Asianet Suvarna News Asianet Suvarna News

ಗುರು ಚಂಡಾಲ ಯೋಗ: 3 ರಾಶಿಗಳಿಗೆ 7 ತಿಂಗಳ ಸಂಕಷ್ಟಕರ ಕಾಲ

ಏಪ್ರಿಲ್‌ನಲ್ಲಿ ಗುರು ಹಾಗೂ ರಾಹುವಿನ ಯುತಿಯಿಂದ ಗುರು ಚಂಡಾಲ ಯೋಗ ಸೃಷ್ಟಿಯಾಗುತ್ತಿದೆ. ಇದರಿಂದ 7 ತಿಂಗಳ ಕಾಲ 3 ರಾಶಿಗಳಿಗೆ ಕಷ್ಟದ ಕಾಲ ಆರಂಭವಾಗಲಿದೆ. 

Guru Chandal Yoga in April will make life difficult for 3 zodiac signs for the next 7 months skr
Author
First Published Mar 25, 2023, 2:57 PM IST

ಚೈತ್ರ ನವರಾತ್ರಿ ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯಲ್ಲಿ ದುರ್ಗಾ ದೇವಿಯ ಒಂಬತ್ತು ದೈವಿಕ ರೂಪಗಳನ್ನು ಪೂಜಿಸಲಾಗುತ್ತದೆ. ಈ ವರ್ಷದ ಚೈತ್ರ ನವರಾತ್ರಿ ಆರಂಭವಾಗಿದೆ. ಈ ಸಮಯದಲ್ಲಿ ಅನೇಕ ಶುಭ ಯೋಗಗಳು ಕೂಡ ರಚನೆಯಾಗುತ್ತವೆ. ನವರಾತ್ರಿ ಉತ್ಸವವು 22 ಮಾರ್ಚ್ 2023ರಿಂದ ಪ್ರಾರಂಭವಾಗಿದೆ ಮತ್ತು 30 ಮಾರ್ಚ್ 2023 ರಂದು ಕೊನೆಗೊಳ್ಳುತ್ತದೆ. ನವರಾತ್ರಿ ಮುಗಿದ 1 ತಿಂಗಳ ನಂತರ ಗುರು ಚಂಡಾಲ ಎಂಬ ಯೋಗವು ರೂಪುಗೊಳ್ಳುತ್ತದೆ. 

ಹೌದು, ಎರಡು ಗ್ರಹಗಳ ಸಂಯೋಗದ ಪ್ರಭಾವದಿಂದ ಮೇಷ ರಾಶಿಯಲ್ಲಿ ಗುರು ಚಂಡಾಲ ಯೋಗ ಉಂಟಾಗುತ್ತಿದೆ. ಗುರು ಗ್ರಹವು ಏಪ್ರಿಲ್ 22, 2023 ರಂದು ಮೇಷ ರಾಶಿಯಲ್ಲಿ ಸಾಗಲಿದೆ, ಅಲ್ಲಿ ಈಗಾಗಲೇ ನೆರಳು ಗ್ರಹ ರಾಹು ಇರುತ್ತದೆ. ಇದರಿಂದ ಗುರು ಚಂಡಾಲ ಯೋಗ ರೂಪುಗೊಳ್ಳುತ್ತದೆ. ಗುರುವು ಶುಭ ಗ್ರಹವಾಗಿದ್ದು, ರಾಹು, ಕೇತು ಪಾಪ ಗ್ರಹಗಳಾಗಿವೆ. ಇದರಿಂದ ಗುರುವಿನ ಸಕಾರಾತ್ಮಕ ಪರಿಣಾಮಗಳನ್ನು ರಾಹು ನಾಶ ಮಾಡುತ್ತಾನೆ. ಹೀಗಾಗಿ, ಗುರು ಚಂಡಾಲ ಯೋಗ ಜಾತಕದಲ್ಲಿ ಉಂಟಾದರೆ ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ. 

ಏಪ್ರಿಲ್ 4, 2023ರಂದು ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯದ ಪ್ರಕಾರ, ಈ ಗುರು ಚಂಡಾಲ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಚಕ್ರದ ಚಿಹ್ನೆಗಳಿಗೆ ಮುಂಬರುವ 7 ತಿಂಗಳು ತುಂಬಾ ಸವಾಲಿನವುಗಳಾಗಿವೆ. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಮೇಷ ರಾಶಿ(Aries)
ಏಪ್ರಿಲ್ 22ರ ನಂತರ ಮೇಷ ರಾಶಿಯ ಲಗ್ನ ಮನೆಯಲ್ಲಿ ಗುರು ಚಂಡಾಲ ಯೋಗವು ರೂಪುಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ 7 ತಿಂಗಳು ಮೇಷ ರಾಶಿಯವರಿಗೆ ಸವಾಲಾಗಬಹುದು. ಮೇಷ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು, ಬಿಕ್ಕಟ್ಟು ಮತ್ತು ಅಸಮಾಧಾನವನ್ನು ಎದುರಿಸಬಹುದು. ಇದಲ್ಲದೇ ಹಣಕಾಸಿನ ಸಮಸ್ಯೆಯೂ ಬರಬಹುದು. ಆರೋಗ್ಯದ ವಿಷಯದಲ್ಲಿಯೂ ನೀವು ಚಿಂತೆ ಮಾಡಬಹುದು. ಆದ್ದರಿಂದ, ಈ ಸಮಯವು ಮೇಷ ರಾಶಿಯವರಿಗೆ ಅನುಕೂಲಕರವಾಗಿರುವುದಿಲ್ಲ.

Ram Navami 2023: ರಾಮರಾಜ್ಯ ಹೇಗಿರತ್ತೆ ಅಂದ್ರೆ?

ಮಿಥುನ ರಾಶಿ(Gemini)
ಮಿಥುನ ರಾಶಿಯವರ ಮೇಲೂ ಗುರು ಚಂಡಾಲ ಯೋಗವು ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ಅಹಿತಕರ ಸುದ್ದಿಗಳನ್ನು ಕೇಳಬಹುದು. ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆಗಳಿರಬಹುದು. ನೀವು ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಸಹ ಎದುರಿಸಬಹುದು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸಮಯ ತೆಗೆದುಕೊಳ್ಳಿ ಮತ್ತು ತಾಳ್ಮೆಯಿಂದ ಮುಂದುವರಿಯಿರಿ.

ಧನು ರಾಶಿ(Sagittarius)
ಧನು ರಾಶಿಯವರಿಗೆ ಗುರು ಚಂಡಾಲ ಯೋಗ ಸಮಸ್ಯೆಗಳನ್ನು ತರಬಹುದು. ಈ ಸಮಯದಲ್ಲಿ, ಧನು ರಾಶಿಯ ಜನರು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಆದ್ದರಿಂದ ಈ ಅವಧಿಯಲ್ಲಿ ನಿಮ್ಮ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ನಿಮ್ಮ ಖರ್ಚುಗಳ ಹೆಚ್ಚಳದಿಂದ ಹಣಕಾಸಿನ ತೊಂದರೆಗಳು ಉಂಟಾಗಬಹುದು. ಈ ಅವಧಿಯಲ್ಲಿ ಕೆಲವು ರೀತಿಯ ಅಜ್ಞಾತ ಭಯವು ನಿಮ್ಮನ್ನು ತೊಂದರೆಗೊಳಿಸಬಹುದು. ಇದಲ್ಲದೆ ವ್ಯಾಪಾರ, ಉದ್ಯೋಗ ಮತ್ತು ವೃತ್ತಿಯಲ್ಲಿಯೂ ಸಮಸ್ಯೆಗಳಿರಬಹುದು.

ಕೇತು ಸಂಕ್ರಮಣ: ಈ ನಾಲ್ಕು ರಾಶಿಯವರಿಗೆ ಭರ್ಜರಿ ಲಾಭ!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios