MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ದೋಸೆ ಮಾರಿ ತಿಂಗಳಿಗೆ 12 ಲಕ್ಷ ಗಳಿಸುತ್ತಿದ್ದ ಮಾಲೀಕನ ಕಣ್ಣೀರ ಕತೆ.. ಯಾಕೆ ಹೀಗೆ ಆಯ್ತು..?

ದೋಸೆ ಮಾರಿ ತಿಂಗಳಿಗೆ 12 ಲಕ್ಷ ಗಳಿಸುತ್ತಿದ್ದ ಮಾಲೀಕನ ಕಣ್ಣೀರ ಕತೆ.. ಯಾಕೆ ಹೀಗೆ ಆಯ್ತು..?

ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ.

2 Min read
Author : Ganesh Mabla Gowda
Published : Jul 20 2026, 12:01 PM IST
Share this Photo Gallery
  • FB
  • TW
  • Linkdin
  • Whatsapp
14
ಹೋಟೆಲ್ ಉದ್ಯಮಿಗಳ ಸಂಕಷ್ಟ
Image Credit : social media

ಹೋಟೆಲ್ ಉದ್ಯಮಿಗಳ ಸಂಕಷ್ಟ

ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ. ಒಂದು ಕಾಲದಲ್ಲಿ ತಿಂಗಳಿಗೆ 12 ರಿಂದ 13 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದ ಇವರ ಹೋಟೆಲ್ ಆದಾಯ ಎಲ್ಲಿಗೆ ಬಂದು ನಿಂತಿದೆ ಗೊತ್ತಾ? ಆತ ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಹನ್ನೆರಡು ಲಕ್ಷದಿಂದ ಒಂದು ಲಕ್ಷಕ್ಕೆ ಕುಸಿದಿದ್ದೇಕೆ?
Image Credit : social media

ಹನ್ನೆರಡು ಲಕ್ಷದಿಂದ ಒಂದು ಲಕ್ಷಕ್ಕೆ ಕುಸಿದಿದ್ದೇಕೆ?

ರೆಸ್ಟೋರೆಂಟ್ ಮಾಲೀಕ ತನ್ನ ವ್ಯವಹಾರದ ಆರ್ಥಿಕ ಪರಿಸ್ಥಿತಿಯನ್ನ ವಿವರಿಸಿದ್ದು ಹೀಗೆ.. ಆರಂಭದಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದ್ದಾಗ ತಿಂಗಳಿಗೆ 12 ರಿಂದ 13 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಕಾಲಕ್ರಮೇಣ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಜೊತೆಗೆ ನಿರ್ವಹಣಾ ವೆಚ್ಚಗಳು ಏರಿಕೆಯಾಗಿವೆ ಎಂದು ತಿಳಿಸಿದ್ದಾರೆ. ಮಾಲೀಕನ ಪ್ರಕಾರ ಪ್ರತಿ ತಿಂಗಳು ಹೋಟೆಲ್‌ಗಾಗಿ ಮಾಡಬೇಕಾದ ಅನಿವಾರ್ಯ ಖರ್ಚುಗಳನ್ನ ನೋಡೋದಾದ್ರೆ, ಬಾಡಿಗೆ 1 ಲಕ್ಷ ರೂಪಾಯಿ. ಸಿಬ್ಬಂದಿ ಸಂಬಳ ಅಂದಾಜು 1.5 ಲಕ್ಷ ರೂಪಾಯಿ. ವಿದ್ಯುತ್ ಬಿಲ್, ಕಚ್ಚಾ ಪದಾರ್ಥಗಳು (ದಿನಸಿ) ಮತ್ತು ಇತರ ನಿರ್ವಹಣಾ ವೆಚ್ಚಗಳು ಸೇರಿ ಸುಮಾರು 4 ಲಕ್ಷ ರೂಪಾಯಿ ತಗಲುತ್ತದೆ. ಎಲ್ಲಾ ಖರ್ಚುಗಳನ್ನು ಕಳೆದರೆ ಮಾಲೀಕನ ಕೈಗೆ ಉಳಿಯೋದು ಪ್ರತಿ ತಿಂಗಳು ಸುಮಾರು 1 ಲಕ್ಷ ರೂಪಾಯಿ ಮಾತ್ರ!

Related Articles

Related image1
ದಾಂಡೇಲಿ ಜಿಪ್‌ ಲೈನ್ ಅಪಘಾತ: 40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು? ಈಗ ಯುವಕನ ಸ್ಥಿತಿ ಏನಾಗಿದೆ?
Related image2
ರೋಹಿತ್ - ಗಂಭೀರ್ ಬಿಸಿಬಿಸಿ ಮಾತುಕತೆಯ ವಿಡಿಯೋ ವೈರಲ್.. ಇಬ್ಬರ ಮಧ್ಯೆ ನಡೆದಿದ್ದೇನು..?
34
ವ್ಯಾಪಾರ ಕುಸಿತಕ್ಕೆ ಕಾರಣಗಳು ಏನು?
Image Credit : social media

ವ್ಯಾಪಾರ ಕುಸಿತಕ್ಕೆ ಕಾರಣಗಳು ಏನು?

ವ್ಯಾಪಾರ ಕುಸಿತಕ್ಕೆ ಋತುಮಾನದ ಬದಲಾವಣೆಗಳೂ ಕಾರಣ ಎಂದಿದ್ದಾರೆ. ಬೇಸಿಗೆ ಕಾಲದಲ್ಲಿ ದೋಸೆ ಹೋಟೆಲ್‌ಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಚಳಿಗಾಲದಲ್ಲಿ ವ್ಯಾಪಾರ ತುಸು ಸುಧಾರಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ತಿಂಗಳಿಗೆ 80 ಸಾವಿರ ರೂಪಾಯಿ ಸಂಬಳ ಬರುವ ಕೆಲಸವನ್ನು ಅತ್ಯಂತ ಗೌರವಯುತವಾಗಿ ನೋಡುತ್ತಾರೆ. ತಿಂಗಳಿಗೆ 12 ಲಕ್ಷ ರೂಪಾಯಿ ವಹಿವಾಟು ನಡೆಸುವ ದೋಸೆ ಹೋಟೆಲ್ ಮಾಲೀಕನಿಗೆ ಅಂತಹ ಗೌರವ ಸಿಗುವುದಿಲ್ಲ. ಯಶಸ್ಸಿನ ಬಗ್ಗೆ ಜನರ ವ್ಯಾಖ್ಯಾನವೇ ವಿಚಿತ್ರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ಉದ್ಯಮಿಯಾಗಿರುವುದೇ ತಮಗೆ ಇಷ್ಟ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

44
ನೆಟ್ಟಿಗರ ಪ್ರತಿಕ್ರಿಯೆ
Image Credit : social media

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ನೀವು ಕೇವಲ ಲಾಭದ ಬಗ್ಗೆ ಯೋಚಿಸುತ್ತಿಲ್ಲ, ಬದಲಿಗೆ ಹಲವು ಜನರಿಗೆ ಕೆಲಸ ನೀಡಿದ್ದೀರಿ, ಅದು ನಿಜವಾದ ಯಶಸ್ಸು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವ್ಯಾಪಾರದಲ್ಲಿ ಇಂತಹ ಏರಿಳಿತಗಳು ಸಾಮಾನ್ಯ, ನಿಮ್ಮ ಪ್ರಯತ್ನ ಮುಂದುವರಿಸಿ ಎಂದು ಹಲವರು ಬೆಂಬಲ ಸೂಚಿಸಿದ್ದಾರೆ. ಸ್ವಂತ ಉದ್ಯಮ ಮಾಡುವುದು ಸುಲಭದ ಮಾತಲ್ಲ ಎಂಬುದಕ್ಕೆ ಈ ದೋಸೆ ಹೋಟೆಲ್ ಮಾಲೀಕನ ಕಥೆಯೇ ಸಾಕ್ಷಿ. 12 ಲಕ್ಷದಿಂದ 1 ಲಕ್ಷಕ್ಕೆ ಲಾಭ ಇಳಿದರೂ ಎದೆಗುಂದದೆ ಸಾಗುತ್ತಿರುವ ಇವರ ಹಾದಿ ಅನೇಕರಿಗೆ ಸ್ಫೂರ್ತಿಯಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GM
Ganesh Mabla Gowda
ವ್ಯವಹಾರ
ಮಹಾರಾಷ್ಟ್ರ
ಸುದ್ದಿ
ನ್ಯೂಸ್‌ ರೌಂಡ್‌ಅಪ್

Latest Videos
Recommended Stories
Recommended image1
ಒಂದು ಲಕ್ಷ ಸಾಲ ಮಾಡಿಕೊಂಡಿದ್ದ ಈ ಮಹಿಳೆ, ಇಂದು ಪ್ರತಿ ವರ್ಷ 9 ಲಕ್ಷ ಸಂಪಾದಿಸ್ತಾಳೆ! ಉದ್ಯಮಿಯಾಗಿದ್ದು ಹೇಗೆ?
Recommended image2
ಹೊಸ ಕಾರು ಖರೀದಿಸಲು ಆತುರ ಬೇಡ, ಮುಂದಿನ 14 ದಿನಗಳಲ್ಲಿ ಮಾರುಕಟ್ಟೆಗೆ ಬರ್ತಿದೆ 3 ಜಬರ್ದಸ್ತ್ ಕಾರ್‌!
Recommended image3
ಹಾಕಿದ ಬಂಡವಾಳ ಒಂದೇ ತಿಂಗಳಲ್ಲಿ ವಾವಸ್​: ಕೆಲ್ಸ ಬಿಟ್ಟು ಟೀ ಅಂಗಡಿ ಇಟ್ಟ ಯುವಕನ ಇನ್​ಸ್ಪೈರಿಂಗ್​ ಸ್ಟೋರಿ
Related Stories
Recommended image1
ದಾಂಡೇಲಿ ಜಿಪ್‌ ಲೈನ್ ಅಪಘಾತ: 40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು? ಈಗ ಯುವಕನ ಸ್ಥಿತಿ ಏನಾಗಿದೆ?
Recommended image2
ರೋಹಿತ್ - ಗಂಭೀರ್ ಬಿಸಿಬಿಸಿ ಮಾತುಕತೆಯ ವಿಡಿಯೋ ವೈರಲ್.. ಇಬ್ಬರ ಮಧ್ಯೆ ನಡೆದಿದ್ದೇನು..?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved