Asianet Suvarna News Asianet Suvarna News

ಈ ರಾಶಿಗೆ ಶನಿ ಸಾಡೇಸಾತ್‌ನಿಂದ ಮುಕ್ತಿ... ಅಂತಿಮ ಚರಣದಲ್ಲಿದ್ದಾನೆ ಶನಿದೇವ

ಕರ್ಮಫಲದಾತ ಶನಿಯ ಸಾಡೇಸಾತ್‌ನಲ್ಲಿ ಮೂರು ಚರಣಗಳಿರುತ್ತವೆ. ಶನಿ ಸಾಡೇಸಾತ್‌ನ ಅಂತಿಮ ಚರಣದಲ್ಲಿರುವ ಈ ರಾಶಿಯವರಿಗೆ ಕೊಂಚ ನೆಮ್ಮದಿ ದೊರೆಯಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಜಾತಕದಲ್ಲಿ ಶನಿಯ ಅಶುಭ ಪ್ರಭಾವ ಬೀರಲು ಆರಂಭವಾದಾಗ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಶನಿಯು ಒಂದು ರಾಶಿಯಲ್ಲಿ ಬರೋಬ್ಬರಿ ಏಳೂವರೇ ವರ್ಷ ಸ್ಥಿತನಾಗಿರುತ್ತಾನೆ. ಬೇರೆಲ್ಲ ಗ್ರಹಗಳಿಂತ ನಿಧಾನವಾಗಿ ಸಂಚರಿಸುವ ಗ್ರಹ ಶನಿಯಾಗಿದೆ. ಶನಿ ಸಾಡೇಸಾತ್‌ನಿಂದ ಸದ್ಯದಲ್ಲಿ ಯಾವ ರಾಶಿವರಿಗೆ ಮುಕ್ತಿ ಎಂಬುದರ ಬಗ್ಗೆ ತಿಳಿಯೋಣ..

This Zodiac people get relief from Shani sade sati
Author
Bangalore, First Published Apr 24, 2021, 11:34 AM IST

ಶನಿ ಸಾಡೇಸಾತ್ ಎಂದರೆ ಎಲ್ಲರಿಗೂ ಭಯ. ಶನಿಯ ಹೆಸರು ಕೇಳಿದಾಕ್ಷಣ, ಇನ್ಯಾವ ರೀತಿಯ ಕಷ್ಟಗಳನ್ನು ಎದುರಿಸಬೇಕಾದೀತು ಎಂಬ ಚಿಂತೆ ಸಹಜವಾಗಿ ಕಾಡುತ್ತದೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುವ ನ್ಯಾಯ ದೇವ ಶನಿದೇವ. ಶನಿಯ ದೃಷ್ಟಿ ಬೀರಿದ ಮೇಲೆ ಅವರಿಗೆ ಕಷ್ಟಗಳು ತಪ್ಪಿದ್ದಲ್ಲವೆಂದು ಹೇಳಲಾಗುತ್ತದೆ. ಹಾಗಂತ ಶನಿ ಸಾಡೇಸಾತ್‌ನಿಂದ ಕೇವಲ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಸುಳ್ಳು. ಶನಿಯ ದೃಷ್ಟಿ ಬಿದ್ದ ಮೇಲೆ ಅನೇಕರು ಅಭಿವೃದ್ಧಿಯನ್ನು ಕಂಡಂತ ನಿದರ್ಶನಗಳು ಸಿಗುತ್ತವೆ. ಶನಿಯು ಉತ್ತಮ ಫಲವನ್ನು ನೀಡುವುದರ ಜೊತೆಗೆ ಶಿಕ್ಷೆಯನ್ನು ನೀಡುತ್ತಾನೆ.

ಇದನ್ನು ಓದಿ: ಅಮಾವಾಸ್ಯೆಯಂದು ಹುಟ್ಟಿದರೆ ಹೀಗಂತೆ...! 

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಜಾತಕದಲ್ಲಿ ಶನಿಯ ಅಶುಭ ಪ್ರಭಾವ ಬೀರಲು  ಆರಂಭವಾದಾಗ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಶನಿಯು ಒಂದು ರಾಶಿಯಲ್ಲಿ ಬರೋಬ್ಬರಿ ಏಳೂವರೇ ವರ್ಷ ಸ್ಥಿತನಾಗಿರುತ್ತಾನೆ. ಬೇರೆಲ್ಲ ಗ್ರಹಗಳಿಂತ ನಿಧಾನವಾಗಿ ಸಂಚರಿಸುವ ಗ್ರಹ ಶನಿಯಾಗಿದೆ. ಶನಿ ಸಾಡೇಸಾತ್‌ನಲ್ಲಿ ಮೂರು ಚರಣಗಳಿರುತ್ತವೆ.

ಸಾಡೇಸಾತ್‌ನ ಮೂರು ಚರಣಗಳು
ಶನಿ ಸಾಡೇಸಾತ್‌ನ ಮೊದಲನೇ ಚರಣದಲ್ಲಿ ವ್ಯಕ್ತಿಯು ಮಾನಸಿಕ ಕಷ್ಟಗಳನ್ನು ಅನುಭವಿಸಬೇಕಾದ ಸ್ಥಿತಿ ಎದುರಾಗುತ್ತದೆ. ಸಾಡೇಸಾತ್ ಆರಂಭವಾದ ಮೊದಲ ನೂರು ದಿನಗಳು ವ್ಯಕ್ತಿಯ ಮುಖದ ಮೇಲಿರುತ್ತದೆ ಎಂದು ಹೇಳಲಾಗುತ್ತದೆ. ಇದು ಅತ್ಯಂತ ಕಷ್ಟಕರವಾಗಿರುವ ಸಮಯವಾಗಿರುತ್ತದೆ ಎಂದು ಸಹ ಹೇಳಲಾಗುತ್ತದೆ. ಅದೆಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರೆ ಶನಿ ಸಾಡೇಸಾತಿ ಎಂಬ ಹೆಸರು ಕೇಳಿದರೆ ಸಾಕು ನಡುಕ ಉಂಟಾಗುವಷ್ಟು ಭಯ ತರಿಸುತ್ತದೆ.

This Zodiac people get relief from Shani sade sati



ಶನಿ ಸಾಡೇಸಾತ್‌ನ ಎರಡನೇ ಚರಣದಲ್ಲಿ ಆರ್ಥಿಕ ಮತ್ತು ಶಾರೀರಿಕ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಅನೇಕ ರೀತಿಯಲ್ಲಿ ಕಷ್ಟಗಳನ್ನು, ದೈಹಿಕ ಅನಾರೋಗ್ಯವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಎರಡನೇ ಚರಣದಲ್ಲೂ ಹಲವಾರು ನೋವು-ಸಂಕಟಗಳನ್ನು ಎದುರಿಸಿ ಗೆಲ್ಲಬೇಕಾಗುತ್ತದೆ.
 
ಇದನ್ನು ಓದಿ: ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..! 

ಎರಡನೇ ಚರಣದ ಕೊನೆಯಲ್ಲಿ ಮತ್ತು ಮೂರನೇ ಚರಣದ ಸಂದರ್ಭದಲ್ಲಿ ನಿಧಾನವಾಗಿ ವ್ಯಕ್ತಿಯ ಸಮಸ್ಯೆಗಳು, ಸಂಕಟಗಳು ದೂರವಾಗುತ್ತಾ ಬರುತ್ತವೆ. ಅಂತಿಮ ಚರಣದಲ್ಲಿ ಶನಿದೇವ ವ್ಯಕ್ತಿಯ ಮೇಲೆ ಹೆಚ್ಚಿನ ಕೃಪಾದೃಷ್ಟಿಯನ್ನು ಬೀರುತ್ತಾನೆ ಮತ್ತು ಹೆಚ್ಚೆಚ್ಚು ಒಳಿತನ್ನು ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಆರ್ಥಿಕ ಲಾಭವನ್ನು ತಂದುಕೊಡುವ ಶನಿ ಸಾಡೇಸಾತ್‌ನ ಅಂತಿಮ ಚರಣ ಈಗ ಧನುರಾಶಿಯವರಿಗಿದೆ.

ಧನು ರಾಶಿ
ಶನಿ ಸಾಡೇಸಾತ್‌ನ ಕೊನೆಯ ಚರಣದಲ್ಲಿ ಈಗ ಧನುರಾಶಿಯವರಿದ್ದಾರೆ. ಈ ರಾಶಿಯವರಿಗೆ ಶನಿಸಾಡೇ ಸಾತ್‌ನಿಂದ ಮುಕ್ತಿ ದೊರೆಯುವ ಸಮಯ ಬಂದಾಗಿದೆ. ಇಷ್ಟು ದಿನ ಅನುಭವಿಸಿದ ಕಷ್ಟ-ನೋವುಗಳು ಕೊನೆಯಾಗಲಿದೆ. ಅಂತಿಮ ಚರಣದಲ್ಲಿ ಒಳಿತು ಮಾಡುವ ಶನಿ ಸಾಡೇಸಾತ್ ಈಗ ಧನು ರಾಶಿಯವರ ಪಾಲಿಗೆ ಒಳ್ಳೆಯದನ್ನು ತಂದುಕೊಡಲಿದೆ. 

ಶನಿ ಗ್ರಹವು 2022 ಏಪ್ರಿಲ್ 29 ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಲಿದೆ. ಈ ಅವಧಿಯಲ್ಲಿ ಧನು ರಾಶಿಯವರಿಗೆ ಶನಿ ಸಾಡೇಸಾತ್ ಪೂರ್ಣಗೊಳ್ಳಲಿದೆ. ಇದು ಈ ಧನು ರಾಶಿಯವರಿಗೆ ಮಾನಸಿಕ ಮತ್ತು ದೈಹಿಕ ನೆಮ್ಮದಿಯನ್ನು ನೀಡಲಿದೆ. ಉತ್ತಮ ದಿನಗಳು ಮುಂದೆ ಬರಲಿವೆ ಎಂಬ ಆಶಾಭಾವನೆ ಈ ರಾಶಿಯವರಲ್ಲಿ ಮೂಡಲಿದೆ.    

ಅಷ್ಟೇ ಅಲ್ಲದೇ ಶನಿದೇವನು ಇದೇ ಜುಲೈ 12 ರಿಂದ 2023ರ 17 ಜನವರಿ ತನಕ ವಕ್ರಿ ಸ್ಥಿತಿಯಲ್ಲಿ ಸಂಚರಿಸುತ್ತಾ ಮಕರ ರಾಶಿಯನ್ನು ಪ್ರವೇಶಿಸಲಿದೆ. ಹಾಗಾಗಿ ಮತ್ತೊಂದು ಬಾರಿ ಧನು ರಾಶಿಯವರಿಗೆ ಶನಿ ಸಾಡೇಸಾತ್‌ನ ಕರಿನೆರಳು ಬೀಳಲಿದೆ.ಆದರೆ ಇದರ ಪ್ರಭಾವ ಈ ರಾಶಿಯವರನ್ನು ಅಷ್ಟಾಗಿ ಕಾಡುವುದಿಲ್ಲ. 2023ರ ಜನವರಿ 17ರ ನಂತರ ಧನು ರಾಶಿಯವರಿಗೆ ಶನಿ ಸಾತ್‌ನಿಂದ ಸಂಪೂರ್ಣ ಮುಕ್ತಿ ಸಿಗಲಿದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ!...

ಶನಿದೋಷಕ್ಕೆ ಪರಿಹಾರ

- ಶನಿವಾರದಂದು ಶನಿದೇವನಿಗೆ ನೀಲಿ ಬಣ್ಣದ ಶಂಖಪುಷ್ಪವನ್ನು ಅರ್ಪಿಸಬೇಕು. 
- ಶನಿವಾರದ ದಿನ ಕಪ್ಪು ಬಣ್ಣದ ಬತ್ತಿಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು. 
- ಪ್ರತಿನಿತ್ಯ ಶನಿ ಸ್ತೋತ್ರವನ್ನು ಪಠಿಸಬೇಕು.

Follow Us:
Download App:
  • android
  • ios