ಬಿಗ್ ಬಾಸ್ ಮನೆಯಲ್ಲಿ ಜೋಡಿಹಕ್ಕಿಗಳೂ ಬೇರೆ ಬೇರೆಯಾಗಿವೆ. ಲವ್‌ ಬರ್ಡ್ಸ್ ಎಂದೇ ಗುರುತಿಸಿಕೊಂಡಿದ್ದ ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ ಜೋರಾಗಿಯೇ ನಡೆದಿದೆ.

ಬಿಗ್ ಬಾಸ್ ಮನೆಗೆ ಹೊಸ ನಾಯಕರ ಆಯ್ಕೆಯಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಜೀವಿತಾ ಬಿಗ್ ಬಾಸ್ ಮನೆಯ ಹೊಸ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಾಯಕರ ರೇಸ್‌ನಲ್ಲಿದ್ದವರಿಗೆ ಸಿ ಆಕಾರದ ವಸ್ತುವೊಂದನ್ನು ಕೊನೆಯವರೆಗೆ ಹಿಡಿದುಕೊಳ್ಳಲು ಹೇಳಲಾಗಿತ್ತು. ಶಶಿ, ಧನರಾಜ್, ಅಕ್ಷತಾ, ರಶ್ಮಿ ಮತ್ತು ಜೀವಿತಾ ನಡುವೆ ಸ್ಪರ್ಧೆ ಇತ್ತು. ತಾವು ಯಾಕೆ ಮನೆಯ ನಾಯಕರಾಗಬೇಕು ಎಂಬುದನ್ನು ಸಮರ್ಥಿಸಿಕೊಂಡು ಉಳಿಸವರು ಸಿ ಪಟ್ಟಿ ಬಿಟ್ಟು ಹೊರನಡೆಯುವಂತೆ ಮಾಡುವುದು ಪ್ರಮುಖ ಟಾಸ್ಕ್ ಆಗಿತ್ತು.

Add Asianetnews Kannada as a Preferred SourcegooglePreferred

ದೊಡ್ಡ ಮನೆಯ ಮೇಲೆ ಪ್ರೇಕ್ಷಕರಿಗೆ ಮೂಡಿದ ಬಿಗ್‌ ಅನುಮಾನ?

ರಶ್ಮಿಯನ್ನು ಉಳಿದ ನಾಲ್ಕು ಜನ ಮೊದಲಿಗೆ ಹೊರಹಾಕಿದರು. ನೀವು ಹೊರನಡೆಯಿರಿ ಎಂದು ಹೇಳಿದರು. ಇಲ್ಲಿ ಗ್ರೂಪಿಸಂ ಆಗುತ್ತಿದೆ ಎಂದು ರಶ್ಮಿ ಆರೋಪ ಮಾಡಿದ್ದೂ ಆಯಿತು. ಇದಾದ ಮೇಲೆ ಅಕ್ಷತಾ ಹೊರನಡೆದರು. ಅಂತಿಮವಾಗಿ ಧನರಾಜ್ ಮತ್ತು ಶಶಿ ಪರಸ್ಪರ ಮಾತನಾಡಿಕೊಂಡು ಜೀವಿತಾಗೆ ನಾಯಕತ್ವ ಬಿಟ್ಟುಕೊಡುವ ತೀರ್ಮಾನ ಮಾಡಿದರು.

ಇದಕ್ಕಿಂತ ಮೊದಲು ಅದೇ ಹಳೆಯ ಗಂಡ-ಹೆಂಡತಿ ವಿಚಾರಕ್ಕೆ ಅಕ್ಷತಾ ಮತ್ತು ರಾಕೇಶ್ ನಡುವೆ ವಾಕ್ ಸಮರವೇ ನಡೆಯಿತು. ಅದೇ ಹಳೆ ವಿಚಾರವನ್ನು ಯಾಕೆ ಕೆದಕುತ್ತಿಯಾ? ಮತ್ತೆ ಮತ್ತೆ ಯಾಕೆ ನಿನ್ನನ್ನು ಬಳಸಿಕೊಂಡೆ ಎಂದು ಹೇಳುತ್ತೀಯಾ ಎಂದು ರಾಕೇಶ್ ಅಕ್ಷತಾಗೆ ಪ್ರಶ್ನೆ ಮಾಡಿದರು. ಇದಕ್ಕೂ ಸರಿಯಾಗಿ ಉತ್ತರಿಸದ ಅಕ್ಷತಾ ‘ಹೋಗಲೋ’ ಎಂದು ಹೇಳಿ ಮುಂದಕ್ಕೆ ಹೋದಾಗ ಮನೆ ಮಂದಿ ಇಬ್ಬರ ನಡುವೆ ಏನಾಗುತ್ತಿದ? ಎಂದು ಮಾತನಾಡಿಕೊಂಡರು.