ಕೋಟಿ ಕೋಟಿ ಹಣ ಸುರಿದ್ರೂ 3 ರಾಶಿಯವರನ್ನು ಖರೀದಿ ಮಾಡೋಕೆ ಆಗಲ್ಲ
ಮೂರು ರಾಶಿಯವರು ಹಣಕ್ಕಿಂತ ನೀತಿ, ಸತ್ಯ ಮತ್ತು ಧರ್ಮವನ್ನು ಮುಖ್ಯವೆಂದು ಪರಿಗಣಿಸುತ್ತಾರೆ. ಕೋಟಿ ರೂಪಾಯಿ ಕೊಟ್ಟರೂ ಇವರನ್ನು ಯಾರೂ ಮರುಳುಗೊಳಿಸಲು ಸಾಧ್ಯವಿಲ್ಲ.

ಹಣವೇ ಮುಖ್ಯ ಅಲ್ಲ
ಇಂದಿನ ಲೋಕದಲ್ಲಿ ಹಲವರು ಹಣಕ್ಕಾಗಿ ಓಡುತ್ತಿದ್ದಾರೆ. ಆದರೆ ಕೆಲವರಿಗೆ ಹಣ ಜೀವನದ ದೊಡ್ಡ ಗುರಿಯಲ್ಲ. ಅವರಿಗೆ ಪ್ರಾಮಾಣಿಕತೆ, ನೀತಿ, ನ್ಯಾಯ, ಪ್ರೀತಿ ಮುಖ್ಯ. ಹಣ ಬಂದ್ರೆ ಪರವಾಗಿಲ್ಲ, ಹೋದ್ರೆ ಬೇಜಾರೂ ಇಲ್ಲ ಅನ್ನೋದು ಇವರ ಗುಣ.
ಜ್ಯೋತಿಷ್ಯದ ಪ್ರಕಾರ ಮೂರು ರಾಶಿಯವರು ಹೀಗೆ ಹಣವನ್ನು ತುಚ್ಛವಾಗಿ ಕಾಣುತ್ತಾರೆ. ಕೋಟಿ ರೂಪಾಯಿ ಕೊಟ್ಟರೂ ಇವರನ್ನು ಖರೀದಿಸಲು ಸಾಧ್ಯವಿಲ್ಲ, ನೀತಿಯೇ ಇವರ ನಿಜವಾದ ಶಕ್ತಿ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರು ತುಂಬಾ ನೀತಿವಂತರು ಮತ್ತು ಚಿಂತನೆಯಲ್ಲಿ ಶುದ್ಧರು. ಇವರ ಹತ್ತಿರ ಹಣ ಸೇರಲ್ಲ ಅಂತ ಅಲ್ಲ, ಆದರೆ ಹಣವನ್ನು ತಮ್ಮ ಪ್ರಮುಖ ಗುರಿಯಾಗಿಟ್ಟುಕೊಳ್ಳಲ್ಲ. ಹಣ ಸಂಪಾದಿಸುವ ಅವಕಾಶ ಬಂದರೂ, ಅದು ಅಕ್ರಮ ಮಾರ್ಗದ್ದಾಗಿದ್ದರೆ ಒಪ್ಪಿಕೊಳ್ಳುವುದಿಲ್ಲ. ಇವರ ಜೀವನದಲ್ಲಿ ಸತ್ಯಕ್ಕೆ ತುಂಬಾ ಮಹತ್ವ.
ಯಾರನ್ನೂ ಮೋಸ ಮಾಡದೆ, ನ್ಯಾಯಯುತವಾಗಿ ಬೆಳೆಯಬೇಕು ಅಂದುಕೊಳ್ಳುವವರು ಕನ್ಯಾ ರಾಶಿಯವರು. ಕೋಟಿ ರೂಪಾಯಿ ಕೊಟ್ಟರೂ ಅದು ಕಾನೂನುಬಾಹಿರವಾಗಿದ್ದರೆ ತಿರಸ್ಕರಿಸುತ್ತಾರೆ. ಇವರ ಜೀವನ ತತ್ವ - ನೀತಿಯಿಂದ ಗಳಿಸಿದ ಹಣ ಮಾತ್ರ ಉಳಿಯುತ್ತದೆ.
ಧನಸ್ಸು ರಾಶಿ (Sagittarius)
ಧನುಸ್ಸು ರಾಶಿಯವರು ನೀತಿ ಮತ್ತು ಧರ್ಮಕ್ಕೆ ಬದ್ಧರಾಗಿರುತ್ತಾರೆ. ಇವರ ಜೀವನದಲ್ಲಿ ವಿದ್ಯೆ, ಧರ್ಮ, ಸತ್ಯ, ನ್ಯಾಯಾಲಯಗಳು ಹಣಕ್ಕಿಂತ ಮುಖ್ಯ. ಕೋಟಿ ರೂಪಾಯಿ ಕೊಟ್ಟು ತಪ್ಪು ಮಾಡಲು ಹೇಳಿದರೂ ಒಪ್ಪುವುದಿಲ್ಲ. ಇವರ ಆಧ್ಯಾತ್ಮಿಕ ಚಿಂತನೆ ಮತ್ತು ತಾತ್ವಿಕ ಭಾವನೆಗಳಿಂದ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ.
ನೀತಿ ಮತ್ತು ನ್ಯಾಯವನ್ನು ಕಾಪಾಡುವ ಹೆಮ್ಮೆಯೇ ಇವರಿಗೆ ದೊಡ್ಡ ಸಂಪತ್ತು. ಹಾಗಾಗಿ ಇವರ ವೈಶಿಷ್ಟ್ಯ - ಏನೇ ಇದ್ದರೂ ನ್ಯಾಯಯುತವಾಗಿ ಬದುಕಬೇಕು. ಹಣಕ್ಕಾಗಿ ಯಾರನ್ನೂ ಮೋಸ ಮಾಡಲ್ಲ, ಬದಲಿಗೆ ಎಲ್ಲರ ಒಳಿತನ್ನು ಬಯಸುತ್ತಾರೆ.
ಇದನ್ನೂ ಓದಿ: ಇದೊಂದು ಸರಳ ಟಿಪ್ಸ್ ಪಾಲಿಸಿದ್ರೆ ಜೀವನಪರ್ಯಂತ ಸಾಲದ ಕಾಟವಿಲ್ಲ!
ಕುಂಭ ರಾಶಿ (Aquarius)
ಕುಂಭ ರಾಶಿಯವರು ಚಿಂತನೆಯಲ್ಲಿ ಉನ್ನತರು. ಇವರಿಗೆ ವಿಶ್ವ ಕಲ್ಯಾಣ, ಮಾನವೀಯತೆ, ಸಮಾನತೆ ಮುಖ್ಯ. ಹಣಕ್ಕೆ ಕಡಿಮೆ ಪ್ರಾಮುಖ್ಯತೆ. ಹಣ ಇಲ್ಲದಿದ್ದರೂ ಶಾಂತಿ, ಆಧ್ಯಾತ್ಮ, ಸಮಾಜ ಸೇವೆ ಇವರ ಗುರಿ. ಹಣದಿಂದ ಸಂತೋಷ ಅನ್ನೋದನ್ನು ಇವರೇ ಮೊದಲು ಒಪ್ಪಲ್ಲ. ಹಣವಿದ್ದರೂ ಅದು ತಮಗಲ್ಲ, ಬೇರೆಯವರ ಒಳಿತಿಗಾಗಿ ಉಪಯೋಗಿಸುತ್ತಾರೆ.
ಎಷ್ಟೇ ಹಣವಿದ್ದರೂ ಇವರನ್ನು ಖರೀದಿಸಲು ಸಾಧ್ಯವಿಲ್ಲ. ಇವರ ನಂಬಿಕೆ - ನೀತಿ, ಪ್ರೀತಿ, ಮಾನವೀಯತೆಯೇ ನಿಜವಾದ ಸಂಪತ್ತು.
ಇದನ್ನೂ ಓದಿ: ಈ 6 ಅಭ್ಯಾಸವಿರುವವರನ್ನು ಮದುವೆಯಾದ್ರೆ ಹೆಣ್ಮಕ್ಕಳ ಜೀವನ ಕಷ್ಟ, ಕಷ್ಟ!
ನೀತಿ, ಸತ್ಯ ಮತ್ತು ಧರ್ಮ
ಕನ್ಯಾ, ಧನುಸ್ಸು ಮತ್ತು ಕುಂಭ ರಾಶಿಯವರು ಹಣವನ್ನು ಜೀವನದ ಮುಖ್ಯ ಗುರಿ ಎಂದು ಭಾವಿಸುವುದಿಲ್ಲ. ನೀತಿ, ಸತ್ಯ ಮತ್ತು ಧರ್ಮವೇ ಇವರ ಗುರುತು. ಕೋಟಿ ರೂಪಾಯಿ ಕೊಟ್ಟರೂ ಇವರನ್ನು ಯಾರೂ ಈ ಮೂರು ರಾಶಿಯವರನ್ನು ಮರುಳುಗೊಳಿಸಲು ಸಾಧ್ಯವಿಲ್ಲ. ಹಣದಿಂದಲ್ಲ, ಗುಣದಿಂದಲೇ ಒಬ್ಬರು ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದು ತಮ್ಮ ಜೀವನದ ಮೂಲಕ ಸಾಬೀತುಪಡಿಸುವವರು ಇವರು.
ಇದನ್ನೂ ಓದಿ: ಸೂರ್ಯ-ಶುಕ್ರರ 'ದ್ವಿದಶ ದೃಷ್ಟಿ ಯೋಗ, 3 ರಾಶಿಗೆ ಅಪಾರ ಸಂಪತ್ತು, ಬೆಸ್ಟ್ ಟೈಮ್ ಶುರು