Asianet Suvarna News Asianet Suvarna News

Astrology Tips: ಆಧ್ಯಾತ್ಮದ ಕಡೆಗೆ ಬಹುಬೇಗ ವಾಲುವ ರಾಶಿಗಳಿವು!

ಆಧ್ಯಾತ್ಮಿಕ ಚಿಂತನೆಗಳು ಮನುಷ್ಯನ ಜೀವನದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳನ್ನು ತರುತ್ತವೆ. ಇದನ್ನು ಇಲ್ಲಿ ನೀಡಿರುವ ರಾಶಿ ಚಕ್ರದ ಜನರು ಬಹು ಬೇಗ ಅರ್ಥಮಾಡಿಕೊಂಡು ಆ ದಾರಿಯಲ್ಲಿ ಸಾಗುತ್ತಾರೆ..

These zodiacs believes in spirituality
Author
First Published Dec 24, 2022, 4:40 PM IST

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದು ಹಂತಕ್ಕೆ ತಲುಪಿದ ಮೇಲೆ ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಅಸಕ್ತಿಯನ್ನು ತೋರುತ್ತಾರೆ. ಆಧ್ಯಾತ್ಮಿಕತೆಯ ಕಡೆಗೆ ಒಲವು ಪ್ರಾರಂಭವಾಗುವ ಮುನ್ನ ಆ ಕುರಿತು ಅವರ ಅಭಿಪ್ರಾಯಗಳು ಬೇರೆ ಇರುತ್ತದೆ. ಆದರೆ, ಒಮ್ಮೆ ಆಧ್ಯಾತ್ಮಿಕ ಭಾವನೆಗಳ ವಿಕಾಸನವನ್ನು ಅನುಭವಿಸಲು ಶುರು ಮಾಡಿದರೆ ಅಂತಹವರಲ್ಲಿ ಹೆಚ್ಚಿನ ಉತ್ಸಾಹ, ಸಂತೋಷ ಮತ್ತು ಹೊಸ ಚೈತನ್ಯ ಕಾಣಬಹುದು. ಏಕೆಂದರೆ, ಆಧ್ಯಾತ್ಮಿಕತೆ ಅನ್ನುವುದು ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ಭಾವನೆಗಳ ಮೇಲೆ ಕೆಲಸ ಮಾಡುತ್ತದೆ. ಈ ಮೂಲಕ ಜನರ ಜೀವನದ ಮೇಲೆ ಒಳ್ಳೆಯ ರೀತಿಯಲ್ಲಿ ಪ್ರಭಾವ ಬೀರುತ್ತಾ ಅವರನ್ನು ಪ್ರಬುದ್ಧ ವ್ಯಕ್ತಿಗಳಾಗಿ ಮಾಡಿಬಿಡುತ್ತದೆ.

ಕುಂಭ ರಾಶಿ (Aquarius): ಅಕ್ವೇರಿಯಸ್ ಜನ್ಮ ಚಿಹ್ನೆಯನ್ನು ಹೊಂದಿರುವ ಜನರು ನಿರಾತಂಕ, ಹೆಚ್ಚಿನ ಗಮನ ಶಕ್ತಿ ಮತ್ತು ಸ್ವಯಂ ಪ್ರೀತಿಯಿಂದ ತುಂಬಿರುತ್ತಾರೆ. ಈ ಜನರು ಇತರರನ್ನು ಮೇಲಕ್ಕೆತ್ತಲು ಮತ್ತು ಪರಸ್ಪರ ಜನರ ಹಿತ ಚಿಂತನೆಯ ಹೃದಯ (Heart) ಹೊಂದಿರುತ್ತಾರೆ. ಹಾಗೂ ಬೇರೆಯವರ ಸಂತೋಷಕ್ಕೆ ಮನಸ್ಸಿನಿಂದ ಪ್ರಾರ್ಥಿಸುತ್ತಾರೆ. ಹಾಗೂ ಎಲ್ಲರ ಖುಷಿಯಲ್ಲಿ ತಾವು ಭಾಗಿಯಾಗುವುದರಲ್ಲಿ ವಿಫಲರಾಗುವುದಿಲ್ಲ. ಈ ರಾಶಿಯ ಜನರು ಅತ್ಯಂತ ಪ್ರಬುದ್ಧರಾಗಿದ್ದಾರೆ ಮತ್ತು ನೈತಿಕ ದಿಕ್ಸೂಚಿಯ ಅಚಲ ಪ್ರಜ್ಞೆಯನ್ನು ಉಳಿಸಿಕೊಂಡು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅವರು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. 

ಇದನ್ನೂ ಓದಿ: Zodiac sign: ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಆಟವಾಡುವ ಜನರಿವರು!

ತುಲಾ ರಾಶಿ (Libra): ತುಲಾ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಸಾಕಷ್ಟು ಜ್ಞಾನ (Knowledge) ಮತ್ತು ದಯೆ ಹೊಂದಿರುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಅವರು ತಮ್ಮ ಹತ್ತಿರವಿರುವವರಿಗೆ ಉಪಕಾರ ಮಾಡುವ ಮೂಲಕ ವಿಶೇಷ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಇವರು ಆಧ್ಯಾತ್ಮಿಕವಾಗಿ ಜಾಗೃತರಾಗಿರುವುದರಿಂದ ಅವರು ಭಾವನೆಗಳ ಆಳವನ್ನು ಅನುಭವಿಸುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರಿಗೆ ಜೀವನದಲ್ಲಿ ಯಶಸ್ವಿಯಾಗಲು ಸಹಾಯ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ, ಮತ್ತು ದುರಾಶೆಯಿಂದ ಪ್ರೇರೇಪಿಸಲ್ಪಡುವುದಿಲ್ಲ ಮತ್ತು ತಮ್ಮ ಗುರಿಗಳನ್ನು ಸಾಧಿಸಲು (Achieve) ಯಾವಾಗಲೂ ಶ್ರಮಿಸುತ್ತಾರೆ.

ಕನ್ಯಾರಾಶಿ (Virgo): ಲೌಕಿಕ ಮತ್ತು ವಿಕಸನಗೊಂಡ ಪದಗಳು ಕನ್ಯಾ ರಾಶಿಯನ್ನು ಉತ್ತಮವಾಗಿ ವಿವರಿಸುತ್ತವೆ. ಈ ಜನರು ತುಂಬಾ ಪ್ರಬುದ್ಧರಾಗಿರುತ್ತಾರೆ (Matured), ಅವರು ಯಾವಾಗಲೂ ಇತರ ಜನರ ಸಂತೋಷವನ್ನು ತಮ್ಮ ಸಂತೋಷಕ್ಕಿಂತ ಮೊದಲಿನ ಆದ್ಯತೆಯಾಗಿ ಆರಿಸಿಕೊಳ್ಳುತ್ತಾರೆ, ಅವರ ಚಾತುರ್ಯ ಮತ್ತು ವಿಶ್ವಾಸಾರ್ಹತೆಯನ್ನು ಪ್ರದರ್ಶಿಸುತ್ತಾರೆ. ಕನ್ಯಾರಾಶಿ ಎಂದರೆ ನೀವು ಜೀವನದ ಕಠಿಣ ರಹಸ್ಯಗಳನ್ನು ಪರಿಹರಿಸಲು ಮತ್ತು ನಿಮ್ಮ ಬಗ್ಗೆ ಎಂದಿಗೂ ತೀರ್ಪು (Judgemental) ನೀಡದೆ ನಿಮ್ಮೊಂದಿಗೆ ನಿಲ್ಲುವ ವ್ಯಕ್ತಿಯೆಂದು ಧೈರ್ಯವಾಗಿ ನಂಬಬಹುದು.

ಇದನ್ನೂ ಓದಿ: ಸಂಬಂಧವನ್ನೇ ಹೊರೆ ಎಂದೇ ಭಾವಿಸುತ್ತಾರೆ ಈ ರಾಶಿ ಜನರು!

ವೃಷಭ ರಾಶಿ (Taurus): ಭೂಮಿಯ ಚಿಹ್ನೆಯನ್ನು ಪ್ರತಿನಿಧಿಸುವ ವೃಷಭ ರಾಶಿಯ ಜನರು ಜೀವನದಲ್ಲಿ ಅವರ ತೀವ್ರ ಸ್ಪಷ್ಟತೆಯಿಂದ (Clarity) ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ಅವರು ಯಾವುದೇ ಪರಿಸ್ಥಿತಿಯನ್ನು ಅತ್ಯುನ್ನತ ಸಮಗ್ರತೆಯಿಂದ ನಿಭಾಯಿಸುವ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಅವರು ತಮ್ಮ ಸ್ನೇಹಿತರಿಗೆ ನಿಜವಾದ ಸಂತೋಷವನ್ನು (Happiness) ತೋರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇವರು ಜೀವನದಲ್ಲಿ ಏನಿದೆಯೋ ಅದರಲ್ಲೇ ತೃಪ್ತರಾಗಿರುತ್ತಾರೆ (Satisfaction) ಮತ್ತು ತಮ್ಮ ಕೊರತೆಯ ಬಗ್ಗೆ ಎಂದಿಗೂ ದೂರುವುದಿಲ್ಲ.

ಈ ರಾಶಿಚಕ್ರ ಚಿಹ್ನೆಗಳು ಆಧ್ಯಾತ್ಮಿಕ ಭಾವನೆಗಳ ಕಡೆಗೆ ಹೆಚ್ಚಿನ ಒಲವು ತೋರುತ್ತಾರೆ. ಇದರ ಪ್ರಭವದಿಂದ ಅನೇಕ ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳುತ್ತಾರೆ. ಅವರಲ್ಲಿ ಸಮೃದ್ಧಿ ಮತ್ತು ತೃಪ್ತಿಯ ಭಾವನೆಯಿಂದ ತುಂಬಿರುವ ಕಾರಣ ಅವರು ಇತರರ ಸಂತೋಷದಲ್ಲಿ ತಾವು ಸಂತೋಷಪಡುತ್ತಾರೆ..

Follow Us:
Download App:
  • android
  • ios