- Home
- Entertainment
- Cine World
- ಸಾರಾ ಅಲಿ ಖಾನ್ ಮೇಲೆ 5 ಕೋಟಿಗೆ ಮೊಕದ್ದಮೆ ಹೂಡಿದ 'ಕೇದಾರನಾಥ' ನಿರ್ದೇಶಕ; ನಂತರ ಏನಾಯಿತು?
ಸಾರಾ ಅಲಿ ಖಾನ್ ಮೇಲೆ 5 ಕೋಟಿಗೆ ಮೊಕದ್ದಮೆ ಹೂಡಿದ 'ಕೇದಾರನಾಥ' ನಿರ್ದೇಶಕ; ನಂತರ ಏನಾಯಿತು?
'ಕೇದಾರನಾಥ್' ನಿರ್ದೇಶಕ ಅಭಿಷೇಕ್ ಕಪೂರ್ ನಟಿ ಸಾರಾ ಅಲಿ ಖಾನ್ ಮೇಲೆ 5 ಕೋಟಿ ಮೊತ್ತದ ಮೊಕದ್ದಮೆ ಹೂಡಿದ್ದರು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಾರಾ ಅಲಿ ಖಾನ್ ಅವರು ತಮ್ಮ ಚೊಚ್ಚಲ ಚಿತ್ರ 'ಕೇದಾರನಾಥ್'ದ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಅಭಿಷೇಕ್ ಕಪೂರ್ ತಮ್ಮ ಮೇಲೆ 5 ಕೋಟಿ ರೂ. ಮೊಕದ್ದಮೆ ಹೂಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಸಾರಾ ಅವರ ವೇಳಾಪಟ್ಟಿಯು ರೋಹಿತ್ ಶೆಟ್ಟಿ ಅವರ ಚಿತ್ರವಾದ 'ಸಿಂಬಾ' ಬದ್ಧತೆಗೆ ಘರ್ಷಣೆಯಾದಾಗ ಕಾನೂನು ಸಮಸ್ಯೆಗಳು ಉದ್ಭವಿಸಿದವು. ಸಾರಾ ಈ ಸಮಸ್ಯೆಯಿಂದ ಸಾಕಷ್ಟು ಜರ್ಜರಿತರಾಗಿದ್ದಾಗಿ ಹೇಳಿದ್ದಾರೆ.
'ಕೇದಾರನಾಥ್' ಮತ್ತು 'ಸಿಂಬಾ' ವೇಳಾಪಟ್ಟಿಗಳು ಒಂದಕ್ಕೊಂದು ಘರ್ಷಣೆಯಾಗುತ್ತಿದ್ದುದರಿಂದ ಈ ಭಿನ್ನಾಭಿಪ್ರಾಯ ಉಂಟಾಗಿತ್ತು.
ಸಾರಾ ಹೇಳುವಂತೆ, 'ಮೇ 2018ರಲ್ಲಿ, ನಾನು ಸಿಂಬಾ ಮಾಡಬೇಕಿತ್ತು. ಕೇದಾರನಾಥ ನಡೆಯುತ್ತಿತ್ತು; ಅದು ನನ್ನ ಚೊಚ್ಚಲ ಚಿತ್ರವಾಗಿತ್ತು. ನಂತರ, ಕೆಲವು ದಿನಾಂಕಗಳು ಮೇಲೆ ಕೆಳಗೆ ಹೋದವು. ನಾನು ಸಿಂಬಾಗೆ ಸಹಿ ಹಾಕಿದೆ. ಈಗ, 3-4 ದಿನಾಂಕಗಳು ಎರಡರದ್ದೂ ಒಂದೇ ಇದ್ದವು. ಇದಕ್ಕಾಗಿ ಕೇದಾರನಾಥ ನಿರ್ದೇಶಕ ನನ್ನ ಮೇಲೆ 5 ಕೋಟಿ ರೂ. ಮೊಕದ್ದಮೆ ಹೂಡಿದರು. ನನ್ನ ಬಳಿ ಅಷ್ಟು ಹಣ ಇಲ್ಲದ ಕಾರಣ ತುಂಬಾ ನರ್ವಸ್ ಆಗಿದ್ದೆ' ಎಂದಿದ್ದಾರೆ.
ಕ್ರಿಆರ್ಜ್ ಎಂಟರ್ಟೈನ್ಮೆಂಟ್ ಮತ್ತು ಅಭಿಷೇಕ್ ಕಪೂರ್ ನಡುವಿನ ಕಾನೂನು ವಿವಾದಗಳು ಈಗಾಗಲೇ 'ಕೇದಾರನಾಥ್' ನಿರ್ಮಾಣವನ್ನು ನಿಧಾನಗೊಳಿಸಿತ್ತು. ಈ ಹಂತದಲ್ಲಿ, ಸಾರಾ ಸಿಂಬಾಗೆ ಸಹಿ ಹಾಕಿದರು, ಅದು ಬೆಂಕಿಗೆ ಇಂಧನವನ್ನು ಸೇರಿಸಿತು.
ನಂತರ ನನ್ನ ಮ್ಯಾನೇಜ್ಮೆಂಟ್ ತಂಡ ಕೋರ್ಟ್ಗೆ ಹೋಯಿತು. ಎರಡೂ ಚಿತ್ರಗಳ ನಿರ್ದೇಶಕರು ಒಂದು ಕೋಣೆಯಲ್ಲಿ ಕುಳಿತು ಓಕೆ ದೆನ್ ಎಂದರು. ಸಿಂಬಾ ನಿರ್ದೇಶಕರು 3 ದಿನ ತಾನೇ, ತಗೊಳ್ಳಿ ಎಂದರು. ಅಲ್ಲಿಗೆ ಎಲ್ಲವೂ ಸುಖಾಂತ್ಯವಾಯಿತು ಎಂದಿದ್ದಾರೆ.
ಕಡೆಗೆ ಡಿಸೆಂಬರ್ 2018 ರ ಮೊದಲ ವಾರದಲ್ಲಿ 'ಕೇದಾರನಾಥ್' ಬಿಡುಗಡೆಯಾಯಿತು, ಎರಡನೇ ವಾರದಲ್ಲಿ 'ಸಿಂಬಾ' ಬಿಡುಗಡೆ ಕಂಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.