ಫರೀದಾಬಾದ್ನಿಂದ ರಾಬರ್ಟ್ ವಾದ್ರಾ ಆಪ್ತ ಶಿಷ್ಯ ಲಲಿತ್ ನಾಗರ್ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಇದಕ್ಕೆ ರಾಹುಲ್ ಗಾಂಧಿ ನಕಾರ ವ್ಯಕ್ತಪಡಿಸಿದಾಗ ಕೋಪಗೊಂಡ ವಾದ್ರಾ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿಲ್ಲ.
ದಿಲ್ಲಿ ಪಕ್ಕದ ಫರೀದಾಬಾದ್ ಸೀಟ್ಗೆ ಕಾಂಗ್ರೆಸ್ ಟಿಕೆಟನ್ನು ಮೊದಲಿಗೆ ರಾಬರ್ಟ್ ವಾದ್ರಾ ಅವರು ಭೂಪಿಂದರ್ ಸಿಂಗ್ ಹೂಡಾ ಮೇಲೆ ಒತ್ತಡ ಹಾಕಿ ತನ್ನ ಶಿಷ್ಯ ಲಲಿತ್ ನಾಗರ್ಗೆ ಕೊಡಿಸಿದ್ದರು. ಆದರೆ ಯಾವಾಗ ರಾಹುಲ್ ಗಾಂಧಿಗೆ ಇದರ ಹಿಂದಿನ ಆಟದ ಅರಿವಾಯಿತೋ, ಕೂಡಲೇ ಪ್ರಿಯಾಂಕಾಗೆ ಫೋನ್ ಮಾಡಿ ಸಿಟ್ಟಿನಿಂದ ಭಾವನ ಹಸ್ತಕ್ಷೇಪದ ಬಗ್ಗೆ ಹೇಳಿದ್ದಾರೆ.
Add Asianetnews Kannada as a Preferred Source

ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?
ನಂತರ ರಾಹುಲ್, ಪ್ರಿಯಾಂಕಾ ಸೇರಿಕೊಂಡು ಲಲಿತ್ ಹೆಸರನ್ನು ಬದಲಾಯಿಸಿ, ಅವತಾರ ಸಿಂಗ್ ಭಡಾನಾ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇದರಿಂದ ಮುನಿಸಿಕೊಂಡ ಅಳಿಯ ದೇವರು 4 ದಿನ ಪ್ರಚಾರಕ್ಕೇ ಹೋಗಲಿಲ್ಲವಂತೆ!
ಉತ್ತರ ಪ್ರದೇಶದಲ್ಲಿ ಮೋದಿ-ಶಾ ತಂತ್ರ ವರ್ಕೌಟ್ ಆಗುತ್ತಾ?
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿಇಂಡಿಯಾ ಗೇಟ್ಕ್ಲಿಕ್ ಮಾಡಿ
