Asianet Suvarna News Asianet Suvarna News

ರಾಷ್ಟ್ರೀಯ ಆಹಾರ ಗುಣಮಟ್ಟ ಸೂಚ್ಯಂಕ; ಅಗ್ರಸ್ಥಾನಕ್ಕೇರಿದ ತಮಿಳುನಾಡು, ಆಂಧ್ರಕ್ಕೆ ಕೊನೆಯ ಸ್ಥಾನ

ರಾಷ್ಟ್ರೀಯ ಆಹಾರ ಗುಣಮಟ್ಟ ಸೂಚ್ಯಂಕ (Food Safety Index)ದಲ್ಲಿ ಈ ಬಾರಿ ತಮಿಳುನಾಡು (Tamilnadu) ಗುಜರಾತ್‌ನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ. ಗುಜರಾತ್‌ ಎರಡನೇ ಸ್ಥಾನದಲ್ಲಿ, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ (Andra pradesh) ಕೊನೆಯ ಸ್ಥಾನ ಪಡೆದುಕೊಂಡಿದೆ.

Tamil Nadu Tops Governments Food Safety Index, Andhra Pradesh Fares Worst Vin
Author
Bengaluru, First Published Jun 8, 2022, 4:52 PM IST

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ)ನಾಲ್ಕನೇ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ 2021-22ರ ವರದಿ ಬಿಡುಗಡೆಯಾಗಿದ್ದು, ಗುಜರಾತ್ (Gujarat) ರಾಜ್ಯವನ್ನು ಹಿಂದಿಕ್ಕಿ ತಮಿಳುನಾಡು (Tamil Nadu) ಅಗ್ರ ಸ್ಥಾನಕ್ಕೇರಿದೆ. ದೇಶದ 17 ದೊಡ್ಡ ರಾಜ್ಯಗಳ ಪೈಕಿ ಎರಡನೇ ಸ್ಥಾನಕ್ಕೆ ಗುಜರಾತ್ ಕುಸಿದಿದ್ದು, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ (Andra pradesh) ಕೊನೆಯ ಸ್ಥಾನದಲ್ಲಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ ಪ್ರಶಸ್ತಿಗಳನ್ನು ಘೋಷಿಸಿದರು.

ವಿಶ್ವ ಆಹಾರ ದಿನದಂದು ಸೂಚ್ಯಂಕವನ್ನು ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವ (Health Minister) ಮನ್ಸುಖ್ ಮಾಂಡವಿಯಾ, ಪ್ರತಿಯೊಬ್ಬ ನಾಗರಿಕನ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬದ್ಧವಾಗಿದೆ ಮತ್ತು ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಗಳ ಪಾತ್ರವನ್ನು ಒತ್ತಿ ಹೇಳಿದರು. ರಾಜ್ಯಗಳನ್ನು ಐದು ನಿಯತಾಂಕಗಳ ಮೇಲೆ ನಿರ್ಣಯಿಸಲಾಗಿದ್ದು, ಮಾನವ ಸಂಪನ್ಮೂಲಗಳು ಮತ್ತು ಸಾಂಸ್ಥಿಕ ಡೇಟಾ, ಅನುಸರಣೆ, ಆಹಾರ ಪರೀಕ್ಷಾ ಸೌಲಭ್ಯ, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಮತ್ತು ಗ್ರಾಹಕರ (Customers) ಸಬಲೀಕರಣ ಅಂಶಗಳ ಮೇಲೆ ವರ್ಗೀಕರಿಸಲಾಗಿದೆ.

ಇಂಥಾ ಆಹಾರದ ಸೇವನೆ ಬ್ರೈನ್‌ ಟ್ಯೂಮರ್‌ಗೆ ಕಾರಣವಾಗುತ್ತೆ ಎಚ್ಚರ

ವಿಜೇತರನ್ನು ಅಭಿನಂದಿಸಿ ಮಾತನಾಡಿದ ಮಾಂಡವಿಯಾ, ಆರೋಗ್ಯಕರ ರಾಷ್ಟ್ರವನ್ನು ಖಚಿತಪಡಿಸಿಕೊಳ್ಳಲು ನಾವು ಒಗ್ಗೂಡುವುದು ಈ ಸಮಯದ ಅಗತ್ಯವಾಗಿದೆ ಎಂದು ಹೇಳಿದರು. 2018-19 ರಲ್ಲಿ ಪ್ರಾರಂಭವಾದ ಸೂಚ್ಯಂಕವು ದೇಶದಲ್ಲಿನ ಆಹಾರ ಸುರಕ್ಷತೆ ಪರಿಸರ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕ ಮತ್ತು ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ನಾಗರಿಕರಿಗೆ ಸುರಕ್ಷಿತ ಆಹಾರವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸುತ್ತದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾದ ಎಫ್‌ಎಸ್‌ಎಸ್‌ಎಐ, ಜನರಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಅವರು ಶ್ಲಾಘಿಸಿದರು. ಈಟ್ ರೈಟ್' ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ, ಸುರಕ್ಷಿತ ಮತ್ತು ಸುಸ್ಥಿರ ಆಹಾರ ಪರಿಸರವನ್ನು ಬೆಂಬಲಿಸುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಸ್ಮಾರ್ಟ್ ಸಿಟಿಗಳನ್ನು ಪ್ರೇರೇಪಿಸಲು ಕಳೆದ ವರ್ಷ FSSAI ಪ್ರಾರಂಭಿಸಿದ ಈಟ್‌ಸ್ಮಾರ್ಟ್ ಸಿಟೀಸ್ ಚಾಲೆಂಜ್‌ನ 11 ವಿಜೇತರನ್ನು ಸಚಿವರು ಇದೇ ವೇಳೆ ಸನ್ಮಾನಿಸಿದರು.

ವಿಶ್ವ ಆಹಾರ ಸುರಕ್ಷತಾ ದಿನ: ಯಾಕೆ ಆಚರಿಸಲಾಗುತ್ತೆ?

2020-21 ಸೂಚ್ಯಂಕದಲ್ಲಿ ತಮಿಳುನಾಡು ದೊಡ್ಡ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಕೇರಳ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು. ಚಿಕ್ಕ ರಾಜ್ಯಗಳಲ್ಲಿ ಗೋವಾ ತನ್ನ ಅಗ್ರ ಶ್ರೇಯಾಂಕವನ್ನು ಉಳಿಸಿಕೊಂಡರೆ. ಮಣಿಪುರ ಮತ್ತು ಸಿಕ್ಕಿಂ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿತ್ತು. ಕೇಂದ್ರಾಡಳಿತ ಪ್ರದೇಶಗಳಲ್ಲಿ, ಜಮ್ಮು ಮತ್ತು ಕಾಶ್ಮೀರ, ದೆಹಲಿ ಮತ್ತು ಚಂಡೀಗಢ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿತ್ತು.

ದೇಹವನ್ನು ಆರೋಗ್ಯಕರವಾಗಿಡುವಲ್ಲಿ ನಾವು ಸೇವಿಸುವಂತಹ ಆಹಾರದ (Food) ಪಾತ್ರವು ಅತ್ಯಂತ ಮುಖ್ಯ. ಆದರೆ ಜನರ ಆಹಾರ ಪದ್ಧತಿ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅನೇಕ ವಸ್ತುಗಳನ್ನು ತಯಾರಿಸುವ ಮತ್ತು ಬೆಳೆಸುವ ವಿಧಾನವು ಈಗ ಬದಲಾಗಿದೆ. ಅವುಗಳಿಗೆ ವಿವಿಧ ರೀತಿಯ ಕೆಮಿಕಲ್‌ಗಳನ್ನು ಸಹ ಸೇರಿಸಲಾಗುತ್ತಿದೆ. ಆದ್ದರಿಂದ ಜನರಿಗೆ ಕಲುಷಿತ ಆಹಾರ ಮತ್ತು ನೀರಿನ ನಷ್ಟದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. 

Follow Us:
Download App:
  • android
  • ios