- Home
- Entertainment
- Cine World
- 'ಪ್ರಕಟಿಸಿದ್ರೆ ಹುಷಾರ್' ಪತ್ರಕರ್ತೆಯನ್ನು ಬಲವಂತವಾಗಿ ಮನೆಗೆ ಡ್ರಾಪ್ ಮಾಡಿ ಬೆದರಿಕೆ ಹಾಕಿದ್ದ ಸಲ್ಮಾನ್ ಖಾನ್!
'ಪ್ರಕಟಿಸಿದ್ರೆ ಹುಷಾರ್' ಪತ್ರಕರ್ತೆಯನ್ನು ಬಲವಂತವಾಗಿ ಮನೆಗೆ ಡ್ರಾಪ್ ಮಾಡಿ ಬೆದರಿಕೆ ಹಾಕಿದ್ದ ಸಲ್ಮಾನ್ ಖಾನ್!
ಈಗ ಸಲ್ಮಾನ್ ಖಾನ್ ಜೀವಕ್ಕೆ ಬೆದರಿಕೆ ಇರುವುದು ಗೊತ್ತೇ ಇದೆ. ಅದಕ್ಕಾಗಿ ಭದ್ರತೆಯೂ ಇದೆ. ಆದರೆ ಹಿಂದೊಮ್ಮೆ ಸಲ್ಮಾನ್ ಖಾನ್ ಪತ್ರಕರ್ತೆಯನ್ನು ಮನೆಗೆ ಡ್ರಾಪ್ ಮಾಡಿ, ನಂತರ ಬೆದರಿಕೆ ಹಾಕಿದ್ದರು. ನಿಖರವಾಗಿ ಏನಾಯಿತು ಎಂಬುದು ಇಲ್ಲಿದೆ.

ಸಲ್ಮಾನ್ ಖಾನ್ ತನ್ನ ಸಾರ್ವಜನಿಕ ಇಮೇಜ್ ಅನ್ನು ಉಳಿಸಿಕೊಳ್ಳಲು ಯಾವಾಗಲೂ ಹೆಣಗಾಡುತ್ತಿರುವ ವ್ಯಕ್ತಿ. ಕುಖ್ಯಾತ ಹಿಟ್ ಅಂಡ್ ರನ್ ಕೇಸ್ ಮತ್ತು ಕೃಷ್ಣಮೃಗ ಕೇಸ್ ನಂತರ, ಪರಿಸ್ಥಿತಿಗಳು ಅವರ ವಿರುದ್ಧ ಕೆಟ್ಟದಾಗಿ ತಿರುಗಿದವು.
ಬೀಯಿಂಗ್ ಹ್ಯೂಮನ್ ಅನ್ನು ಪ್ರಾರಂಭಿಸಿದ ನಂತರ, ನಟ ಕ್ರಮೇಣ ತಮ್ಮ ಸಾರ್ವಜನಿಕ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡರು ಮತ್ತು ಸಂದರ್ಶನಗಳಲ್ಲಿ ತಮ್ಮ ಹಿಂದಿನ ತಪ್ಪುಗಳು ಮತ್ತು ದುಷ್ಕೃತ್ಯಗಳನ್ನು ಒಪ್ಪಿಕೊಳ್ಳುವಷ್ಟು ವಿನಮ್ರರಾದರು.
ಆದಾಗ್ಯೂ, ಇಂಟರ್ನೆಟ್ ನೀವು ಭೂತಕಾಲವನ್ನು ಎಂದಿಗೂ ಹೂಳಲು ಸಾಧ್ಯವಾಗದ ಸ್ಥಳವಾಗಿದೆ. ಇದು ಚಿತ್ರಗುಪ್ತನಂತೆ ತನ್ನ ಸ್ಮರಣೆಯಲ್ಲಿ ನೋಂದಾಯಿಸಲಾದ ಎಲ್ಲಾ ಪಾಪಗಳನ್ನು ಸದಾ ಹೊತ್ತಿರುತ್ತದೆ ಮತ್ತು ಆಗಾಗ ಕೆಲ ವಿಷಯಗಳನ್ನು ನೆನಪಿಸುತ್ತಿರುತ್ತದೆ.
ಈ ಬಾರಿ ಅಂತರ್ಜಾಲವು ಸಲ್ಮಾನ್ ಖಾನ್ ಹಿಂದೊಮ್ಮೆ ಪತ್ರಕರ್ತೆಗೆ ಬೆದರಿಕೆ ಒಡ್ಡಿದ್ದ ವಿಚಿತ್ರ ಸಂದರ್ಭವನ್ನು ಹೊರ ತೆಗೆದಿದೆ.
ಈಗ ರಿಯಾಲಿಟಿ ಶೋ ಬಿಗ್ ಬಾಸ್ನಲ್ಲಿ ನೈತಿಕತೆಯ ಬಗ್ಗೆ ಕ್ಲಾಸ್ ತೆಗೆದುಕೊಳ್ಳುವ ನಟ ಒಮ್ಮೆ ಸಾಧ್ಯವಿರುವ ಪ್ರತಿಯೊಂದು ದುಷ್ಕೃತ್ಯವನ್ನೂ ಮಾಡಿದ್ದಾರೆ. ಅಂತಹ ಒಂದು ಭಯಾನಕ ಅನುಭವವನ್ನು ಪತ್ರಕರ್ತರೊಬ್ಬರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ನೇಮ್ ಪ್ಲೇಸ್ ಅನಿಮಲ್ ಥಿಂಗ್ ಎಂಬ ಪುಸ್ತಕದಲ್ಲಿ ಪತ್ರಕರ್ತ ಮಯಾಂಕ್ ಶೇಖರ್ ಅವರು ಸುಲ್ತಾನ್ ನಟನ ಬಗ್ಗೆ ತಾವು ಕೇಳಿದ ವಿಚಿತ್ರ ಮತ್ತು ಸಮಸ್ಯಾತ್ಮಕ ಕಥೆಯ ಬಗ್ಗೆ ಬರೆದಿದ್ದಾರೆ.
ಈ ಕಥೆಯನ್ನು ಅವರು ಒಮ್ಮೆ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಒಪ್ಪಿಕೊಂಡಿದ್ದರು ಮತ್ತು ಹಿಂದೆ ಸಲ್ಮಾನ್ ಭಾಯ್ ಸಾಮಾನ್ಯವಾಗಿ ಮಹಿಳೆಯರೊಂದಿಗೆ ತೋರುತ್ತಿದ್ದ ಸಮಸ್ಯಾತ್ಮಕ ವರ್ತನೆ ಬಗ್ಗೆ ಈ ಘಟನೆ ಹೇಳುತ್ತದೆ.
ಹಿಂದೊಮ್ಮೆ ಸಲ್ಮಾನ್ನನ್ನು ಪತ್ರಕರ್ತೆಯೊಬ್ಬರು ಸಂದರ್ಶನ ಮಾಡಿದರು. ಸಂದರ್ಶನದ ಬಳಿಕ ಆಕೆಯನ್ನು ಮನೆಗೆ ತಾನೇ ಬಿಡುತ್ತೇನೆಂದು ನಟ ಒತ್ತಾಯಿಸಿದನಂತೆ. ಎಷ್ಟೇ ಬೇಡವೆಂದರೂ ಕೇಳಲಿಲ್ಲ.
ಆಯ್ತು ಇನ್ನು, ಭಾಯಿಗೆ ಇಲ್ಲವೆಂದು ಹೇಳುವುದು ಸರಿಯಲ್ಲ ಎಂದಾಕೆ ಓಕೆ ಎಂದರಂತೆ. ಬಳಿಕ ನಟ ಆಕೆಯನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋದರಂತೆ. ಆಕೆ ನಿಗದಿತ ಸ್ಥಳದಲ್ಲಿ ಇಳಿದುಕೊಳ್ಳುತ್ತೇನೆಂದಾಗ, ಕಟ್ಟಡದ ಗೇಟಿನವರೆಗೂ ಹೋಗುವಂತೆ ಚಾಲಕನಿಗೆ ನಟ ಹೇಳಿದರು.
ಅಲ್ಲಿ ಹೋದ ಕೂಡಲೇ ಆಕೆ ವಾಸಿಸುವ ಮನೆ ಎಲ್ಲಿದೆ ಎಂದು ಸಲ್ಲು ಕೇಳಿ ತಿಳಿದುಕೊಂಡರು. ನಂತರ ಹೇಳಿದರು, 'ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂದು ಈಗ ನನಗೆ ತಿಳಿದಿದೆ. ನಾನು ನಿಮಗೆ ಕೊಟ್ಟ ಸಂದರ್ಶನವನ್ನು ಪ್ರಕಟಿಸಬೇಡಿ'!
ಕಡೆಗೂ ಆ ಸಂದರ್ಶನ ಪ್ರಕಟವಾಗಲೇ ಇಲ್ಲ. ಆ ಪತ್ರಕರ್ತೆ ಹೆದರಿ ತಮ್ಮ ಹೆಸರನ್ನು ಬಿಟ್ಟುಕೊಡಲೂ ಇಲ್ಲ. ಇದು ನಟನ ತಮಾಷೆಯಾಗಿರಲಿಲ್ಲ, ಬೆದರಿಕೆಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.