- Home
- Entertainment
- ಕಪ್ಪಗಿದ್ದಾಳೆ ಅಂತ 2 ತಿಂಗಳು ಅರಿಶಿನ ಹಚ್ಚಿದ್ರು; ಆಮೇಲೆ ಇಂಡಸ್ಟ್ರಿ ಆಳಿದ ಈ ನಟಿ ಯಾರು ಗೊತ್ತಾ?
ಕಪ್ಪಗಿದ್ದಾಳೆ ಅಂತ 2 ತಿಂಗಳು ಅರಿಶಿನ ಹಚ್ಚಿದ್ರು; ಆಮೇಲೆ ಇಂಡಸ್ಟ್ರಿ ಆಳಿದ ಈ ನಟಿ ಯಾರು ಗೊತ್ತಾ?
Bhanupriya overcomming colourism: ತೆಲುಗಿನ ಓರ್ವ ಸ್ಟಾರ್ ನಟಿ ತನ್ನ ವೃತ್ತಿಜೀವನದ ಆರಂಭದಲ್ಲಿ ಕಪ್ಪಗಿದ್ದ ಕಾರಣಕ್ಕೆ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರಂತೆ. ತನ್ನ ಮೊದಲ ಸಿನಿಮಾಗಾಗಿ ಬರೋಬ್ಬರಿ ಎರಡು ತಿಂಗಳು ಅರಿಶಿನ ಹಚ್ಚಿಕೊಂಡಿದ್ದರಂತೆ. ಆದರೆ ನಂತರ ಅವರೇ ಸ್ಟಾರ್ ನಾಯಕಿಯಾಗಿ ಬೆಳೆದರು.

ತಿರಸ್ಕರಿಸಿದ್ದ ಸಿನಿಮಾಟೋಗ್ರಾಫರ್
ಕಪ್ಪಗಿದ್ದರೂ ಹೀರೋಯಿನ್ ಆಗಿ ಯಶಸ್ಸು ಕಂಡ ನಟಿ ಭಾನುಪ್ರಿಯಾ. ಅವರು 'ಸಿತಾರಾ' ಚಿತ್ರದ ಮೂಲಕ ತೆಲುಗಿಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ತಮಿಳು ಸಿನಿಮಾವೊಂದರಲ್ಲಿ ಇವರನ್ನು ನೋಡಿದ್ದ ನಿರ್ದೇಶಕ ವಂಶಿ, 'ಸಿತಾರಾ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದರೆ, ಭಾನುಪ್ರಿಯಾ ಅವರನ್ನು ನೋಡಿದ ಕ್ಯಾಮರಾಮನ್, 'ಈಕೆ ಬೇಡ, ನಮ್ಮ ಸಿನಿಮಾಗೆ ಸೆಟ್ ಆಗಲ್ಲ' ಎಂದು ಮುಖದ ಮೇಲೆಯೇ ಹೇಳಿದ್ದರಂತೆ. 'ಸಿನಿಮಾದ ಕೋಕಿಲಾ ಪಾತ್ರ ಅರಮನೆಯಲ್ಲಿ ಬೆಳೆದ ಸುಂದರಿ. ಆ ಪಾತ್ರಕ್ಕೆ ಇಂತಹ ಕಪ್ಪು ಹುಡುಗಿಯನ್ನು ಹಾಕಿದರೆ ಜನ ಒಪ್ಪಿಕೊಳ್ಳಲ್ಲ. ಅಣ್ಣನ ಪಾತ್ರ ಮಾಡಿದ ಶರತ್ಕುಮಾರ್ ತುಂಬಾ ಬೆಳ್ಳಗಿದ್ದಾರೆ. ಅಂತಹ ವ್ಯಕ್ತಿಯ ತಂಗಿ ಅಂದಮೇಲೆ ಅಷ್ಟೇ ಬೆಳ್ಳಗಿರಬೇಕು' ಎಂದು ಕ್ಯಾಮರಾಮನ್ ನಿರ್ದೇಶಕರಿಗೆ ಹೇಳಿದ್ದರಂತೆ.
ಎರಡು ತಿಂಗಳು ಅರಿಶಿನ ಹಚ್ಚಿದ್ದರಂತೆ
ಚಿತ್ರರಂಗವನ್ನೇ ಆಳಿದ ಭಾನುಪ್ರಿಯಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

