MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • '2 ಲಕ್ಷಕ್ಕೆ ಆಸೆ ಪಟ್ಟು ಜೀವ ಕಳಕೊಂಡ್ರು..' ನಟಿ ಸೌಂದರ್ಯ ಸಾವಿನ ಬಗ್ಗೆ ನಿರ್ದೇಶಕ ವಿವಾದಾತ್ಮಕ ಹೇಳಿಕೆ

'2 ಲಕ್ಷಕ್ಕೆ ಆಸೆ ಪಟ್ಟು ಜೀವ ಕಳಕೊಂಡ್ರು..' ನಟಿ ಸೌಂದರ್ಯ ಸಾವಿನ ಬಗ್ಗೆ ನಿರ್ದೇಶಕ ವಿವಾದಾತ್ಮಕ ಹೇಳಿಕೆ

ಟಾಲಿವುಡ್ ನಿರ್ದೇಶಕ ಗೀತಾ ಕೃಷ್ಣ ಅವರು ನಟಿ ಸೌಂದರ್ಯ ಅವರ ಸಾವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇವಲ ಎರಡು ಲಕ್ಷ ರೂಪಾಯಿಗಾಗಿ ಚುನಾವಣಾ ಪ್ರಚಾರಕ್ಕೆ ಹೋಗಿ ಸೌಂದರ್ಯ ಪ್ರಾಣ ಕಳೆದುಕೊಂಡರು ಎಂದು ಅವರು ಹೇಳಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

2 Min read
Author : Santosh Naik
Published : Jul 02 2026, 12:53 PM IST
Share this Photo Gallery
  • FB
  • TW
  • Linkdin
  • Whatsapp
15
ಸ್ಟಾರ್ ನಟಿ ಸೌಂದರ್ಯ ಸಾವು ಕುರಿತು ವಿವಾದಾತ್ಮಕ ಕಾಮೆಂಟ್ (Controversial Remarks on Soundarya's Death)
Image Credit : actress.soundarya/Instagram

ಸ್ಟಾರ್ ನಟಿ ಸೌಂದರ್ಯ ಸಾವು ಕುರಿತು ವಿವಾದಾತ್ಮಕ ಕಾಮೆಂಟ್ (Controversial Remarks on Soundarya's Death)

ತೆಲುಗು, ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್‌ ನಟಿಯಾಗಿ ಹೆಸರು ಮಾಡಿದ್ದ ಸೌಂದರ್ಯ ಅವರ ದುರಂತ ಸಾವು ಇಂದಿಗೂ ಇಡೀ ಚಿತ್ರರಂಗವನ್ನು ಕಾಡುವ ಕರಾಳ ನೆನಪು. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಸಿದ್ಧ ಟಾಲಿವುಡ್ ನಿರ್ದೇಶಕ ಗೀತಾ ಕೃಷ್ಣ ಅವರು ಸೌಂದರ್ಯ ಅವರ ಸಾವಿನ ಕುರಿತು ಆಘಾತಕಾರಿ ಕಾಮೆಂಟ್ ಮಾಡಿದ್ದಾರೆ. "ಸೌಂದರ್ಯ ಅವರು ಕೇವಲ ಎರಡು ಲಕ್ಷ ರೂಪಾಯಿ ಹಣಕ್ಕೆ ಆಸೆಪಟ್ಟು ಚುನಾವಣಾ ಪ್ರಚಾರಕ್ಕೆ ಹೋಗಿ ಕೊನೆಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡರು," ಎಂದು ಗೀತಾ ಕೃಷ್ಣ ಹೇಳಿರುವುದು ಸದ್ಯ ಅಭಿಮಾನಿಗಳ ಮತ್ತು ಚಿತ್ರರಂಗದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎರಡು ಲಕ್ಷದ ಆಫರ್ ಮತ್ತು ಹೆಲಿಕಾಪ್ಟರ್ ದುರಂತ (The Two Lakh Offer and Helicopter Crash)
Image Credit : Asianet News

ಎರಡು ಲಕ್ಷದ ಆಫರ್ ಮತ್ತು ಹೆಲಿಕಾಪ್ಟರ್ ದುರಂತ (The Two Lakh Offer and Helicopter Crash)

ನಿರ್ದೇಶಕ ಗೀತಾ ಕೃಷ್ಣ ಅವರ ಪ್ರಕಾರ, ಸೌಂದರ್ಯ ಅವರ ಕೆರಿಯರ್ ಅತ್ಯಂತ ಉತ್ತುಂಗದಲ್ಲಿದ್ದಾಗಲೇ ಅವರು ತಪ್ಪು ನಿರ್ಧಾರ ಕೈಗೊಂಡರು. 2004ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅಂದಿನ ಬಿಜೆಪಿ ನಾಯಕ ಸಿ.ವಿದ್ಯಾಸಾಗರ ರಾವ್ ಅವರು ಕೇವಲ ಎರಡು ಲಕ್ಷ ರೂಪಾಯಿ ಆಫರ್ ನೀಡಿದ್ದಕ್ಕಾಗಿ ಸೌಂದರ್ಯ ಚುನಾವಣಾ ಪ್ರಚಾರಕ್ಕೆ ಒಪ್ಪಿಕೊಂಡಿದ್ದರು. ಈ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಿದ್ದಾಗ ದುರಂತ ಸಂಭವಿಸಿ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ಇಬ್ಬರೂ ಸಾವನ್ನಪ್ಪಿದರು. "ಅಂದು ಆ ಎರಡು ಲಕ್ಷ ರೂಪಾಯಿಗೆ ಆಸೆಪಟ್ಟು ಪ್ರಚಾರಕ್ಕೆ ಹೋಗದೇ ಇದ್ದಿದ್ದರೆ, ಇವತ್ತು ಸೌಂದರ್ಯ ನಮ್ಮ ಮಧ್ಯೆ ಜೀವಂತವಾಗಿ ಇರುತ್ತಿದ್ದರು," ಎಂದು ಗೀತಾ ಕೃಷ್ಣ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಇದೇ ವೇಳೆ ಅವರು ಹೈದರಾಬಾದ್‌ಗೆ ಬಂದಾಗ ಪ್ರಶಾಂತ್ ಕುಟೀರದಲ್ಲಿ ಉಳಿಯಲು ತಾವೇ ಸಜೆಸ್ಟ್ ಮಾಡಿದ್ದಾಗಿ ಹಾಗೂ ಸೌಂದರ್ಯ ಅವರೊಂದಿಗೆ ಕೆಲಸ ಮಾಡುವ ಅವಕಾಶ ತಮಗೆ ಸಿಗಲಿಲ್ಲ ಎಂದೂ ನೆನೆದಿದ್ದಾರೆ.

Related Articles

Related image1
ಆಪ್ತಮಿತ್ರ ಸಿನಿಮಾದ 'ನಾಗವಲ್ಲಿ' ಸೌಂದರ್ಯ ಪ್ರಿಯಕರ ಡಾನ್ಸರ್‌ ರಾಮನಾಥ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ ‘ಡಾನ್ಸಿಂಗ್ ಪ್ರಿನ್ಸ್’?
Related image2
ಸಿಂಪಲ್ ಸೀರೆಯಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸೋ 200 ರೂ.ಗೆ ಸಿಗುವ ಕಿವಿಯೋಲೆಗಳು
35
ಸೀರೆಗೆ ಅಂದ ತಂದ ಸ್ಟಾರ್‌ ನಾಯಕಿ (The Definition of Grace and Elegance)
Image Credit : Asianet News

ಸೀರೆಗೆ ಅಂದ ತಂದ ಸ್ಟಾರ್‌ ನಾಯಕಿ (The Definition of Grace and Elegance)

ಚಿತ್ರರಂಗದಲ್ಲಿ ಗ್ಲಾಮರ್ ಪ್ರಪಂಚದ ನಡುವೆಯೂ ಸೀರೆ ಧರಿಸಿಯೇ ಸೌಂದರ್ಯ ತೋರಿದ್ದವರು ನಟಿ ಸೌಂದರ್. ತಮ್ಮದೇ ಆದ ವಿಶಿಷ್ಟ ಇಮೇಜ್ ಸೃಷ್ಟಿಸಿಕೊಂಡಿದ್ದರು. ಸೀರೆ ಉಡುವ ಶೈಲಿಯಲ್ಲೇ ಆ ಸೀರೆಗೆ ಹೊಸ ಅಂದ ತರುತ್ತಿದ್ದ ಸೌಂದರ್ಯ, ಕೇವಲ ಕಂಟೆಂಟ್ ಆಧಾರಿತ ಮತ್ತು ಕೌಟುಂಬಿಕ ಸಿನಿಮಾಗಳನ್ನು ಆಯ್ದುಕೊಂಡು ಸಕ್ಸಸ್ ರೇಟ್ ಹೆಚ್ಚಿಸಿಕೊಂಡಿದ್ದರು. ಅಂದಿನ ಕಾಲದಲ್ಲಿ ಸ್ಟಾರ್ ನಟ ವೆಂಕಟೇಶ್ ಮತ್ತು ಸೌಂದರ್ಯ ಅವರ ಕಾಂಬಿನೇಷನ್ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕ್ರೇಜ್ ಸೃಷ್ಟಿಸಿತ್ತು. ಇವರಿಬ್ಬರ ಜೋಡಿಯ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.

45
ಗಾಸಿಪ್‌ಗಳಿಗೆ ಬ್ರೇಕ್ ಹಾಕಿ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಮದುವೆ (Tackling Rumors and Marriage)
Image Credit : actress.soundarya/Instagram

ಗಾಸಿಪ್‌ಗಳಿಗೆ ಬ್ರೇಕ್ ಹಾಕಿ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಮದುವೆ (Tackling Rumors and Marriage)

ತೆಲುಗಿನ ಅಗ್ರ ನಟರಾದ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಬಾಲಕೃಷ್ಣ, ಮೋಹನ್ ಬಾಬು, ರಾಜಶೇಖರ್, ಜಗಪತಿಬಾಬು, ಜೆ.ಡಿ. ಚಕ್ರವರ್ತಿ ಸೇರಿದಂತೆ ಇನ್ನುಳಿದ ಸ್ಟಾರ್ ನಟರ ಜೊತೆ ನಟಿಸಿ ನಂಬರ್ ಒನ್ ನಟಿಯಾಗಿ ಸೌಂದರ್ಯ ರಾಣಿಸಿದ್ದರು. ಈ ವೇಳೆ ಜಗಪತಿಬಾಬು ಹಾಗೂ ವೆಂಕಟೇಶ್ ಜೊತೆ ಇವರ ಅಫೇರ್ ಇದೆ ಎಂಬ ಗಾಸಿಪ್‌ಗಳು ಅಪ್ಪಳಿಸಿದ್ದವು. ಆದರೆ, ಈ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಇಟ್ಟ ಸೌಂದರ್ಯ, ಸಾಫ್ಟ್‌ವೇರ್ ಎಂಜಿನಿಯರ್ ರಘು ಅವರನ್ನು ವಿವಾಹವಾಗಿ ಸೆಟಲ್ ಆದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು, ಮದುವೆಯಾದ ಕೇವಲ ಒಂದು ವರ್ಷ ತುಂಬುವಷ್ಟರಲ್ಲೇ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಕೊನೆಯುಸಿರೆಳೆದರು.

55
ಕನ್ನಡದ ಹೆಣ್ಣುಮಗಳು ತೆಲುಗಿನಲ್ಲಿ ಇತಿಹಾಸ ಬರೆದರು (Journey From Kannada to Telugu Super Stardom)
Image Credit : actress.Soundarya/instagram

ಕನ್ನಡದ ಹೆಣ್ಣುಮಗಳು ತೆಲುಗಿನಲ್ಲಿ ಇತಿಹಾಸ ಬರೆದರು (Journey From Kannada to Telugu Super Stardom)

ಮೂಲತಃ ಕರ್ನಾಟಕದವರಾದ ಸೌಂದರ್ಯ, ತೆಲುಗು ಚಿತ್ರರಂಗಕ್ಕೆ 'ಮನವರಾಲಿ ಪೆಳ್ಳಿ' ಎಂಬ ಚಿತ್ರದ ಮೂಲಕ ಪರಿಚಯವಾದರು. ನಂತರ 'ರಾಜೇಂದ್ರುಡು ಗಜೇಂದ್ರುಡು' ಮತ್ತು 'ಮಾಯಲೋಡು' ಚಿತ್ರಗಳ ಯಶಸ್ಸಿನ ಬಳಿಕ ಅವರು ಹಿಂತಿರುಗಿ ನೋಡಲೇ ಇಲ್ಲ. ಸಾಕಷ್ಟು ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ತೆಲುಗು ಪ್ರೇಕ್ಷಕರ ಮನೆಯ ಮಗಳಾಗಿ ಸೌಂದರ್ಯ ಅಜರಾಮರವಾಗಿದ್ದರೆ, ಕನ್ನಡದಲ್ಲೂ ಅವರು ನಟಿಸಿದ್ದ ಚಿತ್ರಗಳು ಇಂದಿಗೂ ಅಜರಾಮರವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ನಟಿ
ವಿವಾದ
ವಿಮಾನ ಅಪಘಾತ
ಮನರಂಜನಾ ಸುದ್ದಿ
ಸುದ್ದಿ
ಟಾಲಿವುಡ್

Latest Videos
Recommended Stories
Recommended image1
ಅಜ್ಜಿ, ಅಮ್ಮ, ಪತ್ನಿ.. ರಾಮ್ ಚರಣ್‌ಗೆ ಯಾರ ಕೈತುತ್ತು ಹೆಚ್ಚು ಇಷ್ಟ? ಉಪಾಸನಾ ಅಡುಗೆ ಮಾಡ್ತಾರಾ?
Recommended image2
Charmy Kaur: 'ನಮ್ರತಾ ನನ್ನನ್ನು ಸಮಾಧಿ ಮಾಡ್ತಾರೆ': ಮಹೇಶ್ ಬಾಬು ಮದುವೆ ಬಗ್ಗೆ ನಟಿಯ ಕಾಮೆಂಟ್ ವೈರಲ್!
Recommended image3
ಗಣೇಶ್ ಸರ್​ ನನ್ನ ಕ್ರಷ್​, ಮದ್ವೆಯಾದಾಗ ತುಂಬಾ ನೊಂದುಕೊಂಡಿದ್ದೆ ಎಂದು ಪತ್ನಿ ಎದುರೇ ಹೇಳಿದ Amruthadhaare ಅಪ್ಪಿ
Related Stories
Recommended image1
ಆಪ್ತಮಿತ್ರ ಸಿನಿಮಾದ 'ನಾಗವಲ್ಲಿ' ಸೌಂದರ್ಯ ಪ್ರಿಯಕರ ಡಾನ್ಸರ್‌ ರಾಮನಾಥ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ ‘ಡಾನ್ಸಿಂಗ್ ಪ್ರಿನ್ಸ್’?
Recommended image2
ಸಿಂಪಲ್ ಸೀರೆಯಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸೋ 200 ರೂ.ಗೆ ಸಿಗುವ ಕಿವಿಯೋಲೆಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved