Asianet Suvarna News Asianet Suvarna News

ಭೇಲ್ ಪುರಿಯಿಂದ ಪ್ರಸಿದ್ಧ ಬ್ರಿಟಿಷ್ ಬಾಣಸಿಗ ವಿಲಿಯಂ ಹೆರಾಲ್ಡ್ ಸತ್ತಿದ್ದು ಹೇಗೆ ?

ಸ್ಟ್ರೀಟ್ ಫುಡ್ (Street Food) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಪಾನಿಪುರಿ, ಮಸಾಲ್ ಪುರಿ, ಭೇಲ್‌ ಪುರಿ (Bhel puri) ಅಂದ್ರೆ ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಇದೇ ಭೇಲ್‌ಪುರಿ ಒಬ್ರ ಸಾವಿಗೆ ಕಾಎಣವಾಗುತ್ತೆ ಅಂದ್ರೆ ನೀವು ನಂಬ್ತೀರಾ ? ಬಾಣಸಿಗ (Chef) ವಿಲಿಯಂ ಹೆರಾಲ್ಡ್ ಭೇಲ್ ಪುರಿಯಿಂದ ನಿಧನ (Death)ರಾದರು. ಆದರೆ ಅದು ಹೇಗೆ ? ಸಾವಿಗೆ ಕಾರಣವಾಗಿದ್ದೇನು ಎಂಬುದನ್ನು ತಿಳಿದುಕೊಳ್ಳೋಣ.

This Is How British Chef William Harold Died Of Bhel Puri Vin
Author
Bengaluru, First Published May 11, 2022, 10:57 AM IST

ಭಾರತೀಯರು ಸ್ವಭಾತಹಃ ಆಹಾರಪ್ರಿಯರು. ಹೀಗಾಗಿಯೇ ಭಾರತದಲ್ಲಿ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅನಾದಿ ಕಾಲದಿಂದಲೂ ಭಾರತವು ತನ್ನ ವ್ಯಾಪಕ ಶ್ರೇಣಿಯ ಬೀದಿ ಆಹಾರ (Food)ಗಳಿಗೆ ಹೆಸರುವಾಸಿಯಾಗಿದೆ. ಉತ್ತರದಿಂದ ದಕ್ಷಿಣಕ್ಕೆ, ಮತ್ತು ಪೂರ್ವದಿಂದ ಪಶ್ಚಿಮಕ್ಕೆ, ನೀವು ಮನೆಯಲ್ಲಿ ಸುಲಭವಾಗಿ ಪುನರಾವರ್ತಿಸಬಹುದಾದ ಸರಳ ಮತ್ತು ಸುಲಭವಾದ ಬೀದಿ ಆಹಾರಗಳ ರುಚಿಕರವಾದ ವಿಧಗಳನ್ನು ನೋಡಬಹುದು. ಆದರೆ, ದುಃಖಕರವೆಂದರೆ, ಈ ಬೀದಿ ಆಹಾರಗಳಲ್ಲಿ (Street food) ಒಂದಾದ ಭೇಲ್‌ಪುರಿ (\Bhel puri) ಒಮ್ಮೆ ಪ್ರಸಿದ್ಧ ಬ್ರಿಟಿಷ್ ಬಾಣಸಿಗ ವಿಲಿಯಂ ಹೆರಾಲ್ಡ್ ಸಾವಿಗೆ ಕಾರಣವಾಯಿತು.

ಸ್ಟ್ರೀಟ್ ಫುಡ್ (Street Food) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಪಾನಿಪುರಿ, ಮಸಾಲ್ ಪುರಿ, ಭೇಲ್‌ ಪುರಿ (Bhel puri) ಅಂದ್ರೆ ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಇದೇ ಭೇಲ್‌ಪುರಿ ಒಬ್ರ ಸಾವಿಗೆ ಕಾಎಣವಾಗುತ್ತೆ ಅಂದ್ರೆ ನೀವು ನಂಬ್ತೀರಾ ?ಭಾರತೀಯ ತಿಂಡಿ 'ಭೇಲ್ ಪುರಿ'ಯಿಂದಾಗಿ ಬ್ರಿಟಿಷ್ ಬಾಣಸಿಗ ಸಾವನ್ನಪ್ಪಿರುವ ವಿಚಾರ ತುಂಬಾ ವಿಚಿತ್ರವಾಗಿದೆ. ಬಾಣಸಿಗ ವಿಲಿಯಂ, ಭೇಲ್ ಪುರಿ ತಿಂದು ಸಾವನ್ನಪ್ಪಿಲ್ಲ. ಹಾಗಿದ್ರೆ ಅವರ ಸಾವಿಗೆ ಕಾರಣವಾಗಿದ್ದೇನು ?

International No Diet Day 2022: ದೇಹದ ತೂಕದ ಬಗ್ಗೆ ಯೋಚಿಸದೆ ಬೇಕಾದ್ದನ್ನೆಲ್ಲಾ ತಿನ್ನಲು ಒಂದು ದಿನ !

ಬ್ರಿಟಿಷ್ ಬಾಣಸಿಗ ವಿಲಿಯಂ ಹೆರಾಲ್ಡ್ ಅವರು ಅಡುಗೆ ಮಾಡುವ ಎಲ್ಲದರಲ್ಲೂ ಪರಿಪೂರ್ಣತೆಯ ವಿಧಾನಕ್ಕೆ ಹೆಸರುವಾಸಿಯಾಗಿದ್ದರು ಮತ್ತು ಅದಕ್ಕಾಗಿಯೇ ಅವರನ್ನು ಬ್ರಿಟಿಷ್ ಸೇನೆಯ ಉನ್ನತ ಶ್ರೇಣಿಯ ಅಧಿಕಾರಿಗೆ ವೈಯಕ್ತಿಕ ಬಾಣಸಿಗರಾಗಿ ಭಾರತಕ್ಕೆ ಕಳುಹಿಸಲಾಯಿತು. ಹಿರಿಯ ಅಧಿಕಾರಿಯು ಒಮ್ಮೆ ಭೇಲ್ ಪುರಿ, ಗರಿಗರಿಯಾದ ಪಾಪ್ಡಿಸ್, ಪಫ್ಡ್ ರೈಸ್, ಸೇವ್, ಈರುಳ್ಳಿ, ಆಲೂಗಡ್ಡೆ, ಹುಣಸೆ ಚಟ್ನಿ, ಹಸಿರು ಚಟ್ನಿ, ಚಾಟ್ ಮಸಾಲ, ಎಣ್ಣೆ, ಹಸಿರು ಮೆಣಸಿನಕಾಯಿ, ಮಾವಿನ ಪುಡಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸದಿಂದ ಮಾಡಿದ ಸಿಹಿ ಮತ್ತು ಮಸಾಲೆಯುಕ್ತ ತಿಂಡಿಯ ರುಚಿ ನೋಡಿದರು. ಭಾರತೀಯರ ಈ ಬೀದಿ ಆಹಾರವನ್ನು ಅಧಿಕಾರಿ ತುಂಬಾ ಮೆಚ್ಚಿಕೊಂಡರು. ಹಲವು ಮಸಾಲೆಗಳನ್ನು ಒಳಗೊಂಡಿರುವ ರುಚಿಕರವಾದ ಭೇಲ್‌ ಪುರಿಯನ್ನು ತಯಾರಿಸಲು ಅವರು ಬಾಣಸಿಗ ವಿಲಿಯಂ ಹೆರಾಲ್ಡ್‌ಗೆ ಆದೇಶಿಸಿದರು. 
 
ಭೇಲ್‌ ಪುರಿ ಬಗ್ಗೆ ಹೆಚ್ಚು ತಿಳಿದಿರದ ಬಾಣಸಿಗ ವಿಲಿಯಂ, ಆ ಪರಿಪೂರ್ಣ ಭೇಲ್ ಪುರಿ ಪಾಕವಿಧಾನವನ್ನು ಪಡೆಯಲು ಬೀದಿ ಆಹಾರ ಮಾರಾಟಗಾರರ ಬಳಿ ಹೋದರು. ಆದರೆ ಪ್ರತಿಯೊಬ್ಬ ಬೀದಿ ಆಹಾರ ಮಾರಾಟಗಾರನು ಅವರಿಗೆ ತಮ್ಮದೇ ಆದ ಪಾಕವಿಧಾನವನ್ನು ನೀಡಿದರು. ಅದು ವಿವಿಧ ಸಂಯೋಜನೆಗಳು ಮತ್ತು ಮಸಾಲೆಗಳ ಪ್ರಮಾಣಗಳನ್ನು ಹೊಂದಿತ್ತು, ಇವೆಲ್ಲವೂ ವಿಲಿಯಂಗೆ ಗೊಂದಲಕ್ಕೆ ಕಾರಣವಾಯಿತು. ಹೀಗಾಗಿ ಸರಿಯಾದ ವಿಧಾನದಲ್ಲೇ ಭೇಲ್ ಪುರಿ ಮಾಡುವುದು ಹೇಗೆಂದು ಅವರಿಗೆ ಅರ್ಥವಾಗಲ್ಲಿಲ್ಲ.

ಚಿಕನ್ ಶವರ್ಮಾ ತಿಂದು ಕಾಸರಗೋಡಿನ ಯುವತಿ ಸಾವು; ಶಿಗೆಲ್ಲಾ ಬ್ಯಾಕ್ಟಿರೀಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

ನಂತರ ದಿನದಲ್ಲಿ ಅಧಿಕಾರಿಯು ಖಾದ್ಯಕ್ಕಾಗಿ ಬೇಡಿಕೆಯಿಟ್ಟಾಗ, ವಿಲಿಯಂ ಅವರಿಗೆ ಸರಿಯಾದ' ಪಾಕವಿಧಾನವನ್ನು ಕಂಡುಹಿಡಿಯಲಾಗಲಿಲ್ಲ. ವರದಿಗಳ ಪ್ರಕಾರ, ಇದರಿಂ ಅಧಿಕಾರಿಯು ಕೋಪಗೊಂಡು ತನ್ನ ಕೈಬಂದೂಕನ್ನು ತೆಗೆದುಕೊಂಡು ಬಾಣಸಿಗನನ್ನು ಹೊಡೆದನು. ಇದು ಬಾಣಸಿಗ ವಿಲಿಯಂ ಹೆರಾಲ್ಡ್ ಸಾವಿಗೆ ಕಾರಣವಾಯಿತು.

ಘಟನೆಗೆ ಸಂಬಂಧಿಸಿದಂತೆ ಹೆಚ್ಚೇನು ಮಾಹಿತಿ ದಾಖಲಿಸಲಾಗಿಲ್ಲ. ಆದರೆ ಈ ಘಟನೆ ನಿಜವೆಂಬುದು ಇತಿಹಾಸಗಳಲ್ಲಿ ದಾಖಲಾಗಿದೆ. ಈ ರೀತಿ ಭಾರತೀಯ ಆಹಾರವೊಂದು ಬ್ರಿಟಿಷ್ ಬಾಣಸಿಗನ ಸಾವಿಗೆ ಕಾರಣವಾಯಿತು.

Follow Us:
Download App:
  • android
  • ios