ಶಿರ್ಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ 5 ಕೋಟಿ ರೂ. ದಾನ ನೀಡಿದ ಅನಂತ್ ಅಂಬಾನಿ
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ, ರಿಲಯನ್ಸ್ ಇಂಡಸ್ಟ್ರಿ ಗ್ರೂಪ್ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ ಅವರು ಇಂದು ಶಿರ್ಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಶಿರ್ಡಿ ಸಾಯಿಬಾಬಾ ದರ್ಶನ ಪಡೆದ ಅನಂತ್ ಅಂಬಾನಿ
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ, ರಿಲಯನ್ಸ್ ಇಂಡಸ್ಟ್ರಿ ಗ್ರೂಪ್ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ ಅವರು ಇಂದು ಶಿರ್ಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಸಾಯಿ ಬಾಬಾ ಸಮಾಧಿಗೆ ನೀಲಿ ಬಣ್ಣದ ಚಾದರ ಅರ್ಪಣೆ
ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ನಡೆಯುವ ಧೂಪಾರತಿಯಲ್ಲಿ ಅವರು ಭಾಗಿಯಾಗಿದ್ದಲ್ಲದೇ ಸಾಯಿ ಬಾಬಾ ಸಮಾಧಿಗೆ ನೀಲಿ ಬಣ್ಣದ ಚಾದರವನ್ನು ಹಾಸಿದರು.
ಸಾಯಿ ಬಾಬಾ ಮಂದಿರದ ವತಿಯಿಂದ ಅನಂತ್ ಅಂಬಾನಿಗೆ ಸಂಸ್ಥಾನ
ಸಾಯಿಬಾಬಾ ಸಮಾಧಿ ದರ್ಶನದ ನಂತರ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯಕಾರಿ ಅಧಿಕಾರಿ ಗೋರಕ್ಷ ಗಡ್ಲಿಕರ್ ಅವರು ದೇಗುಲದ ವತಿಯಿಂದ ಅವರನ್ನು ಸನ್ಮಾನಿಸಿದರು. ಈ ಉಪ ಮುಖ್ಯ ಕಾರ್ಯಕಾರಿ ಭಿಮ್ರಾಜ್ ದರಡೆ ಉಪಸ್ಥಿತರಿದ್ದರು.
5 ಕೋಟಿ ದಾನ ನೀಡಿದ ಅನಂತ್ ಅಂಬಾನಿ
ಇದೇ ಸಮಯದಲ್ಲಿ ಅನಂತ್ ಅಂಬಾನಿ ಅವರು ಸುಮಾರು 5 ಕೋಟಿ ಮೊತ್ತದ ಹಣವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ದೇಣಿಗೆಯಾಗಿ ಸಾಯಿಬಾಬಾ ಸಂಸ್ಥಾನಕ್ಕೆ ನೀಡಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.

