MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಅಪ್ಪನ ಸಾಲ, ಅಮ್ಮನ ಅನಾರೋಗ್ಯ, ಜಯಾ ಬಚ್ಚನ್ ರಿಂದ ಹಸನಾಯ್ತು ನಟನ ಬದುಕು

ಅಪ್ಪನ ಸಾಲ, ಅಮ್ಮನ ಅನಾರೋಗ್ಯ, ಜಯಾ ಬಚ್ಚನ್ ರಿಂದ ಹಸನಾಯ್ತು ನಟನ ಬದುಕು

ಸಿನಿಮಾಗಳಲ್ಲಿ ಎಲ್ಲರನ್ನು ನಗಸ್ತಾ, ವೀಕ್ಷಕರಿಗೆ ಮನರಂಜನೆ ನೀಡುವ ಕಲಾವಿದರು ಆರ್ಥಿಕ ಸಂಕಷ್ಟ, ಅನಾರೋಗ್ಯ ಸೇರಿದಂತೆ ಅನೇಕ ಸವಾಲು, ಸಮಸ್ಯೆಗಳನ್ನು ಎದುರಿಸ್ತಿರ್ತಾರೆ. ಹಿಂದಿ ಸಿನಿಮಾ ಕಲಾವಿದನ ಕಥೆ ಕೂಡ ಇದಕ್ಕೆ ಭಿನ್ನವಾಗಿಲ್ಲ. ಬಾಲ್ಯದಲ್ಲಿಯೇ ನೋವು ಕಂಡ ನಟನಿಗೆ ಆಸರೆಯಾಗಿದ್ದು ಜಯಾ ಬಚ್ಚನ್. 

2 Min read
Author : Roopa Hegde
Published : Apr 20 2026, 11:40 AM IST
Share this Photo Gallery
  • FB
  • TW
  • Linkdin
  • Whatsapp
15
ಜಯಾ ಬಚ್ಚನ್
Image Credit : Asianet News

ಜಯಾ ಬಚ್ಚನ್

ಜಯಾ ಬಚ್ಚನ್ ಅಂದ ತಕ್ಷಣ ನೆನಪಾಗೋದು ಅವರ ಮುಂಗೋಪಿ. ಪಾಪರಾಜಿಗಳ ಮೇಲೆ ಸದಾ ಸಿಡಿಮಿಡಿಗೊಳ್ಳುವ ಜಯಾ ಬಚ್ಚನ್ ಅವರನ್ನು ಎಲ್ಲರೂ ವಿಲನ್ ರೀತಿ ನೋಡ್ತಾರೆ. ಆದ್ರೆ ಜಯಾ ಬಚ್ಚನ್ ಅನೇಕ ಕಲಾವಿದರಿಗೆ ನೆರವಾಗಿದ್ದಾರೆ. ಸ್ಪೂರ್ತಿದಾಯಕ ಕೆಲ್ಸ ಮಾಡಿದ್ದಾರೆ. ಅದ್ರಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ನಟ ಕೂಡ ಸೇರಿದ್ದಾರೆ.

25
ಬಾಲ್ಯದಿಂದಲೇ ನೋವು
Image Credit : Asianet News

ಬಾಲ್ಯದಿಂದಲೇ ನೋವು

ಮುನ್ನಾಭಾಯಿ ಎಂಬಿಬಿಎಸ್ ನಲ್ಲಿ ಸರ್ಕ್ಯೂಟ್ ಆಗಿ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ, ಗೋಲ್ಮಾಲ್ ಸರಣಿಯಲ್ಲಿ ಮಾಧವ್ ಆಗಿ ಕಾಣಿಸಿಕೊಂಡಿರುವ ಅರ್ಷದ್ ವಾರ್ಸಿಯವರ ಹಾಸ್ಯ ಪ್ರತಿಭೆಗೆ ಸಾಟಿಯಿಲ್ಲ. ಆದ್ರೆ ಅರ್ಷದ್ ವಾರ್ಸಿ ಜೀವನ ಇಷ್ಟು ಆನಂದವಾಗಿರಲಿಲ್ಲ. ಏಪ್ರಿಲ್ 19 ರಂದು ಮುಂಬೈನಲ್ಲಿ ಜನಿಸಿದ ಅರ್ಷದ್ ವಾರ್ಸಿಗೆ ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಸಾಧಿಸುವುದು ಸುಲಭವಿರಲಿಲ್ಲ. ನಟನಾ ಜಗತ್ತಿಗೆ ಪ್ರವೇಶಿಸ್ತೇನೆ ಅಂತ ಅವರು ಕಲ್ಪಿಸಿಕೊಂಡಿರಲಿಲ್ಲ. ಆದ್ರೆ ಅವರ ಹಣೆಬಹರ ಬದಲಾಯ್ತು. ಎಲ್ಲ ಕಷ್ಟಗಳು ದೂರವಾಯ್ತು.

Related Articles

Related image1
ನಂದಗೋಕುಲದಲ್ಲಿ ಮಹಾ ಬಿರುಕು: ಅತಿಯಾಗಿ ಆಡ್ತಿದ್ದ ಹಿತ್ತಾಳೆ ಕಿವಿ ನಂದನಿಗೆ ಬಿಗ್ ಶಾಕ್!
Related image2
Bad Boy Karthik: 30 ಕೋಟಿ ಬಜೆಟ್, ಟೀ ಖರ್ಚಿಗೂ ದುಡ್ಡು ಬರಲಿಲ್ವಾ? ನಾಗಶೌರ್ಯ ಸಿನಿಮಾಗೆ ಹೀನಾಯ ಸೋಲು!
35
ಅನಾರೋಗ್ಯದ ತಾಯಿ
Image Credit : Asianet News

ಅನಾರೋಗ್ಯದ ತಾಯಿ

ಅರ್ಷದ್ ವಾರ್ಸಿ ತಂದೆ ಸಾಕಷ್ಟು ಸಾಲ ಮಾಡಿದ್ದರು. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಸಣ್ಣವರಿರುವಾಗ್ಲೇ ಮನೆ ಜವಾಬ್ದಾರಿ ಅರ್ಷದ್ ವಾರ್ಸಿ ತಲೆ ಮೇಲೆ ಬಂತು. ಆಗ ಅರ್ಷದ್ ವಾರ್ಸಿ ನೃತ್ಯ ಸಂಯೋಜಕರಾಗಿ ಕೆಲ್ಸ ಮಾಡ್ತಿದ್ದರು. ಬರ್ತಿದ್ದ ಹಣ ಅಮ್ಮನ ಚಿಕಿತ್ಸೆಗೆ ಸಾಲ್ತಿರಲಿಲ್ಲ. ಈ ದಿನ ಬಂದ ಹಣ ಮರುದಿನ ಅಮ್ಮನ ಡಯಾಲಿಸಿಸ್ ಗೆ ಖರ್ಚಾಗ್ತಿತ್ತು. ಇದೊಂದು ಜೀವನವಾ ಎನ್ನುವಷ್ಟು ಅರ್ಷದ್ ವಾರ್ಸಿ ನೊಂದಿದ್ದರು.

45
ಪಾಲಕರ ನಿಧನ
Image Credit : Asianet News

ಪಾಲಕರ ನಿಧನ

ಎಲ್ಲರ ಮಧ್ಯೆ ಅರ್ಷದ್ ವಾರ್ಸಿ, ಪಾಲಕರನ್ನು ಕಳೆದುಕೊಂಡು ಸಂಪೂರ್ಣ ಒಂಟಿಯಾದ್ರು. ಅರ್ಷದ್ ವಾರ್ಸಿ ಬಾಲ್ಯದಲ್ಲಿ ರೆಸಿಡೆನ್ಸಿ ಸ್ಕೂಲಿನಲ್ಲಿ ಓದಿದ್ದರಿಂದ ಅವರಿಗೆ ಅಪ್ಪ- ಅಮ್ಮನ ಮೇಲೆ ಅಷ್ಟೊಂದು ಒಡನಾಟ ಇರ್ಲಿಲ್ಲ. ಆದ್ರೆ ಅಪ್ಪ ಅಮ್ಮ ಹೋದ್ಮೇಲೆ ಅರ್ಷದ್ ವಾರ್ಸಿ ಕೇಳೋರೇ ಇರ್ಲಿಲ್ಲ. ಒಂಟಿಯಾಗಿದ್ದ ಅರ್ಷದ್, ತಮಗೆ ತಾವೇ ಪತ್ರಗಳನ್ನು ಬರೆದುಕೊಳ್ತಿದ್ದರು. ಸ್ನೇಹಿತರ ಹೆಸರಿನಲ್ಲಿ ಪೋಸ್ಟ್ ಮಾಡಿಕೊಳ್ತಿದ್ದರು.

55
ನೆರವಿಗೆ ಬಂದ ಜಯಾ ಬಚ್ಚನ್
Image Credit : Asianet News

ನೆರವಿಗೆ ಬಂದ ಜಯಾ ಬಚ್ಚನ್

ಅರ್ಷದ್ ವಾರ್ಸಿ ಇಷ್ಟಾದ್ರೂ ಸೋಲಲಿಲ್ಲ. ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದ್ದರು. ಅವರಿಗೆ ಜಯಾ ಬಚ್ಚನ್ ನೆರವಾದ್ರು. ನಟಿ ಜಯಾ ಬಚ್ಚನ್ ಸಹಾಯದಿಂದ ಅರ್ಷದ್ ವಾರ್ಸಿ ಸಿನಿಮಾಕ್ಕೆ ಎಂಟ್ರಿ ಪಡೆದುಕೊಂಡ್ರು. ಅವರ ಮೊದಲ ಸಿನಿಮಾ ತೇರೆ ಮೇರೆ ಸಪ್ನೆ. ಅಮಿತಾಬ್ ಬಚ್ಚನ್ ಅವರ ಎಬಿಸಿಎಲ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತೆರೆಗೆ ಬಂತು. ನಂತರ ಅರ್ಷದ್ ಬೇತಾಬಿ, ಮೇರೆ ದೋ ಅನ್ಮೋಲ್ ರತ್ನ, ಹೀರೋ ಹಿಂದೂಸ್ತಾನಿ ಸಿನಿಮಾಗಳಲ್ಲಿ ನಟಿಸಿದ್ರು. ಆದ್ರೆ ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟ ಸಿನಿಮಾ ಮುನ್ನಾ ಭಾಯಿ ಎಂಬಿಬಿಎಸ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಬಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Bad Boy Karthik: 30 ಕೋಟಿ ಬಜೆಟ್, ಟೀ ಖರ್ಚಿಗೂ ದುಡ್ಡು ಬರಲಿಲ್ವಾ? ನಾಗಶೌರ್ಯ ಸಿನಿಮಾಗೆ ಹೀನಾಯ ಸೋಲು!
Recommended image2
ದುಡ್ಡಿಗಾಗಿ ವಲ್ಗರ್ ಫೋಟೋಸ್ ಹಾಕಲ್ಲ, ಸಮಾಜಸೇವೆಗೆ ಬಳಸುವೆ: ನಟಿ ಅನನ್ಯ ನಾಗಲ್ಲ ಸ್ಪಷ್ಟನೆ
Recommended image3
ಆ ಸಾಂಗ್ ಹಾಡಿದ ಮೇಲೆ ಎಸ್‌ಪಿಬಿ ಮಾಡಿದ್ದೇನು? ಇಳಯರಾಜಾ ಮ್ಯಾಜಿಕ್‌ಗೆ ಮುತ್ತಿಟ್ಟ ಗಾನ ಗಂಧರ್ವ!
Related Stories
Recommended image1
ನಂದಗೋಕುಲದಲ್ಲಿ ಮಹಾ ಬಿರುಕು: ಅತಿಯಾಗಿ ಆಡ್ತಿದ್ದ ಹಿತ್ತಾಳೆ ಕಿವಿ ನಂದನಿಗೆ ಬಿಗ್ ಶಾಕ್!
Recommended image2
Bad Boy Karthik: 30 ಕೋಟಿ ಬಜೆಟ್, ಟೀ ಖರ್ಚಿಗೂ ದುಡ್ಡು ಬರಲಿಲ್ವಾ? ನಾಗಶೌರ್ಯ ಸಿನಿಮಾಗೆ ಹೀನಾಯ ಸೋಲು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved