MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime
  • ಹುಡುಗರ ಗಮನಕ್ಕೆ: ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯನ್ನು ಫಾಲೋ ಮುನ್ನ ಈ ಸುದ್ದಿ ಓದಿ

ಹುಡುಗರ ಗಮನಕ್ಕೆ: ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯನ್ನು ಫಾಲೋ ಮುನ್ನ ಈ ಸುದ್ದಿ ಓದಿ

Social Media Following: ಇದು ಸೋಶಿಯಲ್ ಮೀಡಿಯಾ ಜಗತ್ತು. ನೇರವಾಗಿ ಭೇಟಿಯಾಗದೇ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಸ್ನೇಹಿತರಾಗುವ ಕಾಲವಿದು. ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯುನ್ನು ಫಾಲೋ ಮಾಡುವ ಮುನ್ನ ಈ ಸ್ಟೋರಿ ನೋಡಿ

1 Min read
Mahmad Rafik
Published : Jul 24 2025, 06:35 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : AI meta

ಗಾಜಿಯಾಬಾದ್: ಅಪ್ರಾಪ್ತ ಬಾಲಕ ಕೊ*ಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಗೆಳೆಯನಿಂದಲೇ ಬಾಲಕನ ಕೊಲೆಯಾಗಿತ್ತು. ಮೃತ ಬಾಲಕ ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯನ್ನು ಫಾಲೋ ಮಾಡಿದ್ದನು. ಇದರಿಂದ ಕೋಪಗೊಂಡ ಪ್ರಿಯಕರ ಅಪ್ರಾಪ್ತ ಗೆಳೆಯನನ್ನು ಕೊಲೆ ಮಾಡಿದ್ದಾನೆ.

25
Image Credit : AI meta

ಇದೀಗ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಿಯಕರ ಗೆಳೆಯನ ಪ್ರಾಣ ತೆಗೆಯಲು ಇಬ್ಬರ ಸಹಾಯ ಪಡೆದುಕೊಂಡಿದ್ದನು. ವಸೀಂ, ಸಾಹಿಲ್ ಮತ್ತು ರಾಹಿಲ್ ಬಂಧಿತ ಆರೋಪಿಗಳು. ಇದೀಗ ಮೂವರು ಜೈಲುಪಾಲಾಗಿದ್ದಾರೆ.

Related Articles

Related image1
ಕಾಮದಾಸೆ ಬಿಸಿಯಾದ ಅಪ್ಪುಗೆ ಬಯಸಿದಾಗಲೇ ನಿಲ್ಲಿಸಿದ್ಳು ಗಂಡನ ಉಸಿರು; ಏನಿದು ಫರ್ಜಾನಾಳ ವಿರಹದ ಕಥೆ?
Related image2
ಪಕ್ಕದ ಮನೆಯವರ ಜೊತೆ ಗಲಾಟೆ, ಮೊಹಮದ್‌ ಶಮಿ ಮಾಜಿ ಪತ್ನಿ, ಮಗಳ ವಿರುದ್ಧ ಕೊಲೆ ಯತ್ನದ ಕೇಸ್‌!
35
Image Credit : AI meta

ಜುಲೈ 22ರ ರಾತ್ರಿ ಟ್ರೋನಿಕಾ ಸಿಟಿ ವ್ಯಾಪ್ತಿಗೆ ಬರುವ ಇಲಾಯಿಚೀಪುರ ಗ್ರಾಮದಲ್ಲಿ ಅಪ್ರಾಪ್ತ ಬಾಲಕನ ಶವ ಪತ್ತೆಯಾಗಿತ್ತು. ತನಿಖೆ ಆರಂಭಿಸಿದಾಗ ಶವ ದೆಹಲಿಯ ಖಜುರಿ ನಿವಾಸಿ ರಿಹಾನ್ (17) ಎಂಬಾತನದ್ದು ಎಂದು ಗೊತ್ತಾಯ್ತು. ಈ ಸಂಬಂಧ ಮರುದಿನ ಜುಲೈ 23ರಂದು ಪ್ರಕರಣ ದಾಖಲಾಯ್ತು ಎಂದು ಎಸಿಪಿ ಲೋನಿ ಸಿದ್ಧಾರ್ಥ್ ಗೌತಮ್ ಹೇಳಿದ್ದಾರೆ.

45
Image Credit : AI

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಸೀಂ (19), ಸಾಹಿಲ್ (18) ಮತ್ತು ರಿಹಾನ್ (18) ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಸೀಂನ ಗೆಳತಿಯನ್ನು ಮೃತ ರಿಹಾನ್ ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದನು. ಈ ಸಂಬಂಧ ಸೋಶಿಯಲ್ ಮೀಡಯಾದಲ್ಲಿ ವಸೀಂ ಮತ್ತು ರಿಹಾನ್ ನಡುವೆ ಜಗಳವುಂಟಾಗಿತ್ತು.

55
Image Credit : AI

ಇದರಿಂದ ಕೋಪಗೊಂಡ ವಸೀಂ ಇಬ್ಬರು ಗೆಳೆಯರೊಂದಿಗೆ ಸೇರಿಕೊಂಡು ರಿಹಾನ್ ಪ್ರಾಣ ತೆಗೆಯಲು ಪ್ಲಾನ್ ಮಾಡಿದ್ದನು. ಪ್ಲಾನ್ ಪ್ರಕಾರ ರಿಹಾನ್‌ನನ್ನು ಉಪಾಯವಾಗಿ ಕೃಷಿ ಜಮೀನಿಗೆ ಕರೆಸಿಕೊಂಡಿದ್ದಾರೆ. ನಂತರ ಮೂವರು ಚಾಕು ಇರಿದು ರಿಹಾನ್ ಪ್ರಾಣ ತೆಗೆದಿದ್ದಾರೆ. ಘಟನೆ ಬಳಿಕ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಇದೀಗ ಪೊಲೀಸರು ಮೂವರು ಆರೋಪಿಗಳು ಬಂಧಿಸಿ, ಕೊಲೆಗೆ ಬಳಸಲಾದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕೊಲೆ
ಸಾಮಾಜಿಕ ಮಾಧ್ಯಮ
ಸ್ನೇಹ
ಪ್ರೀತಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved