

ಖಾಲಿ ಹೊಟ್ಟೆಯಲ್ಲಿ ಎರಡು ದೊಡ್ಡಪತ್ರೆ ಎಲೆಯನ್ನು ತಿಂದು ನಸುಬೆಚ್ಚಗಿನ ನೀರನ್ನು ಕುಡಿಯುತ್ತಾ ಬಂದರೆ, ತಮ್ಮ ಅಮ್ಮನಿಗೆ ಸೀನು ಸಂಪೂರ್ಣ ನಿಂತೇ ಹೋಯಿತು ಎಂದಿದ್ದಾರೆ ನಟಿ ಅದಿತಿ. ಇದನ್ನು ಹಿಂಡಿದಾಗ ರಸ ಬರುತ್ತದೆ. ಇಲ್ಲದೇ ಹೋದರೆ ಗ್ಯಾಸ್​ ಮೇಲೆ ಎಲೆಯನ್ನು ತುಸು ಬೆಚ್ಚಗೆ ಮಾಡಿ ಹಿಂಡಿದರೂ ರಸ ಬರುತ್ತದೆ. ಆ ರಸವನ್ನು ಕುಡಿಯುತ್ತಾ ಬಂದರೆ, ಕೆಮ್ಮು, ಶೀತ , ಸ್ಕಿನ್​ ಅಲರ್ಜಿ, ಕ್ರಿಮಿ ಕಡಿದಿದ್ದರೆ ಎಲ್ಲವೂ ಮಾಯವಾಗುತ್ತದೆ. ಬಾಣಲೆಯಲ್ಲಿ ಎಲೆಯನ್ನು ಬಿಸಿ ಮಾಡಿ ನೆತ್ತಿಗೆ ಹೆಚ್ಚುವುದರಿಂದಲೂ ನೆಗಡಿ, ಕೆಮ್ಮು ಕಡಿಮೆ ಆಗುತ್ತದೆ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿದ ಅದಿತಿ ಅಮ್ಮ, ಒಂದು ಟೊಂಗೆ ಗಿಡವನ್ನು ಮನೆಯಲ್ಲಿ ನೆಟ್ಟರೆ 10 ಟೈಪ್​ ಮಾತ್ರೆಯನ್ನು (Medicines) ಹೊರಕ್ಕೆ ಹಾಕಬಹುದು ಎನ್ನುತ್ತಾರೆ ಅವರು.

66
ಪ್ರಯೋಜನ ಹಲವಾರು
Image Credit : Google

ಪ್ರಯೋಜನ ಹಲವಾರು

ಇದರ ಪ್ರಯೋಜನಗಳು ಹಲವಾರು. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರಿಗೂ ಇದು ಪ್ರಯೋಜನಕಾರಿ. ಅದರ ಬಗ್ಗೆಯೂ ನಟಿ ತಿಳಿಸಿಕೊಟ್ಟಿದ್ದಾರೆ.

  • ದೊಡ್ಡ ಪತ್ರೆ ಎಲೆಗಳನ್ನ ಉಸಿರಾಟದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದರ ರಸವನ್ನ ಎದೆಯ ಮೇಲೆ ಹಚ್ಚುವುದರಿಂದ ಉಸಿರಾಟದ ಸಮಸ್ಯೆ ಸುಲಭವಾಗುತ್ತದೆ.
  • ಚಿಕ್ಕ ಮಕ್ಕಳಿಗೆ ಜ್ವರ ಬಂದಾಗ ಈ ಎಲೆಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.
  • ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ರಸವನ್ನ ಬಳಸಲಾಗುತ್ತದೆ.
  • ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆಯನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
  • ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉರಿಯುವಿಕೆಯಿಂದ ಬಳಲುತ್ತಿರುವವರಿಗೆ ಇದರ ಎಲೆಯ ಔಷಧ ರಾಮ ಬಾಣದಂತೆ ಕೆಲಸ ಮಾಡುತ್ತದೆ.
  • ಒಂದು ವಾರದ ವರೆಗೆ ಪ್ರತಿನಿತ್ಯ ತಪ್ಪದೆ ದೊಡ್ಡಪತ್ರೆ ಎಲೆಯ ರಸವನ್ನು ಸೇವನೆ ಮಾಡಿದಲ್ಲಿ ಕಾಮಾಲೆ ರೋಗ ನಿವಾರಣೆಯಾಗುತ್ತದೆ.
  • ತುರಿಕೆ, ಕಜ್ಜಿಗೆ ಇದರ ರಸವನ್ನ ಹಚ್ಚಿದರೆ ತುರಿಕೆ ಕಜ್ಜಿಯಂತಹ ರೋಗಗಳು ಕಡಿಮೆಯಾಗುತ್ತದೆ.
  • ದೊಡ್ಡ ಪತ್ರೆ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬಹಳ ಸಹಕಾರಿಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆರೋಗ್ಯ
ಆರೋಗ್ಯ ಸಮಸ್ಯೆಗಳು
ಹವಾಮಾನ ಮುನ್ಸೂಚನೆ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಆಹಾರ

Latest Videos
Recommended Stories
Recommended image1
Kitchen Tips: ಎರಡೇ ದಿನಕ್ಕೆ ಪುದೀನಾ ಹಾಳಾಗ್ತಿದ್ಯಾ? ಹೀಗೆ ಸ್ಟೋರ್ ಮಾಡಿದ್ರೆ ತಿಂಗಳವರೆಗೂ ಉಳಿಯುತ್ತೆ
Recommended image2
ಶಿಲೆಯಾಗಿ ಬದಲಾದ 14 ವರ್ಷದ ಬಾಲಕಿ.. ದೇಹದ ಮೇಲೆ ಮುಳ್ಳಿನ ಪದರ, ಏನಿದು ಅಪರೂಪದ ಕಾಯಿಲೆ?
Recommended image3
ಮೊಟ್ಟೆ ತಿಂದ್ರೆ ಕ್ಯಾನ್ಸರ್‌ ಅಪಾಯ ಇಲ್ಲ : ಕೇಂದ್ರ ಸ್ಪಷ್ಟನೆ
Related Stories
Recommended image1
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
Recommended image2
ಜಿರಳೆ, ಇಲಿ, ಹಲ್ಲಿ ಓಡಿಸಲು ಪಾಪ್​ಕಾರ್ನ್​ ಟ್ರಿಕ್ಸ್​! ಇಷ್ಟು ಸುಲಭನಾ ಇದು? ಹಂತ ಹಂತದ ಮಾಹಿತಿ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved