Asianet Suvarna News Asianet Suvarna News

ಬೇಡಿಕೆ ಕಳೆ​ದು​ಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದ​ಲಾದ ನಿಯ​ಮ​ದಿಂದಾಗಿ ಸೀಟು ಕೇಳು​ವ​ವರೇ ಇಲ್ಲ!

ಬಡ ಮಕ್ಕ​ಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷ​ಣ​ವನ್ನು ಒದ​ಗಿ​ಸುವ ಸದು​ದ್ದೇ​​​​ಶದಿಂದ ಜಾರಿ​ಗೊ​ಳಿ​ಸಿದ ಆರ್‌ಟಿಇ (ಶಿ​ಕ್ಷಣ ಹಕ್ಕು ಕಾಯಿ​ದೆ​) ಅಡಿ​ಯಲ್ಲಿ ಪೋಷ​ಕರು ತಮ್ಮ ಮಕ್ಕ​ಳನ್ನು ಶಾಲೆಗೆ ದಾಖ​ಲಿ​ಸಲು ನಿರಾ​ಸಕ್ತಿ ತೋರಿ​ರು​ವುದು ಬೆಳ​ಕಿಗೆ ಬಂದಿದೆ. 

Right to Education Act out of demand No seat seekers due to changed rules gvd
Author
First Published Jun 16, 2023, 8:24 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಜೂ.16): ಬಡ ಮಕ್ಕ​ಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷ​ಣ​ವನ್ನು ಒದ​ಗಿ​ಸುವ ಸದು​ದ್ದೇ​​​​ಶದಿಂದ ಜಾರಿ​ಗೊ​ಳಿ​ಸಿದ ಆರ್‌ಟಿಇ (ಶಿ​ಕ್ಷಣ ಹಕ್ಕು ಕಾಯಿ​ದೆ​) ಅಡಿ​ಯಲ್ಲಿ ಪೋಷ​ಕರು ತಮ್ಮ ಮಕ್ಕ​ಳನ್ನು ಶಾಲೆಗೆ ದಾಖ​ಲಿ​ಸಲು ನಿರಾ​ಸಕ್ತಿ ತೋರಿ​ರು​ವುದು ಬೆಳ​ಕಿಗೆ ಬಂದಿದೆ. ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಲು ಒಂದು ಕಾಲಕ್ಕೆ ಅಪಾರ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದವು. ಸೀಟು ಪಡೆ​ಯಲು ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, ಬದಲಾದ ನಿಯಮದ ಕಾರಣ ಈಗ ಸೀಟುಗಳಿಗೆ ಯಾರೂ ಕೇಳುವವರೇ ಇಲ್ಲ​ದಂತಾ​ಗಿದೆ. ಪ್ರಸಕ್ತ ಶೈಕ್ಷ​ಣಿಕ ವರ್ಷ ಪ್ರಾರಂಭ​ವಾ​ಗಿದ್ದು, ಜಿಲ್ಲೆ​ಯಲ್ಲಿ ಆರ್‌ಟಿಇ ಅಡಿ 176 ವಿದ್ಯಾ​ರ್ಥಿ​ಗಳು ಪ್ರವೇಶ ಪಡೆ​ಯಲು ಅವ​ಕಾಶ ಕಲ್ಪಿ​ಸ​ಲಾ​ಗಿತ್ತು. 

ಆಶ್ಚ​ರ್ಯದ ಸಂಗತಿ ಎಂದರೆ 176 ಸೀಟು​ಗ​ಳಿಗೆ ಕೇವಲ 5 ವಿದ್ಯಾ​ರ್ಥಿ​ಗಳು ಮಾತ್ರ ಅರ್ಜಿ ಸಲ್ಲಿಸಿ ಸೀಟು ಪಡೆ​ದು​ಕೊಂಡಿ​ದ್ದಾರೆ. ಆರ್‌ಟಿಇ ಅಡಿ ಪ್ರವೇ​ಶಾ​ತಿಗೆ ಅರ್ಜಿ ಸಲ್ಲಿ​ಸುವ ವಿದ್ಯಾ​ರ್ಥಿ​ಗ​ಳಿಗೆ ಶೇಕಡ 25ರಷ್ಟುಸೀಟು​ಗ​ಳನ್ನು ಕಾಯ್ದಿ​ರಿ​ಸ​ಲಾ​ಗು​ತ್ತದೆ. ಜಿಲ್ಲೆ​ಯಲ್ಲಿ ಒಟ್ಟು 20 ಅನು​ದಾ​ನಿತ ಹಾಗೂ 03 ಅನು​ದಾನ ರಹಿತ ಶಾಲೆ​ಗಳು ಆರ್‌ ಟಿಇ ವ್ಯಾಪ್ತಿಗೆ ಒಳ​ಪ​ಡುತ್ತವೆ. ಮಾಗಡಿ ತಾಲೂ​ಕಿ​ನಲ್ಲಿ 2 ಅನು​ದಾ​ನಿತ, ರಾಮ​ನ​ಗರ ತಾಲೂ​ಕಿ​ನಲ್ಲಿ 6 ಅನು​ದಾ​ನಿತ, ಚನ್ನ​ಪ​ಟ್ಟಣ ತಾಲೂ​ಕಿ​ನಲ್ಲಿ 2 ಅನು​ದಾ​ನಿತ, 1 ಅನು​ದಾನ ರಹಿತ ಹಾಗೂ ಕನ​ಕ​ಪುರ ತಾಲೂ​ಕಿ​ನಲ್ಲಿ 10 ಅನು​ದಾ​ನಿತ, 02 ಅನು​ದಾನ ರಹಿತ ಶಾಲೆ​ಗಳು ಸೇರಿ ಒಟ್ಟು 23 ಶಾಲೆ​ಗ​ಳನ್ನು ಆರ್‌ಟಿಇ ಅಡಿ ಪ್ರವೇ​ಶಾ​ತಿಗೆ ಗುರು​ತಿ​ಸ​ಲಾ​ಗಿದೆ. 

ಟೋಲ್‌ ದರ ಏರಿಕೆ ಅನ್ಯಾ​ಯದ ಪರ​ಮಾ​ವ​ಧಿ: ಎಚ್‌.ಡಿ.ಕುಮಾರಸ್ವಾಮಿ

2018 ರಿಂದ ಆರ್‌ ಟಿಇ ಅಡಿಯಲ್ಲಿ ಸೀಟು​ಗ​ಳಿಗೆ ಬೇಡಿಕೆ ಕುಸಿಯುತ್ತಿದೆ. ಈಗ ಇದರ ಅಡಿಯಲ್ಲಿ ಬೆರಳಕೆಯಷ್ಟುಮಕ್ಕಳು ಓದುತ್ತಿದ್ದಾರೆ. ಇನ್ನೆರಡು ವರ್ಷದಲ್ಲಿ ಇದು ಶೂನ್ಯಕ್ಕೆ ಬರಲಿದೆ. ಗ್ರಾಮೀಣ ಪ್ರದೇ​ಶ​ಗ​ಳಲ್ಲಿ ಕಂದಾಯ ಗ್ರಾಮ ಭೌಗೋ​ಳಿಕ ಗಡಿ , ನಗ​ರ​ಸಭೆ, ಟೌನ್‌ ಮುನಿ​ಸಿ​ಪಲ್‌ ಕೌನ್ಸಿಲ್‌ ಮತ್ತು ಪಟ್ಟಣ ಪಂಚಾ​ಯಿತಿ ಭೌಗೋ​ಳಿಕ ಗಡಿ ಹಾಗೂ ಮಹಾ​ನ​ಗರ ಪಾಲಿ​ಕೆ​ಗಳು ಹಾಗೂ ಬೃಹತ್‌ ಬೆಂಗ​ಳೂರು ಮಹಾ​ನ​ಗರ ಪಾಲಿ​ಕೆಯ ಪ್ರತಿ ವಾರ್ಡಿನ ಭೌಗೋ​ಳಿಕ ಗಡಿಯೊಳಗೆ ಸರ್ಕಾರಿ ಮತ್ತು ಅನು​ದಾ​ನಿತ ಶಾಲೆ​ಗ​ಳಿ​ದ್ದಲ್ಲಿ ಅನು​ದಾನ ರಹಿತ (ಖಾ​ಸ​ಗಿ​)​ಶಾ​ಲೆ​ಗ​ಳಿಗೆ ಪ್ರವೇಶ ಬಯ​ವಂತಿಲ್ಲ ಎಂಬ ನಿಯ​ಮವೇ ಆರ್‌ಟಿಇ ಗೆ ಬೇಡಿಕೆ ಕುಸಿ​ಯಲು ಕಾರ​ಣ​ವಾ​ಗಿದೆ.

ಆರ್‌ಟಿಇ​ ವ್ಯಾಪ್ತಿಗೆ ಒಳ​ಪ​ಡುವ ಸರ್ಕಾರಿ ಮತ್ತು ಮತ್ತು ಅನು​ದಾ​ನಿತ ಶಾಲೆ​ಗಳು ಕನ್ನಡ ಮಾಧ್ಯಮ ಶಾಲೆ​ಗ​ಳಾ​ಗಿ​ವೆ. ಜೊತೆಗೆ ಪ್ರತಿ ಕಂದಾಯ ಗ್ರಾಮ, ಸ್ಥಳೀಯ ಸಂಸ್ಥೆ ವ್ಯಾಪ್ತಿ​ಯಲ್ಲಿ ಸರ್ಕಾರಿ ಶಾಲೆ​ಗಳು ಇವೆ. ಮಕ್ಕ​ಳಿಗೆ ತಮ್ಮಗೆ ಇಷ್ಟದ ಪ್ರತಿ​ಷ್ಠಿತ ಖಾಸಗಿ ಶಾಲೆ​ಯಲ್ಲಿ ಆರ್‌ ಟಿಇ ಪ್ರವೇಶ ಇಲ್ಲ​ದಿ​ರುವ ಕಾರಣ ಪೋಷ​ಕರು ಅತ್ತ ಸುಳಿ​ಯು​ತ್ತಿ​ಲ್ಲ. ಈ ಮೊದಲು ಜಿಲ್ಲಾ​ದ್ಯಂತ ಇರುವ ಪ್ರತಿ​ಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆ​ಗಳು ಆರ್‌ ಟಿಇಗೆ ಒಳ ಪಡಿ​ಸ​ಲಾ​ಗಿತ್ತು. ಆದರೆ, ಇತ್ತೀ​ಚೆಗೆ ಪ್ರತಿ​ಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆ​ಗ​ಳನ್ನು ರಾಜ ಸರ್ಕಾರ ಕೈ ಬಿಟ್ಟಿದೆ. ಅನು​ದಾ​ನಿತ ಶಾಲೆ​ಗ​ಳಿಗೆ ಮಾತ್ರ ಆರ್‌ ಟಿಇ ಪ್ರವೇ​ಶಾ​ತಿಗೆ ಅವ​ಕಾಶ ಕಲ್ಪಿ​ಸಿರುವು​ದ​ರಿಂದ ಪೋಷ​ಕರು ಮಕ್ಕ​ಳನ್ನು ದಾಖಲು ಮಾಡಲು ಹಿಂದೇಟು ಹಾಕು​ತ್ತಿ​ದ್ದಾ​ರೆ.

ಹಿಂದಿನ ಪದ್ಧತಿಯಲ್ಲಿ ಏನಿತ್ತು?: ಖಾಸಗಿ ಶಾಲೆಗಳಲ್ಲಿ ಶೇ.25 ಸೀಟು ಮಕ್ಕಳಿಗೆ ನಿಗದಿ ಮಾಡಲಾಗಿತ್ತು. ವಾರ್ಡ್‌, ಗ್ರಾಮ, ನಗರ ವ್ಯಾಪ್ತಿಯ ಒಂದು ಕಿಲೋಮೀಟರ್‌ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಬಡ ಮಕ್ಕಳಿಗೆ ಕಡ್ಡಾಯವಾಗಿ ಶೇ.25 ಸೀಟು ನೀಡಬೇಕಿತ್ತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರವೇ ಖಾಸಗಿ ಶಾಲೆಗಳಿಗೆ ಹಣ ನೀಡುತ್ತಿತ್ತು. ಹೀಗಾಗಿ ಪೋಷಕರು ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದರು.

ಹೊಸ ತಿದ್ದುಪಡಿಯಲ್ಲಿ ಏನಿದೆ?: ಕಡ್ಡಾಯವಾಗಿ ಮಗುವಿಗೆ 6-14 ವರ್ಷ ಶಿಕ್ಷಣ ನೀಡಬೇಕು. ಮಗು ವಾಸಿಸುವ 1 ಕಿಲೋಮೀಟರ್‌ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಮೊದಲ ಆದ್ಯತೆ ಮೇಲೆ ದಾಖಲಾಗಿ ಶಿಕ್ಷಣ ಪಡೆಯಬೇಕು. ಸರ್ಕಾರಿ ಶಾಲೆ ಇಲ್ಲದೆ ಇದ್ದರೆ 3-5 ಕಿಲೋಮೀಟರ್‌ ವ್ಯಾಪ್ತಿಯ ಅನುದಾನಿತ ಶಾಲೆಯಲ್ಲಿ ಮಗುವಿಗೆ ಶಿಕ್ಷಣ ಕೊಡಿಸಬೇಕು. ಒಂದು ವೇಳೆ ಅನುದಾನಿತ ಶಾಲೆಯೂ ಇಲ್ಲದೆ ಹೋದರೆ ಖಾಸಗಿ ಶಾಲೆಯಲ್ಲಿ ಶೇ.25 ಸೀಟು ಕೊಡಿಸಿ ಮಗುವಿಗೆ ಶಿಕ್ಷಣ ಕೊಡಿಸಬೇಕು. ಖಾಸಗಿ ಶಾಲೆಯ ಶಿಕ್ಷಣಕ್ಕೆ ಸರ್ಕಾರವೇ ಹಣ ನೀಡುತ್ತದೆ. ಆರ್‌ ಟಿಇ ಕಾಯ್ದೆ ತಿದ್ದುಪಡಿಯಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣ ಉಳಿಯುತ್ತದೆ. ಜೊತೆಗೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚಿಸಲು ಈ ನಿರ್ಧಾರಕ್ಕೆ ಬರಲಾಗಿದೆ.

ರಾಮ​ನ​ಗರದಲ್ಲಿ ಶಕ್ತಿ ಯೋಜ​ನೆ ಲಾಭ ಪಡೆದ 1.35 ಲಕ್ಷ ಮಹಿ​ಳೆ​ಯರು: ನಾರಿ ಶಕ್ತಿಯ ಎದುರು ಖಾಸಗಿ ಬಸ್‌ಗಳು ನಿಶ್ಯ​ಕ್ತಿ

ಹಾರೋ​ಹಳ್ಳಿ ತಾಲೂಕು ಮರ​ಳ​ವಾಡಿ ಹೋಬ​ಳಿಯ ಸ್ಪೂರ್ತಿ ವಿದ್ಯಾ​ನಿ​ಕೇ​ತನ ​ಅ​ನು​ದಾನ ರಹಿತ ಶಾಲೆಯಾಗಿದ್ದು, ಇದು ಆರ್‌ಟಿಇ ಅಡಿ​ಯಲ್ಲಿ ಬರು​ತ್ತದೆ. ಈ ಶಾಲೆ​ಯಲ್ಲಿ ಆರ್‌ಟಿಇ ಅಡಿಯಲ್ಲಿ ಗುರು​ತಿ​ಸಿದ್ದ 10 ಸೀಟು​ಗ​ಳ ಪೈಕಿ 5 ಸೀಟು​ಗಳು ಮಾತ್ರ ಭರ್ತಿ​ಯಾ​ಗಿವೆ. ಪೋಷ​ಕರು ಆರ್‌ಟಿಇ ಅಡಿ​ಯಲ್ಲಿ ಅರ್ಜಿ ಹಾಕಲು ಒಲವು ತೋರು​ತ್ತಿ​ಲ್ಲ.
- ಗಂಗ​ಣ್ಣ​ಸ್ವಾಮಿ, ಉಪ​ನಿ​ರ್ದೇ​ಶ​ಕರು, ಸಾರ್ವ​ಜ​ನಿಕ ಶಿಕ್ಷಣ ಇಲಾಖೆ, ರಾಮ​ನ​ಗರ.

Follow Us:
Download App:
  • android
  • ios