ಮಹಾಭಾರತ ಯುದ್ಧದ ಬಗ್ಗೆ ಈ 8 ಜನರಿಗೆ ಮೊದಲೇ ತಿಳಿದಿತ್ತಂತೆ!

Synopsis
ಸುಮಾರು ಐದು ಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತ ಯುದ್ಧದಲ್ಲಿ ಲಕ್ಷಾಂತರ ಯೋಧರು ಭಾಗವಹಿಸಿದ್ದರು. ಆದರೆ, ಈ ಯುದ್ಧ ನಡೆಯಲಿದೆ ಎಂಬುದು ಹಾಗೂ ಇದರ ಫಲಿತಾಂಶ ಏನು ಎಂಬುದು 8 ಜನರಿಗೆ ಮೊದಲೇ ತಿಳಿದಿತ್ತು. ಯಾರವರು?
ಸುಮಾರು ಐದು ಸಾವಿರ ವರ್ಷಗಳ ಹಿಂದೆ ನಡೆದ ಕಥೆ ಮಹಾಭಾರತ. ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರ ನಡುವೆ ನಡೆದ ಆ 18 ದಿನಗಳ ಮಹಾಯುದ್ಧದಲ್ಲಿ ಲಕ್ಷಾಂತರ ಯೋಧರು ಭಾಗವಹಿಸಿದ್ದರು. ಆದರೆ ಆ ಯುದ್ಧದಲ್ಲಿ ಕೇವಲ 18 ಮಂದಿ ದಿಗ್ಗಜರು ಮಾತ್ರ ಉಳಿದರು. ಭೀಕರ ಯುದ್ಧದಲ್ಲಿ ಕೌರವರ ಇಡೀ ಕುಟುಂಬ ನಾಶವಾಯಿತು. ಪಾಂಡವರ ಎಲ್ಲಾ ಪುತ್ರರೂ ಕೊಲ್ಲಲ್ಪಟ್ಟರು. ಆಶ್ಚರ್ಯಕರ ಸಂಗತಿಯೆಂದರೆ, ಇಂಥದೊಂದು ಪ್ರಳಯಾಂತಕ ಯುದ್ಧ ನಡೆಯಲಿದೆ ಅಂತ ಅಲ್ಲಿರುವ 8 ಮಂದಿಗೆ ಮೊದಲೇ ತಿಳಿದಿತ್ತು. ಅದರ ಫಲಿತಾಂಶ ಏನಾಗುತ್ತದೆ ಎಂಬುದೂ ಗೊತ್ತಿತ್ತು. ಹಾಗಾದರೆ ಆ 8 ಜನರು ಯಾರೆಂದು ತಿಳಿಯೋಣ.
ಶ್ರೀ ಕೃಷ್ಣ
ಯುದ್ಧದ ಬಗ್ಗೆ ಮತ್ತು ಅದರ ಫಲಿತಾಂಶ ಏನಾಗಬಹುದು ಎಂಬುದರ ಬಗ್ಗೆ ಶ್ರೀ ಕೃಷ್ಣನು ಮೊದಲು ತಿಳಿದಿದ್ದ ಎಂಬುದು ಎಲ್ಲರಿಗೂ ತಿಳಿದಿದೆ. ಮಹಾಭಾರತ ಕಾವ್ಯದಲ್ಲಿ ಶ್ರೀ ಕೃಷ್ಣನು ದ್ರೌಪದಿಗೆ ಯುದ್ಧದ ಕೆಲವು ದಿನಗಳ ಮೊದಲೇ ಯುದ್ಧದ ಫಲಿತಾಂಶದ ಬಗ್ಗೆ ಮತ್ತು ಅವಳ ಐದು ಮಕ್ಕಳ ಹತ್ಯೆಯ ಬಗ್ಗೆ ಹೇಳಿದ್ದ. ಇದನ್ನು ಕೇಳಿದ ದ್ರೌಪದಿಯ ಹೃದಯವು ದುಃಖದಿಂದ ತುಂಬಿತ್ತು.
ಭೀಷ್ಮ
ಭೀಷ್ಮ ಪಿತಾಮಹ ದೈವಿಕ ದರ್ಶನವನ್ನು ಹೊಂದಿದ್ದರು. ಯುದ್ಧವು ನಿಶ್ಚಿತವಾಗಿದೆ ಮತ್ತು ಅದರ ಫಲಿತಾಂಶ ಏನಾಗಬಹುದು ಎಂದು ಅವರು ತಿಳಿದಿದ್ದರು. ಆದರೆ ಕೌರವರ ಕಡೆಯಿಂದ ಯುದ್ಧ ಮಾಡಬೇಕಾಗಿ ಬಂದಿದ್ದಕ್ಕೆ ಬೇಸರವಾಯಿತು. ಏಕೆಂದರೆ ಅವರು ಸಿಂಹಾಸನದ ಋಣದಿಂದ ಬಂಧಿತರಾಗಿದ್ದರು. ಅವರು ಕೌರವರ ಜೊತೆ ಮತ್ತು ಪಾಂಡವರ ವಿರುದ್ಧ ಯುದ್ಧವನ್ನು ಬಯಸಿರಲಿಲ್ಲ.
ಋಷಿ ವೇದವ್ಯಾಸ
ಆ ಅವಧಿಯಲ್ಲಿ ದಿವ್ಯ ದರ್ಶನ ಪಡೆದ ಋಷಿಗಳಲ್ಲಿ ಋಷಿ ವೇದವ್ಯಾಸರೂ ಒಬ್ಬರು. ಯುದ್ಧ ನಿಶ್ಚಿತ ಎಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಧೃತರಾಷ್ಟ್ರನಿಗೆ ಹಲವು ಬಾರಿ ಸೂಕ್ಷ್ಮವಾಗಿ ವಿವರಿಸಿದ್ದರು. ಈಗಲೂ ಸಮಯವಿದೆ, ನೀನು ಈ ಯುದ್ಧವನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ನಿಮ್ಮ ಕುಲವು ನಾಶವಾಗುತ್ತದೆ ಎಂದು ವಿವರಿಸಿದ್ದರು. ಆದರೆ ಧೃತರಾಷ್ಟ್ರನಿಗೆ ವೇದವ್ಯಾಸರ ಈ ಮಾತುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಸಹದೇವ
ಪಾಂಡವರಲ್ಲಿ ಸಹದೇವ ತ್ರಿಕಾಲದರ್ಶಿಯಾಗಿದ್ದ. ಸಹದೇವ ಮುಂದೆ ನಡೆಯಲಿರುವ ಪ್ರತಿಯೊಂದು ಘಟನೆಯನ್ನು ಮೊದಲೇ ತಿಳಿದಿದ್ದ. ಮಹಾಭಾರತ ಯುದ್ಧ ಸಂಭವಿಸಲಿದೆ, ಯಾರ ಸಾವಿಗೆ ಯಾರು ಕಾರಣವಾಗುತ್ತಾರೆ ಎಂದು ಅವನಿಗೆ ತಿಳಿದಿತ್ತು. ಕೊನೆಯಲ್ಲಿ ಯಾರು ವಿಜಯಿಯಾಗುತ್ತಾರೆ ಎನ್ನುವುದು ಅರ್ಥವಾಗಿತ್ತು. ಆದರೆ ಶ್ರೀಕೃಷ್ಣನು ಅವನಿಗೆ ಈ ಯುದ್ಧದ ಬಗ್ಗೆ ಯಾರಿಗೂ ಹೇಳಬೇಡ ಎಂದು ನಿರ್ದೇಶಿಸಿದ್ದ.
ಸಂಜಯ
ಯುದ್ಧದ ಫಲಿತಾಂಶ ಏನಾಗಬಹುದು ಎಂಬ ಸಂಪೂರ್ಣ ಜ್ಞಾನ ಸಂಜಯನಿಗೆ ಇತ್ತು ಎಂದೂ ಹೇಳಲಾಗುತ್ತದೆ. ಸಂಜಯನಿಗೆ ಮಹರ್ಷಿ ವೇದವ್ಯಾಸರು ದಿವ್ಯ ದರ್ಶನವನ್ನು ನೀಡಿದ್ದರಿಂದ ಅವನು ಹಸ್ತಿನಾಪುರದ ಅರಮನೆಯಲ್ಲಿ ಕುಳಿತು ಯುದ್ಧವನ್ನು ನೋಡಿ ಅದನ್ನು ಧೃತರಾಷ್ಟ್ರನಿಗೆ ವಿವರಿಸುತ್ತಿದ್ದ. ಸಂಜಯನು ಶ್ರೀ ಕೃಷ್ಣನ ಭಕ್ತನಾಗಿದ್ದ. ಅವನು ಧೃತರಾಷ್ಟ್ರನ ಸಾರಥಿಯೂ ಆಗಿದ್ದನೆಂದು ಹೇಳಲಾಗುತ್ತದೆ.
ದ್ರೋಣಾಚಾರ್ಯ
ಶ್ರೀಕೃಷ್ಣನು ಎಲ್ಲಿ ಇರುತ್ತಾನೋ ಆ ಕಡೆ ವಿಜಯಶ್ರೀ ಇರುತ್ತಾಳೆ ಎಂದು ಕೌರವರ ಮತ್ತು ಪಾಂಡವರ ಗುರು ದ್ರೋಣಾಚಾರ್ಯರಿಗೂ ತಿಳಿದಿತ್ತು. ದ್ರೋಣಾಚಾರ್ಯನು ದಿವ್ಯ ದೃಷ್ಟಿಯನ್ನು ಹೊಂದಿದ್ದನು. ಹಾಗೂ ದೇವಗುರು ಬೃಹಸ್ಪತಿಯೇ ದ್ರೋಣಾಚಾರ್ಯನಾಗಿ ಜನ್ಮ ಪಡೆದರು ಎನ್ನುವ ನಂಬಿಕೆಯಿದೆ.
Mahabharata Story: ಹೆಣ್ಣೂ ಗಂಡೂ ಎರಡೂ ಆಗಿದ್ದ ರಾಜನಿಂದಲೇ ಮಹಾಭಾರತ ಶುರುವಾಯ್ತು!
ಕೃಪಾಚಾರ್ಯ
ಕೃಪಾಚಾರ್ಯರು ಯುದ್ಧದ ಫಲಿತಾಂಶವನ್ನು ಸಹ ನಿರೀಕ್ಷಿಸಿದ್ದರು ಎಂದು ಹೇಳಲಾಗುತ್ತದೆ. ಅವರು ಬಹುಶಃ ದೈವಿಕ ದರ್ಶನವನ್ನು ಹೊಂದಿದ್ದರು. ಏಕೆಂದರೆ ದಿವ್ಯದೃಷ್ಟಿ ಹೊಂದಿದವರು ಮಾತ್ರ ಶ್ರೀಕೃಷ್ಣನ ವಿಶ್ವರೂಪವನ್ನು ನೋಡಬಲ್ಲರು. ಕೃಪಾಚಾರ್ಯರು ಶ್ರೀ ಕೃಷ್ಣನ ವಿಶ್ವರೂಪವನ್ನೂ ನೋಡಿದ್ದರು.
ವಿದುರ
ಯುದ್ಧವನ್ನು ತಪ್ಪಿಸು ಎಂದು ಈತ ಪದೇ ಪದೇ ತನ್ನ ಅಣ್ಣನಾದ ಧೃತರಾಷ್ಟ್ರನಿಗೆ ಉಪದೇಶ ಮಾಡುತ್ತಿದ್ದ. ಹೀಗಾಗಿ ಅವನಿಗೆ ಇದರ ಬಗ್ಗೆ ಚೆನ್ನಾಗಿಯೇ ಗೊತ್ತಿತ್ತು. ಅದಕ್ಕೂ ತುಂಬ ಹಿಂದೆ ವಾರಣಾವತಿಗೆ ಪಾಂಡವರನ್ನು ಕೌರವರು ಕಳಿಸಿದಾಗ, ಅಲ್ಲಿರುವುದು ಅರಗಿನ ಅರಮನೆ ಎಂದು ಈತ ತಿಳಿದಿದ್ದು, ಅದನ್ನು ಧರ್ಮರಾಯನಿಗೆ ಗುಟ್ಟಾಗಿ ತಿಳಿಸಿ ಅವರನ್ನು ಕಾಪಾಡಿದ್ದ.
Mahabharat Story: ಮಹಾಭಾರತದಲ್ಲಿ ದ್ರೌಪದಿಗೆ ಒಬ್ಬ ಮಗಳಿದ್ದದ್ದು ನಿಮಗೆ ಗೊತ್ತೇ?