ಮಹೇಶ್ ಬಾಬು ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿದ್ದಾರೆ. ಕೆಲವು ಡಿಸಾಸ್ಟರ್ ಸಿನಿಮಾಗಳನ್ನೂ ಮಾಡಿದ್ದಾರೆ. ಆದರೆ ಅವರ ಇಡೀ ಕೆರಿಯರ್ನಲ್ಲಿ ಅಭಿಮಾನಿಗಳಿಗೆ ತಲೆನೋವು ತಂದಿಟ್ಟ ಸಿನಿಮಾ ಒಂದೇ ಒಂದು. ಅದು ಯಾವುದು ಗೊತ್ತಾ?
ಸೂಪರ್ ಸ್ಟಾರ್ ಕೃಷ್ಣ ವರ್ಷಕ್ಕೆ 15 ಸಿನಿಮಾ ಮಾಡಿದ ದಾಖಲೆ ಹೊಂದಿದ್ದರೆ, ಅವರ ಮಗ ಮಹೇಶ್ ಬಾಬು ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಾರೆ. ಹಾಗಾಗಿ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಆದರೆ 'ಬ್ರಹ್ಮೋತ್ಸವಂ' ಸಿನಿಮಾ ಮಾತ್ರ ಅಭಿಮಾನಿಗಳಿಗೆ ತೀವ್ರ ಕಿರಿಕಿರಿ ಮತ್ತು ಬೇಸರವನ್ನುಂಟು ಮಾಡಿತ್ತು.
'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಹಿಟ್ ಆದ ನಂತರ, ಮಹೇಶ್ ಬಾಬು ನಿರ್ದೇಶಕ ಶ್ರೀಕಾಂತ್ ಅಡ್ಡಾಲ ಅವರನ್ನು ನಂಬಿ 'ಬ್ರಹ್ಮೋತ್ಸವಂ'ಗೆ ಅವಕಾಶ ನೀಡಿದರು. ಆದರೆ ಕಳಪೆ ಕಥೆ, ಹೊಂದಾಣಿಕೆ ಇಲ್ಲದ ಚಿತ್ರಕಥೆಯಿಂದಾಗಿ ಈ ಸಿನಿಮಾ ಅತಿದೊಡ್ಡ ಡಿಸಾಸ್ಟರ್ ಆಯಿತು.
ಈ ಸಿನಿಮಾ ನೋಡಿದ ಅಭಿಮಾನಿಗಳಿಗೂ ಕಿರಿಕಿರಿಯಾಯಿತು. ಇಂತಹ ಕಳಪೆ ಸಿನಿಮಾವನ್ನು ಮಹೇಶ್ ಯಾಕೆ ಒಪ್ಪಿಕೊಂಡರು ಎಂದು ಪ್ರಶ್ನಿಸಿದರು. ಈ ಚಿತ್ರದ ನಂತರ, ಮಹೇಶ್ ಬಾಬು ಕಥೆ ಆಯ್ಕೆಯಲ್ಲಿ ಬಹಳ ಜಾಗರೂಕರಾದರು. ಪತ್ನಿ ನಮ್ರತಾ ಕೂಡ ಬೆಂಬಲವಾಗಿ ನಿಂತರು.
ಬ್ರಹ್ಮೋತ್ಸವಂ ಕಥೆಯನ್ನು ಶ್ರೀಕಾಂತ್ ಅಡ್ಡಾಲ ಮೊದಲು ಜೂ.ಎನ್ಟಿಆರ್ಗೆ ಹೇಳಿದ್ದರು. ಎನ್ಟಿಆರ್ ಕೆಲವು ಬದಲಾವಣೆಗಳನ್ನು ಸೂಚಿಸಿದರು. ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಆಗ ಸತತ ಸೋಲುಗಳಿಂದ ಕಂಗೆಟ್ಟಿದ್ದ ಎನ್ಟಿಆರ್, ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದೆ, ಈ ಸಿನಿಮಾವನ್ನು ನಿರಾಕರಿಸಿದರು. ನಂತರ ಈ ಸಿನಿಮಾ ಮಹೇಶ್ ಬಾಬು ಪಾಲಾಯಿತು.
ವಾರಣಾಸಿಯಲ್ಲಿ ಬ್ಯುಸಿ
ಸದ್ಯ ಮಹೇಶ್ ಬಾಬು ತಮ್ಮ 29ನೇ ಚಿತ್ರ 'ವಾರಣಾಸಿ'ಯಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಈ ಚಿತ್ರ 1500 ಕೋಟಿ ಬಜೆಟ್ನಲ್ಲಿ ತಯಾರಾಗುತ್ತಿದೆ. 50ರ ಹರೆಯದಲ್ಲೂ ಮಹೇಶ್ ಯುವಕನಂತೆ ಕಾಣುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿದ್ದು, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿದ್ದಾರೆ.


