ಕೃಷ್ಣ ಜನ್ಮಾಷ್ಟಮಿಗೆ ಮುನ್ನ ಈ ವಸ್ತು ಮನೆಗೆ ತಂದ್ರೆ ಮಾತ್ರ ಪೂಜೆ ಸಂಪೂರ್ಣ
ಕೃಷ್ಣ ಜನ್ಮಾಷ್ಟಮಿಗೆ ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ಶ್ರೀಕೃಷ್ಣನ ಜನ್ಮೋತ್ಸವವಾದ ವಿಶೇಷ ದಿನದಂದು ವಿಶೇಷ ಪೂಜೆ, ಅಲಂಕಾರ ಮತ್ತು ನೈವೇದ್ಯ ಅರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಜನ್ಮಾಷ್ಟಮಿಗೂ ಮುನ್ನ ಕೆಲವು ವಸ್ತುಗಳನ್ನು ಮನೆಗೆ ತರುವುದು ಶುಭಕರವೆಂದು ಹೇಳಲಾಗುತ್ತದೆ.

ಕೊಳಲು
ಕೊಳಲು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಒಂದು. ಜನ್ಮಾಷ್ಟಮಿಗೂ ಮುನ್ನ ಮರದ ಕೊಳಲನ್ನು ತಂದು ಪೂಜಾ ಸ್ಥಳದಲ್ಲಿ ಇಡಬೇಕು. ಇದು ಪ್ರೀತಿ, ಮಾಧುರ್ಯ ಮತ್ತು ಕುಟುಂಬದಲ್ಲಿ ಸಾಮರಸ್ಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಹಸು ಕರುವಿನ ಪ್ರತಿಮೆ ಅಥವಾ ಫೋಟೋ
ಗೋಸೇವೆ ಜೊತೆ ಶ್ರೀಕೃಷ್ಣನಿಗೆ ವಿಶೇಷ ಸಂಬಂಧವಿದೆ. ಹಾಗಾಗಿ ಹಸು-ಕರುಗಳ ಚಿತ್ರ ಅಥವಾ ಪ್ರತಿಮೆಯನ್ನು ಮನೆಗೆ ತಂದು ಕೃಷ್ಣನ ಮೂರ್ತಿಯ ಬಳಿ ಇಡುವುದು ಶುಭಕರ ಎಂದು ನಂಬಲಾಗಿದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿದೆ.
ಶ್ರೀಯಂತ್ರ
ಜನ್ಮಾಷ್ಟಮಿಯಂದು ಶ್ರೀಕೃಷ್ಣನ ಜೊತೆಗೆ ಲಕ್ಷ್ಮೀ-ನಾರಾಯಣನ ಆರಾಧನೆಯನ್ನೂ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಶ್ರೀಯಂತ್ರವನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಪೂಜಿಸಬಹುದು. ಇದು ಸಂಪತ್ತು ಮತ್ತು ಸಮೃದ್ಧಿ ಜೊತೆ ಸಂಬಂಧ ಹೊಂದಿದೆ.
ತುಳಸಿ ಗಿಡ
ತುಳಸಿಯನ್ನು ಶ್ರೀಕೃಷ್ಣ ಹಾಗೂ ಭಗವಂತ ವಿಷ್ಣುವಿಗೆ ಪ್ರಿಯವಾದುದು ಎಂದು ನಂಬಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ಇಲ್ಲದಿದ್ದರೆ ಜನ್ಮಾಷ್ಟಮಿಗೂ ಮುನ್ನ ಮನೆಗೆ ತುಳಸಿಗಿಡ ತಂದು ನೆಡಬೇಕು. ಕೃಷ್ಣನಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ದಳ ಅರ್ಪಿಸುವ ಸಂಪ್ರದಾಯವಿದೆ. ಇದನ್ನು ಶುಭವೆಂದು ನಂಬಲಾಗುತ್ತದೆ.
ಶುದ್ಧ ಹಸುವಿನ ತುಪ್ಪ
ಜನ್ಮಾಷ್ಟಮಿಯ ರಾತ್ರಿ ಕೃಷ್ಣನ ಜನನದ ಸಮಯದಲ್ಲಿ ತುಪ್ಪದ ದೀಪ ಹಚ್ಚುವ ಸಂಪ್ರದಾಯವಿದೆ. ಹಾಗಾಗಿ ಪೂಜೆಗೂ ಮುನ್ನ ಶುದ್ಧ ತುಪ್ಪದ ದೀಪವನ್ನು ಸಿದ್ಧವಾಗಿ ಇಟ್ಟುಕೊಳ್ಳಬಹುದು. ದೀಪವು ಬೆಳಕು ಮತ್ತು ಪಾವಿತ್ರ್ಯದ ಸಂಕೇತವಾಗಿದೆ. ಜನ್ಮಾಷ್ಟಮಿಗೂ ಮುನ್ನ ಮನೆ ಹಾಗೂ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಲಡ್ಡು ಗೋಪಾಲನ ವಸ್ತ್ರ, ಅಲಂಕಾರ ಸಾಮಗ್ರಿ, ನೈವೇದ್ಯ ಮತ್ತು ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಿ.

