Asianet Suvarna News Asianet Suvarna News

ವೈಶಾಖ ಹುಣ್ಣಮೆಯ ಚಂದ್ರಗ್ರಹಣದಿಂದ ನಿಮ್ಮ ರಾಶಿಗೇನು ಫಲ?

ವರ್ಷದ ಮೊದಲ ಚಂದ್ರಗ್ರಹಣ ಮುಗಿದಿದೆ. ವೈಶಾಖ ಪೂರ್ಣಿಮೆಯ ಈ ಖಗ್ರಾಸ ಚಂದ್ರಗ್ರಹಣದಿಂದ ಕೆಲವು ರಾಶಿಗಳಿಗೆ ಆರೋಗ್ಯ ಬಾಧೆ ಇದೆ. ನಿಮ್ಮ ರಾಶಿಯೂ ಇದೆಯಾ ಚೆಕ್ ಮಾಡ್ಕೊಳಿ.

 

What is your Rashi Phala by first Lunar eclipse of year 2021
Author
Bengaluru, First Published May 27, 2021, 11:54 AM IST

ಇಂದು ಬುದ್ಧ ಪೂರ್ಣಿಮೆ ಅಥವಾ ವೈಶಾಖ ಶುದ್ಧ ಪೂರ್ಣಿಮೆ.. ಇಂದೇ ಚಂದ್ರಗ್ರಹಣ ಕೂಡ ಸಂಭವಿಸುತ್ತಿರುವುದು ವಿಶೇಷ. ವರ್ಷದ ಮೊದಲ ಚಂದ್ರ ಗ್ರಹಣ. ಆದರೆ ಇದು ಸಂಪೂರ್ಣ ಚಂದ್ರಗ್ರಹಣವಲ್ಲ, ಖಂಡಶಃ ಅಥವಾ ಖಗ್ರಾಸ ಚಂದ್ರಗ್ರಹಣವಾಗಿದೆ. ಇದು ಭಾರತ ಕೆಲವೆಡೆ, ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಮಾತ್ರವೇ ಗೋಚರಿಸುತ್ತದೆ. ಆದರೆ ಗ್ರಹಗಳ ಚಲನೆಯು, ಗ್ರಹಣದ ದಿನದಂದು ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಈ ಗ್ರಹಣವು ವೃಶ್ಚಿಕ ರಾಶಿಯಲ್ಲಿ ನಡೆಯುತ್ತಿದ್ದು, ಈ ರಾಶಿಯವರ ಮೇಲೆ ಹೆಚ್ಚಿನ ನಕಾರಾತ್ಮಕ ಪರಿಣಾಮ ಬೀರಲಿದೆ. ಮೇಷ, ಕನ್ಯಾರಾಶಿಯವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಸಿಂಹ ಹಾಗೂ ಕನ್ಯಾ ರಾಶಿಯವರು ಕಷ್ಟವನ್ನು ಎದುರಿಸಬಹುದು. ಜೊತೆಗೆ ತುಲಾ ರಾಶಿಯವರು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಈ ಚಂದ್ರಗ್ರಹಣವು ನಿಮ್ಮ ರಾಶಿಯ ಮೇಲೆ ಯಾವ ಪರಿಣಾಮ ಬೀರಲಿದೆ, ಇದಕ್ಕೆ ಪರಿಹಾರವೇನು ಎನ್ನುವುದು ಇಲ್ಲಿದೆ ನೋಡಿರಿ.

ಮೇಷ 
ಇದು ನಿಮ್ಮನ್ನು ಪರೀಕ್ಷಿಸುತ್ತಿರುವ ಕಾಲ. ವೃತ್ತಿರಂಗದಲ್ಲಿ ಸ್ವಲ್ಪ ತೊಂದರೆ ಇದೆ. ಆರೋಗ್ಯದ ಮೇಲೆ ಸ್ವಲ್ಪ ಕೆಡುಕಿನ ಪರಿಣಾಮ ಬೀರಬಹುದು. ಜೊತೆಗೆ ಹಣಕಾಸಿನ ನಷ್ಟವನ್ನೂ ಅನುಭವಿಸಬಹುದು. ಮಸೂರ ಬೇಳೆಯನ್ನು ದಾನ ಮಾಡಿ.

ವೃಷಭ 
ನೀವು ಕುಟುಂಬದಲ್ಲಿ ಹಳೆಯ ವ್ಯಾಜ್ಯಗಳನ್ನು ಮತ್ತೆ ತಡಕಿಕೊಳ್ಳುವಂತಾದೀತು. ಯಾರೊಡನೆಯೂ ಕಾಲು ಕೆರೆದು ಜಗಳ ಮಾಡಬೇಡಿ. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ಹನುಮಾನ್ ಚಾಲೀಸ್ ಓದಿದರೆ ಉತ್ತಮ.

ಮಿಥುನ
ಗ್ರಹಣದ ದುಷ್ಪ್ರಭಾವದಿಂದ ನಿಮ್ಮ ಹಿತವರ್ತಿಗಳು ಶತ್ರುಗಳಾಗಬಹುದು. ವ್ಯಾಪಾರದಲ್ಲಿ ನಷ್ಟವಾಗಬಹುದು. ಮಾಸಾತ್ಯದಲ್ಲಿ ಧನಲಾಭ. ಚಂದ್ರ ಬೀಜ ಮಂತ್ರ ಹಾಗೂ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ. ಎಳ್ಳು ದಾನ ಮಾಡಿ.

ಗ್ರಹಣದಿಂದ ತಪ್ಪುತ್ತಾ ಗ್ರಹಚಾರ ? ಭಾರತದಲ್ಲಿ ಬ್ಲಡ್ ಮೂನ್ ಪರಿಣಾಮವೇನು ? ...

ಕಟಕ
ಆರೋಗ್ಯವು ಈ ಕಾಲದಲ್ಲಿ ನಾಜೂಕಾಗಿರುತ್ತದೆ. ವ್ಯಾಪಾರದಲ್ಲಿ ವ್ಯತ್ಯಯ. ಉದ್ಯಮದಲ್ಲಿ ಬಾಸ್‌ ಕೋಪಿಸಿಕೊಳ್ಳುವರು. ನಷ್ಟದಿಂದ ನಿಮ್ಮ ಮೇಲೆ ಅಪಖ್ಯಾತಿ ಬಂದೀತು. ಶಿವನನ್ನು ಆರಾಧಿಸಿ, ಶಿಪಂಚಾಕ್ಷರಿ ಪಠಿಸಿ, ಅಕ್ಕಿ ದಾನ ಮಾಡಿ.

ಸಿಂಹ
ಹೋದಲ್ಲಿ ಬಂದಲ್ಲಿ ಸೋಂಕಿನ ರೋಗಾಣುಗಳು ನಿಮ್ಮ ಬೆಂಬತ್ತಬಹುದು, ಎಚ್ಚರವಿರಲಿ. ಮನೆಯಲ್ಲಿರುವುದು ಕ್ಷೇಮ. ಮುಂಜಾನೆ ಸೂರ್ಯನಮಸ್ಕಾರ ಮತ್ತು ಧ್ಯಾನ ಮಾಡಿ. ಶ್ರೀ ಆದಿತ್ಯ ಹೃದಯಂ ಸ್ತೋತ್ರವನ್ನು ಓದಿ, ಗೋಧಿ ದಾನ ಮಾಡಿ.

ಕನ್ಯಾ
ಚಂದ್ರ ನಿಮ್ಮ ಕೈ ಬಿಟ್ಟಿದ್ದಾನೆ. ಶನಿ ಅನುಕೂಲನಾಗಿಲ್ಲ. ಆದರೆ ಸೂರ್ಯನು ನಿಮ್ಮ ಬೆಂಬಲಕ್ಕಿದ್ದಾನೆ. ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದರೂ ಬೇಗನೆ ಚೇತರಿಸಿಕೊಳ್ಳುವಿರಿ. ವಿಷ್ಣುವನ್ನು ಪೂಜಿಸಿ. ಅಷ್ಟಾದಶಾಕ್ಷರಿ ಪಠಿಸಿ.

What is your Rashi Phala by first Lunar eclipse of year 2021


ತುಲಾ
ನಿಮ್ಮ ಕುಟುಂಬದಲ್ಲಿ ಆತ್ಮೀಯರಿಗೆ, ಹಿರಿಯರಿಗೆ ಅನಾರೋಗ್ಯ ಬಾಧಿಸಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಹಣಕಾಸಿನ ಸಮಸ್ಯೆ ಎದುರಿಸಬಹುದು. ವ್ಯವಹಾರದಲ್ಲೂ ಸಮಸ್ಯೆಗಳುಂಟಾಗಬಹುದು. ಶ್ರೀ ಸೂಕ್ತ ಓದಿ. ಆಹಾರ ದಾನ ಮಾಡಿ.

ವೃಶ್ಚಿಕ
ನಿಮ್ಮ ಆರೋಗ್ಯದ ಮೇಲೆ ಸದಾ ಒಂದು ಕಣ್ಣಿಟ್ಟೇ ಇರಿ. ಪ್ರವಾಸ ಅನಾರೋಗ್ಯಕಾರಿ. ಸ್ಥಳೀಯ ವ್ಯವಹಾರದಲ್ಲಿ ನಷ್ಟ. ಸೂರ್ಯನ ಅನುಗ್ರಹಕ್ಕೆ ಪ್ರಾರ್ಥಿಸಿ. ಅಜ್ಞಾತರ ಅನುಗ್ರಹ. ಹನುಮಾನ್ ಚಾಲೀಸ್‌ ಓದಿ. ಆಹಾರವನ್ನು ದಾನ ಮಾಡಿ. 

ನಿಮ್ಮ ಜನ್ಮರಾಶಿಗೆ ಸರಿಹೊಂದುವ ಸಾಕುಪ್ರಾಣಿ ಯಾವುದು? ಇಲ್ಲಿ ತಿಳಿಯಿರಿ ...

ಧನು
ನಿಮ್ಮ ವ್ಯವಹಾರದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಷ್ಟವುಂಟಾಗಬಹುದು. ಪತ್ನಿ/ ಪತಿಯ ಆರೋಗ್ಯದಲ್ಲಿ ಏರುಪೇರು. ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳಿ. ಶ್ರೀ ಸೂಕ್ತವನ್ನು ಓದಿ. ಆಧ್ಯಾತ್ಮಿಕ ಪುಸ್ತಕಗಳನ್ನು ದಾನ ಮಾಡಿ.

ಮಕರ
ಕಾಲು ನೋವು, ಗಂಟು ನೋವುಗಳು ಬಾಧಿಸಬಹುದು. ತಣ್ಣನೆಯ ಆಹಾರ ಪದಾರ್ಥದಿಂದ ಅನಾರೋಗ್ಯ. ವಾಯುಬಾಧೆ ಉಂಟುಮಾಡುವ ಆಹಾರ ಸೇವಿಸಬೇಡಿ. ಎಳ್ಳು ದಾನ ಮಾಡಿ, ಹನುಮಂತ ಹಾಗೂ ನರಸಿಂಹನನ್ನು ಪೂಜಿಸಿ.

ಕುಂಭ
ಕೈಯಲ್ಲಿ ತೆಗೆದುಕೊಂಡ ಎಲ್ಲ ವಹಿವಾಟಿನಲ್ಲೂ ನಷ್ಟ ಎದುರಾಗಲಿದೆ. ಇನ್ನೊಂದು ತಿಂಗಳೂ ಹೀಗೇ ಇರಲಿದೆ. ತಿಂಗಳ ಕೊನೆಯಲ್ಲಿ ಶೀತಬಾಧೆ, ಪಿತ್ತಬಾಧೆಗಳು ಕಾಣಿಸಬಹುದು. ನರಸಿಂಹ ಸ್ತೋತ್ರ ಓದಿ ಮತ್ತು ಎಳ್ಳುದಾನ ಮಾಡಿ.

ಮೀನ
ಕಫದಿಂದ ಉಂಟಾಗುವ ಅನಾರೋಗ್ಯಗಳು ಕಾಡುವ ಸಂಭವ ಉಂಟು. ಶೀತಕಾರಿಯಾದ ಚಂದ್ರನಿಂದ ಆರೋಗ್ಯಕ್ಕೆ ಸಂಚಕಾರ. ದೇವರ ಧ್ಯಾನದಿಂದ ಶುಭ. ವ್ಯಾಯಾಮ ಜಾರಿಯಲ್ಲಿರಲಿ. ಕಡಲೇ ಬೇಳೆ ದಾನ ಮಾಡಿ ವಿಷ್ಣು ಸಹಸ್ರನಾಮ ಓದಿ.

ಭಾನುವಾರ ಹುಟ್ಟಿದವರು ಸುಖಿಗಳಾಗಿಯೇ ಇರ್ತಾರಾ? ...
 

Follow Us:
Download App:
  • android
  • ios