ಅಮೃತಧಾರೆಯಲ್ಲಿ ಮಲ್ಲಿಯಾಗಿದ್ದ ನಟಿ ರಾಧಾ ಭಗವತಿ ಅವರು ಇದೀಗ ಭಾರ್ಗವಿ ಎಲ್​ಎಲ್​ಬಿಯ ಭಾರ್ಗವಿಯಾಗಿದ್ದಾರೆ. ಇವರ ರೀಲ್ಸ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಗಮನ ಸೆಳೆಯುತ್ತಿದೆ 

ಅಮೃತಧಾರೆಯ ಪೆದ್ದು ಮಲ್ಲಿ, ಈಗ ಭಾರ್ಗವಿ ಎಲ್​ಎಲ್​ಬಿಯಲ್ಲಿ ಖಡಕ್​ ಲಾಯರ್​ ಆಗಿದ್ದಾಳೆ. ಅಷ್ಟಕ್ಕೂ, ಈಗಲೂ ಹಲವರಿಗೆ ಮಲ್ಲಿ ಎಂದರೆ ಸಾಕು, ಸದ್ಯ ಸೀರಿಯಲ್​ ಪ್ರಿಯರು ಕಣ್ಣೆದುರಿಗೆ ಬರುವುದು ಅಮೃತಧಾರೆಯ ಕೆಲಸದಾಕೆ ಅದೇ ಹಿಂದಿನ ಪೆದ್ದಿನೇ. ಏಕೆಂದರೆ ಈಗಿನ ಮಲ್ಲಿ ಸಕತ್​ ಚುರುಕಾಗಿ ಜಾಣೆಯೂ ಆಗಿದ್ದಾಳೆ. ಆದರೆ ಹಿಂದಿನ ಮಲ್ಲಿ ಮಾಲೀಕ ಜೈದೇವನಿಂದಲೇ ಗರ್ಭಿಣಿಯಾಗಿದ್ದಳು. ಭೂಮಿಕಾಳ ಕೃಪೆಯಿಂದ ಜೈದೇವನ ಜೊತೆಯಲ್ಲಿಯೇ ಮದುವೆಯಾದರೂ ಯಾವ ಕ್ಷಣದಲ್ಲಾದರೂ ಏನಾದರೂ ಆಗಬಹುದು ಎನ್ನುವ ಆತಂಕದ ಜೀವನ ನಡೆಸುತ್ತಿದ್ದಾಳೆ ಮಲ್ಲಿ. ಜೈದೇವ ಸದ್ಯ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕ ಮಾಡುತ್ತಿದ್ದಾನೆ. ಆದರೆ, ತನ್ನ ಪತಿಯ ಬಂಡವಾಳ ತಿಳಿದಿದ್ದರೂ ಅದನ್ನು ಸಹಿಸಿಕೊಂಡು ಇದ್ದಾಳೆ ಮಲ್ಲಿ. ಆದರೆ ಇಂದಿಗೂ ಮಲ್ಲಿ ಎಂದಾಕ್ಷಣ, ಎಲ್ಲರ ಗಮನ ಹೋಗುವುದು ನಟಿ ರಾಧಾ ಭಗವತಿ ಅವರ ಮೇಲೆಯೇ. ಈ ಪಾತ್ರಕ್ಕೆ ಈಕೆ ಜೀವ ತುಂಬಿದ್ದರು. ಪೆದ್ದುಪೆದ್ದಾಗಿ ಮಾತನಾಡುತ್ತಿದ್ದ ರಾಧಾ ಅವರು ಜನರ ಮನಸ್ಸಿಗೆ ಹತ್ತಿರವಾಗಿದ್ದರು. ಅಷ್ಟಕ್ಕೂ ಒಂದು ಪಾತ್ರವನ್ನು ಮೊದಲಿನಿಂದಲೂ ನೋಡಿದವರಿಗೆ ಆ ಪಾತ್ರಧಾರಿ ಇಷ್ಟವಾಗುವುದು ಸಹಜವೇ.

ಆದರೆ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನಲ್ಲಿ ನಾಯಕಿ ರೋಲ್​ ಸಿಕ್ಕಿದ್ದರಿಂದ ರಾಧಾ ಭಗವತಿ ಅವರು ಅಮೃತಧಾರೆ ಬಿಟ್ಟು ಹೋದರು. ಅಲ್ಲಿ ಅವರು ರಾಧಾ ಪಾತ್ರಕ್ಕೆ ತದ್ವಿರುದ್ಧ ಆಗಿರೋ ಖಡಕ್​ ನಾಯಕಿ ರೋಲ್​ ಮಾಡುತ್ತಿದ್ದಾರೆ. ಸೀರಿಯಲ್​ನ ಯಾವುದೇ ಪಾತ್ರಕ್ಕೆ ಬೇರೆಯವರು ಬಂದರೆ ಅದನ್ನು ವೀಕ್ಷಕರು ಸಹಿಸಿಕೊಳ್ಳುವುದಿಲ್ಲ. ಆ ಪಾತ್ರಕ್ಕೆ ಬಂದವರು ಎಷ್ಟೇ ಚೆನ್ನಾಗಿನಟನೆ ಮಾಡಿದರೂ ಆ ಪಾತ್ರಕ್ಕೆ ಒಗ್ಗಿಕೊಳ್ಳಲು ವೀಕ್ಷಕರಿಗೆ ಬಹಳ ಸಮಯ ಹಿಡಿಯುವುದು ಇದೆ. ಅದೇ ರೀತಿ ಮಲ್ಲಿ ಪಾತ್ರಧಾರಿ ಬದಲಾಗಿದ್ದರೂ, ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ರಾಧಾ ಭಗವತಿ ಅವರನ್ನು ಮಿಸ್​ ಮಾಡಿಕೊಳ್ಳುತ್ತಲೇ ಇದ್ದಾರೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆದ್ಯಾ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಅನ್ವಿತಾ ಸಾಗರ್ ಮಲ್ಲಿ ಪಾತ್ರಧಾರಿಯಾಗಿದ್ದಾರೆ. ಇವರನ್ನು ಆದ್ಯಾ ರೂಪದಲ್ಲಿ ನೋಡಿದವರಿಗೆ ಯಾಕೋ ಮಲ್ಲಿಯ ರೂಪದಲ್ಲಿ ನೋಡಲು ಇಷ್ಟವಾಗುತ್ತಿಲ್ಲ. ಆದ್ದರಿಂದ ಇಂದಿಗೂ ಹಳೆಯ ಮಲ್ಲಿಯ ನೆನಪೇ ಮಾಡಿಕೊಳ್ಳುತ್ತಿದ್ದಾರೆ ವೀಕ್ಷಕರು.

ಇದರ ನಡುವೆಯೇ ನಟಿ ರಾಧಾ ಭಗವತಿ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದು, ವಿಡಿಯೋ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ಹೇಗೇ ಮೋಹಿಸಲಿ ಎನ್ನೋ ಹಾಡಿಗೆ ರೀಲ್ಸ್​ ಮಾಡಿದ್ದು, ಅಭಿಮಾನಿಗಳು ಇವರ ಕ್ಯೂಟ್​ನೆಸ್​ಗೆ ಫಿದಾ ಆಗಿದ್ದಾರೆ. ಹೂವಿನ ನಡುವೆ ಮತ್ತೊಂದು ಹೂವು ಎನ್ನುತ್ತಲೇ ಅಭಿಮಾನಿಗಳು ನಟಿಯನ್ನು ಶ್ಲಾಘಿಸುತ್ತಿದ್ದಾರೆ.

ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

View post on Instagram