ಪಟ್ಟಣದ ಕಾನಕೇರಿ ಬಡಾವಣೆಯ ಸಾರ್ವಜನಿಕ ಶೌಚಾಲಯ 16 ವರ್ಷಗಳಿಂದ ಪಾಳುಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪ​ಟ್ಟಿದೆ. ಅಲ್ಲದೇ ಶೌಚಾಲಯ ನಿರ್ವ​ಹಣೆ ಇಲ್ಲದೇ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.

ಸೊರಬ (ಮೇ.30) ಪಟ್ಟಣದ ಕಾನಕೇರಿ ಬಡಾವಣೆಯ ಸಾರ್ವಜನಿಕ ಶೌಚಾಲಯ 16 ವರ್ಷಗಳಿಂದ ಪಾಳುಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪ​ಟ್ಟಿದೆ. ಅಲ್ಲದೇ ಶೌಚಾಲಯ ನಿರ್ವ​ಹಣೆ ಇಲ್ಲದೇ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2007ರಲ್ಲಿ ಕುಮಾರ್‌ ಬಂಗಾರಪ್ಪ(Kumara bangarappa) ಪೌರಾಡಳಿ ಸಚಿವರಾಗಿದ್ದ ಸಂದರ್ಭ ಪಟ್ಟಣ ಪಂಚಾಯಿತಿ ವತಿಯಿಂದ .5 ಲಕ್ಷ ವೆಚ್ಚದಲ್ಲಿ ನಿರ್ಮಲ ನಗರ ಯೋಜನೆಯಡಿ ಈ ಹೈಟೆಕ್‌ ಸುಲಭ ಶೌಚಾಲಯ ನಿರ್ಮಾಣವಾಗಿದೆ. ಸಾರ್ವಜನಿಕ ಕೋರಿಕೆ ಮೇರೆಗೆ ಮತ್ತು ಅಂದಿನ ದಿನಗಳಲ್ಲಿದ್ದ ಸರ್ಕಾರಿ ಗ್ರಂಥಾಲಯಕ್ಕೆ ಅನುಕೂಲವಾಗಲಿ ಎಂದೇ ಈ ಜಾಗದಲ್ಲಿ ಟಾಯ್ಲೆಟ್‌ ನಿರ್ಮಿಸಿ ಉದ್ಘಾಟಿಸಲಾಗಿತ್ತು. ಉದ್ಘಾಟನೆಯಾದ ಕೆಲವು ದಿನಗಳು ಸಾರ್ವಜನಿಕರು ಇದನ್ನು ಉಪಯೋಗಿಸಿದರು. ಆನಂತರದ ದಿನಗಳಲ್ಲಿ ಶೌಚಾಲಯ ಸಾರ್ವಜನಿಕ ಸೇವೆಗೆ ಲಭ್ಯವಾಗದ ಕಾರಣ ಬೀಗ ಜಡಿಯಲಾಗಿದೆ. ಆದರೆ ಕೆಲವರು ಹೈಟೆಕ್‌ ಶೌಚಾಲಯ ಕಟ್ಟಡದ ಬೀಗವನ್ನೇ ಮುರಿದು ಅಕ್ರಮ ಚಟು​ವ​ಟಿ​ಕೆ​ಗ​ಳಿ​ಗೆ ಬಳಸಿಕೊಂಡಿದ್ದಾರೆ ಎಂಬುದು ಸ್ಥಳೀ​ಯರ ದೂರು.

ಅಕ್ರಮ ಚಟುವಟಿಕೆಗಳ ತಾಣವಾದ ಹೈಟೆಕ್‌ ಮೀನು ಮಾರುಕಟ್ಟೆ

ಈ ಶೌಚಾಲಯ ಕಟ್ಟಡದ ಒಳಹೊಕ್ಕರೆ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಕಸ-ಕಡ್ಡಿ, ಮಳೆನೀರಿನ ಕೊಳ​ಚೆ​ಯಲ್ಲಿ ಹುಳುಗಳು ಆಡುತ್ತಿವೆ. ದುರ್ವಾಸನೆಯಿಂದಾಗಿ ಸಾರ್ವಜನಿರು ಪಕ್ಕದಲ್ಲೂ ನಿಲ್ಲಲಾಗದೇ ಮೂಗು ವåುಚ್ಚಿಕೊಳ್ಳುವಂತಾಗಿದೆ. ಖಾಸಗಿ ಬಸ್‌ ನಿಲ್ದಾಣ ಹೊರತುಪಡಿಸಿ ಪಟ್ಟಣದಲ್ಲಿರುವ ಮೂರು ಸಾರ್ವಜನಿಕ ಶೌಚಾಲಯಗಳಲ್ಲಿ ಇದೂ ಕೂಡ ಒಂದಾಗಿದೆ. ಆದ​ರೆ, ಕತ್ತಲಾಗುತ್ತಿದ್ದಂತೆ ಇಲ್ಲಿ ​ಅಕ್ರಮಗಳು ನಡೆ​ಯು​ತ್ತವೆ. ಅನೈತಿಕ ಚಟುವಟಿಕೆಗಳಿಗೂ ಬಳ​ಕೆ​ಯಾ​ಗು​ತ್ತಿವೆ. ಇಷ್ಟಾ​ದರೂ ಈ ಬಗ್ಗೆ ಯಾವ ಇಲಾ​ಖೆ​ಗಳೂ ಎಚ್ಚೆತ್ತು ಸೂಕ್ತ ಕ್ರಮ ಜರು​ಗಿ​ಸಲು ಮುಂದಾ​ಗಿಲ್ಲ.

ಶೌಚಾಲಯ ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪುರಸಭೆಯದ್ದಾಗಿದೆ. ಪ್ರತಿ ವರ್ಷ ಪಟ್ಟಣದ ನೈರ್ಮಲ್ಯಕ್ಕಾಗಿ ಲಕ್ಷಾಂತರ ರು. ಹಣ ಬಿಡುಗಡೆಯಾಗುತ್ತಿದೆ. ಶೌಚಾಲಯದ ಬಲ ಭಾಗದಲ್ಲಿ ಶ್ರೀ ಸ್ವಾಮಿವಿವೇಕಾನಂದ ಶಾಲೆ ಇದೆ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಶೌಚಾಲಯದ ಆಜುಬಾಜು ಆಟವಾಡುತ್ತಾರೆ. ಇದರಿಂದ ಡೆಂಘೀಜ್ವ​ರ​ದಂಥ ರೋಗಗಳೂ ತಗಲುವ ಭೀತಿ ಇದೆ.

ಈ ಹಿನ್ನೆ​ಲೆ ಪುರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಮತ್ತು ನಿರುಪಯುಕ್ತ ಕಟ್ಟಡಕ್ಕೆ ಮುಕ್ತಿ ಕಾಣಿಸಬೇ​ಕಿದೆ. ಈ ಹಾಳು​ ಕ​ಟ್ಟ​ಡ​ವ​ನ್ನು ನೆಲಸಮ ಮಾಡಿ, ಯಾವುದಾದರೂ ಸರ್ಕಾರಿ ಕಚೇರಿಯನ್ನು ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆ​ಸ​ಬೇ​ಕಿ​ದೆ.

ಶಹಾಪುರದ ರೈತ ಭವನ ಈಗ ಪಾಳು ಬಂಗಲೆ; ಅನೈತಿಕ ಚಟುವಟಿಕೆ ತಾಣ!

.5 ಲಕ್ಷ ವೆಚ್ಚದ ಹೈಟೆಕ್‌ ಶೌಚಾ​ಲ​ಯ

ಮಂಡಲ ಪಂಚಾ​ಯಿತಿ ಮಾಜಿ ಉಪಾ​ಧ್ಯಕ್ಷ ಇ.ಎ​ಚ್‌.​ಮಂಜು​ನಾಥ ಈ ಕುರಿತು ಪ್ರತಿ​ಕ್ರಿಯೆ ನೀಡಿದ್ದು, ಸೊರಬ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ತಮ್ಮ ಅನುದಾನದಲ್ಲಿ 5 ಲಕ್ಷ ರೂ. ಬಿಡುಗಡೆ ಮಾಡಿ ಹೈಟೆಕ್‌ ಶೌಚಾಲಯ ನಿರ್ಮಾಣ ಮಾಡಿದ್ದರೂ ಸಹ ಅಂದಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಶುಚಿತ್ವವಿಲ್ಲದೇ ಸಾರ್ವಜನಿಕರು ಶೌಚಾಲಯದ ಕಡೆ ಸುಳಿಯದಂತಾಗಿದೆ. ಚರಂಡಿ, ಗಿಡಗಂಟೆಗಳ ಪೊದೆಗಳ ಮರೆ​ಯಲ್ಲಿ ಬಹಿರ್ದೆಸೆಯನ್ನು ಪೂರೈಸಿಕೊಳ್ಳಬೇಕಾಗಿದೆ. 16 ವರ್ಷ ಕಳೆದರೂ ಸಾರ್ವಜನಿಕ ಉಪಯೋಗಕ್ಕೆ ಬಾರದ ಶೌಚಾಲಯವನ್ನು ಇನ್ನಾದರೂ ಶುಚಿತ್ವಗೊಳಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎನ್ನು​ತ್ತಾರೆ.