MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಸಂಕಷ್ಟದ ನಡುವೆ ಬಿಕ್ ಶಾಕ್, ಡಾಲರ್ ಎದುರು 95.80 ಕ್ಕೆ ಕುಸಿದ ರೂಪಾಯಿ ಮೌಲ್ಯ, ಬೆಲೆ ಏರಿಕೆ ಬಿಸಿ

ಸಂಕಷ್ಟದ ನಡುವೆ ಬಿಕ್ ಶಾಕ್, ಡಾಲರ್ ಎದುರು 95.80 ಕ್ಕೆ ಕುಸಿದ ರೂಪಾಯಿ ಮೌಲ್ಯ, ಬೆಲೆ ಏರಿಕೆ ಬಿಸಿ

ಪೆಟ್ರೋಲ್ ಡೀಸೆಲ್ ಕೊರತೆ, ವಿದೇಶಿ ವಿನಿಮಯ ಸಮಸ್ಯೆ, ಚಿನ್ನ ಆಮದು ಸವಾಲು ಸೇರಿದಂತೆ ಭಾರತದ ಆರ್ಥಿಕತೆ ಎಚ್ಚರಿಕೆ ನಡುವೆ ಮತ್ತೊಂದು ಆಘಾತ ಎದುರಾಗಿದೆ. ಡಾಲರ್ ಎದುರು ರೂಪಾಯಿ ದಾಖಲೆ ಕುಸಿತ ಕಂಡಿದೆ.

1 Min read
Author : Chethan Kumar
Published : May 13 2026, 06:11 PM IST
Share this Photo Gallery
  • FB
  • TW
  • Linkdin
  • Whatsapp
15
ರೂಪಾಯಿ ಸಾರ್ವಕಾಲಿಕ ಕುಸಿತ
Image Credit : ANI

ರೂಪಾಯಿ ಸಾರ್ವಕಾಲಿಕ ಕುಸಿತ

ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಭಾರತ ಸದ್ಯ ಆರ್ಥಿಕ ಪರಿಸ್ಥಿತಿ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿರುವ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಬಲಗೊಳ್ಳುತ್ತಿದೆ. ಇದರ ಪರಿಣಾಮ ರೂಪಾಯಿ ದಾಖಲೆ ಕುಸಿತ ಕಾಣುತ್ತಿದೆ. ಇಂದು ದಿನದ ವಹಿವಾಟು ಅಂತ್ಯದಲ್ಲಿ ಡಾಲರ್ ಎದುರು ರೂಪಾಯಿ 95.80 ರೂಪಾಯಿ ಕುಸಿತ ಕಂಡಿದೆ.

Add Asianetnews Kannada as a Preferred SourcegooglePreferred
25
12 ಪೈಸೆ ಕುಸಿತ
Image Credit : Asianet News

12 ಪೈಸೆ ಕುಸಿತ

ಮದ್ಯಪ್ರಾಚ್ಯ ದೇಶಗಳ ಯುದ್ಧ ಬೀತಿ, ಒಪ್ಪಂದದಲ್ಲಿ ಸಮನ್ವಯ ಕೊರತೆ, ಕಚ್ಚಾಟಗಳಿಂದ ಕಚ್ಚಾ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ತೈಲದ ಮೇಲೆ ಸಂಪೂರ್ಣ ಅವಲಂಬನೆಯಾಗಿರುವ ಭಾರತದ ಮೇಲೆ ಇದು ಒತ್ತಡ ಹೆಚ್ಚಿಸುತ್ತಿದೆ. ಇದೇ ವೇಳೆ ಯುದ್ಧದ ಪರಿಸ್ಥಿತಿಯಿಂದ ಜಾಗತಿಕ ಹೂಡಿಕೆದಾರರು ಡಾಲರ್ ಮೊರೆ ಹೋಗುತ್ತಿರುವುದು ಡಾಲರ್‌ನ್ನು ಮತ್ತಷ್ಟು ಬಲಗೊಳ್ಳುವಂತೆ ಮಾಡಿದ್ದು ಮಾತ್ರವಲ್ಲ, ಭಾರತದ ರೂಪಾಯಿ ದಿನದ ವಹಿವಾಟಿನಲ್ಲಿ 12 ಪೆೈಸೆ ಕುಸಿಯುವಂತೆ ಮಾಡಿದೆ.

Related Articles

Related image1
ಒಂದು ವರ್ಷ ಭಾರತ ಚಿನ್ನ ಖರೀದಿ ನಿಲ್ಲಿಸಿದರೆ ಕಂಗಾಲಾಗುತ್ತೆ ನಾಲ್ಕು ದೇಶ, ಭಾರತಕ್ಕೇನು ಲಾಭ?
Related image2
ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಭಾರತದ ಮುಂದಿದೆ ಅಗ್ನಿಪರೀಕ್ಷೆ! ವಿಶ್ವ ಆರ್ಥಿಕ ಸಮರ
35
ಮಾರುಕಟ್ಟೆಯಿಂದ ಬಂಡವಾಳ ವಾಪಾಸ್
Image Credit : Asianet News

ಮಾರುಕಟ್ಟೆಯಿಂದ ಬಂಡವಾಳ ವಾಪಾಸ್

ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಾಗಿದೆ. ಇದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ವಿದೇಶಿ ಹೂಡಿಕೆದಾರರು ತಮ್ಮ ಹಣಗಳನ್ನು ವಾಪಾಸ್ ಪಡೆಯುತ್ತಿದ್ದಾರೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬೀಳುತ್ತಿದೆ. ಯುದ್ಧದ ಪರಿಣಾಮ ಭಾರತಕ್ಕೆ ಇದೀಗ ತೀವ್ರವಾಗಿ ತಟ್ಟಲು ಆರಂಭಿಸಿದೆ.

45
ಹಣದುಬ್ಬರ ಆತಂಕ
Image Credit : Social Media X

ಹಣದುಬ್ಬರ ಆತಂಕ

ಕಚ್ಚಾ ತೈಲ ಬೆಲೆ ಏರಿಕೆ, ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಭಾರತ ಹೆಚ್ಚಿನ ರೂಪಾಯಿ ವ್ಯಯಿಸಬೇಕಿದೆ. ಇದರಿಂದ ಆಮದು ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ಹಣದುಬ್ಬರ ಸಮಸ್ಯೆಗಳು ತೀವ್ರಗೊಳ್ಳಲಿದೆ.

55
ಜನಸಾಮಾನ್ಯರಿಗೆ ತಟ್ಟಲಿಗೆ ಬಿಸಿ
Image Credit : Google

ಜನಸಾಮಾನ್ಯರಿಗೆ ತಟ್ಟಲಿಗೆ ಬಿಸಿ

ಯುದ್ಧದಿಂದ ನಿರ್ಮಾಣವಾಗಿರುವ ಸದ್ಯದ ಪರಿಸ್ಥಿತಿಯಿಂದ ಜನಸಾಮಾನ್ಯರು ಹೈರಾಣಾಗುತ್ತಾರೆ. ಮಧ್ಯಮ ವರ್ಗ ಸೇರಿದಂತೆ ಜನಸಾಮಾನ್ಯರ ಜೇಬಿಗೆ ತೀವ್ರ ಹೊಡೆತ ನೀಡಲಿದೆ. ವಸ್ತುಗಳ ಬೆಲೆ ಏರಿಕೆ ಜೀವನ ನಿರ್ವಹಣೆಗೆ ಅಡ್ಡಿಯಾಗಲಿದೆ. ಇದರ ಜೊತೆಗೆ ಉದ್ಯೋಗ ಕಡಿತಗಳು ಹೆಚ್ಚಾಗಲಿದೆ.

ಜನಸಾಮಾನ್ಯರಿಗೆ ತಟ್ಟಲಿಗೆ ಬಿಸಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವ್ಯವಹಾರ
ಭಾರತ ಸುದ್ದಿ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಸೈಬರ್ ದಾಳಿ ನಿಯಂತ್ರಿಸಲು ಎರ್ಟೆಲ್‍‌ನಿಂದ ಜೀರೋ ಟ್ರಸ್ಟ್ ಆರ್ಕಿಟೆಕ್ಚರ್, ಗ್ರಾಹಕರಿಗೆ ಪ್ರಯೋಜನವೇನು?
Recommended image2
ಒಂದು ವರ್ಷ ಭಾರತ ಚಿನ್ನ ಖರೀದಿ ನಿಲ್ಲಿಸಿದರೆ ಕಂಗಾಲಾಗುತ್ತೆ ನಾಲ್ಕು ದೇಶ, ಭಾರತಕ್ಕೇನು ಲಾಭ?
Recommended image3
Vantara Ice Cream: ಅಂಬಾನಿ ಮಗನ ಹೊಸ ಬ್ಯುಸಿನೆಸ್! ಫಿಲ್ಟರ್ ಕಾಫಿ, ಮಲೈ ಕುಲ್ಫಿ ಐಸ್‌ಕ್ರೀಂಗೆ ಜನ ಏನಂದ್ರು?
Related Stories
Recommended image1
ಒಂದು ವರ್ಷ ಭಾರತ ಚಿನ್ನ ಖರೀದಿ ನಿಲ್ಲಿಸಿದರೆ ಕಂಗಾಲಾಗುತ್ತೆ ನಾಲ್ಕು ದೇಶ, ಭಾರತಕ್ಕೇನು ಲಾಭ?
Recommended image2
ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಭಾರತದ ಮುಂದಿದೆ ಅಗ್ನಿಪರೀಕ್ಷೆ! ವಿಶ್ವ ಆರ್ಥಿಕ ಸಮರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved