Asianet Suvarna News Asianet Suvarna News

ರಾಮ​ನ​ಗರದಲ್ಲಿ ಶಕ್ತಿ ಯೋಜ​ನೆ ಲಾಭ ಪಡೆದ 1.35 ಲಕ್ಷ ಮಹಿ​ಳೆ​ಯರು: ನಾರಿ ಶಕ್ತಿಯ ಎದುರು ಖಾಸಗಿ ಬಸ್‌ಗಳು ನಿಶ್ಯ​ಕ್ತಿ

ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ ಮೂರು ದಿನದ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಚರಿಸಿದ್ದಾರೆ. 

1 35 lakh womens benefited from Shakti Yojana in Ramanagara gvd
Author
First Published Jun 15, 2023, 9:02 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಜೂ.15): ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ ಮೂರು ದಿನದ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಚರಿಸಿದ್ದಾರೆ. ರೈಲು ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾ​ಣಿ​ಸು​ತ್ತಿದ್ದವರ ಪೈಕಿ ಶೇ.90ರಷ್ಟು ಮಹಿ​ಳೆ​ಯರು ಸಾರಿಗೆ ಬಸ್‌ ಗಳಲ್ಲಿ ಪ್ರಯಾ​ಣಿ​ಸು​ತ್ತಿ​ದ್ದಾರೆ. ಇದ​ರಿಂದಾಗಿ ಸಾರಿಗೆ ಬಸ್‌ ಗಳು ಫುಲ್‌ ರಶ್‌ ಆಗಿ ಸಂಚ​ರಿ​ಸು​ತ್ತಿ​ವೆ.

ಕೆಎಸ್‌ಆರ್‌ಟಿಸಿ ರಾಮ​ನ​ಗರ ಘಟ​ಕ ವ್ಯಾಪ್ತಿ​ಯಲ್ಲಿ ರಾಮ​ನ​ಗರ, ಚನ್ನ​ಪ​ಟ್ಟಣ, ಮಾಗಡಿ, ಕನ​ಕ​ಪುರ, ಆನೇ​ಕಲ್‌ ಸೇರಿ​ದಂತೆ ಒಟ್ಟು ಆರು ಡಿಪೋ​ಗ​ಳಿಂದ ಬಸ್‌ಗಳು ಕಾರ್ಯ ಸಂಚಾರ ಮಾಡು​ತ್ತಿದ್ದು, ಗ್ಯಾರೆಂಟಿ ಜಾರಿ ಬಳಿಕ ಪ್ರತಿ ನಿತ್ಯ ಸುಮಾರು 45 ಸಾವಿರದಂತೆ ಈವ​ರೆಗೆ 1.35 ಲಕ್ಷ ಮಹಿಳಾ ಪ್ರಯಾ​ಣಿ​ಕರು ಸಾರಿಗೆ ಬಸ್‌ನಲ್ಲಿ ಸಂಚ​ರಿ​ಸಿ​ದ್ದಾರೆ.

ಜೆಡಿಎಸ್‌-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್‌.ಡಿ.ಕುಮಾರಸ್ವಾಮಿ

ಸದ್ಯಕ್ಕೆ ಮೈಸೂರು - ಬೆಂಗ​ಳೂರು ಮಾರ್ಗ​ದಲ್ಲಿ ಮಹಿಳಾ ಪ್ರಯಾ​ಣಿ​ಕರ ಸಂಖ್ಯೆ ಹೆಚ್ಚಾ​ಗಿದೆ. ಕಾಲೇಜು ವಿದ್ಯಾರ್ಥಿನಿಯರು, ಮಹಿಳಾ ಕಾರ್ಮಿಕರ ಹೊರತಾಗಿ ನಗರ, ಪಟ್ಟಣಗಳಿಗೆ ಕೆಲಸದ ನಿಮಿತ್ತ ಸಂಚರಿಸುವ ಮಹಿಳೆಯರು ಖಾಸಗಿ ವಾಹನಗಳ ಬದಲು ಬಸ್‌ ಮೊರೆ ಹೋಗುತ್ತಿರುವುದು ಹೆಚ್ಚುತ್ತಿದೆ. ಚನ್ನ​ಪಟ್ಟಣ, ರಾಮ​ನ​ಗರ, ಮಾಗಡಿ ಹಾಗೂ ಕನ​ಕ​ಪು​ರ ಭಾಗದಲ್ಲಿ ಖಾಸಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಮಹಿಳೆಯರು ಈಗ ಸಾರಿ​ಗೆ ಬಸ್‌ ಸಂಚಾರಕ್ಕೆ ಆದ್ಯತೆ ನೀಡುತ್ತಿದ್ದಾರೆ.

ರೈಲಿನಲ್ಲಿ ಪ್ರಯಾ​ಣಿ​ಸು​ತ್ತಿದ್ದ ಮಹಿಳೆಯರು ಸಹ ಬಸ್ಸಿಗೆ ಬಂದಿದ್ದಾರೆ. ಇದ​ರಿಂದಾಗಿ ಸಾರಿಗೆ ಬಸ್‌ ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಮೊದಲಿಗಿಂತ ಏರಿಕೆಯಾಗುತ್ತಿದೆ. ಅಗತ್ಯ ದಾಖಲೆಗಳನ್ನು ಪ್ರದರ್ಶಿಸಿ ಉಚಿತ ಪ್ರಯಾಣದ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಪುರು​ಷ​ರಿಗೆ ಶೇ.50ರಷ್ಟುಸೀಟು ಮೀಸ​ಲಿ​ಡ​ಬೇ​ಕೆಂಬ ನಿಯಮ ಯಾವ ಬಸ್ಸಿ​ನಲ್ಲೂ ಪಾಲನೆ ಆಗು​ತ್ತಿ​ಲ್ಲ. ಮಹಿಳಾ ಪ್ರಯಾ​ಣಿ​ಕರೇ ಹೆಚ್ಚಾ​ಗಿ​ರುವ ಕಾರಣ ಪುರುಷ ಪ್ರಯಾ​ಣಿ​ಕರು ನಿಂತು​ಕೊಂಡು ಪ್ರಯಾ​ಣಿ​ಸುವುದು ಅನಿ​ವಾ​ರ್ಯ​ವಾ​ಗಿ​ದೆ.

ನಾರಿ ಶಕ್ತಿ ಎದುರು ಖಾಸಗಿ ಬಸ್‌ ನಿಶ್ಯಕ್ತಿ: ಮಹಿ​ಳೆ​ಯ​ರಿ​ಗಾಗಿ ಜಾರಿ​ಯಾ​ಗಿ​ರುವ ಸಾರಿ​ಗೆ​ಬಸ್‌ನಲ್ಲಿ ಉಚಿತ ಪ್ರಯಾಣದಿಂದ ಖಾಸಗಿ ಬಸ್‌ ಗಳಿಗೆ ಬಿಸಿ ತಟ್ಟಿದೆ. ಖಾಸಗಿ ಬಸ್‌ಗಳು ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ, ಮದ್ದೂರು, ಮಳ​ವಳ್ಳಿ, ಕೊಳ್ಳೆ​ಗಾಲ,ಬೆಂಗಳೂರು ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಜಿಲ್ಲೆ​ಯಲ್ಲಿ ಸುಮಾರು 200 ಖಾಸಗಿ ಬಸ್‌ ಗಳು ಕಾರ್ಯಾ​ಚ​ರಣೆ ನಡೆ​ಸು​ತ್ತಿ​ದ್ದವು. ಆದ​ರೀಗ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾ​ಣಕ್ಕೆ ಅವ​ಕಾಶ ಸಿಕ್ಕಿದ ಮೇಲೆ ಖಾಸಗಿ ಬಸ್‌ಗಳಲ್ಲಿ ಪ್ರಯಾ​ಣಿ​ಸುವ ಮಹಿ​ಳೆ​ಯರ ಸಂಖ್ಯೆ ಗಣ​ನೀಯ ಪ್ರಮಾ​ಣ​ದಲ್ಲಿ ಕ್ಷೀಣಿ​ಸಿದೆ. ಹೀಗಾಗಿ ಖಾಸಗಿ ಬಸ್‌ಗಳು ಖಾಲಿಯಾಗಿ ಓಡಾ​ಡು​ತ್ತಿವೆ.

ಪ್ರಯಾಣಿಕರ ಪರದಾಟ: ಶಕ್ತಿ ಯೋಜನೆ ಎಫೆಕ್ಟ್ನಿಂದಾಗಿ ಚನ್ನಪಟ್ಟಣ - ರಾಮನಗರದಲ್ಲಿ ಪ್ರಯಾಣಿಕರು ಪರದಾಟ ಅನುಭವಿಸುವ ಸ್ಥಿತಿ ಎದು​ರಾ​ಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣದಿಂದಾಗಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆಯ ದೆಸೆಯಿಂದ, ಚನ್ನಪಟ್ಟಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ನಲ್ಲಿ ಹತ್ತಲು ಜಾಗ ಸಿಗದೇ ಪರದಾಟ ಉಂಟಾಗುತ್ತಿದೆ. ಸರ್ಕಾರ ಉಚಿತ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಕೆಲವರು ಆಗ್ರಹಿಸಿದರು.

ರಾ​ಮ​ನ​ಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸುಮಾರು 65 ಸಾವಿರಕ್ಕೂ ಹೆಚ್ಚು ಮಹಿಳೆಯರು ಯೋಜನೆಯ ಫಲಾನುಭವಿಗಳಿದ್ದಾರೆ. ವಿದ್ಯಾರ್ಥಿನಿಯರು ಸೇರಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಸದ್ಯ ಪ್ರತಿನಿತ್ಯ ಸರಾಸರಿ 45 ಸಾವಿರ ಮಹಿಳೆಯರು ಸಾರಿಗೆ ಬಸ್‌ ಗಳಲ್ಲಿ ಪ್ರಯಾ​ಣಿ​ಸು​ತ್ತಿ​ದ್ದಾರೆ. ವಿಭಾಗವಾರು ಪ್ರಯಾಣಿಕರ ನಿಖರ ಮಾಹಿತಿ, ಪ್ರಯಾ​ಣದ ಮೊತ್ತ ಎಷ್ಟೆಂಬುದು ಒಂದು ತಿಂಗಳ ಬಳಿಕ ಗೊತ್ತಾಗಲಿದೆ.
- ಜಗದೀಶ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ರಾಮನಗರ

ರಾಮ​ಲಿಂಗಾರೆಡ್ಡಿಗೆ ರಾಮ​ನೂ​ರಿನ ಉಸ್ತು​ವಾರಿ ಹೊಣೆ: ಎಚ್‌ಡಿಕೆ-ಡಿಕೆಶಿ ಕರ್ಮ​ಭೂ​ಮಿ​ಯಲ್ಲಿ ರೆಡ್ಡಿ ಪರ್ವ ಶುರು

ಸಾರಿಗೆ ಬಸ್‌ ಗಳಲ್ಲಿ ಮಹಿ​ಳೆ​ಯ​ರಿಗೆ ಉಚಿತವಾಗಿ ಪ್ರಯಾ​ಣಿ​ಸುವ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಖಾಸಗಿ ಬಸ್‌ ಗಳ ಮೇಲೆ ತೀವ್ರ​ತ​ರ​ವಾದ ಹೊಡೆತ ಬಿದ್ದಿದೆ. ಪ್ರಯಾ​ಣಿ​ಕ​ರಿ​ಲ್ಲದೆ ಕಲೆ​ಕ್ಷನ್‌ ಕೂಡ ಆಗು​ತ್ತಿಲ್ಲ. ಡೀಸೆಲ್‌ ಹಾಕಿ​ಸಲು, ಬಸ್‌ ನಿರ್ವ​ಹಣೆ ಮಾಡಲೂ ಕಷ್ಟ​ವಾ​ಗು​ತ್ತಿದೆ. ಬಸ್‌ಗಳು ರಸ್ತೆ​ಗಿ​ಳಿ​ದರು ನಷ್ಟ, ರಸ್ತೆ​ಗಿ​ಳಿ​ಯ​ದಿ​ದ್ದರು ನಷ್ಟಅನು​ಭ​ವಿ​ಸು​ವಂತಾ​ಗಿದೆ.
- ಕಿರಣ್‌ ಬಾಬು, ಜಿಲ್ಲಾ​ಧ್ಯ​ಕ್ಷರು, ಖಾಸಗಿ ಬಸ್‌ ಮಾಲೀ​ಕರ ಸಂಘ, ರಾ​ಮ​ನ​ಗ​ರ

Follow Us:
Download App:
  • android
  • ios