Asianet Suvarna News Asianet Suvarna News

ಶಿವಮೊಗ್ಗ ದಸರಾ ಉತ್ಸವಕ್ಕೆ ಸರ್ಕಾರದಿಂದ 1 ಕೋಟಿ ಅನುದಾನ

ಕಳೆದ ಬಾರಿ ಶಿವಮೊಗ್ಗ ದಸರಾಕ್ಕೆ ಅನುದಾನವೇ ನೀಡದ ರಾಜ್ಯ ಸರ್ಕಾರ ಈ ಬಾರಿ 2 ಕೋಟಿ ಬದಲಾಗಿ 1 ಕೋಟಿ ಅನುದಾನ ನೀಡಲು ಒಪ್ಪಿದೆ. ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

1 crore grant from karnataka Government for Dasara festival in Shivamogga gvd
Author
First Published Sep 19, 2022, 11:28 PM IST

ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ (ಸೆ.19): ಕಳೆದ ಬಾರಿ ಶಿವಮೊಗ್ಗ ದಸರಾಕ್ಕೆ ಅನುದಾನವೇ ನೀಡದ ರಾಜ್ಯ ಸರ್ಕಾರ ಈ ಬಾರಿ 2 ಕೋಟಿ ಬದಲಾಗಿ 1 ಕೋಟಿ ಅನುದಾನ ನೀಡಲು ಒಪ್ಪಿದೆ. ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಸರ್ಕಾರಕ್ಕೆ 2 ಕೋಟಿ ಅನುದಾನವನ್ನು ಕೋರಿ ತಿಂಗಳ ಮೊದಲೇ ಮಹಾನಗರ ಪಾಲಿಕೆ ಪತ್ರ ಬರೆದಿದೆ. ಆದರೆ, ಸರ್ಕಾರ 2 ಕೋಟಿ ಬದಲಾಗಿ, ಕೇವಲ 1 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಿದೆ. ಸರ್ಕಾರ ಕೇಳದಷ್ಟು ಹಣ ನೀಡದಿದ್ದರೂ, ಅರ್ಧದಷ್ಟಾದರೂ ನೀಡುತ್ತಿರುವುದು ಪಾಲಿಕೆಗೆ ಆಡಳಿತಕ್ಕೆ ಸಮಾಧಾನ ತರಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಮೈಸೂರು ಮಾದರಿಯಲ್ಲೆ ಶಿವಮೊಗ್ಗ ದಸರಾವೂ ನೆರವೇರುತ್ತಿದ್ದು, 9 ದಿನಗಳ ಕಾಲ ವೈಭವ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ. ಇದಕ್ಕಾಗಿ 2 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ಪಾಲಿಕೆಯಿಂದ 50 ಲಕ್ಷ ಹಣವನ್ನು ದಸರಾಗೆ ಮೀಸಲಿಸಿ, ಮಿಕ್ಕ ಹಣವನ್ನು ಸರ್ಕಾರ ಅನುದಾನ ರೂಪದಲ್ಲಿ ನೀಡುತ್ತದೆ. ಆದರೆ, ಈ ಕಳೆದ ಬಾರಿ ದಸರಾಗೆ ಆಚರಣೆಗೆ ಯಾವುದೇ ಹಣ ನೀಡದ ಸರ್ಕಾರ ಈ ಬಾರಿಯೂ ಅನುದಾನ ನೀಡುವುದು ಅನುಮಾನ ಎಂದು ಹೇಳಲಾಗಿತ್ತು.

40 ಪರ್ಸೆಂಟ್‌ ಕಮಿಷನ್‌ಗೆ ದಾಖಲೆ ಕೊಡಿ: ಈಶ್ವರಪ್ಪ ಕಿಡಿ

2 ಕೋಟಿಗೆ ಪ್ರಸ್ತಾವನೆ: ಶಿವಮೊಗ್ಗದಲ್ಲಿ ದಸರಾ ಆಚರಣೆಗೆ ಸರ್ಕಾರದ ಅನುದಾನದ ಅವಶ್ಯ ಇದೆ. ದಸರಾ ಆಚರಣೆಗೆ 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಕೇವಲ 1 ಕೋಟಿ ನೀಡುವುದಾಗಿ ತಿಳಿಸಿದೆ. ಕಳೆದ ವರ್ಷವೂ ರಾಜ್ಯ ಸರಕಾರದಿಂದ ನಯಾಪೈಸೆ ಮಂಜೂರು ಆಗಿಲ್ಲ. ಆದರೂ ಮಹಾನಗರ ಪಾಲಿಕೆಯೇ ಸಂಪೂರ್ಣ ಹೊರೆ ಹೊತ್ತು ಹಬ್ಬವನ್ನು ಆಚರಿಸಿತ್ತು. ಈ ಸಲ 1 ಕೋಟಿ ನೀಡುವುದಾಗಿ ಪ್ರತಿಕ್ರಿಯೆ ನೀಡಿದೆ ಎಂದು ಪಾಲಿಕೆ ಮೇಯರ್‌ ತಿಳಿಸಿದರು.

ಮಹಾನಗರ ಪಾಲಿಕೆಯು ತನ್ನ ಬಜೆಟ್‌ನಲ್ಲಿ ದಸರಾಗೋಸ್ಕರ 50 ಲಕ್ಷ ರು.ಮೀಸಲು ಇಟ್ಟಿದೆ. ಅದ್ಧೂರಿ ದಸರಾ ಆಚರಣೆಗೆ ಕಮ್ಮಿಯೆಂದರೂ 1.50 ಕೋಟಿಯಿಂದ 2 ಕೋಟಿಯವರೆಗೆ ಖರ್ಚಾಗುತ್ತದೆ. ಒಂದುವೇಳೆ, ಸರ್ಕಾರದಿಂದ ಅನುದಾನ ಬಾರದಿದ್ದರೆ ಮಹಾನಗರ ಪಾಲಿಕೆಯೇ ಈ ವೆಚ್ಚವನ್ನು ಭರಿಸಬೇಕಾಗುತ್ತದೆ. ಕಳೆದ ವರ್ಷವೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಪಾಲಿಕೆಯು ಕೊನೆಯವರೆಗೂ ಸರ್ಕಾರದಿಂದ 1.50 ಕೋಟಿ ರೂ. ಅನುದಾನ ಮಂಜೂರಾಗುತ್ತದೆ ಎಂಬ ನಂಬಿಕೆಯಲ್ಲಿತ್ತು. ಆದರೆ, ಕೊನೆಯ ಹಂತದಲ್ಲಿ ಇದು ಸಾಧ್ಯವಾಗಿರಲಿಲ್ಲ.

ನಿರೀಕ್ಷೆ ಹುಸಿ ಆಗಲಿಲ್ಲ: ಕಳೆದ ಬಾರಿ ದಸರಾ ಬಳಿಕ ಅನುದಾನ ನೀಡುತ್ತೇವೆ ಎಂದಿದ್ದ ಸರ್ಕಾರ ಆನಂತರ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ನೋಡೋಣ, ಮಾಡೋಣ ಎನ್ನುತ್ತಲೇ ವರ್ಷವೇ ಕಳೆದು ಹೋಗಿತ್ತು. ಈ ಬಾರಿಯೂ ಅನುದಾನ ನಿರೀಕ್ಷೆಯಲ್ಲಿ ಪ್ರಸ್ತಾವನೇ ಸಲ್ಲಿಸಿ ತಿಂಗಳೂ ಕಳೆದರೂ ಅನುದಾನ ಕೋರಿ ಪಾಲಿಕೆಯು ಸಲ್ಲಿಸಿದ್ದ ಪತ್ರಕ್ಕೆ ಯಾವುದೇ ಸ್ಪಂದನೆ ಸಿಗದ ಕಾರಣ ಈ ಬಾರಿಯೂ ಅನುದಾನ ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಸರ್ಕಾರ ಪಾಲಿಕೆ ಸಲ್ಲಿಸಿದ ಮನವಿಗೆ ತಡವಾಗಿ ಸ್ಪಂದಿಸಿದ್ದು, ದಸರಾ ಉತ್ಸವಕ್ಕೆ ಪಾಲಿಕೆ ಕೋರಿದ ಅನುಸಾನದ ಅರ್ಧಷ್ಟುಅನುದಾನ ನೀಡುವುದು ತಿಳಿಸಿದೆ.

ಯಡಿಯೂರಪ್ಪರಿಂದ ಸರ್ಕಾರಕ್ಕೆ ಪತ್ರ: ಸಾಮಾನ್ಯವಾಗಿ ದಸರಾ ಉತ್ಸವಕ್ಕೆ ಅನುದಾನ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೂಲಕ ಸರ್ಕಾರಕ್ಕೆ ಪತ್ರ ಸಲ್ಲಿಸಿರುವುದು ವಿಶೇಷವಾಗಿದೆ. ಈ ಪತ್ರಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ನೀಡಿದ್ದು, 1 ಕೋಟಿ ನೀಡುವುದಾಗಿ ತಿಳಿಸಿದೆ. ಕಳೆದ ಬಾರಿ ಕೆ.ಎಸ್‌.ಈಶ್ವರಪ್ಪ ಅವರು ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆಗ ಕೆ.ಎಸ್‌.ಈಶ್ವರಪ್ಪ ಸಚಿವರಾಗಿದ್ದರು. ಹೀಗಾಗಿ ದಸರಾ ಉತ್ಸವಕ್ಕೆ ಹೆಚ್ಚಿನ ಉತ್ಸಾಹ ತೋರಿದ್ದರು. ಆದರೆ, ಈಗ ಮಂತ್ರಿಸ್ಥಾನ ಕಳೆದುಕೊಂಡಿರುವುದರಿಂದ ಅವರು ಈ ಬಾರಿ ದಸರಾಗೆ ಅಷ್ಟೇನೂ ಆಸಕ್ತಿ ತೋರುತ್ತಿಲ್ಲ ಎಂಬುದು ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯ ಎಚ್‌.ಸಿ.ಯೋಗೀಶ್‌ ಎಂಬುದು ಅಪಾದನೆ.

ಅಸಮಾಧಾನ ಇರುವುದರಿಂದಲೇ ಸದನಕ್ಕೆ ಹೋಗುತ್ತಿಲ್ಲ: ಮಂತ್ರಿಗಿರಿಗಾಗಿ ಮತ್ತೆ ಸಿಡಿದೆದ್ದ ಈಶ್ವರಪ್ಪ

ಶಿವಮೊಗ್ಗ ದಸರಾವನ್ನು ಅದ್ದೂರಿ ಆಚರಣೆಗೆ ಸಲುವಾಗಿ ಸರ್ಕಾರಕ್ಕೆ 2 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ 1 ಕೋಟಿ ರು. ನೀಡಲು ಒಪ್ಪಿದೆ. ಕಳೆದ ಬಾರಿ ಸರ್ಕಾರ ಅನುದಾನ ನೀಡಿರಲಿಲ್ಲ. ಈ ಬಾರಿ ನೀಡಲು ಒಪ್ಪಿದೆ. ಸರ್ಕಾರದ ಅನುದಾನ ಹಾಗೂ ಪಾಲಿಕೆಯಲ್ಲಿ ದಸರಾಕ್ಕೆ ಮೀಸಲಿರುವ ಅನುದಾನವನ್ನು ಬಳಸಿಕೊಂಡು ದಸರಾವನ್ನು ಅದ್ದೂರಿಯಾಗಿ ಆಚರಿಸಲು ವೇದಿಕೆ ಸಿದ್ದಗೊಳಿಸಲಾಗಿದೆ
- ಸುನೀತಾ ಅಣ್ಣಪ್ಪ, ಮೇಯರ್‌, ಮಹಾನಗರ ಪಾಲಿಕೆ

Follow Us:
Download App:
  • android
  • ios