Asianet Suvarna News Asianet Suvarna News

ಕೌಟುಂಬಿಕ ಕಲಹ: ಯುಗಾದಿ ಹಬ್ಬದಂದೇ ಬಾಮೈದನಿಗೆ ಇರಿದು ಕೊಂದ ಬಾವ!

ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆದು ಬಾಮೈದನಿಗೆ ಚಾಕು ಇರಿದು ಹತ್ಯೆ ಮಾಡಿದ ಘಟನೆ ನಗರದ ಕೆಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್ ಕುಮಾರ(32), ಹತ್ಯೆಯಾದ ವ್ಯಕ್ತಿ, ಲಕ್ಷ್ಮಣ್  ಕೊಲೆ ಮಾಡಿರುವ ಆರೋಪಿ.

Family Feud case Ending in Murder in KG Halli at bengaluru rav
Author
First Published Apr 9, 2024, 7:39 PM IST

ಬೆಂಗಳೂರು (ಏ.9): ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆದು ಬಾಮೈದನಿಗೆ ಚಾಕು ಇರಿದು ಹತ್ಯೆ ಮಾಡಿದ ಘಟನೆ ನಗರದ ಕೆಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಿರಣ್ ಕುಮಾರ(32), ಹತ್ಯೆಯಾದ ವ್ಯಕ್ತಿ, ಲಕ್ಷ್ಮಣ್  ಕೊಲೆ ಮಾಡಿರುವ ಆರೋಪಿ. ಕಿರಣ್ ಹಾಗೂ ಲಕ್ಷ್ಮಣ್ ಸಂಬಂಧದಲ್ಲಿ ಬಾವ ಬಾಮೈದ. ಮನೆಯಲ್ಲಿ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು. ಆರೋಪಿ ಲಕ್ಷ್ಮಣ ಹಾಗೂ ಪತ್ನಿ ಮಧ್ಯೆ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಬಾವ ಬಾಮೈದ ಕಿತ್ತಾಡಿಕೊಂಡಿದ್ದರು. ಆದರೆ ಇಂದು ಮಧ್ಯಾಹ್ನ ಮತ್ತೆ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರ ಮಧ್ಯೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಬಾವ ಲಕ್ಷ್ಮಣ್ ಚಾಕು ಹಿಡಿದು ಕಿರಣ್ ಬೆನ್ನಿಗೆ ಇರಿದಿದ್ದಾನೆ.

ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಕಿರಣ್‌ಗೆ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಲವಾಗಿ ಇರಿದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು. ಸದ್ಯ ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗೆ ಮುಂದಾಗಿರುವ ಪೊಲೀಸರು.

Follow Us:
Download App:
  • android
  • ios