ಅಭಿಮಾನಿಗಳಿಗೆ ಬುದ್ಧಿವಂತನ ‘ಬುದ್ಧಿಮಾತು’!
ಅಭಿಮಾನಿಗಳಲ್ಲಿ ಉಪೇಂದ್ರ ಮನವಿ | ಅಭಿಮಾನಿಗಳ ದಿನದಂದು ಸಸಿಗಳನ್ನು ಮನವಿ | ಅದನ್ನು ಪೋಷಿಸುವ ಜವಾಬ್ದಾರಿ ಹೊತ್ತ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅಪಾರವಾದ ಅಭಿಮಾನಿಗಳನ್ನು ಹೊಂದಿದ ನಟ. ಅಭಿಮಾನಿಗಳ ಮೇಲೆ ಅಪಾರ ಪ್ರೀತಿ ಇಟ್ಟಿದ್ದಾರೆ. ಸೆಪ್ಟೆಂಬರ್ 18 ರಂದು ‘ಅಭಿಮಾನಿಗಳ ದಿನ’. ರಿಯಲ್ ಸ್ಟಾರ್ ಉಪೇಂದ್ರ ಮನವಿಯೊಂದನ್ನು ಮಾಡಿದ್ದಾರೆ.
ಏನ್ ಚಂದಾನೇ ‘ಲಕ್ಷ್ಮೀ ಬಾರಮ್ಮಾ’ ಚಿನ್ನು!
ಸೆಪ್ಟೆಂಬರ್ 18 "ಅಭಿಮಾನಿಗಳ ದಿನ", ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ...
-ನಿಮ್ಮ ಉಪೇಂದ್ರ’ ಎಂದಿದ್ದಾರೆ.
ಸ್ಟಾರ್ ನಟರು ಈ ರೀತಿ ಅಭಿಮಾನಿಗಳಿಗೆ ಹೇಳುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಕೇಕ್, ಹೂವಿನಹಾರ, ಹೂಗುಚ್ಚ ತಂದು ಅದನ್ನು ಕಸದ ಬುಟ್ಟಿ ಸೇರುತ್ತದೆ. ಸುಮ್ಮನೆ ಪೋಲಾಗುತ್ತದೆ.
"