MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮಜ್ಜಿಗೆಗೋಸ್ಕರ 3000 ಎಕರೆ ಜಮೀನು ಬರೆದುಕೊಟ್ಟ ಪ್ರಖ್ಯಾತ ನಟನ ಅಜ್ಜ! ಯಾರದು?

ಮಜ್ಜಿಗೆಗೋಸ್ಕರ 3000 ಎಕರೆ ಜಮೀನು ಬರೆದುಕೊಟ್ಟ ಪ್ರಖ್ಯಾತ ನಟನ ಅಜ್ಜ! ಯಾರದು?

Krishnam Raju Family: ರೆಬೆಲ್ ಸ್ಟಾರ್ ಕೃಷ್ಣರಾಜು ರಾಜಮನೆತನದವರು. ಅವರ ಅಜ್ಜ, ಮೊಗಲ್ತೂರು ಮಹಾರಾಜ, ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರ ಕುಟುಂಬಕ್ಕೆ ಬರೋಬ್ಬರಿ 3000 ಎಕರೆ ಜಮೀನು ಬರೆದುಕೊಟ್ಟಿದ್ದರಂತೆ. ಇದರ ಹಿಂದಿನ ಕಾರಣ ಕೇಳಿದ್ರೆ ನೀವು ಅಚ್ಚರಿಪಡ್ತೀರಾ. ಈ ಬಗ್ಗೆ ಮಾಹಿತಿ ಇಲ್ಲಿದೆ. 

1 Min read
Author : Padmashree Bhat
Published : Mar 08 2026, 03:27 PM IST
Share this Photo Gallery
  • FB
  • TW
  • Linkdin
  • Whatsapp
14
ರಾಜಮನೆತನದ ನಟ
Image Credit : instagram

ರಾಜಮನೆತನದ ನಟ

ಕೃಷ್ಣಂರಾಜು ರಾಜಮನೆತನದವರು. ಅವರ ಹಿಂದಿನ ಹತ್ತು ತಲೆಮಾರುಗಳು ರಾಜರಾಗಿದ್ದರು. ಸುಮಾರು ಒಂಬತ್ತು ಸಂಸ್ಥಾನಗಳನ್ನು ಅವರು ಆಳುತ್ತಿದ್ದರು. ಈ ಸಂಸ್ಥಾನಗಳು ನಿಜಾಂ ನವಾಬರ ಅಧೀನದಲ್ಲಿದ್ದವು. ನಂತರ ರಾಜರ ಕಾಲ ಮುಗಿದು, ಕೃಷ್ಣಂರಾಜು ಕುಟುಂಬ ಎಲ್ಲರೊಂದಿಗೆ ಬೆರೆಯಿತು. ಆದರೆ, ಸಹಾಯ ಮಾಡುವ ಗುಣ ಮಾತ್ರ ಹಾಗೆಯೇ ಉಳಿದುಕೊಂಡಿದೆ.

24
ಸಾವಿರಾರು ಎಕರೆ ಜಮೀನು ಕೊಟ್ರು
Image Credit : Asianet News

ಸಾವಿರಾರು ಎಕರೆ ಜಮೀನು ಕೊಟ್ರು

ಕೃಷ್ಣಂರಾಜು ಹಾಗೂ ಪ್ರಭಾಸ್ ಇಬ್ಬರೂ ಮನೆಗೆ ಬಂದವರಿಗೆ ಭರ್ಜರಿ ಭೋಜನ ನೀಡದೇ ಕಳುಹಿಸುವುದಿಲ್ಲ. ಈ ಗುಣ ಅವರಿಗೆ ವಂಶಪಾರಂಪರ್ಯವಾಗಿ ಬಂದಿದೆ. 

ಇದೇ ಔದಾರ್ಯದ ಗುಣದಿಂದ ಕೃಷ್ಣಂರಾಜು ಅವರ ಅಜ್ಜ, ಸ್ಟಾರ್ ನಿರ್ದೇಶಕರೊಬ್ಬರ ಕುಟುಂಬಕ್ಕೆ ಸಾವಿರಾರು ಎಕರೆ ಜಮೀನು ನೀಡಿದ್ದರು. ಈ ವಿಚಾರವನ್ನು ನಿರ್ದೇಶಕ ರಾಜಾ ವನ್ನೆಂರೆಡ್ಡಿ ಐಡ್ರೀಮ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Related Articles

Related image1
Actor Prabhas: ವಿಗ್‌ ಇಲ್ಲದ ನಟ ಪ್ರಭಾಸ್‌ ಫೋಟೋ‌ ವೈರಲ್!‌ 45ನೇ ವರ್ಷಕ್ಕೆ ಹೀಗಾಯ್ತಾ?
Related image2
ಯಶ್ To ಪ್ರಭಾಸ್‌: 2025ರಲ್ಲಿ ಒಂದೂ ಸಿನಿಮಾ ರಿಲೀಸ್ ಮಾಡದೆ ನಿರಾಸೆ ಮೂಡಿಸಿದ ಟಾಪ್ ಹೀರೋಗಳು!
34
ಅಂದು ಏನಾಯ್ತು?
Image Credit : Asianet News

ಅಂದು ಏನಾಯ್ತು?

ಕೃಷ್ಣಂರಾಜು ಅವರ ಅಜ್ಜ ಮೊಗಲ್ತೂರು ಮಹಾರಾಜರಾಗಿದ್ದರು. ನಿರ್ದೇಶಕ ರಾಜಾ ವನ್ನೆಂರೆಡ್ಡಿ ಅವರ ಹತ್ತು ತಲೆಮಾರಿನ ಹಿಂದಿನ ಪೂರ್ವಜರು, ಈ ಮಹಾರಾಜರಿಗೆ ಸ್ನೇಹಿತರಾಗಿದ್ದರು. ಅವರು ದನಕರುಗಳನ್ನು ಕಾಯುತ್ತಾ ಊರೂರು ಸುತ್ತುವಾಗ, ಒಮ್ಮೆ ಮೊಗಲ್ತೂರಿಗೆ ಬಂದಿದ್ದರು. ಆಗ ರಾಜನಿಗೆ ತಣ್ಣನೆಯ ಮಜ್ಜಿಗೆ ನೀಡಿದರು. ಆ ಮಜ್ಜಿಗೆ ಕುಡಿದ ರಾಜನಿಗೆ ಅದು ಬಹಳ ಇಷ್ಟವಾಯಿತು.

44
ಮಜ್ಜಿಗೆಗೋಸ್ಕರ ಹೀಗೆ ಮಾಡಿದ್ರು
Image Credit : Asianet News

ಮಜ್ಜಿಗೆಗೋಸ್ಕರ ಹೀಗೆ ಮಾಡಿದ್ರು

ಮಜ್ಜಿಗೆಯ ರುಚಿಗೆ ಮರುಳಾದ ರಾಜ, ಪ್ರತಿದಿನ ಬಂದು ಕುಡಿಯುತ್ತಿದ್ದರು. ಹೀಗೆ ಸ್ನೇಹ ಬೆಳೆಯಿತು. ಕೆಲವು ದಿನಗಳ ನಂತರ, ವನ್ನೆಂರೆಡ್ಡಿ ಪೂರ್ವಜರು ಅಲ್ಲಿಂದ ಹೊರಟಾಗ, ರಾಜ ಅವರನ್ನು ತಡೆದರು. ತನಗೆ ಅಂತಹ ರುಚಿಕರ ಮಜ್ಜಿಗೆ ಮತ್ತೆ ಸಿಗುವುದಿಲ್ಲವೆಂದು ಹೇಳಿ, ಅವರನ್ನು ಅಲ್ಲೇ ಉಳಿಸಿಕೊಳ್ಳಲು 3000 ಎಕರೆ ಜಮೀನು ಬರೆದುಕೊಟ್ಟರು. ಆದರೆ, ಆ ಆಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ರಾಜಾ ವನ್ನೆಂರೆಡ್ಡಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಟಾಲಿವುಡ್
ಮನರಂಜನಾ ಸುದ್ದಿ
ಪ್ರಭಾಸ್
ಕೃಷಿ

Latest Videos
Recommended Stories
Recommended image1
Pawan Kalyan: ನಾಗಾರ್ಜುನ ಬಿಟ್ಟುಕೊಟ್ಟ ಆ ಟೈಟಲ್, ಪವರ್‌ ಸ್ಟಾರ್‌ಗೆ ಇಂಡಸ್ಟ್ರಿ ಹಿಟ್ ತಂದುಕೊಡ್ತು!
Recommended image2
Chiranjeevi Heroines: ಚಿರಂಜೀವಿ ಜೊತೆ ನಟಿಸಿ, ಬೇರೆ ಸ್ಟಾರ್‌ಗಳನ್ನೇ ಮದುವೆಯಾದ ನಟಿಯರಿವರು!
Recommended image3
ರೋಲೆಕ್ಸ್ ಸೂರ್ಯನ 'ವಿಶ್ವನಾಥ್ & ಸನ್ಸ್' ರಿಮೇಕ್ ಸಿನಿಮಾನಾ? ಹೊಸ ವಿವಾದದ ಹಿಂದಿನ ಸತ್ಯವೇನು?
Related Stories
Recommended image1
Actor Prabhas: ವಿಗ್‌ ಇಲ್ಲದ ನಟ ಪ್ರಭಾಸ್‌ ಫೋಟೋ‌ ವೈರಲ್!‌ 45ನೇ ವರ್ಷಕ್ಕೆ ಹೀಗಾಯ್ತಾ?
Recommended image2
ಯಶ್ To ಪ್ರಭಾಸ್‌: 2025ರಲ್ಲಿ ಒಂದೂ ಸಿನಿಮಾ ರಿಲೀಸ್ ಮಾಡದೆ ನಿರಾಸೆ ಮೂಡಿಸಿದ ಟಾಪ್ ಹೀರೋಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved