Asianet Suvarna News Asianet Suvarna News

ರಾಯ​ಚೂ​ರು: ಶೀಲ ಶಂಕಿಸಿ ಪತಿ​ಯಿಂದ ಪತ್ನಿ ಕೊಲೆ, ಆರೋಪಿ ಬಂಧನ

ಕೆಲ ವರ್ಷ​ಗ​ಳ ಹಿಂದೆ ಶಾರದಮ್ಮಳನ್ನು ಪ್ರೀತಿಸಿ ಮದು​ವೆ​ಯಾ​ಗಿದ್ದ ಕಿಷ್ಟ​ಪ್ಪ ಪತ್ನಿಯು ಅನೈ​ತಿಕ ಸಂಬಂಧ​ ಹೊಂದಿ​ದ್ದಾಳೆ ಎಂದು ಆಕೆ ಶೀಲ​ ಶಂಕಿ​ಸು​ತ್ತಿ​ದ್ದ​ನು. ಅದೇ ಸಿಟ್ಟಿ​ನಡಿ ಪತ್ನಿ​ಯನ್ನು ಕೊಡ​ಲಿ​ಯಿಂದ ಕೊಚ್ಚಿ ಕೊಲೆ ಮಾಡಿ​ದ್ದಾನೆ.

Accused Arrested For Murder Case in Raichur grg
Author
First Published Jul 12, 2023, 11:30 PM IST

ರಾಯ​ಚೂ​ರು(ಜು.12):  ಪತ್ನಿ ಶೀಲ ಶಂಕಿಸಿ ಪತಿ​ರಾಯ ಪತ್ನಿ​ಯನ್ನು ಕೊಲೆ ಮಾಡಿ​ರುವ ಘಟನೆ ತಾಲೂ​ಕಿನ ಬುಳ್ಳಾ​ಪುರ ಗ್ರಾಮ​ದಲ್ಲಿ ಮಂಗ​ಳ​ವಾರ ನಡೆ​ದಿದೆ.

ಗ್ರಾಮದ ನಿವಾಸಿ ಶಾರದಮ್ಮ (32) ಕೊಲೆ​ಗೀ​ಡಾದ ಪತ್ನಿ​ಯಾ​ಗಿದ್ದು, ಪತಿ ಕಿಷ್ಟಪ್ಪ (36) ಆರೋ​ಪಿ​ಯಾ​ಗಿ​ದ್ದಾನೆ. ಕೆಲ ವರ್ಷ​ಗ​ಳ ಹಿಂದೆ ಶಾರದಮ್ಮಳನ್ನು ಪ್ರೀತಿಸಿ ಮದು​ವೆ​ಯಾ​ಗಿದ್ದ ಕಿಷ್ಟ​ಪ್ಪ ಪತ್ನಿಯು ಅನೈ​ತಿಕ ಸಂಬಂಧ​ ಹೊಂದಿ​ದ್ದಾಳೆ ಎಂದು ಆಕೆ ಶೀಲ​ ಶಂಕಿ​ಸು​ತ್ತಿ​ದ್ದ​ನು. ಅದೇ ಸಿಟ್ಟಿ​ನಡಿ ಪತ್ನಿ​ಯನ್ನು ಕೊಡ​ಲಿ​ಯಿಂದ ಕೊಚ್ಚಿ ಕೊಲೆ ಮಾಡಿ​ದ್ದಾನೆ. ಘಟನೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ನಿಖಿಲ್‌.ಬಿ ಹಾಗೂ ಪೊಲೀಸ್‌ ಅಧಿ​ಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆ​ಸಿ​ದರು. 

ರಾಯಚೂರಿನಲ್ಲಿ ಟೊಮ್ಯಾಟೋಗಾಗಿ ಚಾಕು ಇರಿತ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮರ​ಣೋ​ತ್ತರ ಪರೀ​ಕ್ಷೆ​ಗಾಗಿ ಶವ​ವನ್ನು ರಿಮ್ಸ್‌ ಬೋಧಕ ಆಸ್ಪ​ತ್ರೆಗೆ ಸಾಗಿ​ಸಿ ನಂತರ ಕುಟುಂಬ​ಸ್ಥ​ರಿಗೆ ಹಸ್ತಾಂತ​ರಿ​ಸ​ಲಾ​ಯಿತು. ಘಟ​ನೆಗೆ ಸಂಬಂಧಿ​ಸಿ ಇಡ​ಪ​ನೂರು ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಿ​ಸಿ​ಕೊಂಡಿ​ರುವ ಪೊಲೀ​ಸರು ಆರೋಪಿ ಪತಿ ಕಿಷ್ಟ​ಪ್ಪ​ನ್ನು ವಶಕ್ಕೆ ಪಡೆದು ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

Follow Us:
Download App:
  • android
  • ios