MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Chandramohan & Vanisri: 'ಗೆಳತಿ ಪಾತ್ರ ಮಾಡುವ ಆಕೆ ನನಗೆ ನಾಯಕಿಯೇ?' ಚಂದ್ರಮೋಹನ್ ಕೀಳಾಗಿ ಕಂಡಿದ್ದ ಆ ನಟಿಯೇ ಚಿತ್ರರಂಗ ಅಗ್ರ ನಟಿಯಾಗಿ ಮೆರೆದಳು!

Chandramohan & Vanisri: 'ಗೆಳತಿ ಪಾತ್ರ ಮಾಡುವ ಆಕೆ ನನಗೆ ನಾಯಕಿಯೇ?' ಚಂದ್ರಮೋಹನ್ ಕೀಳಾಗಿ ಕಂಡಿದ್ದ ಆ ನಟಿಯೇ ಚಿತ್ರರಂಗ ಅಗ್ರ ನಟಿಯಾಗಿ ಮೆರೆದಳು!

50 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಟರಾಗಿ ಮೆರೆದ ಚಂದ್ರಮೋಹನ್, ಒಬ್ಬ ಖ್ಯಾತ ನಟಿಯನ್ನು ಅವಮಾನಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

2 Min read
Ravi Janekal
Published : Jun 15 2025, 07:12 PM IST| Updated : Jun 15 2025, 07:16 PM IST
Share this Photo Gallery
  • FB
  • TW
  • Linkdin
  • Whatsapp
15
ಸೂಪರ್ ಹಿಟ್ ಮೂವಿ ಮೂಲಕ ಎಂಟ್ರಿ
Image Credit : Youtube

ಸೂಪರ್ ಹಿಟ್ ಮೂವಿ ಮೂಲಕ ಎಂಟ್ರಿ

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟ ಚಂದ್ರಮೋಹನ್. ನಾಯಕನಾಗಿ, ಪೋಷಕ ನಟರಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. 1996 ರಲ್ಲಿ ಬಿ.ಎನ್.ರೆಡ್ಡಿ ನಿರ್ದೇಶನದ 'ರಂಗುಲ ರತ್ನಂ(Rangularatnam)' ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ತಮ್ಮ ಮೊದಲ ಚಿತ್ರದಲ್ಲೇ ಚಂದ್ರಮೋಹನ್ ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

25
ನಾಯಕಿಯರಿಗೆ ಚಂದ್ರಮೋಹನ್ ಸೆಂಟಿಮೆಂಟ್
Image Credit : our own

ನಾಯಕಿಯರಿಗೆ ಚಂದ್ರಮೋಹನ್ ಸೆಂಟಿಮೆಂಟ್

ಆಗ ಚಂದ್ರಮೋಹನ್ ಬಗ್ಗೆ ಚಿತ್ರರಂಗದಲ್ಲಿ ಒಂದು ಗುಸುಗುಸು ಜೋರಾಗಿತ್ತು. ಹೊಸ ನಾಯಕಿಯರು ಚಂದ್ರಮೋಹನ್ ಜೊತೆ ನಟಿಸಿದರೆ, ಆಮೇಲೆ ಅವರು ದೊಡ್ಡ ನಟಿಯರಾಗುತ್ತಾರೆ ಎಂಬುದು ಆ ಗುಸುಗುಸು. ವಾಣಿಶ್ರೀ, ಶ್ರೀದೇವಿ, ಜಯಸುಧಾ, ವಿಜಯಶಾಂತಿ, ರಾಧಾ ಹೀಗೆ ಹಲವು ನಟಿಯರ ವಿಷಯದಲ್ಲಿ ಚಂದ್ರಮೋಹನ್ ಸೆಂಟಿಮೆಂಟ್ ವರ್ಕೌಟ್ ಆಗಿದೆ. ಒಂದು ಸಂದರ್ಶನದಲ್ಲಿ ಚಂದ್ರಮೋಹನ್ ಮಾತನಾಡಿ, 'ಆ ಸೆಂಟಿಮೆಂಟ್ ನಿಜ, ಆದರೆ ಹಲವು ನಟಿಯರ ವಿಷಯದಲ್ಲಿ ಅದು ಹೇಗೆ ಅಷ್ಟು ಅದ್ಭುತವಾಗಿ ನಡೆಯಿತು ಎಂದು ನನಗೂ ಗೊತ್ತಿಲ್ಲ. ನಟಿಯರೇ ನನ್ನ ಬಳಿ ಬಂದು, ನಿಮ್ಮ ಜೊತೆ ನಟಿಸಿದ್ದರಿಂದಲೇ ಸ್ಟಾರ್ ಆದೆವು ಎಂದು ಹೇಳುತ್ತಿದ್ದರು.

Related Articles

Related image1
'ನಮ್ಮ ಹೊಸ ಎಪಿಸೋಡ್ ಶುರುವಾಗಿದೆ' ತಾಯಿಯಾಗಲು ಸಜ್ಜಾದ ಈ ನಟಿ ಯಾರು?
Related image2
ಪುಷ್ಪ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌ಗೆ ಹೋಗಿದ್ದ ಶೆಕಾವತ್ ಪಾತ್ರ ಮಿಸ್ ಮಾಡ್ಕೊಂಡ ನಟ ಯಾರು?
35
ಚಂದ್ರಮೋಹನ್ ಜೊತೆ ನಾಯಕಿಯಾಗಿ ವಾಣಿಶ್ರೀ
Image Credit : Social Media

ಚಂದ್ರಮೋಹನ್ ಜೊತೆ ನಾಯಕಿಯಾಗಿ ವಾಣಿಶ್ರೀ

ಖ್ಯಾತ ನಟಿ ವಾಣಿಶ್ರೀ ಬಗ್ಗೆ ನಡೆದ ಒಂದು ಘಟನೆಯನ್ನು ಚಂದ್ರಮೋಹನ್ ಬಹಿರಂಗಪಡಿಸಿದ್ದಾರೆ. 'ರಂಗುಲರತ್ನಂ' ಚಿತ್ರದಲ್ಲಿ ವಾಣಿಶ್ರೀ ನಾಯಕಿಯಾಗಿ ನಟಿಸಿದ್ದರು. ಆದರೆ ಆಕೆಯನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಮೊದಲು ಚಂದ್ರಮೋಹನ್ ಒಪ್ಪಿರಲಿಲ್ಲವಂತೆ. ಯಾಕೆಂದರೆ ಅಲ್ಲಿಯವರೆಗೆ ವಾಣಿಶ್ರೀ ಕೆಲವು ಚಿತ್ರಗಳಲ್ಲಿ ನಾಯಕಿಯ ಪಕ್ಕದಲ್ಲಿ ಗೆಳತಿ ಪಾತ್ರಗಳು, ಸಣ್ಣಪುಟ್ಟ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದರಂತೆ.

45
ಆಕೆಯನ್ನು ಕೀಳಾಗಿ ಕಂಡ ಚಂದ್ರಮೋಹನ್
Image Credit : our own

ಆಕೆಯನ್ನು ಕೀಳಾಗಿ ಕಂಡ ಚಂದ್ರಮೋಹನ್

ಹೀಗಾಗಿ, 'ಗೆಳತಿ ಪಾತ್ರ ಮಾಡುವ ಹುಡುಗಿ ನನಗೆ ನಾಯಕಿ ಏನು.. ಆಕೆಯನ್ನು ಬದಲಾಯಿಸಿ' ಎಂದು ಚಂದ್ರಮೋಹನ್ ನಿರ್ದೇಶಕ ಬಿ.ಎನ್.ರೆಡ್ಡಿಯವರನ್ನು ಕೇಳಿದರಂತೆ. 'ಆಕೆಯ ಪಕ್ಕದಲ್ಲಿ ನಟಿಸಿದರೆ ಮೊದಲ ಚಿತ್ರದಲ್ಲೇ ನನಗೆ ಕೆಟ್ಟ ಹೆಸರು ಬರುತ್ತದೆ' ಎಂದರಂತೆ. ಆಗ ಬಿ.ಎನ್.ರೆಡ್ಡಿ ನೀಡಿದ ಉತ್ತರ ತನಗೆ ಆಶ್ಚರ್ಯ ತಂದಿತು ಎಂದು,  ಅವರು ಹೇಳಿದ ಮಾತುಗಳೇ ಆಮೇಲೆ ನಿಜವಾದವು ಎಂದು ಚಂದ್ರಮೋಹನ್ ಹೇಳಿದ್ದಾರೆ.

 'ವಾಣಿಶ್ರೀಯನ್ನು ಕಡಿಮೆ ಅಂದಾಜು ಮಾಡುತ್ತಿದ್ದೀಯಾ.. ಒಂದು ದಿನ ಚಿತ್ರರಂಗವನ್ನೇ ಆಳುತ್ತಾಳೆ ನೋಡು' ಎಂದು ಬಿ.ಎನ್.ರೆಡ್ಡಿ ಹೇಳಿದರಂತೆ.

55
ಚಿತ್ರರಂಗವನ್ನಾಳಿದ ವಾಣಿಶ್ರೀ
Image Credit : our own

ಚಿತ್ರರಂಗವನ್ನಾಳಿದ ವಾಣಿಶ್ರೀ

ಅನಂತರ ವಾಣಿಶ್ರೀ ಹತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಅಗ್ರ ನಟಿಯಾಗಿ ಮೆರೆದರು. ಬಿ.ಎನ್.ರೆಡ್ಡಿ ಮಾತುಗಳೇ ನಿಜವಾದವು ಎಂದು ಚಂದ್ರಮೋಹನ್ ಹೇಳಿದ್ದಾರೆ. ತಮ್ಮ ವೃತ್ತಿಜೀವನದ ಅತ್ಯುತ್ತಮ ಚಿತ್ರ ಎಂದರೆ 'ರಂಗುಲರತ್ನಂ' ಎಂದು ಚಂದ್ರಮೋಹನ್ ಹೇಳಿದ್ದಾರೆ. ಅನಂತರವೂ ಹಲವು ಅದ್ಭುತ ಚಿತ್ರಗಳನ್ನು ಮಾಡಿದ್ದೇನೆ. ಆದರೆ 'ರಂಗುಲರತ್ನಂ' ಚಿತ್ರದಲ್ಲಿ ನಟಿಸಿದಾಗ ಹಲವರು ನನ್ನನ್ನು ಮೆಚ್ಚಿಕೊಂಡರು. ಹೊಸ ಹುಡುಗನಂತೆ ನಟಿಸಲಿಲ್ಲ. ಅನುಭವಿ ನಟನಂತೆ ನಟಿಸಿದ್ದೀಯ ಎಂದು ಶ್ಲಾಘಿಸಿದರು ಎಂದು ಚಂದ್ರಮೋಹನ್ ಸ್ಮರಿಸಿಕೊಂಡಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ 'ರಂಗುಲರತ್ನಂ' ನಂತರ 'ರಾಧಾಕಲ್ಯಾಣಂ', 'ಸೀತಾಮಹಾಲಕ್ಷ್ಮಿ', 'ಶುಭೋದಯಂ' ಸೇರಿ ಹಲವು ಚಿತ್ರಗಳು ಅತ್ಯುತ್ತಮ ಚಿತ್ರಗಳು ಎಂದು ಚಂದ್ರಮೋಹನ್ ಹೇಳಿದ್ದಾರೆ. 'Padaharella Vayasu' ಚಿತ್ರಕ್ಕೆ ಚಂದ್ರಮೋಹನ್ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿತು.

ಚಂದ್ರಮೋಹನ್ 50 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಟರಾಗಿ ಮೆರೆದರು. ಕೊನೆಯದಾಗಿ 'ದುವ್ವಾಡ ಜಗನ್ನಾಥಂ', 'ಗೌತಮ ನಂದಾ', 'ಆಕ್ಸಿಜನ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2023 ರಲ್ಲಿ ಅನಾರೋಗ್ಯದ ಕಾರಣದಿಂದ ನಿಧನರಾದರು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಟಾಲಿವುಡ್
ಸಿನಿಮಾ
ಮನರಂಜನಾ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved