ಮದುವೆನೇ ಆಗೋಲ್ಲ ಅಂತಿದ್ದ ನಟ ಶರ್ವಾನಂದ್; ನಿಶ್ಚಿತಾರ್ಥ ಫೋಟೋ ನೋಡಿ ನೆಟ್ಟಿಗರು ಶಾಕ್
ಪ್ರಭಾಸ್ ಆದ್ಮೇಲೆ ಮದುವೆ ಆಗ್ತೀನಿ ಎನ್ನುತ್ತಿದ್ದ ಶರ್ವಾನಂದ್ ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್....
ತೆಲುಗು ಚಿತ್ರರಂಗದ ಯುವ ನಟ ಶರ್ವಾನಂದ್ ಬಹುಕಾಲ ಗೆಳತಿ ರಕ್ಷಿತಾ ರೆಡ್ಡಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಟಿ-ಟೌನ್ ಸ್ಟಾರ್ ನಟರು ಭಾಗಿಯಾಗಿದ್ದರು.
ಗಣರಾಜ್ಯೋತ್ಸವದ ದಿನ ರಕ್ಷಿತಾ ರೆಡ್ಡಿ ಮತ್ತು ಶರ್ವಾನಂದ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ರಾಮ್ ಚರನ್, ನಾಗಾರ್ಜುನ್ ಸೇರಿದಂತೆ ಅನೇಕು ಭಾಗಿಯಾಗಿದ್ದರು.
ರಕ್ಷಿತಾ ರೆಡ್ಡಿ ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಕ್ಷಿತಾ ತಂದೆ ತೆಲಂಗಾಣ ಹೈಕೋರ್ಟ್ನಲ್ಲಿ ವಕೀಲರಾಗಿದ್ದಾರೆ.
ಕ್ರೀಮ್ ಬಣ್ಣದ ಶೇರ್ವಾನಿಯಲ್ಲಿ ಶರ್ವಾನಂದ್, ನೀಲಿ ಬಣ್ಣದ ಸೀರೆಯಲ್ಲಿ ರಕ್ಷಿತಾ ರೆಡಿ ಮಿಂಚಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ಕೂಡ ಪಿಂಕ್ ಮ್ಯಾಚಿಂಗ್ ಔಟ್ಫಿಟ್ನಲ್ಲಿ ಆಗಮಿಸಿದ್ದರು.
ಕೆಲವು ದಿನಗಳ ಹಿಂದೆ ನಟ ಬಾಲಕೃಷ್ಣ ಶರ್ವಾನಂದ್ನ ಕೇಳಿದ್ದರು ನಿಮ್ಮ ಮದುವೆ ಯಾವಾಗ ಎಂದು ಆಗ ಶರ್ವಾನಂದ್ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು...ಈಗ ಟ್ರೋಲ್ ಆಗುತ್ತಿದೆ.
ಪ್ರಭಾಸ್ ಮದುವೆ ನಂತರ ನನ್ನ ಮದುವೆ ನಡೆಯುವುದು ಎಂದಿದ್ದರು. ಆದರೆ ಸಲ್ಮಾನ್ ಖಾನ್ ಮದುವೆ ನಂತರ ನನ್ನ ಮದುವೆ ಎಂದು ಪ್ರಭಾಸ್ ಹೇಳಿದ್ದರು.
ನೀವು ಮೂರು ಜನ ಬ್ಯಾಚುಲರ್ ಲಿಸ್ಟ್ ಸೇರಿಕೊಳ್ಳುತ್ತೀರಿ ಎಂದು ಟ್ರೋಲ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಶರ್ವಾನಂದ್ ನಿಶ್ಚಿತಾರ್ಥ ಮಾಡಿಕೊಂಡಿರುವುದಕ್ಕೆ, ಮದುವೆ ಆಗುವಷ್ಟರಲ್ಲಿ ಪ್ರಭಾಸ್ಗೆ ಹೆಣ್ಣು ಹುಡುಕಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.