MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Aryan Khan: ಮಗನಿಗಾಗಿ ಶಾರೂಖ್‌ ತೆಗೆದು ಕೊಂಡಿರುವ ದೊಡ್ಡ ನಿರ್ಧಾರ ಏನು ಗೊತ್ತಾ?

Aryan Khan: ಮಗನಿಗಾಗಿ ಶಾರೂಖ್‌ ತೆಗೆದು ಕೊಂಡಿರುವ ದೊಡ್ಡ ನಿರ್ಧಾರ ಏನು ಗೊತ್ತಾ?

ಕ್ರೂಸ್ ಡ್ರಗ್ (Drug) ಪ್ರಕರಣದಲ್ಲಿ ಶಾರುಖ್ ಖಾನ್ (Sharh Rukh Khan) ಪುತ್ರ ಆರ್ಯನ್ ಖಾನ್ (Aryan Khan) ಸಿಕ್ಕಿಬಿದ್ದ  ಆಘಾತದಿಂದ ಹೊರಬರಲು ಇನ್ನೂ ಖಾನ್ ಕುಟುಂಬಕ್ಕೆ ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ, ಆರ್ಯನ್ ತುಂಬಾ ಭಯಗೊಂಡಿದ್ದಾರೆ, ಅವರು ಮಾತನಾಡುವುದನ್ನು ಮತ್ತು ಸ್ನೇಹಿತರನ್ನು ಭೇಟಿಯಾಗುವುದನ್ನು ನಿಲ್ಲಿಸಿದ್ದಾರೆ. ಅವರು ಮನೆಯಲ್ಲಿ ಮೌನವಾಗಿ ಕುಳಿತುಕೊಳ್ಳುತ್ತಾರೆ. ಮಗನ ಸ್ಥಿತಿ ನೋಡಿ ಶಾರುಖ್ ಮತ್ತು ಗೌರಿ ಖಾನ್ ತುಂಬಾ ನೊಂದಿದ್ದಾರೆ. ಆದರೆ, ಮಗನ ವಿಚಾರದಲ್ಲಿ ಕೊಂಚ ಎಚ್ಚರಿಕೆಯನ್ನೂ ವಹಿಸಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದು ಬಯಸುತ್ತಾರೆ. ಈ ನಡುವೆ ಶಾರುಖ್ ಮಗನ ಸಲುವಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಏನದು? ಕೆಳಗೆ ಓದಿ. 

2 Min read
Author : Suvarna News
Published : Nov 14 2021, 04:29 PM IST
Share this Photo Gallery
  • FB
  • TW
  • Linkdin
  • Whatsapp
19

ವರದಿಗಳ ಪ್ರಕಾರ ಶಾರುಖ್ ಖಾನ್ ತಮ್ಮ ಮುಂಬರುವ ಪ್ರಾಜೆಕ್ಟ್‌ಗಳಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ ಮತ್ತು ಅವರ ಮಗನೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದು ನವೆಂಬರ್ ಕೊನೆಯ ವಾರದಲ್ಲಿ ಅವರು ತಮ್ಮ ಕೆಲಸಕ್ಕೆ ಮರಳುತ್ತಾರೆ.

29

ಈ ನಡುವೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಗ್ಗೆ ಚಿಂತಿತರಾಗಿದ್ದಾರೆ. ಈ ಹಿಂದೆ ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್‌ಗಾಗಿ ಹೊಸ ಅಂಗರಕ್ಷಕನನ್ನು ಹುಡುಕುತ್ತಿದ್ದಾರೆ ಎಂಬ ಸುದ್ದಿ ಇತ್ತು ಆದರೆ ಈಗ ಅವರು  ದೊಡ್ಡ  ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. 

39

ಇತ್ತೀಚಿನ ವರದಿಗಳ ಪ್ರಕಾರ, ಶಾರುಖ್ ಖಾನ್ ತಮ್ಮ ಮಗನಿಗಾಗಿ ತಮ್ಮ ಬಾಡಿಗಾರ್ಡ್‌ ರವಿ ಸಿಂಗ್ ಅವರನ್ನು ನೀಡಿದ್ದಾರೆ ಮತ್ತು ಅವರಿಗಾಗಿ ಹೊಸ ಅಂಗರಕ್ಷಕನನ್ನು ಹುಡುಕುತ್ತಿದ್ದಾರೆ. ಆರ್ಯನ್ ಯಾವುದೇ ಹೊಸ ಅಂಗರಕ್ಷಕನೊಂದಿಗೆ  ಕಂಫರ್ಟಬಲ್‌ ಅಗಿಲ್ಲ. ಆದ್ದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡರು

49

ಅಕ್ಟೋಬರ್ 2 ರಂದು ಡ್ರಗ್ಸ್‌ಗಾಗಿ ಆರ್ಯನ್ ಅವರನ್ನು ಎನ್‌ಸಿಬಿ ಕಸ್ಟಡಿಗೆ ತೆಗೆದುಕೊಂಡಿತ್ತು ಮತ್ತು ಅಕ್ಟೋಬರ್ 8 ರಂದು ಅವರನ್ನು ಆರ್ಥರ್ ರೋಟ್‌ ಜೈಲಿಗೆ ಕಳುಹಿಸಲಾಯಿತು. ಮಗನನ್ನು ಜೈಲಿನಿಂದ ಹೊರತರಲು  ಶಾರುಖ್ ಹಲವು ಪ್ರಯತ್ನಗಳನ್ನು ಮಾಡಿ ಕೊನೆಗೂ ಜಾಮೀನು ಪಡೆದರು.

59

ಇದೀಗ ಆರ್ಯನ್ ಜೈಲಿನಿಂದ ಹೊರಬಂದ ನಂತರ ಶಾರುಖ್  ಖಾನ್ ಮತ್ತು ಗೌರಿ ತಮ್ಮ ಪುತ್ರ ಆರ್ಯನ್ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ

 


 

69

ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಮಗ ಆರ್ಯನ್‌ ಅವರಿಗೆ ಸಂಬಂಧಿಸಿದ ಎಲ್ಲಾ ಮಾಧ್ಯಮ ಪ್ರಸಾರದಿಂದ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಂಡರು ಮತ್ತು ಮಾಧ್ಯಮಗಳಲ್ಲಿ ಆರ್ಯನ್ ಅವರ ಬಗ್ಗೆ ಹೇಳಿರುವ ಅಥವಾ ಬರೆದ ವಿಷಯಗಳ ಬಗ್ಗೆ  ಅವರು ತಲೆಕೆಡಿಸಿಕೊಳ್ಳಲು ಬಯಸುವುದಿಲ್ಲ ಎಂಬ ವಿಷಯವನ್ನು ಖಾನ್ ಅವರ ಅಪ್ತ ಮೂಲವು ತಿಳಿಸಿದೆ ಏಂದು ವರದಿಗಳು ಹೇಳಲಾಗಿದೆ.

79

ಆರ್ಯನ್ ಖಾನ್  ವರ ಸ್ನೇಹಿತರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಶಾರುಖ್ ಮತ್ತು ಗೌರಿ ತಮ್ಮ ಸ್ನೇಹಿತರನ್ನು ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಫೋನ್ ಮೂಲಕ ಸಂಪರ್ಕಿಸಿದವರನ್ನು ನಿಕಟವಾಗಿ ಗಮನಿಸುತ್ತಾರೆ. ತಮಗೆ ಸಣ್ಣದೊಂದು ತೊಂದರೆಯನ್ನೂ ಉಂಟು ಮಾಡುವ ಜನರೊಂದಿಗೆ ಆರ್ಯನ್ ಇರುವುದನ್ನು ಅವರು ಬಯಸುತ್ತಿಲ್ಲ.

89

ಶಾರುಖ್ ಮತ್ತು ಗೌರಿ ಅವರು ಆರ್ಯನ್ ಅನ್ನು ದೀರ್ಘಕಾಲದವರೆಗೆ ಸಾರ್ವಜನಿಕ ಪ್ರದರ್ಶನದಿಂದ ದೂರವಿರಿಸಲು ನಿರ್ಧರಿಸಿದ್ದಾರೆ. ಅಂದರೆ ಆರ್ಯನ್ ಇನ್ನು ಬಹಳ ದಿನ ಮನೆಯಲ್ಲಿ ಇರುತ್ತಾರೆ. ಆರ್ಯನ್ ಲಂಡನ್‌ನ ಸೆವೆನ್ ಓಕ್ಸ್ ಶಾಲೆಯಿಂದ 12ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದಾರೆ.

99

ಮೊದಲು ಅವರು ಮುಂಬೈನ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಓದುತ್ತಿದ್ದರು. ಅವರು 2020 ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್, ಸಿನಿಮಾಟಿಕ್ ಆರ್ಟ್ಸ್, ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್, ಸ್ಕೂಲ್ ಆಫ್ ಸಿನಿಮಾಟಿಕ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ.


 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಶಾರುಖ್ ಖಾನ್
ಆರ್ಯನ್ ಖಾನ್

Latest Videos
Recommended Stories
Recommended image1
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
Recommended image2
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ
Recommended image3
ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved