MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ನಟಿ ಸುಕನ್ಯಾಗೆ 10 ಲಕ್ಷ ರೂ ಪರಿಹಾರ ನೀಡಿ, ಖಾಸಗಿ ಟಿವಿ ಚಾನೆಲ್‌‌ಗೆ ಹೈಕೋರ್ಟ್ ಆದೇಶ ನೀಡಿದ್ದೇಕೆ?

ನಟಿ ಸುಕನ್ಯಾಗೆ 10 ಲಕ್ಷ ರೂ ಪರಿಹಾರ ನೀಡಿ, ಖಾಸಗಿ ಟಿವಿ ಚಾನೆಲ್‌‌ಗೆ ಹೈಕೋರ್ಟ್ ಆದೇಶ ನೀಡಿದ್ದೇಕೆ?

ನಟಿ ಸುಕನ್ಯ ಘನತೆಕೆ ಧಕ್ಕೆ ತಂದಿರುವ ಕಾರಣ ಖಾಸಗಿ ಚಾನೆಲ್ ಪರಿಹಾರ ರೂಪವಾಗಿ 10 ಲಕ್ಷ ರೂ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಇದಕ್ಕೆ ಕಾರಣ ಕಾಡುಗಳ್ಳ ವೀರಪ್ಪನ್ ಸಂದರ್ಶನ, ಏನಿದು ಘಟನೆ?

2 Min read
Author : Chethan Kumar
Published : Jun 06 2026, 03:16 PM IST
Share this Photo Gallery
  • FB
  • TW
  • Linkdin
  • Whatsapp
16
ನಟಿ ಸುಕನ್ಯಾಗೆ 10 ಲಕ್ಷ ರೂ ಪರಿಹಾರ
Image Credit : Actress Sukanya

ನಟಿ ಸುಕನ್ಯಾಗೆ 10 ಲಕ್ಷ ರೂ ಪರಿಹಾರ

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಯಾಗಿ ಭಾರಿ ಜನಪ್ರಿಯತೆ ಪಡೆದಿದ್ದ ನಟಿ ಸುಕನ್ಯಾ ಪರವಾಗಿ ಇದೀಗ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ಚಾನೆಲ್ ಪರಿಹಾರ ರೂಪವಾಗಿ 10 ಲಕ್ಷ ರೂಪಾಯಿ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಇದಕ್ಕೆ ಕಾರಣವಾಗಿದ್ದು ಖಾಸಗಿ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ಕಾಡುಗಳ್ಳ ವೀರಪ್ಪನ್ ಸಂದರ್ಶನ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏನಿದು ಘಟನೆ?
Image Credit : stockPhoto

ಏನಿದು ಘಟನೆ?

ನಟಿ ಸುಕನ್ಯ ಅತ್ಯಂತ ಜನಪ್ರಿಯ ನಟಿಯಾಗಿ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದ ವೇಳೆ ಕೋಲಾಹಲ ಸೃಷ್ಟಿಯಾಗಿತ್ತು. ಖಾಸಗಿ ಟಿವಿ ಚಾನೆಲ್ ಸನ್ ಟಿವಿ ಕಾಡುಗಳ್ಳ ವೀರಪ್ಪನ್ ಸಂದರ್ಶನ ಪ್ರಸಾರವಾಗಿತ್ತು. ನಕ್ಕೀರನ್ ಗೋಪಾಲನ್ ದಂತಚೋರ ವೀರಪ್ಪನ್ ಸಂದರ್ಶನ ಮಾಡಿದ್ದರು. ಈ ಸಂದರ್ಶನವನ್ನು ಸನ್ ಟಿವಿ ಪ್ರಸಾರ ಮಾಡಿತ್ತು. ಇದೇ ಸಂದರ್ಶನದಿಂದ ಕೋಲಾಹಲ ಸೃಷ್ಟಿಯಾಗಿತ್ತು. ನಟಿ ಸುಕನ್ಯಾ ಕೋರ್ಟ್ ಮೊರೆ ಹೋಗಿದ್ದರು.

Related Articles

Related image1
25 ಲಕ್ಷ ರೂಪಾಯಿ ಕಾರ್ ಖರೀದಿ ಹಿಂದೆ Oyo ರೂಮ್ ಕಥೆ ಇದೆಯಾ? ಕೊನೆಗೂ ಮೌನ ಮುರಿದ Sonu Srinivas Gowda
Related image2
ತಲೆ ಗಿರ ಗಿರ ಮಾಡಿದ ಅಮೃತಧಾರೆ ಕಥೆ; ಕೆಡಿ ಜೈದೇವ್‌ ಸಂಚಿಗೆ ಭೂಮಿಕಾ-ಗೌತಮ್‌ ಶಾಕ್!
36
ಕಾಡುಗಳ್ಳ ವೀರಪ್ಪನ್ ಸಂದರ್ಶನಕ್ಕೂ ನಟಿ ಸುಕನ್ಯಾ ಕೇಸ್‌ಗೂ ಏನು ಸಂಬಂಧ?
Image Credit : Actress R Sukanya

ಕಾಡುಗಳ್ಳ ವೀರಪ್ಪನ್ ಸಂದರ್ಶನಕ್ಕೂ ನಟಿ ಸುಕನ್ಯಾ ಕೇಸ್‌ಗೂ ಏನು ಸಂಬಂಧ?

ಸನ್ ಟಿವಿ ಈ ಸಂದರ್ಶನವನ್ನು ಪ್ರಸಾರ ಮಾಡಿತ್ತು. ಆದರೆ ಈ ಸಂದರ್ಶನದಲ್ಲಿ ವೀರಪ್ಪನ್ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಪೈಕಿ ನಟಿ ಸುಕನ್ಯಾಗೆ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಪುತ್ರನ ಜೊತೆ ಅಕ್ರಮ ಸಂಬಂಧವಿದೆ. ಇವರ ಕೆಲ ವಿಡಿಯೋಗಳನ್ನು ಮುಂದಿಟ್ಟುಕೊಂಡು 1996ರ ಲೋಕಸಭೆ ಚುನಾವಣೆಯಲ್ಲಿ ಕೆಲ ಡೀಲ್ ನಡೆದಿತ್ತು ಎಂದು ವೀರಪ್ಪನ್ ಆರೋಪಿಸಿದ್ದರು.

46
ಸಂದರ್ಶನ ಪ್ರಸಾರದ ಬೆನ್ನಲ್ಲೇ ಕೋಲಾಹಲ
Image Credit : Actress R Sukanya

ಸಂದರ್ಶನ ಪ್ರಸಾರದ ಬೆನ್ನಲ್ಲೇ ಕೋಲಾಹಲ

ವೀರಪ್ಪನ್ ಸಂದರ್ಶನ ಪ್ರಸಾರದ ಬೆನ್ನಲ್ಲೇ ಕೋಲಾಹಲ ತೀವ್ರಗೊಂಡಿತ್ತು. ನಟಿ ಸುಕನ್ಯಾ ಜನಪ್ರಿಯತೆ, ಮಹಿಳೆಯ ಘನತೆಗೆ ಧಕ್ಕೆಯಾಗಿತ್ತು. ಹೀಗಾಗಿ ನಟಿ ಸುಕನ್ಯಾ ಮಡ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವೀರಪ್ಪನ್ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿ ಅರ್ಜಿ ದಾಖಲಿಸಿದ್ದರು.

56
ಸುದೀರ್ಘ ವಿಚಾರಣೆ
Image Credit : Actress R Sukanya

ಸುದೀರ್ಘ ವಿಚಾರಣೆ

ಕೋರ್ಟ್ ಈ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಬಳಿಕ ಜೂನ್ 5 ರಂದು ಜಸ್ಟೀಸ್ ಕೆ ಕುಮರೇಶ್ ಬಾಬು ನೇತೃತ್ವದ ಪೀಠ ಮಹತ್ವದ ತೀರ್ಪು ನೀಡಿತ್ತು. ನಟಿ ಸುಕನ್ಯಾ ಪರವಾಗಿ ತೀರ್ಪು ನೀಡಿತ್ತು. ನಟಿಯ ಘನಟೆಗೆ ಸನ್ ಟಿವಿ ಧಕ್ಕೆ ತಂದಿದೆ. ಹೀಗಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡಲು ಸನ್ ಟಿವಿಗೆ ಆದೇಶಿಸಿದೆ.

66
ವೀರಪ್ಪನ್ ಹೇಳಿಕೆಯಿಂದ ಸನ್ ಟಿವಿಗೆ ದಂಡ ಯಾಕೆ?
Image Credit : Actress R Sukanya

ವೀರಪ್ಪನ್ ಹೇಳಿಕೆಯಿಂದ ಸನ್ ಟಿವಿಗೆ ದಂಡ ಯಾಕೆ?

ಆದೇಶದಲ್ಲಿ ಕೆಲ ಅಂಶಗಳನ್ನು ಉಲ್ಲೇಖಿಸಲಾಗಿದೆ. ವೀರಪ್ಪನ್ ಸಂದರ್ಶನ ಮೊದಲೇ ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗಿದೆ. ವೀರಪ್ಪನ್ ಗಂಭೀರ ಆರೋಪವನ್ನು ನಟಿ ಮೇಲೆ ಮಾಡಿದ್ದರು. ಈ ಆರೋಪಕ್ಕೆ ಸಾಕ್ಷ್ಯಗಳು ಇದೆಯಾ ಇಲ್ಲವೇ ಅನ್ನೋದು ಪರಿಶೀಲಿಸುವ, ಅಥವಾ ಈ ಹೇಳಿಕೆಯನ್ನು ಎಡಿಟ್ ಮಾಡುವ, ಕತ್ತರಿಸುವ ಸೇರಿದಂತೆ ಎಲ್ಲಾ ಅಕಾಶಗಳು ಸನ್ ಟಿವಿಗೆ ಇತ್ತು. ಆದರೆ ಸನ್ ಟಿವಿ ಯಾವ ಪ್ರಯತ್ನ ಮಾಡದೇ ಪ್ರಸಾರ ಮಾಡಿದೆ. ಹೀಗಾಗಿ ದುಬಾರಿ ದಂಡ ವಿಧಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನಟಿ
ಹೈಕೋರ್ಟ್
ಮನರಂಜನಾ ಸುದ್ದಿ
ಭಾರತ
Latest Videos
Recommended Stories
Recommended image1
ನಯನತಾರಾ ಸಂಸಾರಕ್ಕೆ ಹಳೇ ನಟಿಯ ಎಂಟ್ರಿ; ವಿಘ್ನೇಶ್ ಶಿವನ್ ಬಗ್ಗೆ ಸೋನಾ ಹೇಡನ್ ಬಿಚ್ಚಿಟ್ಟ ಆ ರಹಸ್ಯಗಳೇನು?
Recommended image2
ಮತ್ತೆ ಶುರುವಾಯ್ತು ಕಾವೇರಿ ಕದನ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ತಮಿಳುನಾಡು ಸಿಎಂ ವಿಜಯ್?
Recommended image3
ನಿವೇದಿತಾ ಚಂದನ್ ಈಗ್ಲೂ ಸ್ನೇಹಿತರಾ? ಸ್ಪಷ್ಟನೆ ನೀಡಿದ ರ್ಯಾಪರ್
Related Stories
Recommended image1
25 ಲಕ್ಷ ರೂಪಾಯಿ ಕಾರ್ ಖರೀದಿ ಹಿಂದೆ Oyo ರೂಮ್ ಕಥೆ ಇದೆಯಾ? ಕೊನೆಗೂ ಮೌನ ಮುರಿದ Sonu Srinivas Gowda
Recommended image2
ತಲೆ ಗಿರ ಗಿರ ಮಾಡಿದ ಅಮೃತಧಾರೆ ಕಥೆ; ಕೆಡಿ ಜೈದೇವ್‌ ಸಂಚಿಗೆ ಭೂಮಿಕಾ-ಗೌತಮ್‌ ಶಾಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved