MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • Cricket: ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?

Cricket: ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?

ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳು ಒಂದೇ ಸಮಯದಲ್ಲಿ ನಡೆಯುವುದರಿಂದ, ಬಿಸಿಸಿಐ ಎರಡು ವಿಭಿನ್ನ ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪ್ರಬಲ ತಂಡ ಏಷ್ಯನ್ ಗೇಮ್ಸ್‌ಗೆ ತೆರಳಲಿದ್ದು, ಈ ಕಾರಣದಿಂದ 8 ಪ್ರಮುಖ ಆಟಗಾರರು ವಿಂಡೀಸ್ ಸರಣಿಗೆ ಅಲಭ್ಯರಾಗಲಿದ್ದಾರೆ.

2 Min read
Author : Bhimasi M Koleppanavar
Published : Jul 25 2026, 03:21 PM IST
Share this Photo Gallery
  • FB
  • TW
  • Linkdin
  • Whatsapp
17
ಭಾರೀ ತಂತ್ರ ಹೆಣೆದ ಬಿಸಿಸಿಐ!
Image Credit : X/BCCI

ಭಾರೀ ತಂತ್ರ ಹೆಣೆದ ಬಿಸಿಸಿಐ!

ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದ್ದು, ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಈ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭವಿಷ್ಯದ ಪ್ರಮುಖ ಸರಣಿಗಳಿಗಾಗಿ ಬೃಹತ್ ತಂತ್ರ ರೂಪಿಸಲು ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಹೊಸ ತಂಡದೊಂದಿಗೆ ಮೈದಾನಕ್ಕಿಳಿಯಲಿರುವ ಭಾರತ!
Image Credit : X/BCCI

ಹೊಸ ತಂಡದೊಂದಿಗೆ ಮೈದಾನಕ್ಕಿಳಿಯಲಿರುವ ಭಾರತ!

ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಭಾರತ ತಂಡ, ಮುಂಬರುವ ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ (ODI) ಸರಣಿಯನ್ನು ಆಡಲಿದೆ. ಆದರೆ, ಈ ವಿಂಡೀಸ್ ಸರಣಿಯಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹೊಸ ರೂಪದೊಂದಿಗೆ ಮೈದಾನಕ್ಕಿಳಿಯುವ ಸಾಧ್ಯತೆಯಿದೆ!

Related Articles

Related image1
Cricket: ಟಿ20 ಕ್ರಿಕೆಟ್‌ನಲ್ಲಿ ಅಗ್ನಿಪರೀಕ್ಷೆ ಗೆದ್ದ 6 ಇಂಡಿಯನ್ ಕಿಂಗ್ಸ್! ಕೇವಲ 12 ಎಸೆತಗಳಲ್ಲಿ ಸೃಷ್ಟಿಸಿದ್ದ ಮಹಾ ದಾಖಲೆಗೆ ಭಾರತದಲ್ಲಿಲ್ಲ ಸಾಟಿ!
Related image2
Cricket: ನನ್ನ ತಂದೆಯನ್ನು ಉಳಿಸಿ, ಸ್ಟಾರ್ ಕ್ರಿಕೆಟರ್ ಮಗನ ಕಣ್ಣೀರಿನ ಮನವಿ! ದಿಗ್ಗಜ ಆಟಗಾರನಿಗೆ ಆಗಿದ್ದಾದರೂ ಏನು?
37
ಅಸಲಿ ಕಾರಣವೇನು?
Image Credit : X/BCCI

ಅಸಲಿ ಕಾರಣವೇನು?

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ನಡೆಯುವ ಸನ್ನಿವೇಶದಲ್ಲೇ ಏಷ್ಯನ್ ಗೇಮ್ಸ್ (Asian Games) ಪಂದ್ಯಾವಳಿಗಳೂ ಆಯೋಜನೆಯಾಗುತ್ತಿವೆ. ಬಿಸಿಸಿಐ ಪ್ರಮುಖ ಆಟಗಾರರನ್ನು ಒಳಗೊಂಡ ಪ್ರಬಲ ತಂಡವನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಲು ನಿರ್ಧರಿಸಿದೆ.

47
ಹೊರಗುಳಿಯಲ್ಲಿದ್ದಾರೆ 8 ಜನ!
Image Credit : bcci

ಹೊರಗುಳಿಯಲ್ಲಿದ್ದಾರೆ 8 ಜನ!

ಈ ಮಹತ್ವದ ಏಷ್ಯನ್ ಗೇಮ್ಸ್‌ಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಎರಡು ಸರಣಿಗಳು ಒಂದೇ ಅವಧಿಯಲ್ಲಿ ಮುಖಾಮುಖಿಯಾಗುತ್ತಿರುವುದರಿಂದ, ಪ್ರಮುಖ 8 ಸ್ಟಾರ್ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ!

57
ವಿಂಡೀಸ್ ಸರಣಿ ಮಿಸ್ ಮಾಡಿಕೊಳ್ಳಲಿರುವ 8 ಆಟಗಾರರು!
Image Credit : bcci

ವಿಂಡೀಸ್ ಸರಣಿ ಮಿಸ್ ಮಾಡಿಕೊಳ್ಳಲಿರುವ 8 ಆಟಗಾರರು!

ಏಷ್ಯನ್ ಗೇಮ್ಸ್ ತಂಡದಲ್ಲಿ ಜಾಗ ಪಡೆದಿರುವ ಕಾರಣ ವೆಸ್ಟ್ ಇಂಡೀಸ್ ಸರಣಿಗೆ ಲಭ್ಯವಿರದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ:

ಶ್ರೇಯಸ್ ಅಯ್ಯರ್

ಜಸ್ಪ್ರೀತ್ ಬುಮ್ರಾ

ಇಶಾನ್ ಕಿಶನ್

ಅಕ್ಷರ್ ಪಟೇಲ್

ನಿತೀಶ್ ಕುಮಾರ್ ರೆಡ್ಡಿ

ವಾಷಿಂಗ್ಟನ್ ಸುಂದರ್

ಹರ್ಷಿತ್ ರಾಣಾ

ಅರ್ಶ್‌ದೀಪ್ ಸಿಂಗ್

67
ಹೊಸಬರ ಪಡೆ ಸಜ್ಜು!
Image Credit : Getty

ಹೊಸಬರ ಪಡೆ ಸಜ್ಜು!

ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಈ ಎಂಟು ಪ್ರಮುಖ ಆಟಗಾರರ ಅಲಭ್ಯತೆಯಿಂದಾಗಿ ಬಿಸಿಸಿಐ 'ಬ್ರ್ಯಾಂಡ್ ನ್ಯೂ' (ಹೊಸಬರ) ಪಡೆ ರೂಪಿಸಲು ಸಜ್ಜಾಗಿದೆ. ವಿಶೇಷವಾಗಿ ಭಾರತದ ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವಿಭಾಗದಲ್ಲಿ ಯುವ ಪ್ರತಿಭೆಗಳಾದ ಪ್ರಿನ್ಸ್ ಹಾಗೂ ಸೂರ್ಯಾಂಶ್ ಶೆಂಡೇಜ್ ಅವರಂತಹ ಹೊಸ ಮುಖಗಳಿಗೆ ರಾಷ್ಟ್ರೀಯ ತಂಡದ ಕ್ಯಾಪ್ ಸಿಗುವ ಭರವಸೆ ಮೂಡಿದೆ.

77
ಏಷ್ಯನ್ ಗೇಮ್ಸ್‌ಗೆ ಭಾರತೀಯ ಬಟಾಲಿಯನ್!
Image Credit : X/BCCI

ಏಷ್ಯನ್ ಗೇಮ್ಸ್‌ಗೆ ಭಾರತೀಯ ಬಟಾಲಿಯನ್!

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕದ ಗುರಿಯೊಂದಿಗೆ ಕಣಕ್ಕಿಳಿಯಲಿರುವ ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ತಿಲಕ್ ವರ್ಮಾ ಉಪನಾಯಕರಾಗಿ ಸಾಥ್ ನೀಡಲಿದ್ದಾರೆ.

ಏಷ್ಯನ್ ಗೇಮ್ಸ್‌ಗಾಗಿ ಟೀಮ್ ಇಂಡಿಯಾ!
ನಾಯಕ: ಶ್ರೇಯಸ್ ಅಯ್ಯರ್
ಉಪನಾಯಕ: ತಿಲಕ್ ವರ್ಮಾ
ಬ್ಯಾಟರ್‌ಗಳು / ಆಲ್ ರೌಂಡರ್‌ಗಳು: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶಿವಂ ದುಬೆ, ವೈಭವ್ ಸೂರ್ಯವಂಶಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ.

ಬೌಲರ್‌ಗಳು!
ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್.

ಒಟ್ಟಿನಲ್ಲಿ, ಒಂದೆಡೆ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಬೇಟೆಯಾಡಲು ಶ್ರೇಯಸ್ ಪಡೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ವೆಸ್ಟ್ ಇಂಡೀಸ್ ವಿರುದ್ಧ ಯುವ ಸೈನ್ಯವನ್ನು ಪರೀಕ್ಷಿಸಲು ಬಿಸಿಸಿಐ ಭರ್ಜರಿ ಮಾಸ್ಟರ್ ಪ್ಲಾನ್ ಹೆಣೆದಿದೆ!

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಕ್ರಿಕೆಟ್
ಸುದ್ದಿ
ಟೀಮ್ ಇಂಡಿಯಾ
ಶ್ರೇಯಸ್ ಅಯ್ಯರ್

Latest Videos
Recommended Stories
Recommended image1
ರೋಹಿತ್ ಶರ್ಮಾ ಬಚಾವ್, ಆದ್ರೆ ಈ 5 ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು 2027ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಔಟ್! ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು
Recommended image2
ಜೋಸ್ ಬಟ್ಲರ್ ಫೇವರೇಟ್ ಕ್ರಿಕೆಟಿಗ ಧೋನಿಯು ಅಲ್ಲ, ಕೊಹ್ಲಿಯೂ ಅಲ್ಲ..! ಇಂಗ್ಲೆಂಡ್ ಆಟಗಾರನಿಗೆ ಕಾಸ್ಟ್ಲಿ ಗಿಫ್ಟ್ ಕೊಟ್ಟ ಟೀಂ ಇಂಡಿಯಾ ಲೆಜೆಂಡ್
Recommended image3
ಆ ಸ್ಟಾರ್ ಆಲ್‌ರೌಂಡರ್‍‌ನ‌ ತ್ಯಾಗದ ಜೊತೆಗೆ 10 ಕೋಟಿ ಆಫರ್! ಆದ್ರೂ ಚೆನ್ನೈ ಪ್ಲಾನ್‌ಗೆ ಶಾಕ್ ಕೊಟ್ಟ ಮುಂಬೈ
Related Stories
Recommended image1
Cricket: ಟಿ20 ಕ್ರಿಕೆಟ್‌ನಲ್ಲಿ ಅಗ್ನಿಪರೀಕ್ಷೆ ಗೆದ್ದ 6 ಇಂಡಿಯನ್ ಕಿಂಗ್ಸ್! ಕೇವಲ 12 ಎಸೆತಗಳಲ್ಲಿ ಸೃಷ್ಟಿಸಿದ್ದ ಮಹಾ ದಾಖಲೆಗೆ ಭಾರತದಲ್ಲಿಲ್ಲ ಸಾಟಿ!
Recommended image2
Cricket: ನನ್ನ ತಂದೆಯನ್ನು ಉಳಿಸಿ, ಸ್ಟಾರ್ ಕ್ರಿಕೆಟರ್ ಮಗನ ಕಣ್ಣೀರಿನ ಮನವಿ! ದಿಗ್ಗಜ ಆಟಗಾರನಿಗೆ ಆಗಿದ್ದಾದರೂ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved