- Home
- Entertainment
- Cine World
- ನಟಿ ಸೌಂದರ್ಯ ಸಾವಿನ ಬಗ್ಗೆ ಮೌನವಹಿಸಿದ ಕಾರಣ ಬಹಿರಂಗಪಡಿಸಿದ ನಟ, ಏನಿದು ಹೊಸ ತಿರುವು?
ನಟಿ ಸೌಂದರ್ಯ ಸಾವಿನ ಬಗ್ಗೆ ಮೌನವಹಿಸಿದ ಕಾರಣ ಬಹಿರಂಗಪಡಿಸಿದ ನಟ, ಏನಿದು ಹೊಸ ತಿರುವು?
ನಟಿ ಸೌಂದರ್ಯ ಸಾವಿನ ಬಗ್ಗೆ ಮೌನವಹಿಸಿದ ಕಾರಣ ಬಹಿರಂಗಪಡಿಸಿದ ನಟ, ಇಡೀ ಚಿತ್ರರಂಗವೇ ಸೌಂದರ್ಯ ಸಾವಿಗೆ ಬೆಚ್ಚಿ ಬಿದ್ದಿತ್ತು. ಹಲವರು ಪ್ರತಿಕ್ರಿಯಿಸಿದ್ದರು. ಆದರೆ ಇದುವರೆಗೆ ಮೌನವಾಗಿದ್ದ ಆ ನಟ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಸೌಂದರ್ಯ ಹೆಲಿಕಾಪ್ಟರ್ ಅಪಘಾತ
ನಟಿ ಸೌಂದರ್ಯ ಅಪ್ಪಟ ಕನ್ನಡತಿ. ಸ್ಯಾಂಡಲ್ವುಡ್ನಲ್ಲೂ ಭಾರಿ ಯಶಸ್ಸು ಕಂಡ ಸೌಂದರ್ಯ ತೆಲುಗು ಸಿನಿಮಾಗಳಲ್ಲಿ ಭಾರಿ ಜನಪ್ರಿಯತೆ ಹಾಗೂ ಬೇಡಿಕೆ ನಟಿಯಾಗಿ ಹೊರಹೊಮ್ಮಿದ್ದರು. ಕಡಿಮೆ ಸಮಯದಲ್ಲಿ ಸುಮಾರು 100 ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ಸೌಂದರ್ಯ ಎಲ್ಲ ಟಾಪ್ ಹೀರೋಗಳ ಜೊತೆ ನಟಿಸಿದ್ದರು. ಆದರೆ 2004ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ಬೆಚ್ಚಿ ಬಿದ್ದ ಅಪಘಾತ ಘಟನೆ
ಸೌಂದರ್ಯ ಸಾವಿನಿಂದ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿತ್ತು. ಆಕೆಯ ಆಪ್ತರು, ಸ್ನೇಹಿತರು, ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದರು. ಆಕೆಯೊಂದಿಗೆ ನಟಿಸಿದವರೆಲ್ಲರೂ ಸಂತಾಪ ಸೂಚಿಸಿದ್ದರು. ಆದರೆ ಒಬ್ಬ ನಟ ಮಾತ್ರ ಪ್ರತಿಕ್ರಿಯಿಸಿರಲಿಲ್ಲ. ತನಗೆ ಪ್ರತಿಕ್ರಿಯಿಸಲು ಮನಸ್ಸಿರಲಿಲ್ಲ ಎಂದಿದ್ದರು. ಅಷ್ಟೇ ಅಲ್ಲ, ಆ ನಟ ಸೌಂದರ್ಯ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.
ಮೌನಕ್ಕೆ ಜಾರಿದ್ದ ನಟ ಯಾರು?
ಅವರಿಬ್ಬರದ್ದು ಸೂಪರ್ ಹಿಟ್ ಜೋಡಿ. ಆ ನಟ ಬೇರಾರೂ ಅಲ್ಲ, ಜಗಪತಿ ಬಾಬು. ಸಂದರ್ಶನವೊಂದರಲ್ಲಿ ಅವರು ಸೌಂದರ್ಯ ಸಾವಿನ ಬಗ್ಗೆ ಮಾತನಾಡಿದ್ದರು. 'ಸೌಂದರ್ಯ ತೀರಿಕೊಂಡಾಗ ನಾನು ಮಲೇಷ್ಯಾದಲ್ಲಿದ್ದೆ. ನನಗೆ ಫೋನ್ ಬಂತು. ಆಕೆಯ ಸಾವಿನ ಬಗ್ಗೆ ಪ್ರತಿಕ್ರಿಯಿಸಲು ನನಗೆ ಮನಸ್ಸೇ ಬರಲಿಲ್ಲ. ಆಗ ನಾನು ಯೋಚಿಸಿದ್ದು ಒಂದೇ, ಸೌಂದರ್ಯ ಸಹೋದರ ಅಮರ್ ಪರಿಸ್ಥಿತಿ ಏನು? ಹೇಗಿದ್ದಾನೆ? ಎಂದು ಮಾತ್ರ ಯೋಚಿಸಿದೆ. ಎಲ್ಲರೂ ಒಂದು ದಿನ ಸಾಯಲೇಬೇಕು. ಆದರೆ ಅವರ ಕುಟುಂಬದ ಪರಿಸ್ಥಿತಿ ಏನು ಎಂದು ಯೋಚಿಸಿದೆ' ಎಂದರು.
ಸೌಂದರ್ಯ ಬಗ್ಗೆ ಯೋಚಿಸಲಿಲ್ಲ ಆದರೆ..
ಆ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಸೌಂದರ್ಯಳ ಸಾವಿಗಿಂತ ಹೆಚ್ಚಾಗಿ, ಆಕೆಯ ಸಹೋದರ ಅಮರ್, ಅವರ ತಾಯಿ-ತಂದೆ ಮತ್ತು ಇತರ ಕುಟುಂಬ ಸದಸ್ಯರ ಪರಿಸ್ಥಿತಿ ಏನು? ಅವರನ್ನು ಹೇಗೆ ಎದುರಿಸುವುದು ಎಂದು ಮಾತ್ರ ಯೋಚಿಸಿದೆ. ಇದಕ್ಕೂ ಮುನ್ನ ನನಗೂ ಸೌಂದರ್ಯಗೂ ಸಂಬಂಧ ಕಲ್ಪಿಸಲಾಗಿತ್ತು. ಸೌಂದರ್ಯ ಎಂದರೆ ನನಗೆ ಇಷ್ಟ, ಒಳ್ಳೆಯ ಸ್ನೇಹಿತೆ, ಅಷ್ಟೇ. ಆದರೆ ನನ್ನ ಮೌನಕ್ಕೆ ಕಾರಣಗಳಿತ್ತು, ಹಲವು ಸುದ್ದಿಗಳು ನಮ್ಮ ಸಂಬಂಧ ಕುರಿತು ಹರಿದಾಡಿತ್ತು ಎಂದಿದ್ದಾರೆ.
ಸಂಬಂಧ ಕಲ್ಪಿಸಲು ಹಲವು ಕಾರಣ
ಒಂದು ದಿನ ನಿರ್ದೇಶಕ ಕೋದಂಡರಾಮಿರೆಡ್ಡಿ ಅವರನ್ನು ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆ. ಅದೇ ಟ್ರೈನ್ನಲ್ಲಿ ಸೌಂದರ್ಯ ಕೂಡ ಬಂದರು. ಅಷ್ಟೇ, ನಾನು ಸೌಂದರ್ಯಗಾಗಿಯೇ ಹೋಗಿದ್ದೆ, ನಾವಿಬ್ಬರೂ ಮದುವೆಯಾಗುತ್ತಿದ್ದೇವೆ ಎಂದು ಮಾಧ್ಯಮಗಳು ಸುದ್ದಿ ಮಾಡಿದವು. ಆ ಸುದ್ದಿ ನೋಡಿ ತುಂಬಾ ಕೋಪ ಬಂತು. ಸೌಂದರ್ಯ ತೀರಿಕೊಂಡ ದಿನ ನಾನು ಮೊದಲು ಕೇಳಿದ್ದು ಆಕೆಯ ಸಹೋದರ ಅಮರ್ ಬಗ್ಗೆ. ಹಾಗಂದ ಮಾತ್ರಕ್ಕೆ ನನಗೂ ಅಮರ್ಗೂ ಸಂಬಂಧ ಕಲ್ಪಿಸುತ್ತಾರಾ? ಎಂದು ಜಗಪತಿ ಬಾಬು ಪ್ರಶ್ನಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

