Shravan Shani tips 2022: ಶನಿಯನ್ನು ಮೆಚ್ಚಿಸಲು ಶ್ರಾವಣದಲ್ಲಿ ಈ ಕೆಲಸ ಮಾಡಿ..
ಶ್ರಾವಣ ಮಾಸವು ಶಿವನಿಗೆ ವಿಶೇಷವಾಗಿದೆ. ಶಿವನ ಆರಾಧನೆಯು ಶನಿ ದೋಷ ನಿವಾರಿಸಲು ಪರಿಣಾಮಕಾರಿಯಾಗಿದೆ. ಹೀಗಾಗಿ, ಕರ್ಮ ಫಲದಾತ ಶನಿಯನ್ನು ಮೆಚ್ಚಿಸಲು ಶ್ರಾವಣದಲ್ಲಿ ನೀವೇನೇನು ಮಾಡಬೇಕು ತಿಳಿಸುತ್ತೇವೆ.
ಶನಿದೇವನು ಕರ್ಮ ಫಲದಾತ. ನಮ್ಮ ಕೆಲಸಗಳಿಗನುಗುಣವಾಗಿ ಫಲ ನೀಡುವವನು. ಆತನ ಪೂಜೆಗೆ ಶನಿವಾರ ಉತ್ತಮ ದಿನ. ಈ ದಿನ ಕೇವಲ ಶನಿಯಲ್ಲದೆ ಶಿವ, ಆಂಜನೇಯನ ಪೂಜೆಗೆ ಪ್ರಶಸ್ತ ದಿನವಾಗಿದೆ. ಶನಿವಾರದ ದಿನ ಈ ಮೂವರನ್ನೂ ಆರಾಧಿಸುವುದರಿಂದ ಶನಿಯನ್ನು ಮೆಚ್ಚಿಸಲು ಸಾಧ್ಯವಿದೆ. ಅದರಲ್ಲೂ ಶ್ರಾವಣ ಮಾಸವು ಶಿವನಿಗೆ ಪ್ರಿಯವಾದುದು. ವಿಷ್ಣುವು ಯೋಗನಿದ್ರೆಯಲ್ಲಿದ್ದು, ಶಿವನು ಈ ಸಮಸ್ತ ಲೋಕಕಾರ್ಯಗಳ ಅಧಿಕಾರ ವಹಿಸಿಕೊಂಡಿರುವ ಸಮಯ. ಈ ಮಾಸದಲ್ಲಿ ಭೋಲೇನಾಥನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಶನಿ ದೋಷಕ್ಕೆ ಕೂಡಾ ಈಶ್ವರನ ಪೂಜೆ ಉತ್ತಮ ಪರಿಹಾರವಾಗಿದೆ. ಧರ್ಮಗ್ರಂಥಗಳ ಪ್ರಕಾರ, ಶಿವನ ಕೃಪೆಯಿಂದ, ಭಕ್ತರು ಎಲ್ಲ ರೀತಿಯ ದೋಷಗಳಿಂದ ಮುಕ್ತಿಯನ್ನು ಪಡೆಯಲು ಸಾಧ್ಯವಿದೆ. ಮತ್ತು ಜೀವನವು ಸಂತೋಷದಿಂದ ತುಂಬಿರುತ್ತದೆ.
ಈ ವರ್ಷ ಶ್ರಾವಣ ಸಮಯದಲ್ಲಿ ಶನಿದೇವನು ಮಕರ, ಕುಂಭ, ಧನು ರಾಶಿ, ಮಿಥುನ ಮತ್ತು ತುಲಾ ರಾಶಿಯ ಜನರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತಾನೆ. ಈ ರಾಶಿಗಳ ಮೇಲೀಗ ಸಾಡೇಸಾತಿ, ಶನಿ ಧೈಯ್ಯಾ ನಡೆಯುತ್ತಿದೆ. ಇದರಿಂದಾಗಿ ಈ ರಾಶಿಗಳ ವ್ಯಕ್ತಿಗಳು ಜೀವನದಲ್ಲಿ ಆರ್ಥಿಕ, ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶಿವನನ್ನು ಪೂಜಿಸುವುದರಿಂದ ಶನಿಯ ಹಾಫ್ ಎಂಡ್ ಹಾಫ್ ಮತ್ತು ಧೈಯ್ಯಾದ ಅಶುಭ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಇದಲ್ಲದೆ ಶ್ರಾವಣದ ಶನಿವಾರದಂದು ಶನಿದೇವನನ್ನು ಪೂಜಿಸುವುದರಿಂದ ವ್ಯಕ್ತಿ ಎದುರಿಸುತ್ತಿರುವ ಅಶುಭ ಪರಿಣಾಮಗಳಿಂದ ಮುಕ್ತಿ ಪಡೆಯಬಹುದಾಗಿದೆ.
Vastu for Kitchen: ಉಪ್ಪು ತೆರೆದಿಟ್ಟರೆ ಹೆಚ್ಚುತ್ತೆ ಸಾಲ.. ಅಡುಗೆಮನೆಯಲ್ಲಿ ಈ ಮಿಸ್ಟೇಕ್ಸ್ ಮಾಡ್ಬೇಡಿ
ವಿಶೇಷ ಯೋಗ
ಶ್ರಾವಣದ ಎರಡನೇ ಶನಿವಾರದಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ವೃದ್ಧಿ ಯೋಗ ರಚನೆಯಾಗುತ್ತಿದೆ. ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಸಿದ್ಧಿ ಯೋಗವು ಸಂಜೆ 7:03ರಿಂದ ಮರುದಿನ ಬೆಳಿಗ್ಗೆ 5:38ರವರೆಗೆ ಇರುತ್ತದೆ. ಇದರೊಂದಿಗೆ, ಚಂದ್ರನ ಸ್ಥಾನವು ಬಲವಾಗಿರುತ್ತದೆ. ಚಂದ್ರನು ವೃಷಭ ರಾಶಿಯಲ್ಲಿರುವುದರಿಂದ, ಈ ಶುಭ ಸಮಯವು ತುಂಬಾ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಶನಿ ದೇವನು ಸಹ ಭಗವಾನ್ ಶಿವನ ಮಹಾನ್ ಭಕ್ತನಾಗಿದ್ದಾನೆ ಮತ್ತು ಆಂಜನೇಯನು ಭಗವಾನ್ ಶಿವನ ಅವತಾರವಾಗಿದ್ದಾನೆ. ಹಾಗಾಗಿ, ಇವರಿಬ್ಬರನ್ನೂ ಶ್ರಾವಣ ಶನಿವಾರದಂದು ಪೂಜಿಸಬೇಕು.
ಈ ದೇಗುಲದ ಬಾಗಿಲು ತೆಗೆವುದು ನಾಗಪಂಚಮಿಗೆ ಮಾತ್ರ, ಭೇಟಿ ಕೊಟ್ರೆ ನಿವಾರಣೆಯಾಗುತ್ತೆ ಕಾಳಸರ್ಪ ದೋಷ!
ಶ್ರಾವಣ ಶನಿವಾರ ಹೀಗ್ಮಾಡಿ..
- ಶನಿಯನ್ನು ಅನುಕೂಲಕರವಾಗಿ ಒಲಿಸಿಕೊಳ್ಳಲು ಹನುಮಾನ್, ಶಿವ, ಅಶ್ವತ್ಥ ಮರ ಮತ್ತು ಬ್ರಹ್ಮ ದೇವರನ್ನು ಆರಾಧಿಸಿ, ಹಾಗೆ ಮಾಡುವುದರಿಂದ ಶನಿಗೆ ಸಂಬಂಧಿಸಿದ ದೋಷಗಳ ದುಷ್ಪರಿಣಾಮಗಳು ದೂರವಾಗುತ್ತವೆ.
- ಶನಿ ಚಾಲೀಸಾ, ದಶರಥ ಶನಿ ಸ್ತೋತ್ರವನ್ನು ಪಠಿಸಬೇಕು. ಇದು ಜಾತಕದಲ್ಲಿ ಪ್ರತಿಕೂಲವಾದ ಮನೆಗಳು ಅಥವಾ ಚಿಹ್ನೆಗಳಲ್ಲಿ ಶನಿಯ ಸ್ಥಾನದಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಶನಿ ಮಂತ್ರವನ್ನು ಪಠಿಸಿ 'ಓಂ ಪ್ರಾಮ್ ಪ್ರಾಂಸ್: ಶನೈಶ್ಚರಾಯ ನಮಃ' ಈ ಮಂತ್ರವನ್ನು ರುದ್ರಾಕ್ಷ ಮಾಲೆಯೊಂದಿಗೆ ಜಪಿಸಿದರೆ ನಿಮ್ಮ ಕೋರಿಕೆ ಫಲಪ್ರದವಾಗುತ್ತದೆ. ಶನಿ ಸಾಡೇ ಸತಿ, ಮಹಾದಶಾ ಅಥವಾ ಶನಿಯ ಅಂತರದಶಾ ಕೆಟ್ಟ ಅವಧಿಗಳಿಗೆ ಇದು ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ.
- ಶನಿಯ ದುಷ್ಪರಿಣಾಮಗಳನ್ನು ತೊಡೆದು ಹಾಕಲು ಮತ್ತು ಶನಿ ಗ್ರಹವನ್ನು ಮೆಚ್ಚಿಸಲು ಹನುಮಾನ್ ಕವಚ, ಭಜರಂಗ್ ಬಾಣ ಮತ್ತು ಹನುಮಾನ್ ಚಾಲೀಸಾವನ್ನು ಕನಿಷ್ಠ 3 ಬಾರಿ ಪಠಿಸಬೇಕು.
- ಸಾಸಿವೆ ಎಣ್ಣೆಯಿಂದ ಶಿವನಿಗೆ ಅಭಿಷೇಕ ಮಾಡಿ.