ಚಂದ್ರನ ಪ್ರಭಾವದಿಂದ ಯೋಗ ಶೂಲ ರಚನೆ: 6 ರಾಶಿಗಳ ನಿರ್ಣಯಕ್ಕೆ ಇಂದು ಅಗ್ನಿಪರೀಕ್ಷೆ, ಎಚ್ಚರ
ಇಂದು ಚಂದ್ರನು ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸುವುದರಿಂದ, ಯೋಗ ಶೂಲದ ಪ್ರಭಾವದಿಂದ ಮಾನಸಿಕ ಒತ್ತಡ ಮತ್ತು ನಿರ್ಣಯಗಳಲ್ಲಿ ಗೊಂದಲ ಉಂಟಾಗಲಿದೆ. ಈ ಕಾರಣದಿಂದಾಗಿ ರಾಶಿಯವರು ದಿನವಿಡೀ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.

ಮಾನಸಿಕ ಒತ್ತಡ ಮತ್ತು ತೆಗೆದುಕೊಳ್ಳುವ ನಿರ್ಣಯ
ಇಂದು ಚಂದ್ರ ದಿನದ ಮೊದಲಾರ್ಧದಲ್ಲಿ ಕನ್ಯಾರಾಶಿಯಲ್ಲಿರಲಿದ್ದು, ಮಧ್ಯಾಹ್ನ 1:22 ರ ನಂತರ ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಚಿತ್ರ ನಕ್ಷತ್ರದ ಪ್ರಭಾವದ ಜೊತೆಗೆ ಯೋಗ ಶೂಲ ದಿನವಾದ ಇಂದು ಮಾನಸಿಕ ಒತ್ತಡ ಮತ್ತು ತೆಗೆದುಕೊಳ್ಳುವ ನಿರ್ಣಯದಲ್ಲಿ ಗೊಂದಲ ಸೂಚಿಸುತ್ತದೆ. ಹಾಗಾಗಿ ಕನ್ಯಾ ಸೇರಿದಂತೆ 6 ರಾಶಿಯವರು ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ.
ಮೇಷ ರಾಶಿ
ಮೇಷ ರಾಶಿಯವರು ಇಂದು ತಮ್ಮ ಮೇಲೆಯೇ ಸ್ವಯಂ ನಿಯಂತ್ರಣ ಹೊಂದುವುದು ಅವಶ್ಯಕವಾಗಿದೆ. ದಿನದ ಮೊದಲಾರ್ಧದಲ್ಲಿ ಮೇಷ ರಾಶಿಯವರಲ್ಲಿ ಪ್ರಕ್ಷುಬ್ಧತೆಯ ಅನುಭವ ಉಂಟಾಗಬಹುದು. ಮಧ್ಯಾಹ್ನದ ನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವಾಗಿದೆ. ಹಣಕಾಸು ವಿಷಯಗಳಲ್ಲಿ ಎಚ್ಚರದಿಂದಿರಿ.
ತುಲಾ ರಾಶಿ
ಇಂದು ಮಧ್ಯಾಹ್ನದ ನಂತರವೇ ನಿಮಗೆ ನೀವು ಮಾಡುವ ಕೆಲಸಗಳಲ್ಲಿ ಸ್ಪಷ್ಟತೆ ಸಿಗುತ್ತದೆ. ಸಹೋದ್ಯೋಗಿ ಅಥವಾ ಪಾಲುದಾರರ ಸಹಾಯ ಸಿಗಲಿದೆ. ಸೌಂದರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಣ ಹೆಚ್ಚು ಖರ್ಚಾಗುವ ಸಾಧ್ಯತೆಗಳಿವೆ. ಇಂದು ನಿಮ್ಮೆಲ್ಲಾ ಹಳೆಯ ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು. ಯೋಗಶೂಲದಿಂದ ಮಾನಸಿಕ ಆಯಾಸ ಮತ್ತು ಬೆನ್ನು ನೋವು ಕಾಡಬಹುದು.
ಮಕರ ರಾಶಿ
ಇಂದು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ದಿನವಾಗಿದ್ದು, ಹಾಗಾಗಿ ಮಾತುಗಳ ಮೇಲೆ ಹಿಡಿತವಿರಲಿ. ಬೆಳಗ್ಗೆ ಒಂಬತ್ತನೇ ಮನೆಯಲ್ಲಿ ಕನ್ಯಾರಾಶಿಯಲ್ಲಿರುವ ಚಂದ್ರನು ಮಾರ್ಗದರ್ಶನ, ಅಧ್ಯಯನ ಮತ್ತು ಭವಿಷ್ಯದ ಯೋಜನೆಗಳನ್ನು ಸಕ್ರಿಯಗೊಳಿಸುತ್ತಾನೆ. ಹಾಗಾಗಿ ಮಾಡುವ ಕೆಲಸಗಳಿಗೆ ತ್ವರಿತ ಫಲಿತಾಂಶಗಳನ್ನು ನಿರೀಕ್ಷಿಸಬೇಡಿ. ಇಂದು ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿದ್ದು, ಹಳೆಯ ಹೂಡಿಕೆಗಳಿಂದ ಲಾಭ ಸಿಗಬಹುದು.
ಕುಂಭ ರಾಶಿ
ಇಂದು ಕುಂಭ ರಾಶಿಯವರಿಗೆ ಎಂಟನೇ ಮನೆಯಲ್ಲಿ ಕನ್ಯಾರಾಶಿಯಲ್ಲಿರುವ ಚಂದ್ರನು ಅಭದ್ರತೆಯನ್ನುಂಟು ಮಾಡಬಹುದು. ಇದರಿಂದಾಗಿ ನಿಮ್ಮಲ್ಲಿ ಆತಂಕ ಅಥವಾ ಭಯದ ಭಾವನೆಗಳು ಉಂಟಾಗಬಹುದು. ಹೊಣೆಗಾರಿಕೆಗಳು ಹೆಚ್ಚಾಗಿ ಹಠಾತ್ ವೆಚ್ಚಗಳು ಅಧಿಕವಾಗಲಿವೆ. ನಿದ್ರೆ ಮತ್ತು ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.
ಮೀನ ರಾಶಿ
ಮೀನ ರಾಶಿಯವರು ರಾಹುಕಾಲದ ಸಮಯದಲ್ಲಿ ಬೆಳಿಗ್ಗೆ 9:50 ರಿಂದ 11:13 ರವರೆಗಿನ ಭಾವನಾತ್ಮಕ ಬದ್ಧತೆಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತಿದೆ. ನಿಮ್ಮ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಇಟ್ಟುಕೊಂಡು, ಎದುರಾಗುವ ಸನ್ನಿವೇಶಗಳನ್ನು ಭಾವನಾತ್ಮವಾಗಿ ಯೋಚಿಸದೇ ಪ್ರಾಯೋಗಿಕವಾಗಿ ಎದುರಿಸಿ. ಆದಾಯ ಸಾಮಾನ್ಯವಾಗಿರುತ್ತದೆ. ವ್ಯವಹಾರದ ವಿಷಯಗಳಲ್ಲಿ ಎಚ್ಚರಿಕೆಯಿಂದಿರಿ.
ಇದನ್ನೂ ಓದಿ: ಫೆಬ್ರವರಿ ಉತ್ತರಾರ್ಧದಲ್ಲಿ ಪಂಚಕ್ರಗಿ ಯೋಗದಿಂದ ಇಡೀ ತಿಂಗಳು ಒಂದು ರಾಶಿಗೆ ಮಾತ್ರ ಜಾಕ್ಪಾಟ್
ಕನ್ಯಾ ರಾಶಿ
ದಿನದ ಮೊದಲಾರ್ಧದಲ್ಲಿ ಕನ್ಯಾ ರಾಶಿಯವರು ವಿರೋಧಿಗಳನ್ನು ಅಥವಾ ಸವಾಲುಗಳನ್ನು ನೇರವಾಗಿ ಎದುರಿಸುವ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಬೆಳಗ್ಗೆಯೇ ಚಂದ್ರನು ಕನ್ಯಾ ರಾಶಿಯಲ್ಲಿರೋದರಿಂದ ಸ್ವಯಂ ವಿಮರ್ಶೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹದು. ಮಧ್ಯಾಹ್ನದ ನಂತರ ಆರ್ಥಿಕ ಮತ್ತು ಪ್ರಾಯೋಗಿಕ ಸಮತೋಲನ ನಿಮ್ಮಲ್ಲಿ ಉಂಟಾಗುತ್ತದೆ. ಕಠಿಣ ಪರಿಶ್ರಮ ಎದುರಾದರೂ ಉತ್ತಮ ಫಲಿತಾಂಶಗಳು ನಿಧಾನವಾಗಿ ಒಲಿಯುತ್ತವೆ.
ಇದನ್ನೂ ಓದಿ: ಕುಂಭದಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ: 3 ರಾಶಿಗಳಿಗೆ ಲಕ್ಷ್ಮಿ ಕಟಾಕ್ಷದಿಂದ ಜೀವನದಲ್ಲಿ ಸಮೃದ್ಧಿ

