ಪವನ್ ಕಲ್ಯಾಣ್ ಅವರ ಉತ್ತರಾಧಿಕಾರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಕೀರಾ ನಂದನ್ ಹೀರೋ ಆಗಿ ಎಂಟ್ರಿ ಕೊಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ರೇಣು, ಪವನ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಪವನ್ ಕಲ್ಯಾಣ್ ಅವರ ಪುತ್ರ ಅಕೀರಾ ನಂದನ್ ಹೀರೋ ಆಗಿ ಎಂಟ್ರಿ ಕೊಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ ಅವರ ತಾಯಿ ರೇಣು ದೇಸಾಯಿ, ಅಭಿಮಾನಿಗಳ ಹೃದಯ ಮುರಿಯುವಂಥ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅಕೀರಾ ಸಿನಿಮಾ ಎಂಟ್ರಿ ಬಗ್ಗೆ ಅವರು ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಪವನ್ ಕಲ್ಯಾಣ್ ಅವರ ಉತ್ತರಾಧಿಕಾರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಕೀರಾ ನಂದನ್ ಹೀರೋ ಆಗಿ ಎಂಟ್ರಿ ಕೊಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಯಸ್ಸಿನಲ್ಲಿ ಇನ್ನೂ ಚಿಕ್ಕವನಾದ್ದರಿಂದ ಅಷ್ಟೇನೂ ಒತ್ತಡವಿಲ್ಲ, ಆದರೆ ಪವನ್ ಅಭಿಮಾನಿಗಳು ಅವನನ್ನು ಹೀರೋ ಆಗಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಅಕೀರಾ ನಂದನ್ ಎಲ್ಲಾದರೂ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು, ಅವನ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತವೆ. ಇಂತಹ ಸಮಯದಲ್ಲಿ ರೇಣು ದೇಸಾಯಿ, ಪವನ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಈ ಹಿಂದೆ ಅಕೀರಾ ನಂದನ್ ಸಿನಿಮಾ ಎಂಟ್ರಿ ಬಗ್ಗೆ ಮಾತನಾಡಿದ್ದ ರೇಣು ದೇಸಾಯಿ, 'ಅವನು ಸಿನಿಮಾಗೆ ಬರ್ತೀನಿ ಅಂದ್ರೆ ನಾನೇ ಖುಷಿಪಡ್ತೀನಿ, ಬ್ಯಾಂಡ್ ಬಾರಿಸಿ ವಿಷಯ ಹೇಳ್ತೀನಿ' ಅಂದಿದ್ದರು. ಆದರೆ ಈಗ ಮತ್ತೆ ಪ್ರತಿಕ್ರಿಯಿಸಿ, ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಶಾಕ್ ಆಗುವಂಥ ವಿಷಯ ಹೇಳಿ, ದೊಡ್ಡ ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದಾರೆ. ರೇಣು ದೇಸಾಯಿ ಹೇಳುವ ಪ್ರಕಾರ, ಅಕೀರಾ ನಂದನ್‌ಗೆ ಸದ್ಯಕ್ಕೆ ಸಿನಿಮಾಗಳ ಮೇಲೆ ಆಸಕ್ತಿ ಇಲ್ಲವಂತೆ. 'ಸಿನಿಮಾ ಯಾವಾಗ ಮಾಡ್ತೀಯಾ?' ಅಂತ ಕೇಳಿದ್ರೆ, 'ನೋಡೋಣ, ಇಂಟರೆಸ್ಟ್ ಇಲ್ಲ' ಅಂತ ಹೇಳ್ತಾನಂತೆ. ಸದ್ಯಕ್ಕೆ ಸಂಗೀತ, ಕಲೆ, ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾನೆ. ಇತ್ತೀಚೆಗಷ್ಟೇ ಅಕೀರಾ 10ನೇ ತರಗತಿ ಮುಗಿಸಿದ್ದು, ಈಗ ಪಿಯುಸಿ ಓದೋಕೆ ರೆಡಿ ಆಗ್ತಿದ್ದಾನೆ ಎಂದು ರೇಣು ದೇಸಾಯಿ ತಿಳಿಸಿದ್ದಾರೆ.

ಹೊಸಬರ ಜೊತೆ ಮಾಡ್ತೀನಿ

ಇದೇ ವೇಳೆ ರೇಣು ದೇಸಾಯಿ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ನಿರ್ದೇಶಕಿಯಾಗಿ ಸಿನಿಮಾ ಮಾಡಿದ್ರೆ ಯಾವ ಹೀರೋ ಜೊತೆ ಮಾಡ್ತೀರಾ ಅನ್ನೋ ಪ್ರಶ್ನೆಗೆ, 'ಹೊಸಬರ ಜೊತೆ ಮಾಡ್ತೀನಿ' ಎಂದಿದ್ದಾರೆ. ಅಕೀರಾ ಜೊತೆ ಸಿನಿಮಾ ಮಾಡುವುದಾಗಿಯೂ ಹೇಳಿರುವುದು ವಿಶೇಷ. ತಾನು ಶೀಘ್ರದಲ್ಲೇ ನಿರ್ದೇಶಕಿಯಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ, ನಟಿಯಾಗಿ ಒಳ್ಳೆ ಪಾತ್ರಗಳು ಬಂದರೆ ನಟಿಸಲು ರೆಡಿ ಇದ್ದಾರಂತೆ. ಸದ್ಯ ತೆಲುಗಿನಲ್ಲಿ ಎರಡು-ಮೂರು ಸಿನಿಮಾಗಳಲ್ಲಿ ನಟಿಸುತ್ತಿರುವುದಾಗಿ 'ಚಂದ್ರವ್ವ' ಅವರ ಸಂದರ್ಶನದಲ್ಲಿ ರೇಣು ದೇಸಾಯಿ ಹೇಳಿದ್ದಾರೆ.