ಕೆಜಿಎಫ್‌-2 ನಂತರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿರುವ ರಾಕಿಂಗ್‌ ಸ್ಟಾರ್‌. ರಾವಣ ಪಾತ್ರದಲ್ಲಿ ಅಭಿನಯಿಸುತ್ತಿರುವ ಯಶ್‌. ರಾವಣನ ಪಾಸಿಟಿವ್‌, ನೆಗೆಟಿವ್‌ ವ್ಯಕ್ತಿತ್ಳವನ್ನು ಹೇಳಿದ ಬಳಿಕ ಅವರು ಪಾತ್ರ ಮಾಡಲು ಒಪ್ಪಿಗೆ ಕೊಟ್ಟರು ಅಂತಾರೆ ನಿರ್ದೇಶಕ ನಿತೀಶ್‌ ತಿವಾರಿ.

ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟ ಯಶ್‌ ಅವರು ರಾವಣನ ಪಾತ್ರವನ್ನು ಒಪ್ಪಿದ್ದೇಕೆ ಎನ್ನುವ ಕುತೂಹಲಕ್ಕೆ ನಿರ್ದೇಶಕ ನಿತೀಶ್ ತಿವಾರಿ ಉತ್ತರಿಸಿದ್ದಾರೆ. ರಾಮನ ಪಾತ್ರದ ಟೀಸರ್‌ ಬಿಡುಗಡೆ ಆದ ನಂತರ ಮೊದಲ ಬಾರಿಗೆ ಯಶ್‌ ಅವರ ಪಾತ್ರದ ಬಗ್ಗೆ ನಿತೀಶ್‌ ತಿವಾರಿ ಹೇಳಿದ ಮಾತುಗಳು ಇಲ್ಲಿವೆ.

1. ರಾವಣನದ್ದು ತುಂಬಾ ಸಂಕೀರ್ಣವಾದ ವ್ಯಕ್ತಿತ್ವ. ಆದರೆ, ಆತನನ್ನು ಎಲ್ಲರು ಖಳನನ್ನಾಗಿಯೇ ನೋಡಿದ್ದಾರೆ. ಮತ್ತು ಹಾಗೆ ಚಿತ್ರಿಸಿದ್ದಾರೆ ಕೂಡ.

2. ರಾವಣ ವಿಲನ್‌ಗಿಂತಲೂ ಮಿಗಿಲು. ಅಂದರೆ ಆತ ಅಪಾರ ಜ್ಞಾನಿ, ಸಂಗೀತಗಾರ, ವೈದ್ಯ ಜ್ಞಾನದಲ್ಲೂ ನೈಪುಣ್ಯತೆ ಹೊಂದಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಆತ ಶಿವನ ಪರಮ ಭಕ್ತನಾಗಿದ್ದ. ರಾವಣನ ಈ ಗುಣಗಳನ್ನು ಬಿಟ್ಟು ಆತನ ಅವಗುಣಗಳನ್ನೇ ತೋರಿಸಲಾಗಿದೆ.

4. ನಮ್ಮ ‘ರಾಮಾಯಣ’ ಚಿತ್ರದಲ್ಲಿ ರಾವಣನ ಗುಣಗಳನ್ನೂ ತೋರಿಸುತ್ತಿದ್ದೇನೆ. ನೆಗೆಟೀವ್‌ ಮತ್ತು ಪಾಸಿಟೀವ್‌ ಎರಡೂ ಇರುವ ಪಾತ್ರ ಇದಾಗಿದ್ದು, ಇದಕ್ಕೆ ಯಶ್‌ ಅವರೇ ಸೂಕ್ತ. ಅವರಿಂದಲೇ ಈ ಪಾತ್ರ ಮಾಡಲು ಸಾಧ್ಯವಾಗುತ್ತದೆ ಎಂದು ಆ ರಂಭದಲ್ಲೇ ಅನಿಸಿತು.

5. ನಾವು ಯಶ್‌ ಅವರಿಗೆ ರಾವಣನ ಎರಡೂ ವ್ಯಕ್ತಿತ್ವಗಳನ್ನು ಹೇಳಿ ‘ರಾಮಾಯಣ’ ಚಿತ್ರದಲ್ಲಿ ರಾವಣನನ್ನು ನಾವು ಯಾವ ರೀತಿ ತೋರಿಸಲಿದ್ದೇವೆ ಎಂದು ಹೇಳಿದಾಗ ಯಶ್‌ ಅವರು ರಾವಣ ಪಾತ್ರ ಮಾಡಲು ಒಪ್ಪಿಕೊಂಡರು.

ಅತ್ಯಂತ ಭಿನ್ನ

6. ನಾವು ನೋಡಿರುವ, ಕೇಳಿರುವ, ಓದಿರುವ ರಾಮಾಯಣಗಳಿಗಿಂತಲೂ ಅತ್ಯಂತ ಭಿನ್ನವಾಗಿ ರಾವಣನ ಪಾತ್ರವನ್ನು ನಮ್ಮ ಚಿತ್ರದಲ್ಲಿ ರೂಪಿಸಲಾಗಿದೆ. ರಾವಣನ ಈ ಹಲವು ಶೇಡ್‌ಗಳೇ ಯಶ್‌ ಅವರನ್ನು ಆಕರ್ಷಿಸಿದ್ದು.